<p><strong>ನುಗ್ಗೇಹಳ್ಳಿ:</strong> ಹೋಬಳಿಯ ರಾಯ ಸಮುದ್ರ ಕಾವಲುನಲ್ಲಿರುವ ಶ್ರೀ ರಾಮದೇವರ ನೂತನ ದೇವಾಲಯ ನಿರ್ಮಾಣಕ್ಕೆ ₹1 ಲಕ್ಷ ವೈಯಕ್ತಿಕವಾಗಿ ನೀಡುವುದಾಗಿ ಕಾಂಗ್ರೆಸ್ ಮುಖಂಡ ಎಂ. ಎ ಗೋಪಾಲಸ್ವಾಮಿ ಹೇಳಿದರು.</p>.<p>ಹೋಬಳಿಯ ರಾಯ ಸಮುದ್ರ ಕಾವಲು ಬಳಿ ಇರುವ ಶ್ರೀ ರಾಮದೇವರ ದೇವಾಲಯದಲ್ಲಿ ಅಯೋಧ್ಯೆ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ರಾಯಸಮುದ್ರ ಕಾವಲುನಲ್ಲಿ ಪುರಾತನ ಕಾಲದಿಂದಲೂ ಶ್ರೀ ರಾಮದೇವರ ದೇವಾಲಯವಿತ್ತು. ದೇವಾಲಯ ಹಳೆಯದಾಗಿದ್ದರಿಂದ ಕಳೆದ ಅನೇಕ ವರ್ಷಗಳ ಹಿಂದೆಯೇ ಹಳೆಯ ದೇವಾಲಯ ತೆರವು ಗೊಳಿಸಲಾಗಿತ್ತು. ಈಗ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.</p>.<p>ಶ್ರೀ ರಾಮ ದೇವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹೂವಿನ ಅಲಂಕಾರ, ಮಹಾ ಮಂಗಳಾರತಿ ನಡೆದವು.</p>.<p>ಮುಖಂಡರಾದ ಮಂಜಣ್ಣ, ಹುಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲಾಕ್ಷಿ ಗಿರೀಶ್, ಕೃಷ್ಣ, ಮುಖಂಡರಾದ ಪುಟ್ಟರಾಮೇಗೌಡ, ರಾಜಣ್ಣ, ರಮೇಶ್, ಪಾಂಡುರಂಗ, ಸಂತೋಷ್, ಶಿವಣ್ಣ, ಸೋಮಶೇಖರ್, ನಾರಾಯಣಪ್ಪ, ಹರೀಶ್, ರೈತ ಮುಖಂಡ ಬಸವರಾಜ್, ರಂಗಸ್ವಾಮಿ, ದೇವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನುಗ್ಗೇಹಳ್ಳಿ:</strong> ಹೋಬಳಿಯ ರಾಯ ಸಮುದ್ರ ಕಾವಲುನಲ್ಲಿರುವ ಶ್ರೀ ರಾಮದೇವರ ನೂತನ ದೇವಾಲಯ ನಿರ್ಮಾಣಕ್ಕೆ ₹1 ಲಕ್ಷ ವೈಯಕ್ತಿಕವಾಗಿ ನೀಡುವುದಾಗಿ ಕಾಂಗ್ರೆಸ್ ಮುಖಂಡ ಎಂ. ಎ ಗೋಪಾಲಸ್ವಾಮಿ ಹೇಳಿದರು.</p>.<p>ಹೋಬಳಿಯ ರಾಯ ಸಮುದ್ರ ಕಾವಲು ಬಳಿ ಇರುವ ಶ್ರೀ ರಾಮದೇವರ ದೇವಾಲಯದಲ್ಲಿ ಅಯೋಧ್ಯೆ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ರಾಯಸಮುದ್ರ ಕಾವಲುನಲ್ಲಿ ಪುರಾತನ ಕಾಲದಿಂದಲೂ ಶ್ರೀ ರಾಮದೇವರ ದೇವಾಲಯವಿತ್ತು. ದೇವಾಲಯ ಹಳೆಯದಾಗಿದ್ದರಿಂದ ಕಳೆದ ಅನೇಕ ವರ್ಷಗಳ ಹಿಂದೆಯೇ ಹಳೆಯ ದೇವಾಲಯ ತೆರವು ಗೊಳಿಸಲಾಗಿತ್ತು. ಈಗ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.</p>.<p>ಶ್ರೀ ರಾಮ ದೇವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹೂವಿನ ಅಲಂಕಾರ, ಮಹಾ ಮಂಗಳಾರತಿ ನಡೆದವು.</p>.<p>ಮುಖಂಡರಾದ ಮಂಜಣ್ಣ, ಹುಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲಾಕ್ಷಿ ಗಿರೀಶ್, ಕೃಷ್ಣ, ಮುಖಂಡರಾದ ಪುಟ್ಟರಾಮೇಗೌಡ, ರಾಜಣ್ಣ, ರಮೇಶ್, ಪಾಂಡುರಂಗ, ಸಂತೋಷ್, ಶಿವಣ್ಣ, ಸೋಮಶೇಖರ್, ನಾರಾಯಣಪ್ಪ, ಹರೀಶ್, ರೈತ ಮುಖಂಡ ಬಸವರಾಜ್, ರಂಗಸ್ವಾಮಿ, ದೇವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>