<p>ಗದಗ: ನಗರದ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು.</p>.<p>ಒಂದನೇ ತರಗತಿಯ ವಿದ್ಯಾರ್ಥಿ ಸರ್. ಸಿ.ವಿ. ರಾಮನ್ ಅವರಂತೆ ವೇಷಭೂಷಣ ಧರಿಸಿ ಅವರ ಜೀವನ, ಸಾಧನೆಗಳ ಕುರಿತು ಮಕ್ಕಳಿಗೆ ತಿಳಿಯಪಡಿಸಿದನು.</p>.<p>‘ಎಲ್ಲ ಪ್ರಯೋಗಗಳು ಕಲಿಕೆಯ ಅನುಭವಗಳನ್ನು ನೀಡುತ್ತವೆ. ಅದರಿಂದ ಆದ ತಪ್ಪುಗಳನ್ನು ತಿದ್ದಿಕೊಂಡು ಪುನಃ ಪ್ರಯತ್ನಿಸಿದಾಗ ಅಂತಿಮ ಪರಿಹಾರ ಸಿಗುತ್ತದೆ. ವಿಜ್ಞಾನವೆಂದರೆ ಬೇರೇನೂ ಅಲ್ಲ, ಅದು ನಮ್ಮ ದೈನಂದಿನ ಬಳಕೆಯ ವಸ್ತುವಿನಲ್ಲಿದೆ’ ಎಂದು ತಿಳಿಸಿದನು.</p>.<p>ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ವಿಜ್ಞಾನದ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸಿದರು. ಅಲ್ಲದೇ ದೈನಂದಿನ ದಿನಗಳಲ್ಲಿ ವಿಜ್ಞಾನವು ಹೇಗೆ ನಮ್ಮಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.</p>.<p>ಉಪ ಪ್ರಾಂಶುಪಾಲೆ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಶೋಭಾ ಮಾಲಿಪಾಟೀಲ ಅವರು ಥಾಮಸ್ ಅಲ್ವಾ ಎಡಿಸನ್ ಅವರ ಜೀವನ ಯಶೋಗಾಥೆಯ ಬಗ್ಗೆ ವಿವರಿಸಿದರು.</p>.<p>ಪ್ರಾಂಶುಪಾಲೆ ವಿಜಯಲಕ್ಷ್ಮೀ ಪುರಾಣಿಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್. ಸಿ.ವಿ.ರಾಮನ್ ಅವರ ಸಾಧನೆ, ಬೆಳಕಿನ ವಕ್ರೀಭವನದ ಬಗ್ಗೆ ಅವರ ಸಿದ್ದಾಂತವನ್ನು ಕುರಿತು ಮಕ್ಕಳಿಗೆ ತಿಳಿಸಿದರು.</p>.<p>ಪ್ರತಿಯೊಂದು ಮಗುವು ದೇಶದ ಒಬ್ಬೊಬ್ಬ ವಿಜ್ಞಾನಿ ಎಂದು ಹೇಳಿ ಮಕ್ಕಳಲ್ಲಿ ಉತ್ಸಾಹ ತುಂಬಿದರು.</p>.<p>ಸಂಸ್ಥೆಯ ಚೇರ್ಮನ್ ಅಶೋಕ ಜೈನ್, ಅಧ್ಯಕ್ಷ ವಿನೋದ ಗಾದಿಯಾ, ಕಾರ್ಯದರ್ಶಿ ಸಚಿನ್ ಜೈನ್, ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ್ ಜೈನ್ ಹಾಗೂ ಸಮಿತಿಯ ಸರ್ವ ಸದಸ್ಯರು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದವು ಎಲ್ಲ ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಿಗಳಿಗೆ ಶುಭ ಹಾರೈಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ನಗರದ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು.</p>.<p>ಒಂದನೇ ತರಗತಿಯ ವಿದ್ಯಾರ್ಥಿ ಸರ್. ಸಿ.ವಿ. ರಾಮನ್ ಅವರಂತೆ ವೇಷಭೂಷಣ ಧರಿಸಿ ಅವರ ಜೀವನ, ಸಾಧನೆಗಳ ಕುರಿತು ಮಕ್ಕಳಿಗೆ ತಿಳಿಯಪಡಿಸಿದನು.</p>.<p>‘ಎಲ್ಲ ಪ್ರಯೋಗಗಳು ಕಲಿಕೆಯ ಅನುಭವಗಳನ್ನು ನೀಡುತ್ತವೆ. ಅದರಿಂದ ಆದ ತಪ್ಪುಗಳನ್ನು ತಿದ್ದಿಕೊಂಡು ಪುನಃ ಪ್ರಯತ್ನಿಸಿದಾಗ ಅಂತಿಮ ಪರಿಹಾರ ಸಿಗುತ್ತದೆ. ವಿಜ್ಞಾನವೆಂದರೆ ಬೇರೇನೂ ಅಲ್ಲ, ಅದು ನಮ್ಮ ದೈನಂದಿನ ಬಳಕೆಯ ವಸ್ತುವಿನಲ್ಲಿದೆ’ ಎಂದು ತಿಳಿಸಿದನು.</p>.<p>ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ವಿಜ್ಞಾನದ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸಿದರು. ಅಲ್ಲದೇ ದೈನಂದಿನ ದಿನಗಳಲ್ಲಿ ವಿಜ್ಞಾನವು ಹೇಗೆ ನಮ್ಮಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.</p>.<p>ಉಪ ಪ್ರಾಂಶುಪಾಲೆ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಶೋಭಾ ಮಾಲಿಪಾಟೀಲ ಅವರು ಥಾಮಸ್ ಅಲ್ವಾ ಎಡಿಸನ್ ಅವರ ಜೀವನ ಯಶೋಗಾಥೆಯ ಬಗ್ಗೆ ವಿವರಿಸಿದರು.</p>.<p>ಪ್ರಾಂಶುಪಾಲೆ ವಿಜಯಲಕ್ಷ್ಮೀ ಪುರಾಣಿಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್. ಸಿ.ವಿ.ರಾಮನ್ ಅವರ ಸಾಧನೆ, ಬೆಳಕಿನ ವಕ್ರೀಭವನದ ಬಗ್ಗೆ ಅವರ ಸಿದ್ದಾಂತವನ್ನು ಕುರಿತು ಮಕ್ಕಳಿಗೆ ತಿಳಿಸಿದರು.</p>.<p>ಪ್ರತಿಯೊಂದು ಮಗುವು ದೇಶದ ಒಬ್ಬೊಬ್ಬ ವಿಜ್ಞಾನಿ ಎಂದು ಹೇಳಿ ಮಕ್ಕಳಲ್ಲಿ ಉತ್ಸಾಹ ತುಂಬಿದರು.</p>.<p>ಸಂಸ್ಥೆಯ ಚೇರ್ಮನ್ ಅಶೋಕ ಜೈನ್, ಅಧ್ಯಕ್ಷ ವಿನೋದ ಗಾದಿಯಾ, ಕಾರ್ಯದರ್ಶಿ ಸಚಿನ್ ಜೈನ್, ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ್ ಜೈನ್ ಹಾಗೂ ಸಮಿತಿಯ ಸರ್ವ ಸದಸ್ಯರು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದವು ಎಲ್ಲ ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಿಗಳಿಗೆ ಶುಭ ಹಾರೈಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>