<p><strong>ನರೇಗಲ್:</strong> ಹೋಬಳಿಯ ನರೇಗಲ್-ಗಜೇಂದ್ರಗಡ ರಸ್ತೆಗೆ ಚಾಚಿಕೊಂಡಿದ್ದ ಮುಳ್ಳಿನ ಹಾಗೂ ಇತರೆ ಗಿಡಗಳ ಟೊಂಗಿಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಸದ್ಯ ನಿಡಗುಂದಿಯಿಂದ ನಿಡಗುಂದಿಕೊಪ್ಪದ ಕ್ರಾಸ್ ದಾಟಿ ನರೇಗಲ್ ಮಾರ್ಗದ ಗಡ್ಡಿ ಹಳ್ಳದ ವರೆಗೆ ಟೊಂಗಿಗಳ ತೆರವು ಕಾರ್ಯಚರಣೆ ಜೆಸಿಬಿ ಮೂಲಕ ನಡೆಸಿದ್ದಾರೆ. </p>.<p>ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನರೇಗಲ್ ಹೋಬಳಿಯ ಮಾರ್ಗದ ರಸ್ತೆ ಬದಿಯ ಎರಡೂ ಕಡೆಗಳಲ್ಲಿ ಮುಳ್ಳಿನ ಕಂಟಿಗಳು ರಸ್ತೆಗೆ ಚಾಚಿಕೊಂಡು ಅಪಘಾತಕ್ಕೆ ಆಹ್ವಾನಿಸುತ್ತಿದ್ದವು. ಗಿಡದ ಟೊಂಗೆಗಳು ರಸ್ತೆ ಮಧ್ಯಭಾಗದವರೆಗೂ ಚಾಚಿಕೊಂಡಿದ್ದು, ಇದರಿಂದಾಗಿ ಎದುರಿಗೆ ಬರುವ ವಾಹನಗಳ ಕಾಣಿಸದಿರುವುದರಿಂದ ಅಪಘಾತಗಳು ನಡೆಯುತ್ತಿದ್ದವು. ಮಾರನಬಸರಿ-ನರೇಗಲ್, ಮಾರನಬಸರಿ ಕಳಕಾಪುರ, ಜಕ್ಕಲಿ-ಮಾರನಬಸರಿ, ಬೂದಿಹಾಳ-ನರೇಗಲ್ ಮಾರ್ಗದ ಗ್ರಾಮೀಣ ಭಾಗದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಂಗೆಗಳು ರಸ್ತೆಗೆ ಚಾಚಿಕೊಂಡಿವೆ. ಈಗಲೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ನಡೆದಿರುವ ಕಾರ್ಯವನ್ನು ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೂ ವಿಸ್ತರಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.</p>.<p>ಕಳೆದೊಂದು ವಾರದಿಂದ ತೆರುವು ಕಾರ್ಯ ನಡೆದಿದೆ. ಆರಂಭದಲ್ಲಿ ನಿಡಗುಂದಿಕೊಪ್ಪದ ಕ್ರಾಸ್ ಬಳಿಯ ರಸ್ತೆ ಬದಿ ಆರಂಭಿಸಿದ್ದು, ನಂತರ ನರೇಗಲ್ ಮಾರ್ಗದ ಗಡ್ಡಿ ಹಳ್ಳ ಹಾಗೂ ನಿಡಗುಂದಿ-ಗಜೇಂದ್ರಗಡ ಮಾರ್ಗದ ವರೆಗೆ ಸಾಗಿದೆ. ಇನ್ನೂ ತೆರವು ಕಾರ್ಯಾಚರಣೆ ಮುಂದೆವರೆದಿದೆ.</p>.<p>ಕುರಿತು ‘ಪ್ರಜಾವಾಣಿ’ಯಲ್ಲಿ ಆ.3ರಂದು ‘ರಸ್ತೆಗೆ ಚಾಚಿದ ಟೊಂಗೆ ತೆರವಿಗೆ ಆಗ್ರಹ; ಅಪಘಾತಕ್ಕೆ ಆಹ್ವಾನ ನೀಡುವ ಕಂಟಿಗಳುʼ ಎಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ತದನಂತರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ‘ಕುಂದುಕೊರತೆ’ ವಿಭಾಗದಲ್ಲೂ ಸಮಸ್ಯೆಯ ಕುರಿತು ವರದಿ ಪ್ರಕಟಿಸಲಾಗಿತ್ತು. ನಿರಂತರ ವರದಿಗೆ ಎಚ್ಚೆತ್ತ ಅಧಿಕಾರಿ ರಸ್ತೆಗೆ ಚಾಚಿಕೊಂಡ ಟೊಂಗೆಗಳ ತೆರವಿಗೆ ಮುಂದಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರೇಗಲ್:</strong> ಹೋಬಳಿಯ ನರೇಗಲ್-ಗಜೇಂದ್ರಗಡ ರಸ್ತೆಗೆ ಚಾಚಿಕೊಂಡಿದ್ದ ಮುಳ್ಳಿನ ಹಾಗೂ ಇತರೆ ಗಿಡಗಳ ಟೊಂಗಿಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಸದ್ಯ ನಿಡಗುಂದಿಯಿಂದ ನಿಡಗುಂದಿಕೊಪ್ಪದ ಕ್ರಾಸ್ ದಾಟಿ ನರೇಗಲ್ ಮಾರ್ಗದ ಗಡ್ಡಿ ಹಳ್ಳದ ವರೆಗೆ ಟೊಂಗಿಗಳ ತೆರವು ಕಾರ್ಯಚರಣೆ ಜೆಸಿಬಿ ಮೂಲಕ ನಡೆಸಿದ್ದಾರೆ. </p>.<p>ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನರೇಗಲ್ ಹೋಬಳಿಯ ಮಾರ್ಗದ ರಸ್ತೆ ಬದಿಯ ಎರಡೂ ಕಡೆಗಳಲ್ಲಿ ಮುಳ್ಳಿನ ಕಂಟಿಗಳು ರಸ್ತೆಗೆ ಚಾಚಿಕೊಂಡು ಅಪಘಾತಕ್ಕೆ ಆಹ್ವಾನಿಸುತ್ತಿದ್ದವು. ಗಿಡದ ಟೊಂಗೆಗಳು ರಸ್ತೆ ಮಧ್ಯಭಾಗದವರೆಗೂ ಚಾಚಿಕೊಂಡಿದ್ದು, ಇದರಿಂದಾಗಿ ಎದುರಿಗೆ ಬರುವ ವಾಹನಗಳ ಕಾಣಿಸದಿರುವುದರಿಂದ ಅಪಘಾತಗಳು ನಡೆಯುತ್ತಿದ್ದವು. ಮಾರನಬಸರಿ-ನರೇಗಲ್, ಮಾರನಬಸರಿ ಕಳಕಾಪುರ, ಜಕ್ಕಲಿ-ಮಾರನಬಸರಿ, ಬೂದಿಹಾಳ-ನರೇಗಲ್ ಮಾರ್ಗದ ಗ್ರಾಮೀಣ ಭಾಗದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಂಗೆಗಳು ರಸ್ತೆಗೆ ಚಾಚಿಕೊಂಡಿವೆ. ಈಗಲೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ನಡೆದಿರುವ ಕಾರ್ಯವನ್ನು ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೂ ವಿಸ್ತರಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.</p>.<p>ಕಳೆದೊಂದು ವಾರದಿಂದ ತೆರುವು ಕಾರ್ಯ ನಡೆದಿದೆ. ಆರಂಭದಲ್ಲಿ ನಿಡಗುಂದಿಕೊಪ್ಪದ ಕ್ರಾಸ್ ಬಳಿಯ ರಸ್ತೆ ಬದಿ ಆರಂಭಿಸಿದ್ದು, ನಂತರ ನರೇಗಲ್ ಮಾರ್ಗದ ಗಡ್ಡಿ ಹಳ್ಳ ಹಾಗೂ ನಿಡಗುಂದಿ-ಗಜೇಂದ್ರಗಡ ಮಾರ್ಗದ ವರೆಗೆ ಸಾಗಿದೆ. ಇನ್ನೂ ತೆರವು ಕಾರ್ಯಾಚರಣೆ ಮುಂದೆವರೆದಿದೆ.</p>.<p>ಕುರಿತು ‘ಪ್ರಜಾವಾಣಿ’ಯಲ್ಲಿ ಆ.3ರಂದು ‘ರಸ್ತೆಗೆ ಚಾಚಿದ ಟೊಂಗೆ ತೆರವಿಗೆ ಆಗ್ರಹ; ಅಪಘಾತಕ್ಕೆ ಆಹ್ವಾನ ನೀಡುವ ಕಂಟಿಗಳುʼ ಎಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ತದನಂತರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ‘ಕುಂದುಕೊರತೆ’ ವಿಭಾಗದಲ್ಲೂ ಸಮಸ್ಯೆಯ ಕುರಿತು ವರದಿ ಪ್ರಕಟಿಸಲಾಗಿತ್ತು. ನಿರಂತರ ವರದಿಗೆ ಎಚ್ಚೆತ್ತ ಅಧಿಕಾರಿ ರಸ್ತೆಗೆ ಚಾಚಿಕೊಂಡ ಟೊಂಗೆಗಳ ತೆರವಿಗೆ ಮುಂದಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>