ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

271 ಮಂದಿಗಷ್ಟೇ 100 ದಿನ ಕೆಲಸ: ಬರ ನಿರ್ವಹಣೆ ಸಭೆಯಲ್ಲಿ ಸಚಿವ ಸಂತೋಷ ಲಾಡ್‌ ಬೇಸರ

Published : 24 ನವೆಂಬರ್ 2023, 15:51 IST
Last Updated : 24 ನವೆಂಬರ್ 2023, 15:51 IST
ಫಾಲೋ ಮಾಡಿ
Comments
ಧಾರವಾಡದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒಗಳು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು
ಧಾರವಾಡದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒಗಳು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು
ಜೆಜೆಎಂ ಅಡಿ ನೀರು ಸಂಪರ್ಕದ ನಿರ್ವಹಣೆ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಬೇಕು. ದುರಸ್ತಿ ಸಮಸ್ಯೆ ಇದ್ದರೆ ಪರಿಹರಿಸಬೇಕು
- ಸಂತೋಷ ಲಾಡ್‌, ಜಿಲ್ಲಾ ಉಸ್ತುವಾರಿ ಸಚಿವ
ನೀರು ಮೇವು ನಿರ್ವಹಣೆಗೆ ಕ್ರಮ
‘ಕುಡಿಯುವ ನೀರು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ರೈತರಿಗೆ ಬಿತ್ತನೆ ಬೀಜ ನೀಡಿ ಮೇವು ಬೆಳೆಸಿ ವಿತರಿಸಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ಸಚಿವರು ಹೇಳಿದರು. ವಿವರ ನೀಡಿ: ‘ಎಲ್ಲ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಅಳವಡಿಸಿರುವ ಮೋಟಾರ್‌ ಇತ್ಯಾದಿ ಉಪಕರಣಗಳ ವಿವರ ನೀಡಬೇಕು. ನೀರು ಬರಿದಾದ ಕೊಳವೆ ಬಾವಿಗಳು ಹಳೆಯ ಮೋಟಾರ್‌ಗಳ ವಿವರವನ್ನು ಒಂದು ವಾರದೊಳಗೆ ನೀಡಬೇಕು’ ಎಂದು  ಸೂಚನೆ ನೀಡಿದರು. ‘ಬೆಟ್ಟದೂರಿನಲ್ಲಿ ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕ ಏಕೆ ಕಲ್ಪಿಸಿಲ್ಲ? ಗ್ರಾಮೀಣ ಕುಡಿಯುವ ನೀರು ವಿಭಾಗದವರು ಹೆಸ್ಕಾಂನೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಸಂಪರ್ಕ ಕಲ್ಪಿಸಿ’ ಎಂದು ತಿಳಿಸಿದರು.
ಕ್ಷಮೆಯಾಚಿಸಿದ ಗ್ರಾ.ಪಂ ಅಧ್ಯಕ್ಷ
‘ಸಭೆಯಲ್ಲಿ ಬರಗಾಲ ಬಿಟ್ಟು ಬೇರೆ ವಿಚಾರ ಮಾತನಾಡಲಾಗುತ್ತಿದೆ. ಸಚಿವರು ಮುಖ ತೋರಿಸಿ ಹೋಗಲು ಬಂದಿದ್ದೀರಾ’ ಎಂದು ಗ್ರಾಮ ಪಂಚಾಯಿತಿಯೊಂದರ ಅಧ್ಯಕ್ಷ ಸುರೇಶ್  ಏರುಧ್ವನಿಯಲ್ಲಿ ಕೇಳಿದರು. ಕುಪಿತರಾದ ಸಂತೋಷ್‌ ಲಾಡ್‌ ಅವರು ‘ಮುಖ ತೋರಿಸಿ ಹೋಗುತ್ತೇನೆ ಎಂದರೆ ಏನರ್ಥ? ಬರ ನಿರ್ವಹಣೆ ನಿಟ್ಟಿನಲ್ಲಿ ಸಭೆ ಆಯೋಜಿಸುಲಾಗಿದೆ ಸರಿಯಾಗಿ ಮಾತನಾಡಿ’ ಎಂದು ಗುಡುಗಿದರು. ತಕ್ಷಣವೇ ಸುರೇಶ್‌ ಅವರು ತಪ್ಪಾಯ್ತು ಎಂದು ಕ್ಷಮೆಯಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT