<p><strong>ಹಿರೀಸಾವೆ</strong>: ಬೆರಳು ರೇಖೆಗಳು ಸವೆದ ರೈತರ ಬೆರಳಚ್ಚು ಬಾರದೆ ಮಂಗಳವಾರ ನಾಫೆಡ್ಗೆ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಲಾಗದೆ ಕೆಲವರು ಬೇಸರದಿಂದ ಹಿಂದಿರುಗಿದರು.</p>.<p>ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಸರತಿ ಸಾಲಿನಲ್ಲಿ ನಿಂತು ಹೆಸರು ನೋಂದಣಿ ಮಾಡಿಸಿದರು.</p>.<p>ಸೋಮವಾರ ನೂರಾರು ರೈತರು ಒಂದೇ ಸಲ ಗುಂಪಾಗಿ ನುಗ್ಗಿದ್ದರಿಂದ ನೋಂದಣಿಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಸಂಜೆ ಡಿವೈಎಸ್ಪಿ ರವಿಪ್ರಸಾದ್ ಮತ್ತು ರೈತ ಸಂಘದ ಮಂಜೇಗೌಡ ಅವರ ನೇತೃತ್ವದಲ್ಲಿ ದಿನಕ್ಕೆ 300 ರೈತರಿಗೆ ಟೋಕನ್ ನೀಡಲಾಗಿತ್ತು. ಅದರಂತೆ ಇಂದು ರೈತರು ನೋಂದಣಿ ಮಾಡಿಸಿದರು.</p>.<p>ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿಕೊಂಡು, ಯಾವುದೇ ಗೊಂದಲ ಆಗದಂತೆ ನೋಂದಣಿ ಪ್ರಕ್ರಿಯೆ ನಡೆಯಿತು. ಅಂಗವಿಕಲರಿಗೆ ನೇರವಾಗಿ ಕೌಂಟರ್ಗೆ ಬರಲು ಅವಕಾಶ ಮಾಡಿರುವುದಾಗಿ ಎಸ್ಐ ಸುಪ್ರಿತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬೆರಳಚ್ಚು ಬಾರದೆ ಇರುವ ರೈತರಿಗೆ ಐ ಸ್ಕ್ಯಾನ್ ಅಥವಾ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ರೈತ ಅಂತನಹಳ್ಳಿ ಅಣ್ಣಪ್ಪಸ್ವಾಮಿ ಆಗ್ರಹಿಸಿದರು.</p>.<p>ನೋಂದಣಿ ಮಾಡಿಸಲು ಬಂದಿದ್ದ ರೈತರಿಗೆ ಶಾಸಕ ಬಾಲಕೃಷ್ಣ ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ</strong>: ಬೆರಳು ರೇಖೆಗಳು ಸವೆದ ರೈತರ ಬೆರಳಚ್ಚು ಬಾರದೆ ಮಂಗಳವಾರ ನಾಫೆಡ್ಗೆ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಲಾಗದೆ ಕೆಲವರು ಬೇಸರದಿಂದ ಹಿಂದಿರುಗಿದರು.</p>.<p>ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಸರತಿ ಸಾಲಿನಲ್ಲಿ ನಿಂತು ಹೆಸರು ನೋಂದಣಿ ಮಾಡಿಸಿದರು.</p>.<p>ಸೋಮವಾರ ನೂರಾರು ರೈತರು ಒಂದೇ ಸಲ ಗುಂಪಾಗಿ ನುಗ್ಗಿದ್ದರಿಂದ ನೋಂದಣಿಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಸಂಜೆ ಡಿವೈಎಸ್ಪಿ ರವಿಪ್ರಸಾದ್ ಮತ್ತು ರೈತ ಸಂಘದ ಮಂಜೇಗೌಡ ಅವರ ನೇತೃತ್ವದಲ್ಲಿ ದಿನಕ್ಕೆ 300 ರೈತರಿಗೆ ಟೋಕನ್ ನೀಡಲಾಗಿತ್ತು. ಅದರಂತೆ ಇಂದು ರೈತರು ನೋಂದಣಿ ಮಾಡಿಸಿದರು.</p>.<p>ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿಕೊಂಡು, ಯಾವುದೇ ಗೊಂದಲ ಆಗದಂತೆ ನೋಂದಣಿ ಪ್ರಕ್ರಿಯೆ ನಡೆಯಿತು. ಅಂಗವಿಕಲರಿಗೆ ನೇರವಾಗಿ ಕೌಂಟರ್ಗೆ ಬರಲು ಅವಕಾಶ ಮಾಡಿರುವುದಾಗಿ ಎಸ್ಐ ಸುಪ್ರಿತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬೆರಳಚ್ಚು ಬಾರದೆ ಇರುವ ರೈತರಿಗೆ ಐ ಸ್ಕ್ಯಾನ್ ಅಥವಾ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ರೈತ ಅಂತನಹಳ್ಳಿ ಅಣ್ಣಪ್ಪಸ್ವಾಮಿ ಆಗ್ರಹಿಸಿದರು.</p>.<p>ನೋಂದಣಿ ಮಾಡಿಸಲು ಬಂದಿದ್ದ ರೈತರಿಗೆ ಶಾಸಕ ಬಾಲಕೃಷ್ಣ ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>