<p><strong>ಗದಗ</strong>: ಜನಪ್ರಿಯ ರಂಗಭೂಮಿ ಕಲಾವಿದ ಫಕೀರಪ್ಪ ವರವಿ (83) ಅವರು ಮಂಗಳವಾರ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ವರವಿ ಗ್ರಾಮದಲ್ಲಿ ನಿಧನರಾದರು.</p><p>ಬಾಲ್ಯದಿಂದಲೇ ರಂಗಭೂಮಿ ಬಗ್ಗೆ ಸೆಳೆತ ಹೊಂದಿದ್ದ ಫಕೀರಪ್ಪ ಅವರೊಳಗಿನ ಕಲೆಯನ್ನು ಗುರುತಿಸಿ, ಅವಕಾಶ ನೀಡಿದ್ದು ಮೊಗಲಾಯ ಮಾಸ್ತರು. ವರವಿ ಅವರ ಪ್ರಥಮ ಗುರು ಕೂಡ ಇವರೇ. ಬಳಿಕ ವೀರಭದ್ರಯ್ಯಸ್ವಾಮಿ ಹಿರೇಮಠ ಎಂಬುವರು ವರವಿ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಸಂಗೀತ ಕಲಿಸಿದರು. ಶಿರಹಟ್ಟಿ ಜಾತ್ರೆಯಲ್ಲಿ ಪ್ರದರ್ಶನಗೊಂಡ ‘ಜಗಜ್ಯೋತಿ ಬಸವೇಶ್ವರ’ ನಾಟಕದಿಂದ ಪ್ರಭಾವಿತರಾಗಿ ದೊಡ್ಡವಾಡಿ ನಾಟಕ ಕಂಪನಿ ಸೇರಿಕೊಂಡರು.</p><p>‘ಬಸವೇಶ್ವರ’, ‘ಚೆನ್ನಬಸವೇಶ್ವರ’, ‘ಸ್ತ್ರೀ ರತ್ನ’, ‘ವಧು-ವರ’ ನಾಟಕಗಳಲ್ಲಿ ಬಾಲಕಲಾವಿದರಾಗಿ ಕಾಣಿಸಿಕೊಂಡರು. ಮುಂದೆ ಕೆ.ಹಿರಣ್ಣಯ್ಯ ಮಿತ್ರಮಂಡಲಿ ಸೇರಿ ‘ಕೃಷ್ಣಲೀಲಾ’, ‘ರಾಮಾಯಣ’, ‘ದೇವದಾಸಿ’, ‘ಎಚ್ಚಮನಾಯಕ’, ‘ಲಂಚಾವತಾರ’ ಮೊದಲಾದ ನಾಟಕಗಳಿಗೆ ಬಣ್ಣ ಹಚ್ಚಿದ್ದರು.</p><p>ನಂತರ ಇವರು ಸೇರಿದ್ದ ಶ್ರೀ ವೀರಭದ್ರೇಶ್ವರ ನಾಟಕ ಸಂಘ ಬಿಜಾಪುರದಲ್ಲಿ ಕ್ಯಾಂಪ್ ಮಾಡಿದ್ದಾಗ ಒಮ್ಮೆ ಆಕಸ್ಮಾತ್ ಆಗಿ ಹಾಸ್ಯಪಾತ್ರಧಾರಿಯ ಅನುಪಸ್ಥಿತಿಯಲ್ಲಿ ವರವಿ ಅವರು ಆ ಪಾತ್ರ ನಿರ್ವಹಿಸಬೇಕಾಯಿತು. ಈ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ, ಜನರನ್ನು ರಂಜಿಸುವ ಮೂಲಕ ಕಾಯಂ ಹಾಸ್ಯಕಲಾವಿದರಾಗಿ ಮುಂದುವರಿದರು. </p><p>ಮುಂದಿನ ದಿನಗಳಲ್ಲಿ ಇವರು ರೆಹಮಾನಪ್ಪನ ಕಂಪನಿ, ಮಾಂತೇಶ ಶಾಸ್ತ್ರಿಗಳ ಕಂಪನಿ, ಓಬಳೇಶ್ವರ ಕಂಪನಿ, ಸುಳ್ಯದ ದೇಸಾಯಿ ಕಂಪನಿ ಹಾಗೂ ಗೋಕಾಕ ಕಂಪನಿಗಳಲ್ಲಿ ರಂಗನಟನೆಯ ಅಪಾರ ಅನುಭವ ಪಡೆದು 1977ರಲ್ಲಿ ತಮ್ಮದೇ ಆದ 'ರಾಘವೇಂದ್ರ ವಿಜಯ ನಾಟ್ಯಸಂಘ' ಸ್ಥಾಪಿಸಿದರು.</p><p>ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಜನಪ್ರಿಯವಾದ ಸಾಮಾಜಿಕ ನಾಟಕಗಳನ್ನು ನೂರಾರು ಬಾರಿ ಆಡಿ ಅವುಗಳಲ್ಲಿನ ಪ್ರಮುಖ ಹಾಸ್ಯ ಪಾತ್ರಗಳನ್ನು ನಿರ್ವಹಿಸಿ ಜನಮನ ಸೂರೆಗೊಂಡಿದ್ದರು.</p><p>ವರವಿ ಅವರು ನೂರು ಆಡಿಯೊ ಕ್ಯಾಸೆಟ್ಗಳಿಗೆ ಕಂಠದಾನ ಮಾಡಿದ್ದಾರೆ. ಹತ್ತಾರು ಚಲನಚಿತ್ರಗಳಲ್ಲಿ ಪೋಷಕ ನಟರಾಗಿಯೂ ಅಭಿನಯಿಸಿದ್ದಾರೆ. ಇವರು ಬರೆದಿದ್ದ ‘ರಾತ್ರಿ’ ಎಂಬ ಕಥೆ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ. ವರವಿ ಅವರು ಏಳು ಪೌರಾಣಿಕ ನಾಟಕ ಹಾಗೂ ಆರು ಸಾಮಾಜಿಕ ನಾಟಕಗಳನ್ನು ರಚಿಸಿ ರಂಗಭೂಮಿಗೆ ಗುರುತರ ಸೇವೆ ಸಲ್ಲಿಸಿದ್ದಾರೆ. </p><p>‘ಗುಬ್ಬಿ ವೀರಣ್ಣ ಪ್ರಶಸ್ತಿ’, ‘ಹಾಸ್ಯ ಚಕ್ರವರ್ತಿ’, ‘ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರ ದತ್ತಿ ರಂಗಪ್ರಶಸ್ತಿ’ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ಜನಪ್ರಿಯ ರಂಗಭೂಮಿ ಕಲಾವಿದ ಫಕೀರಪ್ಪ ವರವಿ (83) ಅವರು ಮಂಗಳವಾರ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ವರವಿ ಗ್ರಾಮದಲ್ಲಿ ನಿಧನರಾದರು.</p><p>ಬಾಲ್ಯದಿಂದಲೇ ರಂಗಭೂಮಿ ಬಗ್ಗೆ ಸೆಳೆತ ಹೊಂದಿದ್ದ ಫಕೀರಪ್ಪ ಅವರೊಳಗಿನ ಕಲೆಯನ್ನು ಗುರುತಿಸಿ, ಅವಕಾಶ ನೀಡಿದ್ದು ಮೊಗಲಾಯ ಮಾಸ್ತರು. ವರವಿ ಅವರ ಪ್ರಥಮ ಗುರು ಕೂಡ ಇವರೇ. ಬಳಿಕ ವೀರಭದ್ರಯ್ಯಸ್ವಾಮಿ ಹಿರೇಮಠ ಎಂಬುವರು ವರವಿ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಸಂಗೀತ ಕಲಿಸಿದರು. ಶಿರಹಟ್ಟಿ ಜಾತ್ರೆಯಲ್ಲಿ ಪ್ರದರ್ಶನಗೊಂಡ ‘ಜಗಜ್ಯೋತಿ ಬಸವೇಶ್ವರ’ ನಾಟಕದಿಂದ ಪ್ರಭಾವಿತರಾಗಿ ದೊಡ್ಡವಾಡಿ ನಾಟಕ ಕಂಪನಿ ಸೇರಿಕೊಂಡರು.</p><p>‘ಬಸವೇಶ್ವರ’, ‘ಚೆನ್ನಬಸವೇಶ್ವರ’, ‘ಸ್ತ್ರೀ ರತ್ನ’, ‘ವಧು-ವರ’ ನಾಟಕಗಳಲ್ಲಿ ಬಾಲಕಲಾವಿದರಾಗಿ ಕಾಣಿಸಿಕೊಂಡರು. ಮುಂದೆ ಕೆ.ಹಿರಣ್ಣಯ್ಯ ಮಿತ್ರಮಂಡಲಿ ಸೇರಿ ‘ಕೃಷ್ಣಲೀಲಾ’, ‘ರಾಮಾಯಣ’, ‘ದೇವದಾಸಿ’, ‘ಎಚ್ಚಮನಾಯಕ’, ‘ಲಂಚಾವತಾರ’ ಮೊದಲಾದ ನಾಟಕಗಳಿಗೆ ಬಣ್ಣ ಹಚ್ಚಿದ್ದರು.</p><p>ನಂತರ ಇವರು ಸೇರಿದ್ದ ಶ್ರೀ ವೀರಭದ್ರೇಶ್ವರ ನಾಟಕ ಸಂಘ ಬಿಜಾಪುರದಲ್ಲಿ ಕ್ಯಾಂಪ್ ಮಾಡಿದ್ದಾಗ ಒಮ್ಮೆ ಆಕಸ್ಮಾತ್ ಆಗಿ ಹಾಸ್ಯಪಾತ್ರಧಾರಿಯ ಅನುಪಸ್ಥಿತಿಯಲ್ಲಿ ವರವಿ ಅವರು ಆ ಪಾತ್ರ ನಿರ್ವಹಿಸಬೇಕಾಯಿತು. ಈ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ, ಜನರನ್ನು ರಂಜಿಸುವ ಮೂಲಕ ಕಾಯಂ ಹಾಸ್ಯಕಲಾವಿದರಾಗಿ ಮುಂದುವರಿದರು. </p><p>ಮುಂದಿನ ದಿನಗಳಲ್ಲಿ ಇವರು ರೆಹಮಾನಪ್ಪನ ಕಂಪನಿ, ಮಾಂತೇಶ ಶಾಸ್ತ್ರಿಗಳ ಕಂಪನಿ, ಓಬಳೇಶ್ವರ ಕಂಪನಿ, ಸುಳ್ಯದ ದೇಸಾಯಿ ಕಂಪನಿ ಹಾಗೂ ಗೋಕಾಕ ಕಂಪನಿಗಳಲ್ಲಿ ರಂಗನಟನೆಯ ಅಪಾರ ಅನುಭವ ಪಡೆದು 1977ರಲ್ಲಿ ತಮ್ಮದೇ ಆದ 'ರಾಘವೇಂದ್ರ ವಿಜಯ ನಾಟ್ಯಸಂಘ' ಸ್ಥಾಪಿಸಿದರು.</p><p>ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲಿ ಜನಪ್ರಿಯವಾದ ಸಾಮಾಜಿಕ ನಾಟಕಗಳನ್ನು ನೂರಾರು ಬಾರಿ ಆಡಿ ಅವುಗಳಲ್ಲಿನ ಪ್ರಮುಖ ಹಾಸ್ಯ ಪಾತ್ರಗಳನ್ನು ನಿರ್ವಹಿಸಿ ಜನಮನ ಸೂರೆಗೊಂಡಿದ್ದರು.</p><p>ವರವಿ ಅವರು ನೂರು ಆಡಿಯೊ ಕ್ಯಾಸೆಟ್ಗಳಿಗೆ ಕಂಠದಾನ ಮಾಡಿದ್ದಾರೆ. ಹತ್ತಾರು ಚಲನಚಿತ್ರಗಳಲ್ಲಿ ಪೋಷಕ ನಟರಾಗಿಯೂ ಅಭಿನಯಿಸಿದ್ದಾರೆ. ಇವರು ಬರೆದಿದ್ದ ‘ರಾತ್ರಿ’ ಎಂಬ ಕಥೆ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ. ವರವಿ ಅವರು ಏಳು ಪೌರಾಣಿಕ ನಾಟಕ ಹಾಗೂ ಆರು ಸಾಮಾಜಿಕ ನಾಟಕಗಳನ್ನು ರಚಿಸಿ ರಂಗಭೂಮಿಗೆ ಗುರುತರ ಸೇವೆ ಸಲ್ಲಿಸಿದ್ದಾರೆ. </p><p>‘ಗುಬ್ಬಿ ವೀರಣ್ಣ ಪ್ರಶಸ್ತಿ’, ‘ಹಾಸ್ಯ ಚಕ್ರವರ್ತಿ’, ‘ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರ ದತ್ತಿ ರಂಗಪ್ರಶಸ್ತಿ’ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>