ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬದಲಾಯಿಸಿರುವ ಆಸನಗಳನ್ನು ಹೊರಗಡೆ ಸಂಗ್ರಹಿಸಿ ಇಡಲಾಗಿದೆ.
ಚನ್ನರಾಯಪಟ್ಟಣದ ಸಾಂಸ್ಕೃತಿಕ ಭವನ
ಇದ್ದೂ ಇಲ್ಲದಂತಾದ ಭವನಗಳು
ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ಕಲಾವಿದರಿದ್ದಾರೆ. ಮಳೆಗಾಲ ಹೊರತುಪಡಿಸಿದರೆ ಬಹುತೇಕ ಪ್ರತಿ ಶುಕ್ರವಾರ ಪೌರಾಣಿಕ ನಾಟಕ ಪ್ರದರ್ಶನ ಇರುತ್ತದೆ. ಜೊತೆಗೆ ಸಾಮಾಜಿಕ ನಾಟಕೋತ್ಸವ ಇರುತ್ತದೆ. ಗುರುಕಲಾ ಸಂಘದ ವತಿಯಿಂದ ಪ್ರತಿವರ್ಷ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತದೆ. ಕಲಾವಿದರ ಒಕ್ಕೊರಲಿನ ಫಲವಾಗಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಸರ್ಕಾರದ ವತಿಯಿಂದ 8 ವರ್ಷಗಳ ಹಿಂದೆ ಸಾಂಸ್ಕೃತಿಕ ಭವನ ನಿರ್ಮಾಣವಾಯಿತು. ಆದರೆ ಪೌರಾಣಿಕ ನಾಟಕ ಆಯೋಜಿಸಲು ಸೌಲಭ್ಯದ ಕೊರತೆ ಇದೆ. ಹಾಗಾಗಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೀನರಿ ಅಳವಡಿಸಿ ನಾಟಕ ಪ್ರದರ್ಶಿಸಲಾಗುತ್ತಿದೆ. ಬಸ್ ನಿಲ್ದಾಣದ ಸಮೀಪ ಇರುವ ಖಾಸಗಿ ಜಾಗದಲ್ಲಿ ಪೌರಾಣಿಕ ನಾಟಕೋತ್ಸವ ಆಯೋಜಿಸುವಂತಾಗಿದೆ ಎಂಬ ಕೊರಗು ಕಲಾವಿದರದ್ದು.
ಭವನ ದುರಸ್ತಿಗೆ ಕ್ರಮ ಕೈಗೊಳ್ಳಿ
ಜಾವಗಲ್ನ ಭವನದ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಭವನ ದುರಸ್ತಿಗೊಳಿಸುವ ಕೆಲಸ ಮಾಡಬೇಕಿದೆ. ಮೋಹನ್ ಕುಮಾರ್ ಭೀಮ್ ಆರ್ಮಿ ಸಂಚಾಲಕ ಭವನಗಳು ಮರೀಚಿಕೆ ಸರ್ಕಾರದ ಭವನಗಳ ಸೌಲಭ್ಯ ಗ್ರಾಮೀಣ ಜನರಿಗೆ ಮರೀಚಿಕೆಯಾಗಿದೆ. ಸಾಕಷ್ಟು ಹಳ್ಳಿಯ ಪರಿಶಿಷ್ಟ ಕಾಲೊನಿಗಳು ಇಂದಿಗೂ ಭವನ ಕಂಡಿಲ್ಲ. ಭವನ ಇದ್ದರೂ ಉಪಯೋಗಕ್ಕೆ ಬಾರದಂತಾಗಿವೆ. ಲಿಂಗರಾಜು ಡಿಎಸ್ಎಸ್ ಜಿಲ್ಲಾ ಘಟಕ ಸಂಘಟನಾ ಸಂಚಾಲಕ ಅಭಿವೃದ್ಧಿಗೆ ಪ್ರಸ್ತಾವ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಸೌರ ದೀಪ ಅಳವಡಿಸುವುದು ಜನರೇಟರ್ ಮತ್ತು ಕುಡಿಯುವ ನೀರು ಸೇರಿ ಇನ್ನಿತರೆ ಸೌಲಭ್ಯ ಒದಗಿಸಲು ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎಚ್.ಎಲ್. ಶಂಕರಮೂರ್ತಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನರಾಯಪಟ್ಟಣ. ಕಲಾಭವನ ನಿರ್ಮಿಸಿ ಮಾಧ್ಯಮಿಕ ಶಾಲಾ ಆವಣರದ ಸಾಂಸ್ಕೃತಿಕ ಭವನದಲ್ಲಿ ಪೌರಾಣಿಕ ನಾಟಕ ಪ್ರದರ್ಶಿಸಲು ಸೂಕ್ತ ಸವಲತ್ತುಗಳಿಲ್ಲ. ಕಲಾವಿದರ ಹಿತದೃಷ್ಟಿಯಿಂದ ಕಲಾಭವನ ನಿರ್ಮಿಸಿ ಸಾಮಾಜಿಕ ಪೌರಾಣಿಕ ನಾಟಕ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಎಚ್.ಎಲ್. ನರಸಿಂಹಮೂರ್ತಿ ಕಲಾವಿದ ಚನ್ನರಾಯಪಟ್ಟಣ ಅಗತ್ಯ ಸೌಲಭ್ಯ ಒದಗಿಸಿ ಚನ್ನರಾಯಪಟ್ಟಣದ ಅಂಬೇಡ್ಕರ್ ಭವನದಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪೂರಕ ವ್ಯವಸ್ಥೆಗಳಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನಕ್ಕೆ ಸೂಕ್ತ ಸೌಲಭ್ಯ ಒದಗಿಸಬೇಕಿದೆ. ಗೋವಿಂದರಾಜು ಕಲಾವಿದ ಭವನ ನಿರ್ಮಾಣಕ್ಕೆ ಪ್ರಸ್ತಾವ 5 ವರ್ಷದ ಹಿಂದೆ ಅಂಬೇಡ್ಕರ್ ಭವನಕ್ಕೆ ₹ 50 ಲಕ್ಷ ಮಂಜೂರಾಗಿತ್ತು. ಜಾಗ ಇಲ್ಲದೇ ಹಣ ಸರ್ಕಾರಕ್ಕೆ ಹಿಂದಿರುಗಿತ್ತು. ಈಗ ಪಂಚಾಯಿತಿಯಿಂದ 100X100 ನಿವೇಶನ ಕೊಟ್ಟಿದ್ದಾರೆ. ಭವನ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಲಿಂಗರಾಜು ಹಳೇಬೀಡು ಸಹಾಯಧನ ಹೆಚ್ಚಿಸಿ 10 ದಿನದ ನಾಟಕೋತ್ಸವಕ್ಕೆ ₹ 25 ಲಕ್ಷ ಖರ್ಚಾಗುತ್ತದೆ. ದೇಣಿಗೆ ಮತ್ತು ಕಲಾವಿದರೇ ಹಣ ಹಾಕುತ್ತಿದ್ದೇವೆ. ಸರ್ಕಾರದಿಂದ ಪ್ರತಿ ತಂಡಕ್ಕೆ ₹ 30 ಸಾವಿರ ಕೊಟ್ಟರೇ ಸಾಕಾಗುವುದಿಲ್ಲ ಕಲಾಭವನದ ಬಾಡಿಗೆಯೇ ದಿನಕ್ಕೆ ₹ 15 ಸಾವಿರ ಕೊಡಬೇಕು. ಕಲಾವಿದರಿಗೆ ಸಹಾಯಧನ ಹೆಚ್ಚಿಸಬೇಕು. ರವಿಕುಮಾರ್ ಬಿದರೆ ಹಾಸನ ಜಿಲ್ಲಾ ಕಲಾವಿದರ ವೇದಿಕೆ ಅಧ್ಯಕ್ಷ