<p><strong>ಹೆತ್ತೂರು</strong>: ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಗಾಳಿ, ಮಳೆಗೆ ಹೆತ್ತೂರು, ಯಸಳೂರು ಹೋಬಳಿಯ ಜನರು ಹೈರಾಣರಾಗಿದ್ದಾರೆ. ಮನೆಗಳು ನಿರಂತರವಾಗಿ ಕುಸಿಯುತ್ತಿದ್ದು, ಬಿತ್ತಿದ್ದ ಬೆಳೆಗಳೆಲ್ಲ ನೀರು ಪಾಲಾಗಿವೆ.</p>.<p>ಹೆತ್ತೂರು ಸಮೀಪದ ಯಡಕೇರಿಯ ನಾಗರಾಜ್ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ಎಲ್ಲರೂ ಮನೆಯಲ್ಲಿ ಇದ್ದಾಗಲೇ ಮನೆ ಕುಸಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಿರ್ಕಳ್ಳಿಯ ತಮ್ಮೇಗೌಡರ ದನದ ಕೊಟ್ಟಿಗೆ ಬುಧವಾರ ತಡರಾತ್ರಿ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಸಿಕಂದರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>ವಳ್ಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ರಸ್ತೆ ಮಧ್ಯೆ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಹೆತ್ತೂರು-ಕುಂಬ್ರಹಳ್ಳಿ ಗ್ರಾಮ ಸಂಪರ್ಕಿಸುವ ಯಡಕೇರಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದಾಗಿದೆ. ಯಸಳೂರು ಪೊಲೀಸರು ಸೇತುವೆ ಸಮೀಪ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದಾರೆ.</p>.<p>ನಿರಂತರವಾಗಿ ಸುರಿಯುತ್ತಿರುವ ಮಳೆ- ಗಾಳಿಗೆ ಮಲೆನಾಡಿನ ಮನೆಗಳು ಕುಸಿಯುತ್ತಿದ್ದು, ಮನೆಯ ಚಾವಣಿ ಹಾರುತ್ತಿವೆ. ಭಯದಲ್ಲಿ ಬದುಕುವ ಪರಿಸ್ಥಿತಿ ಉಂಟಾಗಿದೆ. ಗುರುವಾರ ಹೆತ್ತೂರು ಸಂತೆ ದಿನವಾದರೂ, ಜನರು ಮನೆಯಿಂದ ಹೊರ ಬರದಂತಾಗಿತ್ತು. ಭತ್ತದ ಗದ್ದೆ ಮೇಲೆ ನೀರು ಹೊಳೆಯಂತೆ ಹರಿಯುತ್ತಿದ್ದು, ಸಸಿ ಮಡಿಗಳು, ನಾಟಿ ಮಾಡಿರುವ ಬೆಳೆ ಕರಗುವಂತಾಗಿದೆ.</p>.<p>‘ಅಧಿಕ ಮಳೆಯಿಂದಾಗಿ ಶೇ 50ಕ್ಕೂ ಹೆಚ್ಚು ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿ ಫಸಲು ನೆಲ ಕಚ್ಚುತ್ತಿದೆ. ಸರ್ಕಾರವು ಕಾಫಿ ಬೆಳೆಗಾರರ ಉಳಿವಿಗಾಗಿ ಅತಿವೃಷ್ಟಿ ಪರಿಹಾರ ನೀಡುವುದು ಮಾತ್ರವಲ್ಲದೇ ರೈತರ ಸಾಲ ಮನ್ನಾಕ್ಕೂ ಮುಂದಾಗಬೇಕು’ ಎಂದು ಬಾಳೆಹಳ್ಳದ ರೈತ ವಿರೂಪಾಕ್ಷ ಒತ್ತಾಯಿಸಿದ್ದಾರೆ.</p>.<p>‘ಗ್ರಾಮೀಣ ಭಾಗಗಳಲ್ಲಿ ಕೃಷಿ ನಡೆಸುವುದೇ ಸವಾಲಾಗಿದ್ದು, ಕಾಡು ಪ್ರಾಣಿಗಳ ಹಾವಳಿ, ಅತಿವೃಷ್ಟಿ ಸಮಸ್ಯೆಯ ಸುಳಿಗೆ ಸಿಲುಕಿ ರೈತರು ನಲುಗುವಂತಾಗಿದೆ. 15 ದಿನದಿಂದ ಸುರಿಯುತ್ತಿರುವ ಮಳೆಯಿಂದ ರೈತರನ್ನು ಹಿಂಡಿ ಹಾಕಿದೆ’ ಎಂದು ವನಗೂರಿನ ಅಶೋಕ್ ಅಲವತ್ತಿಕೊಂಡರು.</p>.<p>‘ಹೋಬಳಿಯ ಪಟ್ಲಾ ಗ್ರಾಮದಲ್ಲಿ 2 ದಿನದಿಂದ 40.3 ಸೆಂ.ಮೀ. ಮಳೆಯಾಗಿದೆ. ಇದುವರೆಗೆ ಈ ಸಾಲಿನಲ್ಲಿ 400.10 ಸೆಂ.ಮೀ ಮಳೆಯಾಗಿದ್ದು ಗ್ರಾಮದಲ್ಲಿ 20 ದಿನದಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಹಂಡಳಿ ಕೂಡಿಗೆ ಗ್ರಾಮಸ್ಥ ಮಂಜಣ್ಣ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆತ್ತೂರು</strong>: ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಗಾಳಿ, ಮಳೆಗೆ ಹೆತ್ತೂರು, ಯಸಳೂರು ಹೋಬಳಿಯ ಜನರು ಹೈರಾಣರಾಗಿದ್ದಾರೆ. ಮನೆಗಳು ನಿರಂತರವಾಗಿ ಕುಸಿಯುತ್ತಿದ್ದು, ಬಿತ್ತಿದ್ದ ಬೆಳೆಗಳೆಲ್ಲ ನೀರು ಪಾಲಾಗಿವೆ.</p>.<p>ಹೆತ್ತೂರು ಸಮೀಪದ ಯಡಕೇರಿಯ ನಾಗರಾಜ್ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ಎಲ್ಲರೂ ಮನೆಯಲ್ಲಿ ಇದ್ದಾಗಲೇ ಮನೆ ಕುಸಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಿರ್ಕಳ್ಳಿಯ ತಮ್ಮೇಗೌಡರ ದನದ ಕೊಟ್ಟಿಗೆ ಬುಧವಾರ ತಡರಾತ್ರಿ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಸಿಕಂದರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>ವಳ್ಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ರಸ್ತೆ ಮಧ್ಯೆ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಹೆತ್ತೂರು-ಕುಂಬ್ರಹಳ್ಳಿ ಗ್ರಾಮ ಸಂಪರ್ಕಿಸುವ ಯಡಕೇರಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದಾಗಿದೆ. ಯಸಳೂರು ಪೊಲೀಸರು ಸೇತುವೆ ಸಮೀಪ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದಾರೆ.</p>.<p>ನಿರಂತರವಾಗಿ ಸುರಿಯುತ್ತಿರುವ ಮಳೆ- ಗಾಳಿಗೆ ಮಲೆನಾಡಿನ ಮನೆಗಳು ಕುಸಿಯುತ್ತಿದ್ದು, ಮನೆಯ ಚಾವಣಿ ಹಾರುತ್ತಿವೆ. ಭಯದಲ್ಲಿ ಬದುಕುವ ಪರಿಸ್ಥಿತಿ ಉಂಟಾಗಿದೆ. ಗುರುವಾರ ಹೆತ್ತೂರು ಸಂತೆ ದಿನವಾದರೂ, ಜನರು ಮನೆಯಿಂದ ಹೊರ ಬರದಂತಾಗಿತ್ತು. ಭತ್ತದ ಗದ್ದೆ ಮೇಲೆ ನೀರು ಹೊಳೆಯಂತೆ ಹರಿಯುತ್ತಿದ್ದು, ಸಸಿ ಮಡಿಗಳು, ನಾಟಿ ಮಾಡಿರುವ ಬೆಳೆ ಕರಗುವಂತಾಗಿದೆ.</p>.<p>‘ಅಧಿಕ ಮಳೆಯಿಂದಾಗಿ ಶೇ 50ಕ್ಕೂ ಹೆಚ್ಚು ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿ ಫಸಲು ನೆಲ ಕಚ್ಚುತ್ತಿದೆ. ಸರ್ಕಾರವು ಕಾಫಿ ಬೆಳೆಗಾರರ ಉಳಿವಿಗಾಗಿ ಅತಿವೃಷ್ಟಿ ಪರಿಹಾರ ನೀಡುವುದು ಮಾತ್ರವಲ್ಲದೇ ರೈತರ ಸಾಲ ಮನ್ನಾಕ್ಕೂ ಮುಂದಾಗಬೇಕು’ ಎಂದು ಬಾಳೆಹಳ್ಳದ ರೈತ ವಿರೂಪಾಕ್ಷ ಒತ್ತಾಯಿಸಿದ್ದಾರೆ.</p>.<p>‘ಗ್ರಾಮೀಣ ಭಾಗಗಳಲ್ಲಿ ಕೃಷಿ ನಡೆಸುವುದೇ ಸವಾಲಾಗಿದ್ದು, ಕಾಡು ಪ್ರಾಣಿಗಳ ಹಾವಳಿ, ಅತಿವೃಷ್ಟಿ ಸಮಸ್ಯೆಯ ಸುಳಿಗೆ ಸಿಲುಕಿ ರೈತರು ನಲುಗುವಂತಾಗಿದೆ. 15 ದಿನದಿಂದ ಸುರಿಯುತ್ತಿರುವ ಮಳೆಯಿಂದ ರೈತರನ್ನು ಹಿಂಡಿ ಹಾಕಿದೆ’ ಎಂದು ವನಗೂರಿನ ಅಶೋಕ್ ಅಲವತ್ತಿಕೊಂಡರು.</p>.<p>‘ಹೋಬಳಿಯ ಪಟ್ಲಾ ಗ್ರಾಮದಲ್ಲಿ 2 ದಿನದಿಂದ 40.3 ಸೆಂ.ಮೀ. ಮಳೆಯಾಗಿದೆ. ಇದುವರೆಗೆ ಈ ಸಾಲಿನಲ್ಲಿ 400.10 ಸೆಂ.ಮೀ ಮಳೆಯಾಗಿದ್ದು ಗ್ರಾಮದಲ್ಲಿ 20 ದಿನದಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಹಂಡಳಿ ಕೂಡಿಗೆ ಗ್ರಾಮಸ್ಥ ಮಂಜಣ್ಣ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>