<p><strong>ಚನ್ನರಾಯಪಟ್ಟಣ</strong>: ಹಲವು ವಿಶೇಷತೆಗಳನ್ನು ಹೊಂದಿರುವ ಪಟ್ಟಣದ ಗ್ರಾಮ ದೇವತೆ ವಳಗೇರಮ್ಮ ದೇವಸ್ಥಾನಕ್ಕೆ ಇದೀಗ ಹೊಸ ರಥ ಸಮರ್ಪಣೆ ಆಗಿದೆ. ಇದರಿಂದಾಗಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಹೊಸ ಮೆರುಗು ಬಂದಂತಾಗಿದೆ.</p>.<p>15 ನೇ ಶತಮಾನದಲ್ಲಿ ಪಾಳೇಗಾರರ ಆಡಳಿತಕ್ಕೆ ಒಳಪಟ್ಟ ಬಳಿಕ ಚನ್ನರಾಯಪಟ್ಟಣ ಎಂಬ ಹೆಸರು ಬಂತು. ಇದಕ್ಕೂ ಮುನ್ನ ಕೊಳತ್ತೂರು, ನಂತರ ಅಮೃತನಾಥಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.</p>.<p>ಅಮಾನಿಕೆರೆಯ ಮುಂಭಾಗದಲ್ಲಿ ಮುಜುರಾಯಿ ಇಲಾಖೆಗೆ ಸೇರಿದ ಗ್ರಾಮದೇವತೆ ವಳಗೇರಮ್ಮ ದೇವಸ್ಥಾನ ಇದೆ. ಪ್ರತಿವರ್ಷ ನರಕ ಚತುರ್ದಶಿಯಂದು ಮೂರು ದಿನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.</p>.<p>ಈ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಚಿಕ್ಕಮ್ಮ ದೇವಿ ದೇಗುಲ ಇದೆ. ಮೊದಲನೇ ದಿನ ತೇರಿನಲ್ಲಿ ವಳಗೇರಮ್ಮ ದೇವತೆಯನ್ನು ಪ್ರತಿಷ್ಠಾಪಿಸಿ, ಪಟ್ಟಣದಲ್ಲಿ ರಥೋತ್ಸವ ನಡೆಸಲಾಗುತ್ತದೆ. ಸುತ್ತಲಿನ ಗ್ರಾಮಗಳಾದ ಗೂರಮಾರನಹಳ್ಳಿ, ಗುಂಡಶೆಟ್ಟಿಹಳ್ಳಿ, ಗೂರನಹಳ್ಳಿ ಬಡಾವಣೆ, ಬೆಲಸಿಂದ, ಗಾಣಿಗರಬೀದಿ, ತಗ್ಯಮ್ಮ ಬಡಾವಣೆ, ಡಿ. ಕಾಳೇನಹಳ್ಳಿ, ಕೆರೆಚಿಕ್ಕೇನಹಳ್ಳಿಯ ಗ್ರಾಮಸ್ಥರು ಬೆಳೆದ ದವಸ, ಧಾನ್ಯಗಳಿಂದ ತುಂಬಿದ ಎತ್ತಿನಗಾಡಿ ಮತ್ತು ರಾಸುಗಳನ್ನು ಸಿಂಗರಿಸಿ, ಹಸಿರು ಬಂಡಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರುವುದು ವಿಶೇಷ. ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ.</p>.<p>ಹರಕೆ ಹೊತ್ತ ಸುಮಂಗಲಿಯರು ಬಾಯಿಬೀಗ ಧರಿಸಿ ಪೂಜೆ ಸಲ್ಲಿಸುತ್ತಾರೆ. ರಥದಿಂದ ದೇವರನ್ನು ಕೆಳಗಿಳಿಸಿ ಉಯ್ಯಾಲೋತ್ಸವ, ಸಿಡಿ ಉತ್ಸವ ಮತ್ತು ಕೆಂಡೋತ್ಸವ ನಡೆಸಲಾಗುತ್ತದೆ. ಮಾರನೇ ದಿನ ಚಂದ್ರಮಂಡಲೋತ್ಸವದಲ್ಲಿ ದೇವಿಯನ್ನು ತೇರಿನಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಮೂರನೇ ದಿನ ದೀಪಾವಳಿಯಂದು ದೇವರಿಗೆ ಪೂಜೆ ಸಲ್ಲಿಸಿ ಅದೇ ದಿನರಾತ್ರಿ ವಾಹನದಲ್ಲಿ ಉತ್ಸವ ನಡೆಸಲಾಗುತ್ತದೆ.</p>.<p>ದೇಗುಲದ ಆವರಣದಲ್ಲಿ ಪುರಸಭೆ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಪುಟ್ಟಬೋರಮ್ಮ, ಸಿ.ಕೆ. ನಂಜಪ್ಪ ಕುಟುಂಬಸ್ಥರು ದೇವಸ್ಥಾನಕ್ಕೆ ಗೋಪುರ ನಿರ್ಮಿಸಿಕೊಟ್ಟಿದ್ದಾರೆ. ಮತ್ತೊಬ್ಬ ದಾನಿ ಪೂರ್ಣಿಮಾ ಕಾಂಪೌಂಡ್ ನಿರ್ಮಿಸಿದ್ದಾರೆ. ದೇವಸ್ಥಾನಕ್ಕೆ ಪುರಸಭೆಯ ಮಾಜಿ ಸದಸ್ಯ ಸಿ.ಎನ್. ಮೂರ್ತಿ ಕುಟುಂಬದವರು, ಶೀಟ್ಗಳಿಂದ ನೆರಳಿನ ಸೌಕರ್ಯ ಕಲ್ಪಿಸಿದ್ದಾರೆ.</p>.<p>ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಅವರು ವಳಗೇರಮ್ಮ ದೇವಿಯ ರಥದ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂದು ದೇಗುಲದ ಗುಡಿಗೌಡ ಬಾಬು ತಿಳಿಸಿದರು.</p>.<p>18 ರಂದು ನೂತನ ರಥದ ಲೋಕಾರ್ಪಣೆ ದೇವಿಗೆ ರಥ ಸಮರ್ಪಣೆ ಕಾರ್ಯ ಜುಲೈ 14 ರಂದು ನಡೆಯಲಿದೆ ರಥ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಸುಬ್ಬಣ್ಣ ಹೇಳಿದರು. ಕ್ರೋಧಿನಾಮ ಸಂವತ್ಸರದ ಆಷಾಢಮಾಸ ಶುಕ್ಲಪಕ್ಷ ಅಷ್ಟಮಿಯಂದು ಭಾನುವಾರ ಬೆಳಿಗ್ಗೆ ಪುಣ್ಯಾಹನಾಂದಿ ಕಳಸ ಸ್ಥಾಪನೆ ಗಣಪತಿ ನವಗ್ರಹ ಮೃತ್ಯುಂಜಯ ವಾಸ್ತು ಪೂಜೆ ನವಚಂಡಿಕಾ ಹೋಮ ಪೂರ್ಣಾಹುತಿ ನೆರವೇರಿಸಿದ ಬಳಿಕ ಅಭಿಜಿನ್ ಮುಹೂರ್ತದಲ್ಲಿ ದೇವಿಗೆ ನೂತನ ರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.</p>.<p> ₹15 ಲಕ್ಷ ವೆಚ್ಚದಲ್ಲಿ ರಥ ನಿರ್ಮಾಣ ಇದುವರೆಗೆ ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಚಂದ್ರಮೌಳೇಶ್ವರ ದೇಗುಲದ ರಥವನ್ನು ವಳಗೇರಮ್ಮ ಜಾತ್ರಾ ಮಹೋತ್ಸವದಲ್ಲಿ ಬಳಸಲಾಗುತ್ತಿತ್ತು. ವಳಗೇರಮ್ಮ ದೇವಿಗೆ ಸ್ವಂತ ತೇರು ಹೊಂದಬೇಕು ಎಂಬ ಭಕ್ತಗಣದ ಆಶಯ ಈಗ ಈಡೇರಿದೆ. ಇದಕ್ಕಾಗಿ ರಥ ನಿರ್ಮಾಣ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಭಕ್ತಾದಿಗಳ ನೆರವಿನಿಂದ ರಥ ನಿರ್ಮಾಣದ ಕಾರ್ಯ ಸಾಕಾರಗೊಂಡಿದೆ. ರಥ ನಿರ್ಮಾಣಕ್ಕೆ ಒಂದು ವರ್ಷ ಸಮಯ ತೆಗೆದುಕೊಂಡಿತು. 17 ಅಡಿ ಎತ್ತರದ ರಥ ನಿರ್ಮಾಣಕ್ಕೆ ₹15 ಲಕ್ಷ ವೆಚ್ಚವಾಗಿದೆ. ನಿರ್ಮಾಣ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ₹ 1 ಲಕ್ಷ ಭರಿಸಿದ್ದಾರೆ. ಟಿ. ನರಸೀಪುರ ತಾಲ್ಲೂಕು ವ್ಯಾಸರಾಯನಪುರದ ಶಿಲ್ಪಿ ಸ್ವಾಮಿಆಚಾರ್ ನೇತೃತ್ವದಲ್ಲಿ ಕಲಾವಿದರು ರಥ ನಿರ್ಮಿಸಿದ್ದಾರೆ. ರಥ ನಿರ್ಮಾಣಕ್ಕೆ ಹೊನ್ನೆ ಬಾಗೆ ಗೊಬ್ಬಳಿ ಬೇವಿನ ಮರವನ್ನು ಬಳಸಲಾಗಿದೆ. ರಥದಲ್ಲಿ ಗಣಪತಿಮೂರ್ತಿ ಮತ್ತು ವಳಗೇರಮ್ಮ ದೇವಿಯ ಚಿತ್ರ ಉತ್ತಮವಾಗಿ ಮೂಡಿಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ</strong>: ಹಲವು ವಿಶೇಷತೆಗಳನ್ನು ಹೊಂದಿರುವ ಪಟ್ಟಣದ ಗ್ರಾಮ ದೇವತೆ ವಳಗೇರಮ್ಮ ದೇವಸ್ಥಾನಕ್ಕೆ ಇದೀಗ ಹೊಸ ರಥ ಸಮರ್ಪಣೆ ಆಗಿದೆ. ಇದರಿಂದಾಗಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಹೊಸ ಮೆರುಗು ಬಂದಂತಾಗಿದೆ.</p>.<p>15 ನೇ ಶತಮಾನದಲ್ಲಿ ಪಾಳೇಗಾರರ ಆಡಳಿತಕ್ಕೆ ಒಳಪಟ್ಟ ಬಳಿಕ ಚನ್ನರಾಯಪಟ್ಟಣ ಎಂಬ ಹೆಸರು ಬಂತು. ಇದಕ್ಕೂ ಮುನ್ನ ಕೊಳತ್ತೂರು, ನಂತರ ಅಮೃತನಾಥಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.</p>.<p>ಅಮಾನಿಕೆರೆಯ ಮುಂಭಾಗದಲ್ಲಿ ಮುಜುರಾಯಿ ಇಲಾಖೆಗೆ ಸೇರಿದ ಗ್ರಾಮದೇವತೆ ವಳಗೇರಮ್ಮ ದೇವಸ್ಥಾನ ಇದೆ. ಪ್ರತಿವರ್ಷ ನರಕ ಚತುರ್ದಶಿಯಂದು ಮೂರು ದಿನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.</p>.<p>ಈ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಚಿಕ್ಕಮ್ಮ ದೇವಿ ದೇಗುಲ ಇದೆ. ಮೊದಲನೇ ದಿನ ತೇರಿನಲ್ಲಿ ವಳಗೇರಮ್ಮ ದೇವತೆಯನ್ನು ಪ್ರತಿಷ್ಠಾಪಿಸಿ, ಪಟ್ಟಣದಲ್ಲಿ ರಥೋತ್ಸವ ನಡೆಸಲಾಗುತ್ತದೆ. ಸುತ್ತಲಿನ ಗ್ರಾಮಗಳಾದ ಗೂರಮಾರನಹಳ್ಳಿ, ಗುಂಡಶೆಟ್ಟಿಹಳ್ಳಿ, ಗೂರನಹಳ್ಳಿ ಬಡಾವಣೆ, ಬೆಲಸಿಂದ, ಗಾಣಿಗರಬೀದಿ, ತಗ್ಯಮ್ಮ ಬಡಾವಣೆ, ಡಿ. ಕಾಳೇನಹಳ್ಳಿ, ಕೆರೆಚಿಕ್ಕೇನಹಳ್ಳಿಯ ಗ್ರಾಮಸ್ಥರು ಬೆಳೆದ ದವಸ, ಧಾನ್ಯಗಳಿಂದ ತುಂಬಿದ ಎತ್ತಿನಗಾಡಿ ಮತ್ತು ರಾಸುಗಳನ್ನು ಸಿಂಗರಿಸಿ, ಹಸಿರು ಬಂಡಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರುವುದು ವಿಶೇಷ. ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ.</p>.<p>ಹರಕೆ ಹೊತ್ತ ಸುಮಂಗಲಿಯರು ಬಾಯಿಬೀಗ ಧರಿಸಿ ಪೂಜೆ ಸಲ್ಲಿಸುತ್ತಾರೆ. ರಥದಿಂದ ದೇವರನ್ನು ಕೆಳಗಿಳಿಸಿ ಉಯ್ಯಾಲೋತ್ಸವ, ಸಿಡಿ ಉತ್ಸವ ಮತ್ತು ಕೆಂಡೋತ್ಸವ ನಡೆಸಲಾಗುತ್ತದೆ. ಮಾರನೇ ದಿನ ಚಂದ್ರಮಂಡಲೋತ್ಸವದಲ್ಲಿ ದೇವಿಯನ್ನು ತೇರಿನಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಮೂರನೇ ದಿನ ದೀಪಾವಳಿಯಂದು ದೇವರಿಗೆ ಪೂಜೆ ಸಲ್ಲಿಸಿ ಅದೇ ದಿನರಾತ್ರಿ ವಾಹನದಲ್ಲಿ ಉತ್ಸವ ನಡೆಸಲಾಗುತ್ತದೆ.</p>.<p>ದೇಗುಲದ ಆವರಣದಲ್ಲಿ ಪುರಸಭೆ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಪುಟ್ಟಬೋರಮ್ಮ, ಸಿ.ಕೆ. ನಂಜಪ್ಪ ಕುಟುಂಬಸ್ಥರು ದೇವಸ್ಥಾನಕ್ಕೆ ಗೋಪುರ ನಿರ್ಮಿಸಿಕೊಟ್ಟಿದ್ದಾರೆ. ಮತ್ತೊಬ್ಬ ದಾನಿ ಪೂರ್ಣಿಮಾ ಕಾಂಪೌಂಡ್ ನಿರ್ಮಿಸಿದ್ದಾರೆ. ದೇವಸ್ಥಾನಕ್ಕೆ ಪುರಸಭೆಯ ಮಾಜಿ ಸದಸ್ಯ ಸಿ.ಎನ್. ಮೂರ್ತಿ ಕುಟುಂಬದವರು, ಶೀಟ್ಗಳಿಂದ ನೆರಳಿನ ಸೌಕರ್ಯ ಕಲ್ಪಿಸಿದ್ದಾರೆ.</p>.<p>ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಅವರು ವಳಗೇರಮ್ಮ ದೇವಿಯ ರಥದ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂದು ದೇಗುಲದ ಗುಡಿಗೌಡ ಬಾಬು ತಿಳಿಸಿದರು.</p>.<p>18 ರಂದು ನೂತನ ರಥದ ಲೋಕಾರ್ಪಣೆ ದೇವಿಗೆ ರಥ ಸಮರ್ಪಣೆ ಕಾರ್ಯ ಜುಲೈ 14 ರಂದು ನಡೆಯಲಿದೆ ರಥ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಸುಬ್ಬಣ್ಣ ಹೇಳಿದರು. ಕ್ರೋಧಿನಾಮ ಸಂವತ್ಸರದ ಆಷಾಢಮಾಸ ಶುಕ್ಲಪಕ್ಷ ಅಷ್ಟಮಿಯಂದು ಭಾನುವಾರ ಬೆಳಿಗ್ಗೆ ಪುಣ್ಯಾಹನಾಂದಿ ಕಳಸ ಸ್ಥಾಪನೆ ಗಣಪತಿ ನವಗ್ರಹ ಮೃತ್ಯುಂಜಯ ವಾಸ್ತು ಪೂಜೆ ನವಚಂಡಿಕಾ ಹೋಮ ಪೂರ್ಣಾಹುತಿ ನೆರವೇರಿಸಿದ ಬಳಿಕ ಅಭಿಜಿನ್ ಮುಹೂರ್ತದಲ್ಲಿ ದೇವಿಗೆ ನೂತನ ರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.</p>.<p> ₹15 ಲಕ್ಷ ವೆಚ್ಚದಲ್ಲಿ ರಥ ನಿರ್ಮಾಣ ಇದುವರೆಗೆ ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಚಂದ್ರಮೌಳೇಶ್ವರ ದೇಗುಲದ ರಥವನ್ನು ವಳಗೇರಮ್ಮ ಜಾತ್ರಾ ಮಹೋತ್ಸವದಲ್ಲಿ ಬಳಸಲಾಗುತ್ತಿತ್ತು. ವಳಗೇರಮ್ಮ ದೇವಿಗೆ ಸ್ವಂತ ತೇರು ಹೊಂದಬೇಕು ಎಂಬ ಭಕ್ತಗಣದ ಆಶಯ ಈಗ ಈಡೇರಿದೆ. ಇದಕ್ಕಾಗಿ ರಥ ನಿರ್ಮಾಣ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಭಕ್ತಾದಿಗಳ ನೆರವಿನಿಂದ ರಥ ನಿರ್ಮಾಣದ ಕಾರ್ಯ ಸಾಕಾರಗೊಂಡಿದೆ. ರಥ ನಿರ್ಮಾಣಕ್ಕೆ ಒಂದು ವರ್ಷ ಸಮಯ ತೆಗೆದುಕೊಂಡಿತು. 17 ಅಡಿ ಎತ್ತರದ ರಥ ನಿರ್ಮಾಣಕ್ಕೆ ₹15 ಲಕ್ಷ ವೆಚ್ಚವಾಗಿದೆ. ನಿರ್ಮಾಣ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ₹ 1 ಲಕ್ಷ ಭರಿಸಿದ್ದಾರೆ. ಟಿ. ನರಸೀಪುರ ತಾಲ್ಲೂಕು ವ್ಯಾಸರಾಯನಪುರದ ಶಿಲ್ಪಿ ಸ್ವಾಮಿಆಚಾರ್ ನೇತೃತ್ವದಲ್ಲಿ ಕಲಾವಿದರು ರಥ ನಿರ್ಮಿಸಿದ್ದಾರೆ. ರಥ ನಿರ್ಮಾಣಕ್ಕೆ ಹೊನ್ನೆ ಬಾಗೆ ಗೊಬ್ಬಳಿ ಬೇವಿನ ಮರವನ್ನು ಬಳಸಲಾಗಿದೆ. ರಥದಲ್ಲಿ ಗಣಪತಿಮೂರ್ತಿ ಮತ್ತು ವಳಗೇರಮ್ಮ ದೇವಿಯ ಚಿತ್ರ ಉತ್ತಮವಾಗಿ ಮೂಡಿಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>