<p><strong>ಧಾರವಾಡ</strong>: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳದ ಸಿದ್ಧತೆ ಪೂರ್ಣಗೊಂಡಿದ್ದು, ಶನಿವಾರದಿಂದ ನಾಲ್ಕು ದಿನ ಮೇಳ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳದ ಉದ್ಘಾಟನೆ ನೆರವೇರಿಸುವರು.</p>.<p>ವಿಶ್ವವಿದ್ಯಾಲಯ ಆವರಣದ ಮುಖ್ಯವೇದಿಕೆಯಲ್ಲಿ ಬೆಳಿಗ್ಗೆ 11.30ಕ್ಕೆ ಉದ್ಘಾಟನೆ ನೆರವೇರಲಿದೆ. ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪಾಲ್ಗೊಳ್ಳುವರು. ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.</p>.<p>‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಘೋಷವಾಕ್ಯದಲ್ಲಿ ಈ ಬಾರಿ ಮೇಳ ಜರುಗಲಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 10.30ಕ್ಕೆ ಫಲಪುಷ್ಪ, ಗಡ್ಡೆಗೆಣಸು, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ ನೆರವೇರಲಿದೆ. ಮಧ್ಯಾಹ್ನ 2.30ಕ್ಕೆ ಮುಖ್ಯ ವೇದಿಕೆಯಲ್ಲಿ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ.</p>.<p><strong>674 ಮಳಿಗೆ ಸಜ್ಜು:</strong> ಆವರಣದಲ್ಲಿ ಒಟ್ಟು 674 ವಿವಿಧ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಕೃಷಿವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಾನುವಾರು, ಆಹಾರ, ಯಂತ್ರೋಪಕರಣ ಮೊದಲಾದ ಮಳಿಗೆಗಳು ಇರಲಿವೆ. ಕೃಷಿಯಲ್ಲಿ ಡ್ರೋನ್ ಬಳಕೆ, ಕೊಯ್ಲು ಯಂತ್ರ, ನೀರಾವರಿ ಉಪಕರಣ ಮೊದಲಾದವು ಇರಲಿವೆ.</p>.<p><strong>ಬೀಜ ಮೇಳ:</strong> ಬೀಜ ಮೇಳದಲ್ಲಿ ರೈತರು ಜೋಳ, ಕುಸಬೆ, ಕಡಲೆ ಮೊದಲಾದ ಬಿತ್ತನೆಬೀಜಗಳು, ಜೈವಿಕ ಗೊಬ್ಬರ ಪುಡಿಗಳು ಇರಲಿವೆ. ಇವು ಮಾರಾಟಕ್ಕೆ ಲಭ್ಯ ಇರಲಿವೆ.</p>.<p>ಜವೆ ಗೋಧಿ ಡಿಡಿಕೆ–1063, ಅಗಸೆ ಡಿಎಲ್ವಿ–7, ಕುದುರೆ ಮೆಂತೆ (ಲೂರ್ಸನ್), ಗುಲಾಬಿ ಅರ್ಕಾ ಐವರಿ ಮತ್ತು ಅರ್ಕಾ ಕಿನ್ನರಿ ಮೊದಲಾದ 24 ತಳಿಗಳನ್ನು ಬಿಡಗಡೆ ಮಾಡಲಾಗುತ್ತದೆ.</p>.<p>ಮೇಳದಲ್ಲಿ ನಾಲ್ಕುದಿನ ವಿವಿಧ ಗೋಷ್ಠಿಗಳಲು ನಡೆಯಲಿದೆ. ಜಲ ಸಾಕ್ಷರತೆ, ನೀರಿನ ಸಂರಕ್ಷಣೆ, ಮಣ್ಣು ರಕ್ಷಣೆ, ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಕುರಿತು ಮೊದಲಾದ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ. ಸಾಧಕ ರೈತರು ಯಶೋಗಾಥೆಗಳನ್ನು ಹಂಚಿಕೊಳ್ಳುವರು.</p>.<p>ನಾಡಿನ ವಿವಿಧೆಡಗಳ ಲಕ್ಷಾಂತರ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ಧಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ಮೊಬೈಲ್ ಎಟಿಎಂ, ಕ್ಷೇತ್ರ ಪ್ರಾತ್ಯಕ್ಷಿಕೆ ಭೇಟಿಗೆ ವ್ಯವಸ್ಥೆ, ಪೊಲೀಸ್ ಸಹಾಯ ಕೇಂದ್ರ ಇತ್ಯಾದಿ ಕಲ್ಪಿಸಲಾಗಿದೆ. ಕೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.</p>.<p>10ರಂದು ಬೆಳಿಗ್ಗೆ 10.30ಕ್ಕೆ ಬೀಜ ಮೇಳ ಉದ್ಘಾಟನೆ, 11ರಂದು ಪೌಷ್ಟಿಕತೆ ಮತ್ತು ಆರ್ಥಿಕತೆಗೆ ಸಿರಿಧಾನ್ಯಗಳು ವಿಚಾರ ಸಂಕಿರಣ, 12ರಂದು ಕೊನೆ ದಿನ ಚರ್ಚಾಗೋಷ್ಠಿ ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.</p>.<p>‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಶೀರ್ಷಿಕೆಯಡಿ ಮೇಳ ಆಯೋಜನೆ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ರೈತರಿಗೆ ಭರಪೂರ ಮಾಹಿತಿ ವ್ಯವಸ್ಥೆ</p>.<div><blockquote>ನೋಂದಣಿ ಕೇಂದ್ರದಲ್ಲಿ ಕೃಷಿ ಮೇಳದ ಮಾರ್ಗ ನಕ್ಷೆ ಪ್ರತಿ ನೀಡಲಾಗುವುದು. ಮಳಿಗೆ ವೇದಿಕೆ ದಾರಿ ಮಾರ್ಗಸೂಚಿಯಲ್ಲಿ ಇರುತ್ತವೆ </blockquote><span class="attribution">ಎಸ್.ಎನ್. ಜಾಧವ್ ಅಧ್ಯಕ್ಷ ಕೃಷಿ ಮೇಳ ಪ್ರಚಾರ ಸಮಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳದ ಸಿದ್ಧತೆ ಪೂರ್ಣಗೊಂಡಿದ್ದು, ಶನಿವಾರದಿಂದ ನಾಲ್ಕು ದಿನ ಮೇಳ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳದ ಉದ್ಘಾಟನೆ ನೆರವೇರಿಸುವರು.</p>.<p>ವಿಶ್ವವಿದ್ಯಾಲಯ ಆವರಣದ ಮುಖ್ಯವೇದಿಕೆಯಲ್ಲಿ ಬೆಳಿಗ್ಗೆ 11.30ಕ್ಕೆ ಉದ್ಘಾಟನೆ ನೆರವೇರಲಿದೆ. ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪಾಲ್ಗೊಳ್ಳುವರು. ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.</p>.<p>‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಘೋಷವಾಕ್ಯದಲ್ಲಿ ಈ ಬಾರಿ ಮೇಳ ಜರುಗಲಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 10.30ಕ್ಕೆ ಫಲಪುಷ್ಪ, ಗಡ್ಡೆಗೆಣಸು, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ ನೆರವೇರಲಿದೆ. ಮಧ್ಯಾಹ್ನ 2.30ಕ್ಕೆ ಮುಖ್ಯ ವೇದಿಕೆಯಲ್ಲಿ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ.</p>.<p><strong>674 ಮಳಿಗೆ ಸಜ್ಜು:</strong> ಆವರಣದಲ್ಲಿ ಒಟ್ಟು 674 ವಿವಿಧ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಕೃಷಿವಸ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಾನುವಾರು, ಆಹಾರ, ಯಂತ್ರೋಪಕರಣ ಮೊದಲಾದ ಮಳಿಗೆಗಳು ಇರಲಿವೆ. ಕೃಷಿಯಲ್ಲಿ ಡ್ರೋನ್ ಬಳಕೆ, ಕೊಯ್ಲು ಯಂತ್ರ, ನೀರಾವರಿ ಉಪಕರಣ ಮೊದಲಾದವು ಇರಲಿವೆ.</p>.<p><strong>ಬೀಜ ಮೇಳ:</strong> ಬೀಜ ಮೇಳದಲ್ಲಿ ರೈತರು ಜೋಳ, ಕುಸಬೆ, ಕಡಲೆ ಮೊದಲಾದ ಬಿತ್ತನೆಬೀಜಗಳು, ಜೈವಿಕ ಗೊಬ್ಬರ ಪುಡಿಗಳು ಇರಲಿವೆ. ಇವು ಮಾರಾಟಕ್ಕೆ ಲಭ್ಯ ಇರಲಿವೆ.</p>.<p>ಜವೆ ಗೋಧಿ ಡಿಡಿಕೆ–1063, ಅಗಸೆ ಡಿಎಲ್ವಿ–7, ಕುದುರೆ ಮೆಂತೆ (ಲೂರ್ಸನ್), ಗುಲಾಬಿ ಅರ್ಕಾ ಐವರಿ ಮತ್ತು ಅರ್ಕಾ ಕಿನ್ನರಿ ಮೊದಲಾದ 24 ತಳಿಗಳನ್ನು ಬಿಡಗಡೆ ಮಾಡಲಾಗುತ್ತದೆ.</p>.<p>ಮೇಳದಲ್ಲಿ ನಾಲ್ಕುದಿನ ವಿವಿಧ ಗೋಷ್ಠಿಗಳಲು ನಡೆಯಲಿದೆ. ಜಲ ಸಾಕ್ಷರತೆ, ನೀರಿನ ಸಂರಕ್ಷಣೆ, ಮಣ್ಣು ರಕ್ಷಣೆ, ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಕುರಿತು ಮೊದಲಾದ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ. ಸಾಧಕ ರೈತರು ಯಶೋಗಾಥೆಗಳನ್ನು ಹಂಚಿಕೊಳ್ಳುವರು.</p>.<p>ನಾಡಿನ ವಿವಿಧೆಡಗಳ ಲಕ್ಷಾಂತರ ರೈತರು ಮೇಳದಲ್ಲಿ ಪಾಲ್ಗೊಳ್ಳಲಿದ್ಧಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ಮೊಬೈಲ್ ಎಟಿಎಂ, ಕ್ಷೇತ್ರ ಪ್ರಾತ್ಯಕ್ಷಿಕೆ ಭೇಟಿಗೆ ವ್ಯವಸ್ಥೆ, ಪೊಲೀಸ್ ಸಹಾಯ ಕೇಂದ್ರ ಇತ್ಯಾದಿ ಕಲ್ಪಿಸಲಾಗಿದೆ. ಕೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.</p>.<p>10ರಂದು ಬೆಳಿಗ್ಗೆ 10.30ಕ್ಕೆ ಬೀಜ ಮೇಳ ಉದ್ಘಾಟನೆ, 11ರಂದು ಪೌಷ್ಟಿಕತೆ ಮತ್ತು ಆರ್ಥಿಕತೆಗೆ ಸಿರಿಧಾನ್ಯಗಳು ವಿಚಾರ ಸಂಕಿರಣ, 12ರಂದು ಕೊನೆ ದಿನ ಚರ್ಚಾಗೋಷ್ಠಿ ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.</p>.<p>‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಶೀರ್ಷಿಕೆಯಡಿ ಮೇಳ ಆಯೋಜನೆ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ರೈತರಿಗೆ ಭರಪೂರ ಮಾಹಿತಿ ವ್ಯವಸ್ಥೆ</p>.<div><blockquote>ನೋಂದಣಿ ಕೇಂದ್ರದಲ್ಲಿ ಕೃಷಿ ಮೇಳದ ಮಾರ್ಗ ನಕ್ಷೆ ಪ್ರತಿ ನೀಡಲಾಗುವುದು. ಮಳಿಗೆ ವೇದಿಕೆ ದಾರಿ ಮಾರ್ಗಸೂಚಿಯಲ್ಲಿ ಇರುತ್ತವೆ </blockquote><span class="attribution">ಎಸ್.ಎನ್. ಜಾಧವ್ ಅಧ್ಯಕ್ಷ ಕೃಷಿ ಮೇಳ ಪ್ರಚಾರ ಸಮಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>