<p><strong>ಸಕಲೇಶಪುರ</strong> (ಹಾಸನ ಜಿಲ್ಲೆ): ಇಲ್ಲಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ–ಮಾರನಹಳ್ಳಿ ನಡುವೆ ಹಲವೆಡೆ ಭೂ ಕುಸಿತವಾಗಿತ್ತು, ಮಳೆ ಹೀಗೇ ಮುಂದುವರಿದರೆ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.</p>.<p>ಅವೈಜ್ಞಾನಿಕವಾಗಿ ಭೂಮಿ ಕತ್ತರಿಸಿ, ಕಾಂಕ್ರೀಟ್ ರಸ್ತೆ ನಿರ್ಮಿಸಿರುವ ದೊಡ್ಡತಪ್ಪಲೆ ಬಳಿ ಸುಮಾರು 150 ಅಡಿ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಮರ ಗಿಡಗಳ ಸಮೇತ ಮಣ್ಣು ಕುಸಿದು ಬಿದ್ದಿದೆ. ಮಳೆ ಬಂದಂತೆಲ್ಲಾ ಕುಸಿತ ಮುಂದುವರಿದಿದ್ದು, ವಾಹನಗಳು ಹಳೇ ಹೆದ್ದಾರಿಯಲ್ಲೇ ಸಂಚರಿಸುವಂತಾಗಿದೆ.</p>.<p>ಹಳೆ ರಸ್ತೆ ಮೇಲೂ 100 ಅಡಿಗೂ ಹೆಚ್ಚು ಎತ್ತರ ಹಾಗೂ 200 ಮೀಟರ್ಗೂ ಹೆಚ್ಚು ಉದ್ದ ಇರುವ ಗೆರೆ ಕುಸಿಯುವ ಹಂತದಲ್ಲಿದ್ದು, ಆ ಮಾರ್ಗದಲ್ಲಿಯೂ ವಾಹನಗಳ ಸಂಚಾರಕ್ಕೆ ಅಪಾಯ ಎದುರಾಗಿದೆ.</p>.<p>‘ರಸ್ತೆ ನಿರ್ಮಾಣಕ್ಕೆ ಇಳಿಜಾರಿನಲ್ಲಿ ಭೂಮಿ ಕತ್ತರಿಸದೇ, 90 ಡಿಗ್ರಿ ಕತ್ತರಿಸಿರುವುದರಿಂದ ನಿರಂತರವಾಗಿ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಳ್ಳದೇ ಇರುವ ಗೋದಾಮಿನವರೆಗೆ ಮಣ್ಣು ಕುಸಿದಿದ್ದು, ಮಳೆ ಮುಂದುವರಿದರೆ ಗೋದಾಮಿನ ಗೋಡೆಯೂ ಕುಸಿಯುತ್ತದೆ’ ಎಂದು ಕಾಫಿ ಬೆಳೆಗಾರ ಟಿ.ಡಿ. ಬಸಪ್ಪ ’ಪ್ರಜಾವಾಣಿ’ಯೊಂದಿಗೆ ತಮ್ಮ ಆತಂಕ ವ್ಯಕ್ತಪಡಿಸಿದರು.</p>.<p>‘ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ–ಹೆಗ್ಗದ್ದೆವರೆಗೆ 12 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ ಹಂತದಲ್ಲಿದ್ದು, ಹಲವೆಡೆ ಭೂ ಕುಸಿತವಾಗಿದೆ. ವಾಹನಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು, ಕಾಮಗಾರಿ ನಿರ್ವಹಿಸುತ್ತಿರುವ ರಾಜ್ಕಮಲ್ ಕಂಪನಿಯ ಎಂಜಿನಿಯರ್ ಹಾಗೂ ಆ ವ್ಯಾಪ್ತಿಯ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಜಿ. ಮೇಘನಾ ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ</strong> (ಹಾಸನ ಜಿಲ್ಲೆ): ಇಲ್ಲಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ–ಮಾರನಹಳ್ಳಿ ನಡುವೆ ಹಲವೆಡೆ ಭೂ ಕುಸಿತವಾಗಿತ್ತು, ಮಳೆ ಹೀಗೇ ಮುಂದುವರಿದರೆ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.</p>.<p>ಅವೈಜ್ಞಾನಿಕವಾಗಿ ಭೂಮಿ ಕತ್ತರಿಸಿ, ಕಾಂಕ್ರೀಟ್ ರಸ್ತೆ ನಿರ್ಮಿಸಿರುವ ದೊಡ್ಡತಪ್ಪಲೆ ಬಳಿ ಸುಮಾರು 150 ಅಡಿ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಮರ ಗಿಡಗಳ ಸಮೇತ ಮಣ್ಣು ಕುಸಿದು ಬಿದ್ದಿದೆ. ಮಳೆ ಬಂದಂತೆಲ್ಲಾ ಕುಸಿತ ಮುಂದುವರಿದಿದ್ದು, ವಾಹನಗಳು ಹಳೇ ಹೆದ್ದಾರಿಯಲ್ಲೇ ಸಂಚರಿಸುವಂತಾಗಿದೆ.</p>.<p>ಹಳೆ ರಸ್ತೆ ಮೇಲೂ 100 ಅಡಿಗೂ ಹೆಚ್ಚು ಎತ್ತರ ಹಾಗೂ 200 ಮೀಟರ್ಗೂ ಹೆಚ್ಚು ಉದ್ದ ಇರುವ ಗೆರೆ ಕುಸಿಯುವ ಹಂತದಲ್ಲಿದ್ದು, ಆ ಮಾರ್ಗದಲ್ಲಿಯೂ ವಾಹನಗಳ ಸಂಚಾರಕ್ಕೆ ಅಪಾಯ ಎದುರಾಗಿದೆ.</p>.<p>‘ರಸ್ತೆ ನಿರ್ಮಾಣಕ್ಕೆ ಇಳಿಜಾರಿನಲ್ಲಿ ಭೂಮಿ ಕತ್ತರಿಸದೇ, 90 ಡಿಗ್ರಿ ಕತ್ತರಿಸಿರುವುದರಿಂದ ನಿರಂತರವಾಗಿ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಳ್ಳದೇ ಇರುವ ಗೋದಾಮಿನವರೆಗೆ ಮಣ್ಣು ಕುಸಿದಿದ್ದು, ಮಳೆ ಮುಂದುವರಿದರೆ ಗೋದಾಮಿನ ಗೋಡೆಯೂ ಕುಸಿಯುತ್ತದೆ’ ಎಂದು ಕಾಫಿ ಬೆಳೆಗಾರ ಟಿ.ಡಿ. ಬಸಪ್ಪ ’ಪ್ರಜಾವಾಣಿ’ಯೊಂದಿಗೆ ತಮ್ಮ ಆತಂಕ ವ್ಯಕ್ತಪಡಿಸಿದರು.</p>.<p>‘ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ–ಹೆಗ್ಗದ್ದೆವರೆಗೆ 12 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ ಹಂತದಲ್ಲಿದ್ದು, ಹಲವೆಡೆ ಭೂ ಕುಸಿತವಾಗಿದೆ. ವಾಹನಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು, ಕಾಮಗಾರಿ ನಿರ್ವಹಿಸುತ್ತಿರುವ ರಾಜ್ಕಮಲ್ ಕಂಪನಿಯ ಎಂಜಿನಿಯರ್ ಹಾಗೂ ಆ ವ್ಯಾಪ್ತಿಯ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಜಿ. ಮೇಘನಾ ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>