<p><strong>ಅರಸೀಕೆರೆ:</strong> ತಾಲ್ಲೂಕಿನ ರೈತರು ಹಾಗೂ ವರ್ತಕರಿಗೆ ಅನೂಕೂಲ ಆಗಲೆಂದು ನಗರ ಹೊರವಲಯದ ಗೀಜಿಹಳ್ಳಿ ಸಮೀಪ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ರೈತರು ಹಾಗೂ ವರ್ತಕರಿಗೆ ಬೇಸರ ಮೂಡಿಸಿದೆ.</p>.<p>ಮುರಿದಿರುವ ವಿದ್ಯುತ್ ಕಂಬ ಹಾಗೂ ಗೇಟ್ಗಳು, ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರು, ರೈತರು ಮತ್ತು ವರ್ತಕರನ್ನು ಸ್ವಾಗತಿಸುತ್ತವೆ. ಮುಂದೆ ಪ್ರವೇಶಿಸಿದರೆ, ಪಕ್ಕದಲ್ಲಿ ಸುರಿದಿರುವ ಕೊಳೆತ ತರಕಾರಿಗಳು ಬೀರುವ ದುರ್ವಾಸನೆ, ಹೈಟೆಕ್ ಮಾರುಕಟ್ಟೆಯ ಅವ್ಯವಸ್ಥೆಯನ್ನು ಪ್ರದರ್ಶಿಸುತ್ತಿದೆ.</p>.<p>ನೀರಿನ ವ್ಯವಸ್ಥೆ ಇದೆಯಾದರೂ ಶೌಚಾಲಯದ ನಿರ್ವಹಣೆ ಇಲ್ಲದೇ ಇರುವುದರಿಂದ ಮಾರುಕಟ್ಟೆಯ ಆವರಣವೇ ಬಯಲು ಶೌಚಾಲಯವಾಗಿ ಮಾರ್ಪಟ್ಟಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.</p>.<p>ಮಾರುಕಟ್ಟೆ ಆವರಣದಲ್ಲಿ ಅಲ್ಲಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿವೆ. ಕೆಲವೆಡೆ ಸಿಸಿಟಿವಿ ಕ್ಯಾಮೆರಾಗಳೇ ಮಾಯವಾಗಿವೆ.</p>.<p>ನಗರದ ಸಂತೆ ಮೈದಾನದಲ್ಲಿ ನಡೆಯುತ್ತಿದ್ದ ಸಗಟು ತರಕಾರಿಯ ವ್ಯಾಪಾರ, ಸ್ಥಳ ಬದಲಾಯಿಸಿಕೊಂಡರೂ ಮೂಲಸೌಕರ್ಯಗಳ ಕೊರತೆಯ ಜೊತೆಗೆ ಇತರೆ ಸಮಸ್ಯೆಗಳು ಬೆನ್ನು ಬಿಡದೇ ರೈತರು ಹಾಗೂ ವರ್ತಕರನ್ನು ಕಾಡುತ್ತಿವೆ.</p>.<p>ಸಮಸ್ಯೆ ಇಷ್ಟಿದ್ದರೂ ಚುನಾಯಿತ ಚುನಾಯಿತ ಜನಪ್ರತಿನಿಧಿಗಳು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಹಾಗೂ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ನಿತ್ಯವೂ ತರಕಾರಿ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯಗಳು ಇಲ್ಲದಾಗಿದೆ. ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯವಾಗಿದೆ.</p>.<div><blockquote>ಮಾರುಕಟ್ಟೆ ಆವರಣ ವಿಶಾಲವಾಗಿದೆ. ಆದರೆ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಾರುಕಟ್ಟೆಗೆ ಬರುವ ರೈತರಿಗೆ ತೊಂದರೆಯಾಗುತ್ತಿದೆ. </blockquote><span class="attribution">ಬೈರೇಶ್ ಟೊಮ್ಯಾಟೋ ಬೆಳೆಗಾರ</span></div>.<div><blockquote>ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಇಲ್ಲ. ಕೊಳೆತ ತರಕಾರಿಗಳು ದುರ್ವಾಸನೆ ಬೀರುತ್ತಿವೆ. ಸಂಬಂಧಪಟ್ಟವರು ಕನಿಷ್ಠ ಈ ಕೊಳೆತ ತರಕಾರಿಯನ್ನು ಇಲ್ಲಿಂದ ಹೊರ ಸಾಗಿಸಬೇಕು.</blockquote><span class="attribution"> ಬಿ.ಕೆ. ಯೋಗೀಶಾಚಾರ್ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ</span></div>.<div><blockquote>ಇನ್ನೂ ಒಂದು ವರ್ಷದವರೆಗೆ ಗುತ್ತಿಗೆದಾರರೇ ಮಾರುಕಟ್ಟೆ ಆವರಣದ ನಿರ್ವಹಣೆ ಮಾಡಬೇಕು ಎಂಬ ನಿರ್ದೇಶನವಿದ್ದು ಸಮಸ್ಯೆ ಪರಿಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು. </blockquote><span class="attribution">ಸಿದ್ದರಂಗ ಸ್ವಾಮಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ:</strong> ತಾಲ್ಲೂಕಿನ ರೈತರು ಹಾಗೂ ವರ್ತಕರಿಗೆ ಅನೂಕೂಲ ಆಗಲೆಂದು ನಗರ ಹೊರವಲಯದ ಗೀಜಿಹಳ್ಳಿ ಸಮೀಪ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ರೈತರು ಹಾಗೂ ವರ್ತಕರಿಗೆ ಬೇಸರ ಮೂಡಿಸಿದೆ.</p>.<p>ಮುರಿದಿರುವ ವಿದ್ಯುತ್ ಕಂಬ ಹಾಗೂ ಗೇಟ್ಗಳು, ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರು, ರೈತರು ಮತ್ತು ವರ್ತಕರನ್ನು ಸ್ವಾಗತಿಸುತ್ತವೆ. ಮುಂದೆ ಪ್ರವೇಶಿಸಿದರೆ, ಪಕ್ಕದಲ್ಲಿ ಸುರಿದಿರುವ ಕೊಳೆತ ತರಕಾರಿಗಳು ಬೀರುವ ದುರ್ವಾಸನೆ, ಹೈಟೆಕ್ ಮಾರುಕಟ್ಟೆಯ ಅವ್ಯವಸ್ಥೆಯನ್ನು ಪ್ರದರ್ಶಿಸುತ್ತಿದೆ.</p>.<p>ನೀರಿನ ವ್ಯವಸ್ಥೆ ಇದೆಯಾದರೂ ಶೌಚಾಲಯದ ನಿರ್ವಹಣೆ ಇಲ್ಲದೇ ಇರುವುದರಿಂದ ಮಾರುಕಟ್ಟೆಯ ಆವರಣವೇ ಬಯಲು ಶೌಚಾಲಯವಾಗಿ ಮಾರ್ಪಟ್ಟಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.</p>.<p>ಮಾರುಕಟ್ಟೆ ಆವರಣದಲ್ಲಿ ಅಲ್ಲಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿವೆ. ಕೆಲವೆಡೆ ಸಿಸಿಟಿವಿ ಕ್ಯಾಮೆರಾಗಳೇ ಮಾಯವಾಗಿವೆ.</p>.<p>ನಗರದ ಸಂತೆ ಮೈದಾನದಲ್ಲಿ ನಡೆಯುತ್ತಿದ್ದ ಸಗಟು ತರಕಾರಿಯ ವ್ಯಾಪಾರ, ಸ್ಥಳ ಬದಲಾಯಿಸಿಕೊಂಡರೂ ಮೂಲಸೌಕರ್ಯಗಳ ಕೊರತೆಯ ಜೊತೆಗೆ ಇತರೆ ಸಮಸ್ಯೆಗಳು ಬೆನ್ನು ಬಿಡದೇ ರೈತರು ಹಾಗೂ ವರ್ತಕರನ್ನು ಕಾಡುತ್ತಿವೆ.</p>.<p>ಸಮಸ್ಯೆ ಇಷ್ಟಿದ್ದರೂ ಚುನಾಯಿತ ಚುನಾಯಿತ ಜನಪ್ರತಿನಿಧಿಗಳು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಹಾಗೂ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ನಿತ್ಯವೂ ತರಕಾರಿ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯಗಳು ಇಲ್ಲದಾಗಿದೆ. ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯವಾಗಿದೆ.</p>.<div><blockquote>ಮಾರುಕಟ್ಟೆ ಆವರಣ ವಿಶಾಲವಾಗಿದೆ. ಆದರೆ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಾರುಕಟ್ಟೆಗೆ ಬರುವ ರೈತರಿಗೆ ತೊಂದರೆಯಾಗುತ್ತಿದೆ. </blockquote><span class="attribution">ಬೈರೇಶ್ ಟೊಮ್ಯಾಟೋ ಬೆಳೆಗಾರ</span></div>.<div><blockquote>ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಇಲ್ಲ. ಕೊಳೆತ ತರಕಾರಿಗಳು ದುರ್ವಾಸನೆ ಬೀರುತ್ತಿವೆ. ಸಂಬಂಧಪಟ್ಟವರು ಕನಿಷ್ಠ ಈ ಕೊಳೆತ ತರಕಾರಿಯನ್ನು ಇಲ್ಲಿಂದ ಹೊರ ಸಾಗಿಸಬೇಕು.</blockquote><span class="attribution"> ಬಿ.ಕೆ. ಯೋಗೀಶಾಚಾರ್ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ</span></div>.<div><blockquote>ಇನ್ನೂ ಒಂದು ವರ್ಷದವರೆಗೆ ಗುತ್ತಿಗೆದಾರರೇ ಮಾರುಕಟ್ಟೆ ಆವರಣದ ನಿರ್ವಹಣೆ ಮಾಡಬೇಕು ಎಂಬ ನಿರ್ದೇಶನವಿದ್ದು ಸಮಸ್ಯೆ ಪರಿಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು. </blockquote><span class="attribution">ಸಿದ್ದರಂಗ ಸ್ವಾಮಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>