<p><strong>ಧಾರವಾಡ:</strong> ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) 2023–24ನೇ ಸಾಲಿನಲ್ಲಿ ಒಟ್ಟಾರೆ ₹ 35,884 ಕೋಟಿ ವಹಿವಾಟು ದಾಖಲಿಸಿದೆ, ₹ 104.16 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಆಧ್ಯಕ್ಷ ಶ್ರೀಕಾಂತ ಎಂ.ಭಂಡಿವಾಡ ತಿಳಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2022–23ನೇ ಸಾಲಿನಲ್ಲಿ ₹33151 ಕೋಟಿ ವಹಿವಾಟು ದಾಖಲಾಗಿತ್ತು. 2023 –24ನೇ ಸಾಲಿನಲ್ಲಿ ವಹಿವಾಟು ಶೇ 8.24 ಪ್ರಗತಿ ದರ, ₹2733 ಕೋಟಿ ನಿವ್ವಳ ಹೆಚ್ಚಳ ಸಾಧಿಸಿದೆ. ಬ್ಯಾಂಕ್ನ ನಿವ್ವಳ ಸಂಪತ್ತು ₹1264.56 ಕೋಟಿಯಿಂದ ₹1368.61 ಕೋಟಿಗೆ ಏರಿಕೆಯಾಗಿದೆ ಎಂದು ವಿವರ ನೀಡಿದರು.</p>.<p>₹35,884 ಕೋಟಿ ವಹಿವಾಟಿನಲ್ಲಿ ಠೇವಣಿ ₹19,856 ಕೋಟಿ, ಮುಂಗಡ ₹16027 ಕೋಟಿ ಇದೆ. ಅನುತ್ಪಾದಕ ಸಾಲ ವಸೂಲಾತಿಯಲ್ಲಿ ನಿಯಂತ್ರಣ ಸಾಧಿಸಲಾಗಿದೆ. ಅನುತ್ಪಾದಕ ಸಾಲದ ಪ್ರಮಾಣ ₹956.31 ಕೋಟಿಯಿಂದ ₹888 ಕೋಟಿಗೆ (ಶೇ 6.96ರಿಂದ ಶೇ 5.72) ಇಳಿಕೆಯಾಗಿದೆ. ಅನುತ್ಪಾದಕ ಸಾಲ ಪ್ರಮಾಣ ಅನುತ್ಪಾದಕ ಸಾಲದ ಪ್ರಮಾಣ ನಿವ್ವಳ ಶೇ 4.64ರಿಂದ ಶೇ 3.4ಕ್ಕೆ ತಗ್ಗಿದೆ ಎಂದು ಮಾಹಿತಿ ನೀಡಿದರು.</p>.<p>2023–24ನೇ ಸಾಲಿನಲ್ಲಿ ಒಟ್ಟಾರೆ ₹ 301.20 ಕೋಟಿ ಲಾಭ ಗಳಿಕೆಯಾಗಿದ್ದು, ಹಲವು ನಿಬಂಧನೆಗಳ ನಡುವೆಯೂ ₹ 104.16 ಕೋಟಿ ನಿವ್ವಳ ಲಾಭ ಗಳಿಸಿದೆ. ಲಾಭದ ಪ್ರಮಾಣ ಶೇ 158.8 ವೃದ್ಧಿಸಿದೆ ಎಂದರು. 2024–25ನೇ ಸಾಲಿನಲ್ಲಿ ಠೇವಣಿ ₹ 22 ಸಾವಿರ ಕೋಟಿ, ಮುಂಗಡ ₹18 ಸಾವಿರ ಕೋಟಿ ತಲುಪಿ ₹40 ಸಾವಿರ ಕೋಟಿ ವಹಿವಾಟು ಸಾಧಿಸುವ ಗುರಿ ಇದೆ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಬ್ಯಾಂಕನ್ ಪ್ರಧಾನ ವ್ಯವಸ್ಥಾಪಕರಾದ ಸತ್ಯಪ್ರಸಾದ್ ಎನ್, ಮಾಲಾಕಿ ಪುನೀತ, ಆರ್.ಟಿ.ಕಾಂಬ್ಳೆ, ಸತೀಶ್ ಆರ್, ಮುಖ್ಯವ್ಯವಸ್ಥಾಪಕ ಉಲ್ಲಾಸ ಗುನಗಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) 2023–24ನೇ ಸಾಲಿನಲ್ಲಿ ಒಟ್ಟಾರೆ ₹ 35,884 ಕೋಟಿ ವಹಿವಾಟು ದಾಖಲಿಸಿದೆ, ₹ 104.16 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಆಧ್ಯಕ್ಷ ಶ್ರೀಕಾಂತ ಎಂ.ಭಂಡಿವಾಡ ತಿಳಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2022–23ನೇ ಸಾಲಿನಲ್ಲಿ ₹33151 ಕೋಟಿ ವಹಿವಾಟು ದಾಖಲಾಗಿತ್ತು. 2023 –24ನೇ ಸಾಲಿನಲ್ಲಿ ವಹಿವಾಟು ಶೇ 8.24 ಪ್ರಗತಿ ದರ, ₹2733 ಕೋಟಿ ನಿವ್ವಳ ಹೆಚ್ಚಳ ಸಾಧಿಸಿದೆ. ಬ್ಯಾಂಕ್ನ ನಿವ್ವಳ ಸಂಪತ್ತು ₹1264.56 ಕೋಟಿಯಿಂದ ₹1368.61 ಕೋಟಿಗೆ ಏರಿಕೆಯಾಗಿದೆ ಎಂದು ವಿವರ ನೀಡಿದರು.</p>.<p>₹35,884 ಕೋಟಿ ವಹಿವಾಟಿನಲ್ಲಿ ಠೇವಣಿ ₹19,856 ಕೋಟಿ, ಮುಂಗಡ ₹16027 ಕೋಟಿ ಇದೆ. ಅನುತ್ಪಾದಕ ಸಾಲ ವಸೂಲಾತಿಯಲ್ಲಿ ನಿಯಂತ್ರಣ ಸಾಧಿಸಲಾಗಿದೆ. ಅನುತ್ಪಾದಕ ಸಾಲದ ಪ್ರಮಾಣ ₹956.31 ಕೋಟಿಯಿಂದ ₹888 ಕೋಟಿಗೆ (ಶೇ 6.96ರಿಂದ ಶೇ 5.72) ಇಳಿಕೆಯಾಗಿದೆ. ಅನುತ್ಪಾದಕ ಸಾಲ ಪ್ರಮಾಣ ಅನುತ್ಪಾದಕ ಸಾಲದ ಪ್ರಮಾಣ ನಿವ್ವಳ ಶೇ 4.64ರಿಂದ ಶೇ 3.4ಕ್ಕೆ ತಗ್ಗಿದೆ ಎಂದು ಮಾಹಿತಿ ನೀಡಿದರು.</p>.<p>2023–24ನೇ ಸಾಲಿನಲ್ಲಿ ಒಟ್ಟಾರೆ ₹ 301.20 ಕೋಟಿ ಲಾಭ ಗಳಿಕೆಯಾಗಿದ್ದು, ಹಲವು ನಿಬಂಧನೆಗಳ ನಡುವೆಯೂ ₹ 104.16 ಕೋಟಿ ನಿವ್ವಳ ಲಾಭ ಗಳಿಸಿದೆ. ಲಾಭದ ಪ್ರಮಾಣ ಶೇ 158.8 ವೃದ್ಧಿಸಿದೆ ಎಂದರು. 2024–25ನೇ ಸಾಲಿನಲ್ಲಿ ಠೇವಣಿ ₹ 22 ಸಾವಿರ ಕೋಟಿ, ಮುಂಗಡ ₹18 ಸಾವಿರ ಕೋಟಿ ತಲುಪಿ ₹40 ಸಾವಿರ ಕೋಟಿ ವಹಿವಾಟು ಸಾಧಿಸುವ ಗುರಿ ಇದೆ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಬ್ಯಾಂಕನ್ ಪ್ರಧಾನ ವ್ಯವಸ್ಥಾಪಕರಾದ ಸತ್ಯಪ್ರಸಾದ್ ಎನ್, ಮಾಲಾಕಿ ಪುನೀತ, ಆರ್.ಟಿ.ಕಾಂಬ್ಳೆ, ಸತೀಶ್ ಆರ್, ಮುಖ್ಯವ್ಯವಸ್ಥಾಪಕ ಉಲ್ಲಾಸ ಗುನಗಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>