<p><strong>ಆಲೂರು</strong>: ವಾರದಿಂದ ಬೀಳುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಅಧಿಕವಾಗಿದ್ದು, ಶುಂಠಿ ಬೆಳೆಗೆ ಕೊಳೆ ರೋಗ ತಗುಲುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. </p>.<p>ನಾಲ್ಕು ದಶಕಗಳಿಂದ ರೈತರು ಆಲೂಗಡ್ಡೆ ಬೆಳೆಗೆ ಮಾರು ಹೋಗಿದ್ದರು. ವರ್ಷ ಕಳೆದಂತೆ ಆಲೂಗಡ್ಡೆ ಬೆಳೆ ಸಂಪೂರ್ಣ ರೋಗಮಯವಾದ್ದರಿಂದ ಆಯ್ದ ರೈತರು ಶುಂಠಿ ಬೆಳೆಗೆ ಆಸಕ್ತಿ ತೋರಿದರು. ಬೆಳೆಯಲ್ಲಿ ಎಂದೂ ಕಾಣದ ಲಾಭ ಸಿಗಲಾರಂಭಿಸಿತು. ವರ್ಷ ಕಳೆದಂತೆ ಬಹುತೇಕ ರೈತರು ಶುಂಠಿ ಬೆಳೆಯಲು ಮುಂದಾದರು. ಹೊಸ ಭೂಮಿಯಲ್ಲಿ ಗಿಡಗಂಟೆಗಳನ್ನು ಕಿತ್ತು ಕೊಳವೆಬಾವಿ ಕೊರೆಸಿ ಬೆಳೆಯಲಾರಂಭಿಸಿದರು.</p>.<p>ಕಳೆದ ವರ್ಷ ಏಕಾಏಕಿ ಶುಂಠಿಗೆ ಅಧಿಕ ಬೆಲೆ ದೊರಕಿತು. ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆದಿದ್ದಾರೆ. ಶೇ 90 ರಷ್ಟು ಚೆನ್ನಾಗಿ ಹುಟ್ಟಿದೆ. ಆದರೆ ವಾರದಿಂದ ಹೆಚ್ಚಿದ ತೇವಾಂಶ ಮತ್ತು ಎರಡು ದಿನಗಳಿಂದ ಬಿಸಿಲು ಇಲ್ಲದೇ ಭಾರಿ ಮಳೆ ಸುರಿಯುತ್ತಿರುವುದರಿಂದ ಎಲೆ ಹಳದಿಯಾಗುತ್ತಿದ್ದು, ಕೊಳೆ ರೋಗ ತಗುಲುತ್ತಿದೆ.</p>.<p>ರೋಗ ತಗುಲಿದಾಗ ಯಾವುದೇ ಕ್ರಿಮಿನಾಶಕ, ಶಿಲೀಂದ್ರನಾಶಕವನ್ನು ಸಿಂಪಡಿಸಿದರೂ ಹತೋಟಿಗೆ ತರುವುದು ಕಷ್ಟಸಾಧ್ಯ. ರೋಗ ಅಧಿಕವಾದರೆ, 3–4 ತಿಂಗಳಿನಲ್ಲೇ ಬೆಳೆಯನ್ನು ಭೂಮಿಯಿಂದ ಕಿತ್ತು ಹಾಕಬೇಕು. ಆಗ ಇಳುವರಿ ಕುಂಠಿತವಾಗಲಿದ್ದು, ಬೆಲೆ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.</p>.<p>ಕೆಲ ರೈತರು ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಎರಡು ದಶಕಗಳ ಹಿಂದೆ ಜೋಳಕ್ಕೆ ಯಾವುದೇ ರೋಗ ಬರುತ್ತಿರಲಿಲ್ಲ. ಇತ್ತೀಚೆಗೆ ರೋಗಸಹಿತ ಹುಟ್ಟುವುದರಿಂದ ಪ್ರತಿಯೊಂದು ಹಂತದಲ್ಲೂ ಕ್ರಿಮಿನಾಶಕ ಸಿಂಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಅಧಿಕವಾಗಿ ಇರುವುದರಿಂದ ಹೊಲದಲ್ಲಿ ನೀರು ನಿಂತು ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಮಳೆ ನಿಂತು ಬಿಸಿಲು ವಾತಾವರಣ ಸೃಷ್ಟಿಯಾದರೆ ಮಾತ್ರ ಜೋಳ ಉಳಿಯುತ್ತದೆ. ಇಲ್ಲದಿದ್ದರೆ ಗಿಡಗಳು ಶೀತದಿಂದ ಸೊರಗುತ್ತವೆ.</p>.<p>ಕಳೆದ ಸಾಲಿನಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿತ್ತು. ಈ ಸಾಲಿನಲ್ಲಿ 900-1000 ಎಕರೆಯಲ್ಲಿ ಬೆಳೆಯಲಾಗಿದೆ. ಏಳು ತಿಂಗಳಲ್ಲಿ ಕೈಗೆ ಸಿಗುವ ವಾಣಿಜ್ಯ ಬೆಳೆ ಶುಂಠಿಗೆ ಭಾರಿ ಬೇಡಿಕೆ ಇದೆ. ಆದರೆ ಭಾರಿ ಮಳೆ ಮತ್ತು ತೇವಾಂಶದಿಂದ ರೋಗ ಬರುತ್ತದೆ. ಚೆನ್ನಾಗಿ ಬೆಳೆ ಬಂದರೆ ಒಂದು ಕ್ವಿಂಟಲ್ ಬಿತ್ತನೆ ಮಾಡಿದ್ದರೆ, ಸುಮಾರು 15 ಕ್ವಿಂಟಲ್ ಇಳುವರಿ ಸಿಗುತ್ತದೆ. ಕೊಳೆ ರೋಗ ಕಾಣಿಸಿಕೊಂಡರೆ ಯಾವುದೇ ಶಿಲೀಂಧ್ರನಾಶಕವನ್ನು ಗಿಡದ ಬುಡಕ್ಕೆ ಸಿಂಪಡಿಸಬೇಕು. ನೀರು ನಿಲ್ಲದಂತೆ ಚರಂಡಿ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೇಶವ ಪ್ರಸಾದ್ ಸಲಹೆ ನೀಡಿದ್ದಾರೆ.</p>.<p><strong>ಅತ್ಯಧಿಕ ಕ್ರಿಮಿನಾಶಕ ಸಿಂಪಡಿಸುವುದರಿಂದ ಒಂದು ಬಾರಿ ಶುಂಠಿ ಬೆಳೆದ ಭೂಮಿಯಲ್ಲಿ 5–6 ವರ್ಷ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಶುಂಠಿ ಬೆಳೆಯುವುದನ್ನು ಸರ್ಕಾರ ರದ್ದು ಮಾಡಬೇಕು. </strong></p><p><strong>-ದರ್ಶನ್ ಮರಸು ಹೊಸಹಳ್ಳಿ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು</strong>: ವಾರದಿಂದ ಬೀಳುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಅಧಿಕವಾಗಿದ್ದು, ಶುಂಠಿ ಬೆಳೆಗೆ ಕೊಳೆ ರೋಗ ತಗುಲುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. </p>.<p>ನಾಲ್ಕು ದಶಕಗಳಿಂದ ರೈತರು ಆಲೂಗಡ್ಡೆ ಬೆಳೆಗೆ ಮಾರು ಹೋಗಿದ್ದರು. ವರ್ಷ ಕಳೆದಂತೆ ಆಲೂಗಡ್ಡೆ ಬೆಳೆ ಸಂಪೂರ್ಣ ರೋಗಮಯವಾದ್ದರಿಂದ ಆಯ್ದ ರೈತರು ಶುಂಠಿ ಬೆಳೆಗೆ ಆಸಕ್ತಿ ತೋರಿದರು. ಬೆಳೆಯಲ್ಲಿ ಎಂದೂ ಕಾಣದ ಲಾಭ ಸಿಗಲಾರಂಭಿಸಿತು. ವರ್ಷ ಕಳೆದಂತೆ ಬಹುತೇಕ ರೈತರು ಶುಂಠಿ ಬೆಳೆಯಲು ಮುಂದಾದರು. ಹೊಸ ಭೂಮಿಯಲ್ಲಿ ಗಿಡಗಂಟೆಗಳನ್ನು ಕಿತ್ತು ಕೊಳವೆಬಾವಿ ಕೊರೆಸಿ ಬೆಳೆಯಲಾರಂಭಿಸಿದರು.</p>.<p>ಕಳೆದ ವರ್ಷ ಏಕಾಏಕಿ ಶುಂಠಿಗೆ ಅಧಿಕ ಬೆಲೆ ದೊರಕಿತು. ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆದಿದ್ದಾರೆ. ಶೇ 90 ರಷ್ಟು ಚೆನ್ನಾಗಿ ಹುಟ್ಟಿದೆ. ಆದರೆ ವಾರದಿಂದ ಹೆಚ್ಚಿದ ತೇವಾಂಶ ಮತ್ತು ಎರಡು ದಿನಗಳಿಂದ ಬಿಸಿಲು ಇಲ್ಲದೇ ಭಾರಿ ಮಳೆ ಸುರಿಯುತ್ತಿರುವುದರಿಂದ ಎಲೆ ಹಳದಿಯಾಗುತ್ತಿದ್ದು, ಕೊಳೆ ರೋಗ ತಗುಲುತ್ತಿದೆ.</p>.<p>ರೋಗ ತಗುಲಿದಾಗ ಯಾವುದೇ ಕ್ರಿಮಿನಾಶಕ, ಶಿಲೀಂದ್ರನಾಶಕವನ್ನು ಸಿಂಪಡಿಸಿದರೂ ಹತೋಟಿಗೆ ತರುವುದು ಕಷ್ಟಸಾಧ್ಯ. ರೋಗ ಅಧಿಕವಾದರೆ, 3–4 ತಿಂಗಳಿನಲ್ಲೇ ಬೆಳೆಯನ್ನು ಭೂಮಿಯಿಂದ ಕಿತ್ತು ಹಾಕಬೇಕು. ಆಗ ಇಳುವರಿ ಕುಂಠಿತವಾಗಲಿದ್ದು, ಬೆಲೆ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.</p>.<p>ಕೆಲ ರೈತರು ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಎರಡು ದಶಕಗಳ ಹಿಂದೆ ಜೋಳಕ್ಕೆ ಯಾವುದೇ ರೋಗ ಬರುತ್ತಿರಲಿಲ್ಲ. ಇತ್ತೀಚೆಗೆ ರೋಗಸಹಿತ ಹುಟ್ಟುವುದರಿಂದ ಪ್ರತಿಯೊಂದು ಹಂತದಲ್ಲೂ ಕ್ರಿಮಿನಾಶಕ ಸಿಂಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಅಧಿಕವಾಗಿ ಇರುವುದರಿಂದ ಹೊಲದಲ್ಲಿ ನೀರು ನಿಂತು ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಮಳೆ ನಿಂತು ಬಿಸಿಲು ವಾತಾವರಣ ಸೃಷ್ಟಿಯಾದರೆ ಮಾತ್ರ ಜೋಳ ಉಳಿಯುತ್ತದೆ. ಇಲ್ಲದಿದ್ದರೆ ಗಿಡಗಳು ಶೀತದಿಂದ ಸೊರಗುತ್ತವೆ.</p>.<p>ಕಳೆದ ಸಾಲಿನಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿತ್ತು. ಈ ಸಾಲಿನಲ್ಲಿ 900-1000 ಎಕರೆಯಲ್ಲಿ ಬೆಳೆಯಲಾಗಿದೆ. ಏಳು ತಿಂಗಳಲ್ಲಿ ಕೈಗೆ ಸಿಗುವ ವಾಣಿಜ್ಯ ಬೆಳೆ ಶುಂಠಿಗೆ ಭಾರಿ ಬೇಡಿಕೆ ಇದೆ. ಆದರೆ ಭಾರಿ ಮಳೆ ಮತ್ತು ತೇವಾಂಶದಿಂದ ರೋಗ ಬರುತ್ತದೆ. ಚೆನ್ನಾಗಿ ಬೆಳೆ ಬಂದರೆ ಒಂದು ಕ್ವಿಂಟಲ್ ಬಿತ್ತನೆ ಮಾಡಿದ್ದರೆ, ಸುಮಾರು 15 ಕ್ವಿಂಟಲ್ ಇಳುವರಿ ಸಿಗುತ್ತದೆ. ಕೊಳೆ ರೋಗ ಕಾಣಿಸಿಕೊಂಡರೆ ಯಾವುದೇ ಶಿಲೀಂಧ್ರನಾಶಕವನ್ನು ಗಿಡದ ಬುಡಕ್ಕೆ ಸಿಂಪಡಿಸಬೇಕು. ನೀರು ನಿಲ್ಲದಂತೆ ಚರಂಡಿ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೇಶವ ಪ್ರಸಾದ್ ಸಲಹೆ ನೀಡಿದ್ದಾರೆ.</p>.<p><strong>ಅತ್ಯಧಿಕ ಕ್ರಿಮಿನಾಶಕ ಸಿಂಪಡಿಸುವುದರಿಂದ ಒಂದು ಬಾರಿ ಶುಂಠಿ ಬೆಳೆದ ಭೂಮಿಯಲ್ಲಿ 5–6 ವರ್ಷ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಶುಂಠಿ ಬೆಳೆಯುವುದನ್ನು ಸರ್ಕಾರ ರದ್ದು ಮಾಡಬೇಕು. </strong></p><p><strong>-ದರ್ಶನ್ ಮರಸು ಹೊಸಹಳ್ಳಿ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>