<p><strong>ಶ್ರವಣಬೆಳಗೊಳ :</strong> ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ದಿನಗಳ ಕಾಲ ಜರುಗಿದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಮಕ್ಕಳು ಪಾಲ್ಗೊಳ್ಳುವಿಕೆಯೊಂದಿಗೆ ಕಥೆ, ಕವನ, ನಾಟಕ, ನಾನೂ ರಿಪೋರ್ಟರ್ ಕಾರ್ನರ್ ಗಳಲ್ಲಿ ವಾಚನ ಮತ್ತು ಬರೆಯುವ ಚಟುವಟಿಕೆಯಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು.</p>.<p>ಸಮಾರೋಪ ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್ ಮಾತನಾಡಿ ಇದೊಂದು ಮಕ್ಕಳೇ ನಿರ್ವಹಿಸುವ ಚಟುವಟಿಕೆಯಾಧಾರಿತ ಶಿಬಿರವಾಗಿದ್ದು, 3 ದಿನಗಳ ಕಾಲ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಉತ್ತಮವಾಗಿ ಪ್ರದರ್ಶಿಸಿದ್ದಾರೆ. ಈ ಕಾರ್ಯಕ್ರಮ ಸಾಕಾರಗೊಳ್ಳಬೇಕಾದರೆ ವಿದ್ಯಾರ್ಥಿಗಳು ಇಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪಡೆದ ಜ್ಞಾನವನ್ನು ಅವಕಾಶ ಸಿಕ್ಕಾಗ ಉತ್ತಮವಾಗಿ ಬಳಸಿಕೊಂಡು ಮುಂದುವರೆಸಬೇಕು ಹಾಗು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.</p>.<p>ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಕಾಂತರಾಜು ಮಾತನಾಡಿ 3 ದಿನಗಳ ಕಾಲ ವಿದ್ಯಾರ್ಥಿಗಳು ರಚಿಸಿದ ಆಯ್ದ ಕಥೆ, ಕವನ,ನಾಟಕ, ರಿಪೋರ್ಟ್ ಗಳನ್ನು ಪುಸ್ತ ರೂಪದಲ್ಲಿ ದಾಖಲಿಸಿ ಗ್ರಂಥಾಲಯಕ್ಕೆ ಒದಗಿಸಲಾಗುವುದು ಹಾಗು ಈ ಶಿಬಿರದಲ್ಲಿ ಉತ್ತಮವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ಶಿಬಿರಕ್ಕೆ ಆಯ್ಕೆ ಮಾಡಿ ಕಳಿಸುವುದಾಗಿ ಹೇಳಿದರು.</p>.<p>ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ, ಕಾಂತರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ 6 ನೇ ತರಗತಿಯಿಂದ 9ನೇ ತರಗತಿಯ 100 ಮಕ್ಕಳು 25 ವಿದ್ಯಾರ್ಥಿಗಳಂತೆ 4 ತಂಡಗಳಲ್ಲಿ ರಚಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದ ಲಿಂಗರಾಜು ಎನ್.ಎಂ, ಮಲ್ಲಿಕಾರ್ಜುನಯ್ಯ, ಕೆ.ಎಂ, ಸತೀಶ್ ಎಸ್, ಸುಧಾಕರ್ ಆರ್, ಇಂದಿರಾ ಎ.ಸಿ, ಯೋಗೇಶ್ ಡಿ.ಎಸ್, ಸಂತೋಷ್, ಧರ್ಮಶ್ರೀ, ಮಲ್ಲಿಕಾ, ಆರೋಗ್ಯ ಮೇರಿ, ರೇವಮ್ಮ,ರವೀಂದ್ರ ಬಿ.ಎಸ್, ಅಶ್ವಿನಿ, ಮೋಹನ್, ಪರಮೇಶ್ವರಪ್ಪ,ಇವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಪ್ರತ್ಯೇಕವಾಗಿ ಕಥೆ ಕಟ್ಟೋಣ, ಕವನ ರಚಿಸೋಣ, ನಾಟಕ ಮಾಡೋಣ, ನಾನೂ ರಿಪೋರ್ಟರ್ ಕಾರ್ನರ್ ಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.</p>.<p>3 ದಿನಗಳ ಕಾಲ ವಿದ್ಯಾರ್ಥಿಗಳು ಬರೆದ ಕವನ,ಕಥೆ, ನಾಟಕ, ರಿಪೋರ್ಟ ಗಳನ್ನು ಪ್ರದರ್ಶಿಸಲಾಗಿತ್ತು ಹಾಗು ಕಾರ್ಯಕ್ರಮದಲ್ಲಿ ಪ್ರತಿ ತಂಡದಿಂದ ಒಬ್ಬೊಬ್ಬರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಆಗಮಿಸಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಹಾಗು ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು.</p>.<p>3 ದಿನಗಳ ಕಾಲ ಶಿಬಿರಾರ್ಥಿಗಳಿಗೆ ಶ್ರೀಜೈನ ಮಠದ ಆಡಳಿತ ಮಂಡಳಿಯಿಂದ ಊಟದ ವ್ಯವಸ್ಥೆ ಹಾಗು ಗ್ರಾಮ ಪಂಚಾಯಿತಿ ವತಿಯಿಂದ ಬಿಸ್ಕೆಟ್ ಕಾಫಿ ವ್ಯವಸ್ಥೆಯನ್ನು ಮಾಡಲಾಗಿತ್ತು.</p>.<p>ಕಾರ್ಯಕ್ರಮದಲ್ಲಿ ದೇವೇಂದ್ರಕುಮಾರ್ ರವಿಚಂದ್ರನ್, ಗ್ರಂಥಪಾಲಕ ದರ್ಶನ್, ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರುಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರವಣಬೆಳಗೊಳ :</strong> ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ದಿನಗಳ ಕಾಲ ಜರುಗಿದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಮಕ್ಕಳು ಪಾಲ್ಗೊಳ್ಳುವಿಕೆಯೊಂದಿಗೆ ಕಥೆ, ಕವನ, ನಾಟಕ, ನಾನೂ ರಿಪೋರ್ಟರ್ ಕಾರ್ನರ್ ಗಳಲ್ಲಿ ವಾಚನ ಮತ್ತು ಬರೆಯುವ ಚಟುವಟಿಕೆಯಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು.</p>.<p>ಸಮಾರೋಪ ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್ ಮಾತನಾಡಿ ಇದೊಂದು ಮಕ್ಕಳೇ ನಿರ್ವಹಿಸುವ ಚಟುವಟಿಕೆಯಾಧಾರಿತ ಶಿಬಿರವಾಗಿದ್ದು, 3 ದಿನಗಳ ಕಾಲ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಉತ್ತಮವಾಗಿ ಪ್ರದರ್ಶಿಸಿದ್ದಾರೆ. ಈ ಕಾರ್ಯಕ್ರಮ ಸಾಕಾರಗೊಳ್ಳಬೇಕಾದರೆ ವಿದ್ಯಾರ್ಥಿಗಳು ಇಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪಡೆದ ಜ್ಞಾನವನ್ನು ಅವಕಾಶ ಸಿಕ್ಕಾಗ ಉತ್ತಮವಾಗಿ ಬಳಸಿಕೊಂಡು ಮುಂದುವರೆಸಬೇಕು ಹಾಗು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.</p>.<p>ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಕಾಂತರಾಜು ಮಾತನಾಡಿ 3 ದಿನಗಳ ಕಾಲ ವಿದ್ಯಾರ್ಥಿಗಳು ರಚಿಸಿದ ಆಯ್ದ ಕಥೆ, ಕವನ,ನಾಟಕ, ರಿಪೋರ್ಟ್ ಗಳನ್ನು ಪುಸ್ತ ರೂಪದಲ್ಲಿ ದಾಖಲಿಸಿ ಗ್ರಂಥಾಲಯಕ್ಕೆ ಒದಗಿಸಲಾಗುವುದು ಹಾಗು ಈ ಶಿಬಿರದಲ್ಲಿ ಉತ್ತಮವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ಶಿಬಿರಕ್ಕೆ ಆಯ್ಕೆ ಮಾಡಿ ಕಳಿಸುವುದಾಗಿ ಹೇಳಿದರು.</p>.<p>ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ, ಕಾಂತರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ 6 ನೇ ತರಗತಿಯಿಂದ 9ನೇ ತರಗತಿಯ 100 ಮಕ್ಕಳು 25 ವಿದ್ಯಾರ್ಥಿಗಳಂತೆ 4 ತಂಡಗಳಲ್ಲಿ ರಚಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದ ಲಿಂಗರಾಜು ಎನ್.ಎಂ, ಮಲ್ಲಿಕಾರ್ಜುನಯ್ಯ, ಕೆ.ಎಂ, ಸತೀಶ್ ಎಸ್, ಸುಧಾಕರ್ ಆರ್, ಇಂದಿರಾ ಎ.ಸಿ, ಯೋಗೇಶ್ ಡಿ.ಎಸ್, ಸಂತೋಷ್, ಧರ್ಮಶ್ರೀ, ಮಲ್ಲಿಕಾ, ಆರೋಗ್ಯ ಮೇರಿ, ರೇವಮ್ಮ,ರವೀಂದ್ರ ಬಿ.ಎಸ್, ಅಶ್ವಿನಿ, ಮೋಹನ್, ಪರಮೇಶ್ವರಪ್ಪ,ಇವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಪ್ರತ್ಯೇಕವಾಗಿ ಕಥೆ ಕಟ್ಟೋಣ, ಕವನ ರಚಿಸೋಣ, ನಾಟಕ ಮಾಡೋಣ, ನಾನೂ ರಿಪೋರ್ಟರ್ ಕಾರ್ನರ್ ಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.</p>.<p>3 ದಿನಗಳ ಕಾಲ ವಿದ್ಯಾರ್ಥಿಗಳು ಬರೆದ ಕವನ,ಕಥೆ, ನಾಟಕ, ರಿಪೋರ್ಟ ಗಳನ್ನು ಪ್ರದರ್ಶಿಸಲಾಗಿತ್ತು ಹಾಗು ಕಾರ್ಯಕ್ರಮದಲ್ಲಿ ಪ್ರತಿ ತಂಡದಿಂದ ಒಬ್ಬೊಬ್ಬರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಆಗಮಿಸಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಹಾಗು ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು.</p>.<p>3 ದಿನಗಳ ಕಾಲ ಶಿಬಿರಾರ್ಥಿಗಳಿಗೆ ಶ್ರೀಜೈನ ಮಠದ ಆಡಳಿತ ಮಂಡಳಿಯಿಂದ ಊಟದ ವ್ಯವಸ್ಥೆ ಹಾಗು ಗ್ರಾಮ ಪಂಚಾಯಿತಿ ವತಿಯಿಂದ ಬಿಸ್ಕೆಟ್ ಕಾಫಿ ವ್ಯವಸ್ಥೆಯನ್ನು ಮಾಡಲಾಗಿತ್ತು.</p>.<p>ಕಾರ್ಯಕ್ರಮದಲ್ಲಿ ದೇವೇಂದ್ರಕುಮಾರ್ ರವಿಚಂದ್ರನ್, ಗ್ರಂಥಪಾಲಕ ದರ್ಶನ್, ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರುಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>