<p><strong>ಹುಬ್ಬಳ್ಳಿ:</strong> ದೇಶದ ಸಮಗ್ರತೆ, ಸೌಹಾರ್ದ ಹಾಗೂ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧಿ ಸೇರಿದಂತೆ ನೂರಾರು ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ದೇಶದ ಜನರ ನೆಮ್ಮದಿಯ ಬದುಕೇ ಸ್ವಾತಂತ್ರ್ಯದ ಆಶಯ, ಸಂವಿಧಾನದ ಆಶಯವಾಗಿದೆ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ ಹೇಳಿದರು.</p>.<p>ಮಹಾತ್ಮ ಗಾಂಧಿ ಹುತಾತ್ಮ ದಿನ ಅಂಗವಾಗಿ ಇಲ್ಲಿಯ ಅಮರಗೋಳ ಎಪಿಎಂಸಿ ಮುಖ್ಯ ದ್ವಾರದಲ್ಲಿ ಸೌಹಾರ್ದತಾ ಮಾನವ ಸರಪಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಇಂದು ದೇಶದ ಸಂಪತ್ತು ಸೃಷ್ಟಿಸುವ, ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ. ತಮ್ಮ ತಪ್ಪು ನೀತಿ ಮರೆಮಾಚಲು ಜನರನ್ನು ಭಾವನಾತ್ಮಕವಾಗಿ ವಿಭಾಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಸರ್ಕಾರ ಕಾರ್ಮಿಕರಿಗೆ ಘನತೆಯ ಬದುಕು ಖಾತ್ರಿ ಪಡಿಸುವುದು ಯಾವಾಗ? ನಮಗೆ ಗಾಂಧಿಜೀಯವರ ಪರಿಕಲ್ಪನೆಯ ರಾಮ ರಾಜ್ಯ ಸಿಗುವುದು ಯಾವಾಗ’ ಎಂದು ಅವರು ಪ್ರಶ್ನಿಸಿದರು.</p>.<p>ಒಕ್ಕೂಟದ ಅಧ್ಯಕ್ಷ ಬಸವಣ್ಣೆಪ್ಪ ನೀರಲಗಿ, ಮುಖಂಡರಾದ ಕರಿಯಪ್ಪ ದಳವಾಯಿ, ಹುಸೇನಸಾಬ ನದಾಫ್, ಹನಮಂತ ಅಂಬಿಗೇರ, ಸಿದ್ದು ಜಾಲಗಾರ, ಕತಾಲಸಾಬ ಮುಲ್ಲಾ, ಗಾಳೆಪ್ಪ ಮುತ್ತಾಳ, ಮೊಹ್ಮದ ರಫೀಕ್ ಮುಳಗುಂದ ಇದ್ದರು.</p>.<p>ಗೌರವ ನಮನ: ಮಹಾತ್ಮ ಗಾಂಧಿ ಪುಣ್ಯಸ್ಮರಣೆ ನಿಮಿತ್ತ ವಿದ್ಯಾನಗರದ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದ ಗಾಂಧಿ ಪ್ರಾರ್ಥನಾ ಮಂದಿರದ ಎದುರು ಇರುವ ಮಹಾತ್ಮ ಗಾಂಧಿ ಪ್ರತಿಮೆಗೆ ಹೊರಕೇರಿ ಮಾಸ್ತರ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.</p>.<p>ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ, ಚನ್ನಬಸಪ್ಪ ಧಾರವಾಡಶೆಟ್ಟರ, ಉಪನ್ಯಾಸಕಿ ಸರ್ವಮಂಗಳಾ ಕುದರಿ, ಮಂಜುಳಾ ಬಿ. ಮುಂಡರಗಿ, ರೇಖಾ ಹೊಸಮನಿ, ಶೀಫಾ ಪಠಾಣ, ನಿಜಗುಣಿ ಕಾಲವಾಡ ಭಾಗವಹಿಸಿದ್ದರು. ಮೌನಾಚರಣೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ದೇಶದ ಸಮಗ್ರತೆ, ಸೌಹಾರ್ದ ಹಾಗೂ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧಿ ಸೇರಿದಂತೆ ನೂರಾರು ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ದೇಶದ ಜನರ ನೆಮ್ಮದಿಯ ಬದುಕೇ ಸ್ವಾತಂತ್ರ್ಯದ ಆಶಯ, ಸಂವಿಧಾನದ ಆಶಯವಾಗಿದೆ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ ಹೇಳಿದರು.</p>.<p>ಮಹಾತ್ಮ ಗಾಂಧಿ ಹುತಾತ್ಮ ದಿನ ಅಂಗವಾಗಿ ಇಲ್ಲಿಯ ಅಮರಗೋಳ ಎಪಿಎಂಸಿ ಮುಖ್ಯ ದ್ವಾರದಲ್ಲಿ ಸೌಹಾರ್ದತಾ ಮಾನವ ಸರಪಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಇಂದು ದೇಶದ ಸಂಪತ್ತು ಸೃಷ್ಟಿಸುವ, ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ. ತಮ್ಮ ತಪ್ಪು ನೀತಿ ಮರೆಮಾಚಲು ಜನರನ್ನು ಭಾವನಾತ್ಮಕವಾಗಿ ವಿಭಾಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಸರ್ಕಾರ ಕಾರ್ಮಿಕರಿಗೆ ಘನತೆಯ ಬದುಕು ಖಾತ್ರಿ ಪಡಿಸುವುದು ಯಾವಾಗ? ನಮಗೆ ಗಾಂಧಿಜೀಯವರ ಪರಿಕಲ್ಪನೆಯ ರಾಮ ರಾಜ್ಯ ಸಿಗುವುದು ಯಾವಾಗ’ ಎಂದು ಅವರು ಪ್ರಶ್ನಿಸಿದರು.</p>.<p>ಒಕ್ಕೂಟದ ಅಧ್ಯಕ್ಷ ಬಸವಣ್ಣೆಪ್ಪ ನೀರಲಗಿ, ಮುಖಂಡರಾದ ಕರಿಯಪ್ಪ ದಳವಾಯಿ, ಹುಸೇನಸಾಬ ನದಾಫ್, ಹನಮಂತ ಅಂಬಿಗೇರ, ಸಿದ್ದು ಜಾಲಗಾರ, ಕತಾಲಸಾಬ ಮುಲ್ಲಾ, ಗಾಳೆಪ್ಪ ಮುತ್ತಾಳ, ಮೊಹ್ಮದ ರಫೀಕ್ ಮುಳಗುಂದ ಇದ್ದರು.</p>.<p>ಗೌರವ ನಮನ: ಮಹಾತ್ಮ ಗಾಂಧಿ ಪುಣ್ಯಸ್ಮರಣೆ ನಿಮಿತ್ತ ವಿದ್ಯಾನಗರದ ಸರದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠದ ಗಾಂಧಿ ಪ್ರಾರ್ಥನಾ ಮಂದಿರದ ಎದುರು ಇರುವ ಮಹಾತ್ಮ ಗಾಂಧಿ ಪ್ರತಿಮೆಗೆ ಹೊರಕೇರಿ ಮಾಸ್ತರ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.</p>.<p>ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ, ಚನ್ನಬಸಪ್ಪ ಧಾರವಾಡಶೆಟ್ಟರ, ಉಪನ್ಯಾಸಕಿ ಸರ್ವಮಂಗಳಾ ಕುದರಿ, ಮಂಜುಳಾ ಬಿ. ಮುಂಡರಗಿ, ರೇಖಾ ಹೊಸಮನಿ, ಶೀಫಾ ಪಠಾಣ, ನಿಜಗುಣಿ ಕಾಲವಾಡ ಭಾಗವಹಿಸಿದ್ದರು. ಮೌನಾಚರಣೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>