<p><strong>ಗಜೇಂದ್ರಗಡ</strong>: ‘ಕಾಲಿಗೆ ಗೆಜ್ಜೆ ತಾಳಕ್ಕೆ ತಕ್ಕಂತೆ ಹೆಜ್ಜೆ’ ಇದು ಭಾವೈಕ್ಯದ ಮೊಹರಂ ಹಬ್ಬದಲ್ಲಿ ಹೆಜ್ಜೆ ಮೇಳ, ರಿವಾಯಿತಿ ಪದಗಳು, ಹುಲಿವೇಷದಂತ ಹಲವು ಜನಪದ ಕಲೆಗಳು ಮೇಳೈಸಿದಾಗ ಕಂಡು ಬರುವ ದೃಶ್ಯಗಳು. ಆದರೆ, ಇತ್ತೀಚೆಗೆ ಈ ಕಲೆಗಳು ಮರೆಯಾಗುತ್ತಿವೆ. ಕೆಲವು ಗ್ರಾಮಗಳಲ್ಲಿ ಇನ್ನೂ ಉಳಿದುಕೊಂಡಿದ್ದು, ಯುವ ಪೀಳಿಗೆಗೆ ಕಲಿಸುವ ಕೆಲಸ ನಡೆಯುತ್ತಿದೆ.</p>.<p>ಹಿಂದೆ ಗ್ರಾಮೀಣ ಭಾಗದಲ್ಲಿ ಮೊಹರಂ ಬಂತೆಂದರೆ ಸಾಕು 15-20 ದಿನಗಳ ಮೊದಲು ಓಣಿಗೊಂದು ಹೆಜ್ಜೆ ಮೇಳಗಳು ರಾತ್ರಿಯಿಡಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ತಯಾರಿ ನಡೆಸುತ್ತಿದ್ದವು. ಮಹಮ್ಮದ ಪೈಗಂಬರ, ಹಸೇನಿ-ಹುಸೇನಿ ಅವರ ಜೀವನ ಚರಿತ್ರೆ ತಿಳಿಸುವ ರಿವಾಯಿತಿ ಪದಗಳ ತಯಾರಿ ನಡೆಯುತ್ತಿತ್ತು. ಆದರೆ ಇಂದಿನ ಯುವಜನತೆ ಈ ಬಗೆಯ ನಮ್ಮತನವನ್ನು ಸಾರುವ ಕಲೆಗಳಿಂದ ದೂರ ಸರಿಯುತ್ತಿದ್ದು, ಕೆಲವು ಹಳ್ಳಿಗಳಲ್ಲಿ ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಹೆಜ್ಜೆ ಮೇಳ, ರಿವಾಯಿತಿ ಪದಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.</p>.<p>ಮೊಹರಂ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಮುದುಕರು ಸಹ ಕೈಯಲ್ಲೊಂದು ಕೋಲು ಹಿಡಿದು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ವಿವಿಧ ಬಗೆಯ ಹೆಜ್ಜೆಗಳನ್ನು ಹಾಕುತ್ತಾರೆ. ಅವುಗಳಲ್ಲಿ ಸುತ್ತು ಹೆಜ್ಜಿ, ದಾರಿ ಹೆಜ್ಜಿ, ಪಟ್ಟಿ ಹೆಜ್ಜಿ, ಸಾದಾ ಹೆಜ್ಜಿ, ತೆಕ್ಕೆಜ್ಜಿ, ಹುಡೇದ ಹೆಜ್ಜಿ, ಗಡಾದ ಹೆಜ್ಜಿ, ಹುಸಿ ಹೆಜ್ಜಿ ಪ್ರಮುಖವಾದವು.</p>.<p>ಮೊಹರಂನಲ್ಲಿ ನಮ್ಮ ಮನೆಯಲ್ಲಿ ಯಾವುದೇ ಕಾಯಿಲೆ, ತೊಂದರೆಗಳು ಬಾರದಿರಲಿ, ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಪಂಜಾ ದೇವರಿಗೆ (ಅಲೈ ದೇವರಿಗೆ) ಹರಕೆ ಹೊತ್ತ ಸರ್ವ ಧರ್ಮದವರು ಹಬ್ಬ ಮುಗಿಯುವವರೆಗೂ ಮಕ್ಕಳಿಂದ ಹಿಡಿದು ಮುದುಕರು ಸಹ ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸುತ್ತಾರೆ.</p>.<p>ಹುಲಿವೇಷದ ಬಣ್ಣ ಬಳಿಸಿಕೊಳ್ಳಲು ಹಣ ಇಲ್ಲದವರು ಮೈಗೊಂದು ಹಳೆಯ ಕಂಬಳಿ ಸುತ್ತಿಕೊಂಡು ಮೈತುಂಬ ಮಸಿ ಬಳಿದುಕೊಂಡು ತಲೆಗೊಂದು ಉದ್ದನೆ ಟೋಪಿ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಐದು ದಿನ ನಡೆಯುವ ಮೊಹರಂ ಹಬ್ಬದಲ್ಲಿ ಹೊಸ ಬಟ್ಟೆ ಧರಿಸಿ ಕೊರಳಿಗೆ, ಕೈಗೆ ಲಾಡಿ ಕಟ್ಟಿಕೊಂಡು ಭಿಕ್ಷೆ ಬೇಡಿ ಹರಕೆ ತೀರಿಸುತ್ತಾರೆ.</p>.<p>ಐದು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಸಂದಲ ರಾತ್ರಿ, ಕತಲ್ ರಾತ್ರಿಗಳಲ್ಲಿ ಅಲೈ ದೇವರ ಸವಾರಿ ಹಾಗೂ ಪವಾಡಗಳು ನಡೆಯುತ್ತವೆ. ಕೊನೆಯ ದಿನ ಎಲ್ಲ ದೇವರುಗಳು ಭೇಟಿ ಕೊಟ್ಟು ಹೊಳೆಗೆ ಹೋಗುತ್ತವೆ.</p>.<p>‘ಹಿಂದೆ ತಿಂಗಳಾನುಗಟ್ಟಲೆ ಗುಮರಿ, ಗೆಜ್ಜೆ ಕಟ್ಟಿಕೊಂಡು ಓಣಿಗೊಂದು ಹೆಜ್ಜಿ ಮೇಳ ಮಾಡಿಕೊಂಡು ತಯಾರಿ ನಡೆಸಿ ಕತ್ತಲ ರಾತ್ರಿ ದಿನ ಜೋಡ ಹಲಿಗಿಯೊಂದಿಗೆ ಮಸೀದಿ ಮುಂದೆ ಹೆಜ್ಜಿ ಆಡುತ್ತ ಬಂದರೆ ಮಂದಿ ನಿಂತ ನೋಡುತ್ತಿದ್ದರು. ಆದರೆ ಈಗಿನವರು ಸಿನೆಮಾ ಹಾಡಿಗೆ ಕುಣಿಯುತ್ತಾರೆʼ ಎಂದು ರಾಜೂರ ಗ್ರಾಮದ ಹಿರಿಯರೊಬ್ಬರು ಹಿಂದಿನ ಹೆಜ್ಜೆ ಮೇಳದ ಮೆಲುಕು ಹಾಕಿದರು.</p>.<div><blockquote>ಮುಸ್ಲಿಂ ಸಮುದಾಯ ವಾಸಿಸುವ ಗ್ರಾಮದಲ್ಲಿ ಮತ್ತು ಮುಸ್ಲಿಮರು ಇಲ್ಲದೆ ಇರುವ ಗ್ರಾಮದಲ್ಲಿ ಹಬ್ಬವನ್ನು ಆಚರಣೆ ಮಾಡುವುದು ವಿಶೇಷವಾಗಿದೆ. </blockquote><span class="attribution">ಬಸೀರಅಹ್ಮದ ತಾಂಭೋಟಿ ಅಂಜುಮಾನ್ ಕಮಿಟಿ ಅಧ್ಯಕ್ಷ ಡಂಬಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ</strong>: ‘ಕಾಲಿಗೆ ಗೆಜ್ಜೆ ತಾಳಕ್ಕೆ ತಕ್ಕಂತೆ ಹೆಜ್ಜೆ’ ಇದು ಭಾವೈಕ್ಯದ ಮೊಹರಂ ಹಬ್ಬದಲ್ಲಿ ಹೆಜ್ಜೆ ಮೇಳ, ರಿವಾಯಿತಿ ಪದಗಳು, ಹುಲಿವೇಷದಂತ ಹಲವು ಜನಪದ ಕಲೆಗಳು ಮೇಳೈಸಿದಾಗ ಕಂಡು ಬರುವ ದೃಶ್ಯಗಳು. ಆದರೆ, ಇತ್ತೀಚೆಗೆ ಈ ಕಲೆಗಳು ಮರೆಯಾಗುತ್ತಿವೆ. ಕೆಲವು ಗ್ರಾಮಗಳಲ್ಲಿ ಇನ್ನೂ ಉಳಿದುಕೊಂಡಿದ್ದು, ಯುವ ಪೀಳಿಗೆಗೆ ಕಲಿಸುವ ಕೆಲಸ ನಡೆಯುತ್ತಿದೆ.</p>.<p>ಹಿಂದೆ ಗ್ರಾಮೀಣ ಭಾಗದಲ್ಲಿ ಮೊಹರಂ ಬಂತೆಂದರೆ ಸಾಕು 15-20 ದಿನಗಳ ಮೊದಲು ಓಣಿಗೊಂದು ಹೆಜ್ಜೆ ಮೇಳಗಳು ರಾತ್ರಿಯಿಡಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ತಯಾರಿ ನಡೆಸುತ್ತಿದ್ದವು. ಮಹಮ್ಮದ ಪೈಗಂಬರ, ಹಸೇನಿ-ಹುಸೇನಿ ಅವರ ಜೀವನ ಚರಿತ್ರೆ ತಿಳಿಸುವ ರಿವಾಯಿತಿ ಪದಗಳ ತಯಾರಿ ನಡೆಯುತ್ತಿತ್ತು. ಆದರೆ ಇಂದಿನ ಯುವಜನತೆ ಈ ಬಗೆಯ ನಮ್ಮತನವನ್ನು ಸಾರುವ ಕಲೆಗಳಿಂದ ದೂರ ಸರಿಯುತ್ತಿದ್ದು, ಕೆಲವು ಹಳ್ಳಿಗಳಲ್ಲಿ ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಹೆಜ್ಜೆ ಮೇಳ, ರಿವಾಯಿತಿ ಪದಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.</p>.<p>ಮೊಹರಂ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಮುದುಕರು ಸಹ ಕೈಯಲ್ಲೊಂದು ಕೋಲು ಹಿಡಿದು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ವಿವಿಧ ಬಗೆಯ ಹೆಜ್ಜೆಗಳನ್ನು ಹಾಕುತ್ತಾರೆ. ಅವುಗಳಲ್ಲಿ ಸುತ್ತು ಹೆಜ್ಜಿ, ದಾರಿ ಹೆಜ್ಜಿ, ಪಟ್ಟಿ ಹೆಜ್ಜಿ, ಸಾದಾ ಹೆಜ್ಜಿ, ತೆಕ್ಕೆಜ್ಜಿ, ಹುಡೇದ ಹೆಜ್ಜಿ, ಗಡಾದ ಹೆಜ್ಜಿ, ಹುಸಿ ಹೆಜ್ಜಿ ಪ್ರಮುಖವಾದವು.</p>.<p>ಮೊಹರಂನಲ್ಲಿ ನಮ್ಮ ಮನೆಯಲ್ಲಿ ಯಾವುದೇ ಕಾಯಿಲೆ, ತೊಂದರೆಗಳು ಬಾರದಿರಲಿ, ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಪಂಜಾ ದೇವರಿಗೆ (ಅಲೈ ದೇವರಿಗೆ) ಹರಕೆ ಹೊತ್ತ ಸರ್ವ ಧರ್ಮದವರು ಹಬ್ಬ ಮುಗಿಯುವವರೆಗೂ ಮಕ್ಕಳಿಂದ ಹಿಡಿದು ಮುದುಕರು ಸಹ ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸುತ್ತಾರೆ.</p>.<p>ಹುಲಿವೇಷದ ಬಣ್ಣ ಬಳಿಸಿಕೊಳ್ಳಲು ಹಣ ಇಲ್ಲದವರು ಮೈಗೊಂದು ಹಳೆಯ ಕಂಬಳಿ ಸುತ್ತಿಕೊಂಡು ಮೈತುಂಬ ಮಸಿ ಬಳಿದುಕೊಂಡು ತಲೆಗೊಂದು ಉದ್ದನೆ ಟೋಪಿ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಐದು ದಿನ ನಡೆಯುವ ಮೊಹರಂ ಹಬ್ಬದಲ್ಲಿ ಹೊಸ ಬಟ್ಟೆ ಧರಿಸಿ ಕೊರಳಿಗೆ, ಕೈಗೆ ಲಾಡಿ ಕಟ್ಟಿಕೊಂಡು ಭಿಕ್ಷೆ ಬೇಡಿ ಹರಕೆ ತೀರಿಸುತ್ತಾರೆ.</p>.<p>ಐದು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಸಂದಲ ರಾತ್ರಿ, ಕತಲ್ ರಾತ್ರಿಗಳಲ್ಲಿ ಅಲೈ ದೇವರ ಸವಾರಿ ಹಾಗೂ ಪವಾಡಗಳು ನಡೆಯುತ್ತವೆ. ಕೊನೆಯ ದಿನ ಎಲ್ಲ ದೇವರುಗಳು ಭೇಟಿ ಕೊಟ್ಟು ಹೊಳೆಗೆ ಹೋಗುತ್ತವೆ.</p>.<p>‘ಹಿಂದೆ ತಿಂಗಳಾನುಗಟ್ಟಲೆ ಗುಮರಿ, ಗೆಜ್ಜೆ ಕಟ್ಟಿಕೊಂಡು ಓಣಿಗೊಂದು ಹೆಜ್ಜಿ ಮೇಳ ಮಾಡಿಕೊಂಡು ತಯಾರಿ ನಡೆಸಿ ಕತ್ತಲ ರಾತ್ರಿ ದಿನ ಜೋಡ ಹಲಿಗಿಯೊಂದಿಗೆ ಮಸೀದಿ ಮುಂದೆ ಹೆಜ್ಜಿ ಆಡುತ್ತ ಬಂದರೆ ಮಂದಿ ನಿಂತ ನೋಡುತ್ತಿದ್ದರು. ಆದರೆ ಈಗಿನವರು ಸಿನೆಮಾ ಹಾಡಿಗೆ ಕುಣಿಯುತ್ತಾರೆʼ ಎಂದು ರಾಜೂರ ಗ್ರಾಮದ ಹಿರಿಯರೊಬ್ಬರು ಹಿಂದಿನ ಹೆಜ್ಜೆ ಮೇಳದ ಮೆಲುಕು ಹಾಕಿದರು.</p>.<div><blockquote>ಮುಸ್ಲಿಂ ಸಮುದಾಯ ವಾಸಿಸುವ ಗ್ರಾಮದಲ್ಲಿ ಮತ್ತು ಮುಸ್ಲಿಮರು ಇಲ್ಲದೆ ಇರುವ ಗ್ರಾಮದಲ್ಲಿ ಹಬ್ಬವನ್ನು ಆಚರಣೆ ಮಾಡುವುದು ವಿಶೇಷವಾಗಿದೆ. </blockquote><span class="attribution">ಬಸೀರಅಹ್ಮದ ತಾಂಭೋಟಿ ಅಂಜುಮಾನ್ ಕಮಿಟಿ ಅಧ್ಯಕ್ಷ ಡಂಬಳ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>