<p><strong>ಸಕಲೇಶಪುರ:</strong> ಕಾಡಾನೆ ಚಲನ ವಲನ ಗಮನಿಸುತ್ತಿದ್ದ ಇಟಿಎಫ್ (ಕಾಡಾನೆ ಕಾರ್ಯಪಡೆ) ಸಿಬ್ಬಂದಿಯೊಬ್ಬರನ್ನು ಒಂಟಿ ಸಲಗ ಅಟ್ಟಿಸಿಕೊಂಡು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕು ಯಡೇಹಳ್ಳಿ ಭಾನುವಾರ ನಡೆದಿದೆ.</p>.<p>ಇಟಿಎಫ್ ಹಾಗೂ ಆರ್ಆರ್ಟಿಯ (ತುರ್ತು ಸ್ಪಂದನಾ ತಂಡ) ಪ್ರವೀಣ್ ಹಾಗೂ ಸುನಿಲ್ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡ ಸಿಬ್ಬಂದಿ.</p>.<p>ಗ್ರಾಮದ ಕಾಫಿ ತೋಟದಲ್ಲಿ ಹಲವು ದಿನಗಳಿಂದ ಅಡ್ಡಾಡುತ್ತಿದ್ದ ಕಾಡಾನೆಯ ಚಲನ ವಲನ ಗಮನಿಸಿ ಅದರ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.</p>.<p>‘ಸಿಬ್ಬಂದಿ ಪ್ರವೀಣ್ ಹಾಗೂ ಸುನಿಲ್ ದೂರದಲ್ಲಿಯೇ ಇದ್ದರೂ, ಆನೆ ಹಿಂತಿರುಗಿ ಅವರ ಬಳಿ ಓಡಿದೆ. ಕಾಫಿ ತೋಟದ ಮರೆಯಲ್ಲಿ ನಿಂತು ಇಬ್ಬರೂ ಜೀವ ಉಳಿಸಿಕೊಂಡಿದ್ದಾರೆ’ ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ವಸಂತ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ:</strong> ಕಾಡಾನೆ ಚಲನ ವಲನ ಗಮನಿಸುತ್ತಿದ್ದ ಇಟಿಎಫ್ (ಕಾಡಾನೆ ಕಾರ್ಯಪಡೆ) ಸಿಬ್ಬಂದಿಯೊಬ್ಬರನ್ನು ಒಂಟಿ ಸಲಗ ಅಟ್ಟಿಸಿಕೊಂಡು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕು ಯಡೇಹಳ್ಳಿ ಭಾನುವಾರ ನಡೆದಿದೆ.</p>.<p>ಇಟಿಎಫ್ ಹಾಗೂ ಆರ್ಆರ್ಟಿಯ (ತುರ್ತು ಸ್ಪಂದನಾ ತಂಡ) ಪ್ರವೀಣ್ ಹಾಗೂ ಸುನಿಲ್ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡ ಸಿಬ್ಬಂದಿ.</p>.<p>ಗ್ರಾಮದ ಕಾಫಿ ತೋಟದಲ್ಲಿ ಹಲವು ದಿನಗಳಿಂದ ಅಡ್ಡಾಡುತ್ತಿದ್ದ ಕಾಡಾನೆಯ ಚಲನ ವಲನ ಗಮನಿಸಿ ಅದರ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.</p>.<p>‘ಸಿಬ್ಬಂದಿ ಪ್ರವೀಣ್ ಹಾಗೂ ಸುನಿಲ್ ದೂರದಲ್ಲಿಯೇ ಇದ್ದರೂ, ಆನೆ ಹಿಂತಿರುಗಿ ಅವರ ಬಳಿ ಓಡಿದೆ. ಕಾಫಿ ತೋಟದ ಮರೆಯಲ್ಲಿ ನಿಂತು ಇಬ್ಬರೂ ಜೀವ ಉಳಿಸಿಕೊಂಡಿದ್ದಾರೆ’ ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ವಸಂತ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>