<p><strong>ಧಾರವಾಡ:</strong> ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಐದನೇ ಘಟಿಕೋತ್ಸವ ಜುಲೈ 22ರಂದು ನಡೆಯಲಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪಯ್ಯ ಆರ್ ದೇಸಾಯಿ ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಐಐಟಿಯ ಕೇಂದ್ರೀಯ ಕಲಿಕಾ ಸಭಾಂಗಭಣದಲ್ಲಿ ಮಧ್ಯಾಹ್ನ 3.30ಕ್ಕೆ ಘಟೀಕೋತ್ಸವ ಸಮಾರಂಭ ಆರಂಭವಾಗಲಿದೆ. ಅಮೆರಿಕದ ಖಗೋಳ ಮತ್ತು ಗ್ರಹ ವಿಜ್ಞಾನ ಪ್ರಾಧ್ಯಾಪಕ ಶ್ರೀನಿವಾಸ ಕುಲಕರ್ಣಿ ಘಟಿಕೋತ್ಸವ ಭಾಷಣ ಮಾಡುವರು ಎಂದರು.</p>.<p>ಐಐಟಿಯಲ್ಲಿ ಬಯೋ ನೆಸ್ಟ್ ಇನಕ್ಯುಬೇಷನ್ ಕೇಂದ್ರ ಸ್ಥಾಪನೆಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಂಸದರ ಅನುದಾನದಲ್ಲಿ ₹ 5.3 ಕೋಟಿ ಹಾಗೂ ಬಯೋಟೆಕ್ನಾಲಜಿ ಇಂಡಸ್ಟ್ರಿ ರೀಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ನಿಂದ (ಬೈರಾಕ್) ₹ 5 ಕೋಟಿ ಒಟ್ಟು ₹ 10.3 ಕೋಟಿ ಅನುದಾನ ದೊರತಿದೆ. ಧಾರವಾಡ ರೀಸರ್ಚ್ ಅಂಡ್ ಟೆಕ್ನಾಲಜಿ ಇನ್ಕ್ಯುಬೆಟರ್ ಫೌಂಡೇಷನ್ (ಡಿಎಚ್ಎಆರ್ಟಿಐ–ಧರ್ತಿ) ಈ ಕೇಂದ್ರ ಸ್ಥಾಪನೆ ಜವಾಬ್ದಾರಿ ನಿರ್ವಹಿಸಲಿದೆ. ಕರ್ನಾಟಕ ಕಾಂಕ್ರಿಟ್ ಸಂಸ್ಥೆಯಿಂದ ನಮ್ಮ ಐಐಟಿಗೆ ಬೆಸ್ಟ್ ಬಿಲ್ಡಿಂಗ್ ಪುರಸ್ಕಾರ ಲಭಿಸಿದೆ ಎಂದು ತಿಳಿಸಿದರು.</p>.<p>ಐಐಟಿಯ 470 ಎಕರೆ ಪ್ರದೇಶವನ್ನು ಪರಿಸರ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. 2030ರೊಳಗೆ ಈ ಗುರಿ ಸಾಧಿಸುವಂತೆ ಆಡಳಿತ ಮಂಡಳಿ ತಿಳಿಸಿದೆ. ಪರಶುರಾಮ ಬಸವೇಶ್ವರ ಅಕ್ಷಯ ಕ್ಷೇತ್ರ’ ಎಂದು ನಾಮಕರಣ ಮಾಡಿ ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.</p>.<p>ಡೀನ್ ನಾರಾಯಣ ಎಸ್.ಪುಣೆಕರ್ ಮಾತನಾಡಿ, ಘಟಿಕೋತ್ಸವದಲ್ಲಿ ಒಟ್ಟು 190 ವಿದ್ಯಾರ್ಥಿಗಳು ಪದವಿ ಪಡೆಯುವರು. ಈ ಪೈಕಿ ಬಿ.ಟೆಕ್ 154 ಹಾಗೂ ಸ್ನಾತಕೋತ್ತರ ಪದವಿ 36 ಮಂದಿ ಪಡೆಯುವರು ಎಂದರು.</p>.<p>‘ಈ ವರ್ಷದಿಂದ ಹೊಸದಾಗಿ ಎರಡು ಸ್ನಾತಕೋತ್ತರ ಪದವಿ ಕೋರ್ಸ್ (ಕಂಪ್ಯೂಟರ್ ಸೈನ್ಸ್ ಹಾಗೂ ಎಲೆಕ್ಟ್ರಿಕಲ್ ವಿಭಾಗ) ಈ ಕೋರ್ಸ್ ಆರಂಭಿಸಲಾಗಿದೆ. ಈ ವರ್ಷ ಬಿ.ಟೆಕ್ ಕೋರ್ಸ್ನ ಎಲ್ಲ ವಿಭಾಗಗಳ ಸೀಟುಗಳನ್ನು ಹೆಚ್ಚಿಸಲಾಗಿದೆ. ಈ ವರ್ಷ ಒಟ್ಟು ವಿದ್ಯಾರ್ಥಿಗಳು ಸಂಖ್ಯೆ 1500ಕ್ಕೆ ತಲುಪಲಿದೆ. ಎಲ್ಲ ತರಗತಿಗಳು ಈ ಕ್ಯಾಂಪಸ್ನ ಕಟ್ಟಡಗಳಲ್ಲಿ ನಡೆಯುತ್ತಿವೆ’ ಎಂದು ತಿಳಿಸಿದರು.</p>.<p>ಪ್ರೊ.ಎಂ.ಎಸ್.ಶಿವಪ್ರಸಾದ ಮಾತನಾಡಿ, ಶಾಲೆಗಳು ಮತ್ತು ಕಾಲೇಜುಗಳ ಜತೆ ಐಐಟಿ ಸಹಭಾಗಿತ್ವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲು ಅನುಕೂಲವಾಗಲಿದೆ ಎಂದರು.</p>.<p>ಪ್ರೊ. ರಾಮಜೀ ರೆಪಾಕಾ, ಕುಲಚಿವ ಸಂದೀಪ್ ಪರೀಕ್, ಅಮರನಾಥ ಹೆಗಡೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಐದನೇ ಘಟಿಕೋತ್ಸವ ಜುಲೈ 22ರಂದು ನಡೆಯಲಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪಯ್ಯ ಆರ್ ದೇಸಾಯಿ ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಐಐಟಿಯ ಕೇಂದ್ರೀಯ ಕಲಿಕಾ ಸಭಾಂಗಭಣದಲ್ಲಿ ಮಧ್ಯಾಹ್ನ 3.30ಕ್ಕೆ ಘಟೀಕೋತ್ಸವ ಸಮಾರಂಭ ಆರಂಭವಾಗಲಿದೆ. ಅಮೆರಿಕದ ಖಗೋಳ ಮತ್ತು ಗ್ರಹ ವಿಜ್ಞಾನ ಪ್ರಾಧ್ಯಾಪಕ ಶ್ರೀನಿವಾಸ ಕುಲಕರ್ಣಿ ಘಟಿಕೋತ್ಸವ ಭಾಷಣ ಮಾಡುವರು ಎಂದರು.</p>.<p>ಐಐಟಿಯಲ್ಲಿ ಬಯೋ ನೆಸ್ಟ್ ಇನಕ್ಯುಬೇಷನ್ ಕೇಂದ್ರ ಸ್ಥಾಪನೆಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಂಸದರ ಅನುದಾನದಲ್ಲಿ ₹ 5.3 ಕೋಟಿ ಹಾಗೂ ಬಯೋಟೆಕ್ನಾಲಜಿ ಇಂಡಸ್ಟ್ರಿ ರೀಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ನಿಂದ (ಬೈರಾಕ್) ₹ 5 ಕೋಟಿ ಒಟ್ಟು ₹ 10.3 ಕೋಟಿ ಅನುದಾನ ದೊರತಿದೆ. ಧಾರವಾಡ ರೀಸರ್ಚ್ ಅಂಡ್ ಟೆಕ್ನಾಲಜಿ ಇನ್ಕ್ಯುಬೆಟರ್ ಫೌಂಡೇಷನ್ (ಡಿಎಚ್ಎಆರ್ಟಿಐ–ಧರ್ತಿ) ಈ ಕೇಂದ್ರ ಸ್ಥಾಪನೆ ಜವಾಬ್ದಾರಿ ನಿರ್ವಹಿಸಲಿದೆ. ಕರ್ನಾಟಕ ಕಾಂಕ್ರಿಟ್ ಸಂಸ್ಥೆಯಿಂದ ನಮ್ಮ ಐಐಟಿಗೆ ಬೆಸ್ಟ್ ಬಿಲ್ಡಿಂಗ್ ಪುರಸ್ಕಾರ ಲಭಿಸಿದೆ ಎಂದು ತಿಳಿಸಿದರು.</p>.<p>ಐಐಟಿಯ 470 ಎಕರೆ ಪ್ರದೇಶವನ್ನು ಪರಿಸರ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. 2030ರೊಳಗೆ ಈ ಗುರಿ ಸಾಧಿಸುವಂತೆ ಆಡಳಿತ ಮಂಡಳಿ ತಿಳಿಸಿದೆ. ಪರಶುರಾಮ ಬಸವೇಶ್ವರ ಅಕ್ಷಯ ಕ್ಷೇತ್ರ’ ಎಂದು ನಾಮಕರಣ ಮಾಡಿ ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.</p>.<p>ಡೀನ್ ನಾರಾಯಣ ಎಸ್.ಪುಣೆಕರ್ ಮಾತನಾಡಿ, ಘಟಿಕೋತ್ಸವದಲ್ಲಿ ಒಟ್ಟು 190 ವಿದ್ಯಾರ್ಥಿಗಳು ಪದವಿ ಪಡೆಯುವರು. ಈ ಪೈಕಿ ಬಿ.ಟೆಕ್ 154 ಹಾಗೂ ಸ್ನಾತಕೋತ್ತರ ಪದವಿ 36 ಮಂದಿ ಪಡೆಯುವರು ಎಂದರು.</p>.<p>‘ಈ ವರ್ಷದಿಂದ ಹೊಸದಾಗಿ ಎರಡು ಸ್ನಾತಕೋತ್ತರ ಪದವಿ ಕೋರ್ಸ್ (ಕಂಪ್ಯೂಟರ್ ಸೈನ್ಸ್ ಹಾಗೂ ಎಲೆಕ್ಟ್ರಿಕಲ್ ವಿಭಾಗ) ಈ ಕೋರ್ಸ್ ಆರಂಭಿಸಲಾಗಿದೆ. ಈ ವರ್ಷ ಬಿ.ಟೆಕ್ ಕೋರ್ಸ್ನ ಎಲ್ಲ ವಿಭಾಗಗಳ ಸೀಟುಗಳನ್ನು ಹೆಚ್ಚಿಸಲಾಗಿದೆ. ಈ ವರ್ಷ ಒಟ್ಟು ವಿದ್ಯಾರ್ಥಿಗಳು ಸಂಖ್ಯೆ 1500ಕ್ಕೆ ತಲುಪಲಿದೆ. ಎಲ್ಲ ತರಗತಿಗಳು ಈ ಕ್ಯಾಂಪಸ್ನ ಕಟ್ಟಡಗಳಲ್ಲಿ ನಡೆಯುತ್ತಿವೆ’ ಎಂದು ತಿಳಿಸಿದರು.</p>.<p>ಪ್ರೊ.ಎಂ.ಎಸ್.ಶಿವಪ್ರಸಾದ ಮಾತನಾಡಿ, ಶಾಲೆಗಳು ಮತ್ತು ಕಾಲೇಜುಗಳ ಜತೆ ಐಐಟಿ ಸಹಭಾಗಿತ್ವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲು ಅನುಕೂಲವಾಗಲಿದೆ ಎಂದರು.</p>.<p>ಪ್ರೊ. ರಾಮಜೀ ರೆಪಾಕಾ, ಕುಲಚಿವ ಸಂದೀಪ್ ಪರೀಕ್, ಅಮರನಾಥ ಹೆಗಡೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>