<p><strong>ನರಗುಂದ</strong>: ಪಟ್ಟಣದ ಹುಬ್ಬಳ್ಳಿ ವಿಜಯಪುರ ರಸ್ತೆಗೆ ಹೊಂದಿಕೊಂಡ ಪಾಟೀಲ್ ಮೋಟರ್ಸ್ನ ಟಿವಿಎಸ್ ಸರ್ವೀಸ್ ಸೆಂಟರ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದ್ದು ಬೈಕ್, ಕಂಪ್ಯೂಟರ್, ಲ್ಯಾಪ್ಟಾಪ್ಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ನಡುರಾತ್ರಿ ನಡೆದಿದೆ.</p>.<p>ಕೆಳಗಿನ ಮಹಡಿ ಹಾಗೂ ಮೊದಲಿನ ಮಹಡಿಗೂ ಬೆಂಕಿ ಆವರಿಸಿದ್ದರ ಪರಿಣಾಮವಾಗಿ ಅಪಾರ ಹಾನಿ ಸಂಭವಿಸಿದೆ. 16 ಬೈಕ್ಗಳು ಸುಟ್ಟು ಕರಕಲಾಗಿವೆ. 2 ಕಂಪ್ಯೂಟರ್, 1 ಲ್ಯಾಪ್ಟಾಪ್, ಪೀಠೋಪಕರಣ, ಕೌಂಟರ್, ಏರ ಕಾಂಪೋಸರ್, 3 ಸರ್ವಿಸ್ ರ್ಯಾಂಪ್, ರಿಪೇರಿ ಮಾಡುವ ಸಾಮಗ್ರಿಗಳು, ವಾಹನಗಳ ಬಿಡಿಭಾಗಗಳು, ಹೈಡ್ರೋಲಿಕ್ ಪಂಪ್, ವಾಷಿಂಗ್ ಮೋಟರ್, ಸುಟ್ಟು ಸುಮಾರು ₹ 45 ಲಕ್ಷ ಹಾನಿಯಾಗಿದೆ.ಇದು ಪಟ್ಟಣದ ಸಿದ್ದನಗೌಡ ಸುಮಾಷಗೌಡ ಪಾಟೀಲ ಅವರಿಗೆ ಸೇರಿದೆ.</p>.<p>ಮೊದಲ ಮಹಡಿಯಲ್ಲಿರುವ ಕೆ.ಆರ್.ಐ.ಡಿ.ಎಲ್ ಕಚೇರಿಯಲ್ಲಿನ ಕಂಪ್ಯೂಟರ್ಗಳು, ಪ್ರಿಂಟರ್ಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು, ಪಿಠೋಪಕರಣಗಳು ಬೆಂಕಿಯ ಝಳಕ್ಕೆ ಸುಟ್ಟು ಕರಗಿವೆ. ದಾಖಲಾತಿಗಳು ಭಸ್ಮವಾಗಿವೆ. ಇದರಿಂದ ₹ 5 ಲಕ್ಷ ಹಾನಿ ಸಂಭವಿಸಿದೆ. ಈ ಬೆಂಕಿಗೆ ಎಸ್.ಬಿ.ನಾಶಿಯವರಿಗೆ ಸೇರಿದ ಕಟ್ಟಡ ಜಖಂಗೊಂಡು ₹ 14 ಲಕ್ಷ ಹಾನಿಯಾಗಿದೆ. ಒಟ್ಟು ₹ 64 ಲಕ್ಷ ಹಾನಿ ಸಂಭವಿಸಿದೆ.</p>.<p>ಈ ಕುರಿತು ಸಿದ್ದನಗೌಡ ಪಾಟೀಲ ಮಂಗಳವಾರ ನರಗುಂದ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಿಎಸ್ಐ ಸವಿತಾ ಮುನ್ಯಾಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ</strong>: ಪಟ್ಟಣದ ಹುಬ್ಬಳ್ಳಿ ವಿಜಯಪುರ ರಸ್ತೆಗೆ ಹೊಂದಿಕೊಂಡ ಪಾಟೀಲ್ ಮೋಟರ್ಸ್ನ ಟಿವಿಎಸ್ ಸರ್ವೀಸ್ ಸೆಂಟರ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದ್ದು ಬೈಕ್, ಕಂಪ್ಯೂಟರ್, ಲ್ಯಾಪ್ಟಾಪ್ಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ನಡುರಾತ್ರಿ ನಡೆದಿದೆ.</p>.<p>ಕೆಳಗಿನ ಮಹಡಿ ಹಾಗೂ ಮೊದಲಿನ ಮಹಡಿಗೂ ಬೆಂಕಿ ಆವರಿಸಿದ್ದರ ಪರಿಣಾಮವಾಗಿ ಅಪಾರ ಹಾನಿ ಸಂಭವಿಸಿದೆ. 16 ಬೈಕ್ಗಳು ಸುಟ್ಟು ಕರಕಲಾಗಿವೆ. 2 ಕಂಪ್ಯೂಟರ್, 1 ಲ್ಯಾಪ್ಟಾಪ್, ಪೀಠೋಪಕರಣ, ಕೌಂಟರ್, ಏರ ಕಾಂಪೋಸರ್, 3 ಸರ್ವಿಸ್ ರ್ಯಾಂಪ್, ರಿಪೇರಿ ಮಾಡುವ ಸಾಮಗ್ರಿಗಳು, ವಾಹನಗಳ ಬಿಡಿಭಾಗಗಳು, ಹೈಡ್ರೋಲಿಕ್ ಪಂಪ್, ವಾಷಿಂಗ್ ಮೋಟರ್, ಸುಟ್ಟು ಸುಮಾರು ₹ 45 ಲಕ್ಷ ಹಾನಿಯಾಗಿದೆ.ಇದು ಪಟ್ಟಣದ ಸಿದ್ದನಗೌಡ ಸುಮಾಷಗೌಡ ಪಾಟೀಲ ಅವರಿಗೆ ಸೇರಿದೆ.</p>.<p>ಮೊದಲ ಮಹಡಿಯಲ್ಲಿರುವ ಕೆ.ಆರ್.ಐ.ಡಿ.ಎಲ್ ಕಚೇರಿಯಲ್ಲಿನ ಕಂಪ್ಯೂಟರ್ಗಳು, ಪ್ರಿಂಟರ್ಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು, ಪಿಠೋಪಕರಣಗಳು ಬೆಂಕಿಯ ಝಳಕ್ಕೆ ಸುಟ್ಟು ಕರಗಿವೆ. ದಾಖಲಾತಿಗಳು ಭಸ್ಮವಾಗಿವೆ. ಇದರಿಂದ ₹ 5 ಲಕ್ಷ ಹಾನಿ ಸಂಭವಿಸಿದೆ. ಈ ಬೆಂಕಿಗೆ ಎಸ್.ಬಿ.ನಾಶಿಯವರಿಗೆ ಸೇರಿದ ಕಟ್ಟಡ ಜಖಂಗೊಂಡು ₹ 14 ಲಕ್ಷ ಹಾನಿಯಾಗಿದೆ. ಒಟ್ಟು ₹ 64 ಲಕ್ಷ ಹಾನಿ ಸಂಭವಿಸಿದೆ.</p>.<p>ಈ ಕುರಿತು ಸಿದ್ದನಗೌಡ ಪಾಟೀಲ ಮಂಗಳವಾರ ನರಗುಂದ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಿಎಸ್ಐ ಸವಿತಾ ಮುನ್ಯಾಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>