<p><strong>ಹಾಸನ:</strong> ಜಿಲ್ಲೆಗೆ ನಿಗದಿಯಾಗಿದ್ದ 22 ಸಾವಿರ ಟನ್ ಕೊಬ್ಬರಿ ಖರೀದಿಯ ಮಿತಿ ಪೂರ್ಣವಾಗುತ್ತಿದ್ದಂತೆಯೇ ನೋಂದಣಿ ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ ಸ್ಥಗಿತವಾಯಿತು. ನೋಂದಣಿ ಸಾಧ್ಯವಾಗದವರು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಮನೆಗೆ ಮರಳಿದರು.</p>.<p>ಅರಸೀಕೆರೆಯಲ್ಲಿ ಬೆಳಿಗ್ಗೆಯಿಂದಲೇ ನೂಕುನುಗ್ಗಲು ಉಂಟಾಗಿತ್ತು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಕೈಯಲ್ಲಿ ಲಾಠಿ ಹಿಡಿದು, ಜನರನ್ನು ನಿಯಂತ್ರಿಸಿದರು. ಹಿರೀಸಾವೆ, ನುಗ್ಗೇಹಳ್ಳಿ, ಚನ್ನರಾಯಪಟ್ಟಣ, ಉದಯಪುರ, ಗಂಡಸಿಯಲ್ಲಿ ರೈತರು ಸರದಿಯಲ್ಲಿ ನಿಂತಿದ್ದರು.</p>.<p>ಮಾರ್ಚ್ 4ರಿಂದ ಆರಂಭವಾಗಿದ್ದ ನೋಂದಣಿ ಐದು ದಿನ ನಡೆದಿದ್ದು, 18,879 ರೈತರು ಒಟ್ಟು 22,092 ಟನ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡರು.</p>.<p>ಶುಕ್ರವಾರ ಶಿವರಾತ್ರಿ ಹಬ್ಬವಿದ್ದರೂ ರೈತರು ನೋಂದಣಿ ಕೇಂದ್ರಗಳಲ್ಲಿಯೇ ಉಳಿದಿದ್ದರು. ಗುರುವಾರವೇ ನೋಂದಣಿ ಮುಗಿಯುವ ಸೂಚನೆ ನೀಡಲಾಗಿತ್ತು. ‘ಕೊನೆಯ ಕ್ಷಣದಲ್ಲಾದರೂ ನೋಂದಣಿಯಾಗಲಿ’ ಎಂದು ಕಾದಿದ್ದ ಬಹುತೇಕ ರೈತರು ನಿರಾಸೆ ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಜಿಲ್ಲೆಗೆ ನಿಗದಿಯಾಗಿದ್ದ 22 ಸಾವಿರ ಟನ್ ಕೊಬ್ಬರಿ ಖರೀದಿಯ ಮಿತಿ ಪೂರ್ಣವಾಗುತ್ತಿದ್ದಂತೆಯೇ ನೋಂದಣಿ ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ ಸ್ಥಗಿತವಾಯಿತು. ನೋಂದಣಿ ಸಾಧ್ಯವಾಗದವರು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಮನೆಗೆ ಮರಳಿದರು.</p>.<p>ಅರಸೀಕೆರೆಯಲ್ಲಿ ಬೆಳಿಗ್ಗೆಯಿಂದಲೇ ನೂಕುನುಗ್ಗಲು ಉಂಟಾಗಿತ್ತು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಕೈಯಲ್ಲಿ ಲಾಠಿ ಹಿಡಿದು, ಜನರನ್ನು ನಿಯಂತ್ರಿಸಿದರು. ಹಿರೀಸಾವೆ, ನುಗ್ಗೇಹಳ್ಳಿ, ಚನ್ನರಾಯಪಟ್ಟಣ, ಉದಯಪುರ, ಗಂಡಸಿಯಲ್ಲಿ ರೈತರು ಸರದಿಯಲ್ಲಿ ನಿಂತಿದ್ದರು.</p>.<p>ಮಾರ್ಚ್ 4ರಿಂದ ಆರಂಭವಾಗಿದ್ದ ನೋಂದಣಿ ಐದು ದಿನ ನಡೆದಿದ್ದು, 18,879 ರೈತರು ಒಟ್ಟು 22,092 ಟನ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡರು.</p>.<p>ಶುಕ್ರವಾರ ಶಿವರಾತ್ರಿ ಹಬ್ಬವಿದ್ದರೂ ರೈತರು ನೋಂದಣಿ ಕೇಂದ್ರಗಳಲ್ಲಿಯೇ ಉಳಿದಿದ್ದರು. ಗುರುವಾರವೇ ನೋಂದಣಿ ಮುಗಿಯುವ ಸೂಚನೆ ನೀಡಲಾಗಿತ್ತು. ‘ಕೊನೆಯ ಕ್ಷಣದಲ್ಲಾದರೂ ನೋಂದಣಿಯಾಗಲಿ’ ಎಂದು ಕಾದಿದ್ದ ಬಹುತೇಕ ರೈತರು ನಿರಾಸೆ ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>