<p><strong>ಅರಕಲಗೂಡು:</strong> ಪಟ್ಟಣದಲ್ಲಿ ಪ್ರತಿ ವರ್ಷ ಜುಲೈನಲ್ಲಿ ನಡೆಯುವ ಕಾದಂಬರಿ ಸಾರ್ವಭೌಮ ಅನಕೃ (ಅರಕಲಗೂಡು ನರಸಿಂಗರಾಯ ಕೃಷ್ಣರಾಯ) ನೆನಪು ಕಾರ್ಯಕ್ರಮಕ್ಕೆ ಈ ಬಾರಿ ದಶಮಾನೋತ್ಸವದ ಸಂಭ್ರಮ.</p>.<p>ತಮ್ಮ ಕಾದಂಬರಿಗಳ ಮೂಲಕ ಜನರಲ್ಲಿ ಓದುವ ಹವ್ಯಾಸ ಮೂಡಿಸಿದ್ದಲ್ಲದೇ, ಕನ್ನಡ ಭಾಷೆ ಕನ್ನಡ ನಾಡಿನಲ್ಲೇ ಅವಗಣನೆಗೆ ಒಳಗಾದ ಸಮಯದಲ್ಲಿ ಕನ್ನಡದ ಉಳಿವಿಗಾಗಿ ಹೋರಾಟಕ್ಕಿಳಿದ ಅನಕೃ, ನಾಡು, ನುಡಿಗಾಗಿ ಸಲ್ಲಿಸಿದ ಸೇವೆ ಅನನ್ಯ. ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅವರು ಅರಕಲಗೂಡಿನ ಸಾಹಿತಿ ಅನಕೃ ಅವರ ನೆನಪನ್ನು ಸದಾ ಹಸಿರಾಗಿರುವಂತೆ ಪ್ರತಿ ವರ್ಷ ಇವರ ಹೆಸರಿನಲ್ಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.</p>.<p>ಸಾಹಿತಿಯೊಬ್ಬರನ್ನು ಗೌರವಿಸಿ, ಅನಕೃ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ಚಿಂತನೆಯಿಂದ ತಮ್ಮ ಅಭಿಮಾನಿಗಳ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕಗಳ ಸಹಯೋಗದಲ್ಲಿ 2014 ರಲ್ಲಿ ಆರಂಭಿಸಿದ ‘ಅನಕೃ ನೆನಪು’ ಕಾರ್ಯಕ್ರಮ ಸಾಹಿತ್ಯಿಕವಾಗಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಮೆರವಣಿಗೆ ನಡೆಸಿ, ಸಮಾರಂಭದಲ್ಲಿ ನಗದು, ಫಲಕ ನೀಡಿ ಗೌರವಿಸಲಾಗುತ್ತಿದೆ.</p>.<p>9 ವರ್ಷಗಳಲ್ಲಿ ಸಾಹಿತ್ಯ ದಿಗ್ಗಜರಾದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿ, ಡಾ. ದೊಡ್ಡರಂಗೇಗೌಡ, ಮಾಸ್ಟರ್ ಹಿರಣ್ಣಯ್ಯ, ಪ್ರೊ.ಜಿ.ಅಶ್ವಥ್ ನಾರಾಯಣ್, ಬಿ.ಎಸ್. ಕೇಶವರಾವ್, ಬಿ.ಯು. ಗೀತಾ, ಎಸ್.ಎಸ್. ಮಧುಕೇಶ್ವರ್, ಪ್ರೊ.ಎಂ. ಕೃಷ್ಣೇಗೌಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p><strong>ಇಂದು ಕಾರ್ಯಕ್ರಮ:</strong> ಡಾ. ಅನಕೃ ಒಂದು ನೆನಪು ಹಾಗೂ ಅನಕೃ ಪ್ರಶಸ್ತಿ ಪ್ರದಾನದ ದಶಮಾನೋತ್ಸವ ಸಮಾರಂಭವನ್ನು ಜುಲೈ 21ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದೆ.</p>.<p>21ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಶಾ.ಮಂ. ಕೃಷ್ಣರಾಯರನ್ನು ಕೋಟೆ ಗಣಪತಿ ಕೊತ್ತಲು ಅವರಣದಿಂದ ಸಮಾರಂಭ ನಡೆಯುವ ಶಿಕ್ಷಕರ ಭವನದವರೆಗೆ ಮೆರವಣಿಗೆ ಮೂಲಕ ಕರೆತರಲಾಗುವುದು.</p>.<p>ಶಾಸಕ ಎ.ಮಂಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ವಿದ್ವಾನ್ ಆರ್.ಕೆ. ಪದ್ಮನಾಭ, ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ, ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ, ಅನಕೃ ಪುತ್ರ ಅ.ಕೃ.ಗೌತಮ್, ಹಾಸನ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ನವೀನ್ ಉಲಿವಾಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಟಿ. ಲೋಕೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಿನ್ನಪ್ಪ ಭಾಗವಹಿಸಲಿದ್ದಾರೆ ಎಂದು ಆರ್.ಕೆ. ಪದ್ಮನಾಭ ಅಭಿಮಾನಿ ಬಳಗದ ಸಂಚಾಲಕ ಪ್ರವೀಣ್ ತಿಳಿಸಿದರು.</p>.<h2> ಶಾ.ಮಂ. ಕೃಷ್ಣರಾಯರಿಗೆ ಈ ಬಾರಿ ಪ್ರಶಸ್ತಿ </h2>.<p>ಈ ಬಾರಿಯ ಅನಕೃ ಪ್ರಶಸ್ತಿಗೆ ಹೆಸರಾಂತ ಸಾಹಿತಿ ಅನುವಾದಕ ಹಾಗೂ ಗೋವಾ ಕನ್ನಡಿಗರ ಪರ ಹೋರಾಟ ನಡೆಸುತ್ತಿರುವ ಶಾ.ಮಂ. ಕೃಷ್ಣರಾಯ ಆಯ್ಕೆಯಾಗಿದ್ದಾರೆ. ಬೆಳಗಾವಿ ನಗರದ ಟಿಳಕವಾಡಿ ಗ್ರಾಮದಲ್ಲಿ ಗಂಗಾದೇವಿ– ಮಂಜುನಾಥ ದಂಪತಿಯ ಪುತ್ರರಾಗಿ 1941 ರಲ್ಲಿ ಜನಿಸಿದ ಕೃಷ್ಣರಾಯರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. </p><p>ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಬಿಇಡಿ ಪದವಿ ಪಡೆದರು. 1959 ರಿಂದ 2000 ಇಸ್ವಿಯವರೆಗೆ ಗೋವಾದಲ್ಲಿ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 110 ವಿವಿಧ ಕೃತಿಗಳನ್ನು ರಚಿಸಿರುವ ಇವರು 150 ಕೆಚ್ಚಿನ ಮಕ್ಕಳ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು:</strong> ಪಟ್ಟಣದಲ್ಲಿ ಪ್ರತಿ ವರ್ಷ ಜುಲೈನಲ್ಲಿ ನಡೆಯುವ ಕಾದಂಬರಿ ಸಾರ್ವಭೌಮ ಅನಕೃ (ಅರಕಲಗೂಡು ನರಸಿಂಗರಾಯ ಕೃಷ್ಣರಾಯ) ನೆನಪು ಕಾರ್ಯಕ್ರಮಕ್ಕೆ ಈ ಬಾರಿ ದಶಮಾನೋತ್ಸವದ ಸಂಭ್ರಮ.</p>.<p>ತಮ್ಮ ಕಾದಂಬರಿಗಳ ಮೂಲಕ ಜನರಲ್ಲಿ ಓದುವ ಹವ್ಯಾಸ ಮೂಡಿಸಿದ್ದಲ್ಲದೇ, ಕನ್ನಡ ಭಾಷೆ ಕನ್ನಡ ನಾಡಿನಲ್ಲೇ ಅವಗಣನೆಗೆ ಒಳಗಾದ ಸಮಯದಲ್ಲಿ ಕನ್ನಡದ ಉಳಿವಿಗಾಗಿ ಹೋರಾಟಕ್ಕಿಳಿದ ಅನಕೃ, ನಾಡು, ನುಡಿಗಾಗಿ ಸಲ್ಲಿಸಿದ ಸೇವೆ ಅನನ್ಯ. ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅವರು ಅರಕಲಗೂಡಿನ ಸಾಹಿತಿ ಅನಕೃ ಅವರ ನೆನಪನ್ನು ಸದಾ ಹಸಿರಾಗಿರುವಂತೆ ಪ್ರತಿ ವರ್ಷ ಇವರ ಹೆಸರಿನಲ್ಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.</p>.<p>ಸಾಹಿತಿಯೊಬ್ಬರನ್ನು ಗೌರವಿಸಿ, ಅನಕೃ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ಚಿಂತನೆಯಿಂದ ತಮ್ಮ ಅಭಿಮಾನಿಗಳ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕಗಳ ಸಹಯೋಗದಲ್ಲಿ 2014 ರಲ್ಲಿ ಆರಂಭಿಸಿದ ‘ಅನಕೃ ನೆನಪು’ ಕಾರ್ಯಕ್ರಮ ಸಾಹಿತ್ಯಿಕವಾಗಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಮೆರವಣಿಗೆ ನಡೆಸಿ, ಸಮಾರಂಭದಲ್ಲಿ ನಗದು, ಫಲಕ ನೀಡಿ ಗೌರವಿಸಲಾಗುತ್ತಿದೆ.</p>.<p>9 ವರ್ಷಗಳಲ್ಲಿ ಸಾಹಿತ್ಯ ದಿಗ್ಗಜರಾದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿ, ಡಾ. ದೊಡ್ಡರಂಗೇಗೌಡ, ಮಾಸ್ಟರ್ ಹಿರಣ್ಣಯ್ಯ, ಪ್ರೊ.ಜಿ.ಅಶ್ವಥ್ ನಾರಾಯಣ್, ಬಿ.ಎಸ್. ಕೇಶವರಾವ್, ಬಿ.ಯು. ಗೀತಾ, ಎಸ್.ಎಸ್. ಮಧುಕೇಶ್ವರ್, ಪ್ರೊ.ಎಂ. ಕೃಷ್ಣೇಗೌಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.</p>.<p><strong>ಇಂದು ಕಾರ್ಯಕ್ರಮ:</strong> ಡಾ. ಅನಕೃ ಒಂದು ನೆನಪು ಹಾಗೂ ಅನಕೃ ಪ್ರಶಸ್ತಿ ಪ್ರದಾನದ ದಶಮಾನೋತ್ಸವ ಸಮಾರಂಭವನ್ನು ಜುಲೈ 21ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದೆ.</p>.<p>21ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಶಾ.ಮಂ. ಕೃಷ್ಣರಾಯರನ್ನು ಕೋಟೆ ಗಣಪತಿ ಕೊತ್ತಲು ಅವರಣದಿಂದ ಸಮಾರಂಭ ನಡೆಯುವ ಶಿಕ್ಷಕರ ಭವನದವರೆಗೆ ಮೆರವಣಿಗೆ ಮೂಲಕ ಕರೆತರಲಾಗುವುದು.</p>.<p>ಶಾಸಕ ಎ.ಮಂಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ವಿದ್ವಾನ್ ಆರ್.ಕೆ. ಪದ್ಮನಾಭ, ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ, ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ, ಅನಕೃ ಪುತ್ರ ಅ.ಕೃ.ಗೌತಮ್, ಹಾಸನ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ನವೀನ್ ಉಲಿವಾಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಟಿ. ಲೋಕೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಿನ್ನಪ್ಪ ಭಾಗವಹಿಸಲಿದ್ದಾರೆ ಎಂದು ಆರ್.ಕೆ. ಪದ್ಮನಾಭ ಅಭಿಮಾನಿ ಬಳಗದ ಸಂಚಾಲಕ ಪ್ರವೀಣ್ ತಿಳಿಸಿದರು.</p>.<h2> ಶಾ.ಮಂ. ಕೃಷ್ಣರಾಯರಿಗೆ ಈ ಬಾರಿ ಪ್ರಶಸ್ತಿ </h2>.<p>ಈ ಬಾರಿಯ ಅನಕೃ ಪ್ರಶಸ್ತಿಗೆ ಹೆಸರಾಂತ ಸಾಹಿತಿ ಅನುವಾದಕ ಹಾಗೂ ಗೋವಾ ಕನ್ನಡಿಗರ ಪರ ಹೋರಾಟ ನಡೆಸುತ್ತಿರುವ ಶಾ.ಮಂ. ಕೃಷ್ಣರಾಯ ಆಯ್ಕೆಯಾಗಿದ್ದಾರೆ. ಬೆಳಗಾವಿ ನಗರದ ಟಿಳಕವಾಡಿ ಗ್ರಾಮದಲ್ಲಿ ಗಂಗಾದೇವಿ– ಮಂಜುನಾಥ ದಂಪತಿಯ ಪುತ್ರರಾಗಿ 1941 ರಲ್ಲಿ ಜನಿಸಿದ ಕೃಷ್ಣರಾಯರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. </p><p>ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಬಿಇಡಿ ಪದವಿ ಪಡೆದರು. 1959 ರಿಂದ 2000 ಇಸ್ವಿಯವರೆಗೆ ಗೋವಾದಲ್ಲಿ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 110 ವಿವಿಧ ಕೃತಿಗಳನ್ನು ರಚಿಸಿರುವ ಇವರು 150 ಕೆಚ್ಚಿನ ಮಕ್ಕಳ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>