<p><strong>ಹಾಸನ</strong>: ಪ್ರತಿ ಬಾರಿ ಮಳೆಗಾಲದಲ್ಲಿ ಶಿರಾಡಿ ಘಾಟ್ನ ರಸ್ತೆ ಕುಸಿಯುವುದು ಸಾಮಾನ್ಯವಾಗುತ್ತಿದ್ದು, ವಾಹನಗಳ ಸಂಚಾರ ನಿಷೇಧಿಸಲಾಗುತ್ತಿದೆ. ಇದರಿಂದ ಘಟ್ಟದ ಮೇಲಿನ ಜನ ಕರಾವಳಿಯ ಜೊತೆಗೆ ಸಂಪರ್ಕ ಕಡಿದುಕೊಳ್ಳುವಂತಾಗಿದೆ.</p>.<p>ಹೆದ್ದಾರಿ ಕಾಮಗಾರಿಗಾಗಿ ಬೆಟ್ಟಗಳನ್ನು 90 ಡಿಗ್ರಿಯಲ್ಲಿ ಕತ್ತರಿಸಿರುವುದು ಹಾಗೂ ಗೇಬಿಯನ್ ವಾಲ್ (ತಂತಿಯಲ್ಲಿ ಕಲ್ಲುಗಳನ್ನು ಜೋಡಿಸಿ ಗೋಡೆ ನಿರ್ಮಿಸುವುದು) ನಿರ್ಮಿಸಿ, ಅದಕ್ಕೆ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಿರುವುದೇ ರಸ್ತೆ ಹಾಗೂ ಬೆಟ್ಟಗಳು ಕುಸಿಯಲು ಕಾರಣ ಎಂದು ಸ್ಥಳೀಯರು ನಿರಂತರವಾಗಿ ಆರೋಪಿಸುತ್ತಲೇ ಬಂದಿದ್ದಾರೆ.</p>.<p>ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸಲು ಪ್ರಮುಖ ಮೂರು ಹೆದ್ದಾರಿಗಳಿವೆ. ಮಳೆಗಾಲದಲ್ಲಿ ಸಂಪಾಜೆ ಹಾಗೂ ಶಿರಾಡಿ ಘಾಟ್ನಲ್ಲಿ ಸಂಚಾರ ಸ್ಥಗಿತವಾಗುತ್ತದೆ. ಉಳಿದ ಏಕೈಕ ಮಾರ್ಗ ಚಾರ್ಮಾಡಿಯಲ್ಲಿ ಭಾರಿ ವಾಹನಗಳು ಸಂಚರಿಸುವಂತಿಲ್ಲ. ಜತೆಗೆ, 30–40 ಕಿ.ಮೀ. ವೇಗದಲ್ಲಷ್ಟೇ ಸಂಚರಿಸಬೇಕು.</p>.<p>‘ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಬಿಸಿಲೆ ಘಾಟ್ನಲ್ಲಿ ಸಾಮಾನ್ಯ ದಿನಗಳಲ್ಲೇ ಸಂಚಾರ ಕಷ್ಟ. ಮಳೆ ಬಂದರಂತೂ ಸಂಚಾರ ಕಡುಕಷ್ಟ. ಚಾರ್ಮಾಡಿ ಘಾಟ್ಗಿಂತಲೂ ಇದು ಕಿರಿದಾದ ಮತ್ತು ಇಕ್ಕಟ್ಟಾದ ಮಾರ್ಗ. ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯ. ಕಾಡು ಪ್ರಾಣಿಗಳು ಕೂಡ ಕಾಣುತ್ತವೆ’ ಎನ್ನುತ್ತಾರೆ ಚಾಲಕರು.</p>.<p>ಬೆಂಗಳೂರಿನಿಂದ ಮಂಗಳೂರು ಬಂದರಿಗೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು, ಗ್ಯಾಸ್ ಟ್ಯಾಂಕರ್ಗಳು, ಪ್ರಯಾಣಿಕ ಬಸ್ಗಳು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವ ಭಕ್ತರದ್ದೂ ಸೇರಿ ಶಿರಾಡಿ ಘಾಟ್ ರಸ್ತೆಯಲ್ಲಿ ನಿತ್ಯ 35ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ.</p>.<h3>ಶಿರಾಡಿ ಬಂದ್–ಸ್ವಯಂಕೃತ ಅಪರಾಧ: </h3><p>ಬೆಂಗಳೂರಿನಿಂದ ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ನ ಸಕಲೇಶಪುರ–ಮಾರನಹಳ್ಳಿವರೆಗಿನ 10 ಕಿ.ಮೀ. ರಸ್ತೆಯೇ ಅಪಾಯಕಾರಿಯಾಗಿ ಪರಿಣಮಿಸಿದೆ. ಇದುವರೆಗೆ ದೋಣಿಗಲ್ನಲ್ಲಿ ಸಂಭವಿಸುತ್ತಿದ್ದ ಭೂಕುಸಿತ, ಈ ವರ್ಷ ದೊಡ್ಡತಪ್ಪಲೆಯಲ್ಲಿ ಕಾಣಿಸಿಕೊಂಡಿದೆ.</p>.<p>ಹಾಸನದಿಂದ–ಮಾರನಹಳ್ಳಿವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದ ನಂತರವೇ ಭೂಕುಸಿತ ಆರಂಭವಾಗಿದ್ದು, ಪ್ರತಿ ಬಾರಿ ಮಳೆಗಾಲದಲ್ಲಿ ವಾಹನ ಸಂಚಾರ ನಿರ್ಬಂಧಿಸುವುದು ಅನಿವಾರ್ಯವಾಗುತ್ತಿದೆ.</p>.<div><blockquote>ಶಿರಾಡಿ ಘಾಟ್ನ ಸಕಲೇಶಪುರ–ಮಾರನಹಳ್ಳಿ ಮಧ್ಯೆ ಮಾತ್ರ ಭೂಕುಸಿದ ಉಂಟಾಗುತ್ತಿದೆ. ಸಮಸ್ಯೆ ಸರಿಪಡಿಸಲು ಸೂಚಿಸಲಾಗಿದೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲು ಬಿಡುವುದಿಲ್ಲ</blockquote><span class="attribution">- ಸಿಮೆಂಟ್ ಮಂಜುನಾಥ ಶಾಸಕ</span></div>.<p>‘ವಿಶೇಷ ಕಾಳಜಿ ಅಗತ್ಯ’ ‘ಸಕಲೇಶಪುರ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುವುದರಿಂದ ವಿಶೇಷ ಕಾಳಜಿಯಿಂದ ಅಭಿವೃದ್ಧಿ ಕಾರ್ಯ ನಡೆಸಬೇಕು. ಗುಣಮಟ್ಟ ಕಾಪಾಡಬೇಕು. ಆದರೆ ಅಧಿಕಾರಿಗಳು ರಾಜಕಾರಣಿಗಳು ಎಂಜಿನಿಯರ್ಗಳಿಗೆ ಇದು ತಿಳಿಯದೆ ಕಾಮಗಾರಿಗಳು ನೀರಿನಲ್ಲಿ ತೊಳೆದು ಹೋಗುತ್ತಿರುವುದು ವಿಪರ್ಯಾಸ’ ಎಂದು ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಆರ್. ಮಂಜುನಾಥ್ ವಿಷಾದಿಸುತ್ತಾರೆ. ‘ಇದು ಎಲ್ಲರಿಗೂ ಕಾಣಿಸುವ ಸತ್ಯ. ಯಾರಿಗೂ ಬೇಕಾಗಿಲ್ಲ ಅಷ್ಟೇ. ಸರ್ಕಾರದ ಹಣ ನಮ್ಮದೇ. ಇಷ್ಟೊಂದು ಕಳಪೆ ಇಷ್ಟೊಂದು ನಿರ್ಲಕ್ಷ್ಯದ ಕಾಮಗಾರಿ ಕರ್ನಾಟಕದಲ್ಲಿ ಎಲ್ಲಿಯೂ ನಡೆದಿಲ್ಲ. ಇದು ನಾಚಿಕೆಗೇಡಿನ ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಪ್ರತಿ ಬಾರಿ ಮಳೆಗಾಲದಲ್ಲಿ ಶಿರಾಡಿ ಘಾಟ್ನ ರಸ್ತೆ ಕುಸಿಯುವುದು ಸಾಮಾನ್ಯವಾಗುತ್ತಿದ್ದು, ವಾಹನಗಳ ಸಂಚಾರ ನಿಷೇಧಿಸಲಾಗುತ್ತಿದೆ. ಇದರಿಂದ ಘಟ್ಟದ ಮೇಲಿನ ಜನ ಕರಾವಳಿಯ ಜೊತೆಗೆ ಸಂಪರ್ಕ ಕಡಿದುಕೊಳ್ಳುವಂತಾಗಿದೆ.</p>.<p>ಹೆದ್ದಾರಿ ಕಾಮಗಾರಿಗಾಗಿ ಬೆಟ್ಟಗಳನ್ನು 90 ಡಿಗ್ರಿಯಲ್ಲಿ ಕತ್ತರಿಸಿರುವುದು ಹಾಗೂ ಗೇಬಿಯನ್ ವಾಲ್ (ತಂತಿಯಲ್ಲಿ ಕಲ್ಲುಗಳನ್ನು ಜೋಡಿಸಿ ಗೋಡೆ ನಿರ್ಮಿಸುವುದು) ನಿರ್ಮಿಸಿ, ಅದಕ್ಕೆ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಿರುವುದೇ ರಸ್ತೆ ಹಾಗೂ ಬೆಟ್ಟಗಳು ಕುಸಿಯಲು ಕಾರಣ ಎಂದು ಸ್ಥಳೀಯರು ನಿರಂತರವಾಗಿ ಆರೋಪಿಸುತ್ತಲೇ ಬಂದಿದ್ದಾರೆ.</p>.<p>ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸಲು ಪ್ರಮುಖ ಮೂರು ಹೆದ್ದಾರಿಗಳಿವೆ. ಮಳೆಗಾಲದಲ್ಲಿ ಸಂಪಾಜೆ ಹಾಗೂ ಶಿರಾಡಿ ಘಾಟ್ನಲ್ಲಿ ಸಂಚಾರ ಸ್ಥಗಿತವಾಗುತ್ತದೆ. ಉಳಿದ ಏಕೈಕ ಮಾರ್ಗ ಚಾರ್ಮಾಡಿಯಲ್ಲಿ ಭಾರಿ ವಾಹನಗಳು ಸಂಚರಿಸುವಂತಿಲ್ಲ. ಜತೆಗೆ, 30–40 ಕಿ.ಮೀ. ವೇಗದಲ್ಲಷ್ಟೇ ಸಂಚರಿಸಬೇಕು.</p>.<p>‘ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಬಿಸಿಲೆ ಘಾಟ್ನಲ್ಲಿ ಸಾಮಾನ್ಯ ದಿನಗಳಲ್ಲೇ ಸಂಚಾರ ಕಷ್ಟ. ಮಳೆ ಬಂದರಂತೂ ಸಂಚಾರ ಕಡುಕಷ್ಟ. ಚಾರ್ಮಾಡಿ ಘಾಟ್ಗಿಂತಲೂ ಇದು ಕಿರಿದಾದ ಮತ್ತು ಇಕ್ಕಟ್ಟಾದ ಮಾರ್ಗ. ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯ. ಕಾಡು ಪ್ರಾಣಿಗಳು ಕೂಡ ಕಾಣುತ್ತವೆ’ ಎನ್ನುತ್ತಾರೆ ಚಾಲಕರು.</p>.<p>ಬೆಂಗಳೂರಿನಿಂದ ಮಂಗಳೂರು ಬಂದರಿಗೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು, ಗ್ಯಾಸ್ ಟ್ಯಾಂಕರ್ಗಳು, ಪ್ರಯಾಣಿಕ ಬಸ್ಗಳು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವ ಭಕ್ತರದ್ದೂ ಸೇರಿ ಶಿರಾಡಿ ಘಾಟ್ ರಸ್ತೆಯಲ್ಲಿ ನಿತ್ಯ 35ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ.</p>.<h3>ಶಿರಾಡಿ ಬಂದ್–ಸ್ವಯಂಕೃತ ಅಪರಾಧ: </h3><p>ಬೆಂಗಳೂರಿನಿಂದ ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ನ ಸಕಲೇಶಪುರ–ಮಾರನಹಳ್ಳಿವರೆಗಿನ 10 ಕಿ.ಮೀ. ರಸ್ತೆಯೇ ಅಪಾಯಕಾರಿಯಾಗಿ ಪರಿಣಮಿಸಿದೆ. ಇದುವರೆಗೆ ದೋಣಿಗಲ್ನಲ್ಲಿ ಸಂಭವಿಸುತ್ತಿದ್ದ ಭೂಕುಸಿತ, ಈ ವರ್ಷ ದೊಡ್ಡತಪ್ಪಲೆಯಲ್ಲಿ ಕಾಣಿಸಿಕೊಂಡಿದೆ.</p>.<p>ಹಾಸನದಿಂದ–ಮಾರನಹಳ್ಳಿವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದ ನಂತರವೇ ಭೂಕುಸಿತ ಆರಂಭವಾಗಿದ್ದು, ಪ್ರತಿ ಬಾರಿ ಮಳೆಗಾಲದಲ್ಲಿ ವಾಹನ ಸಂಚಾರ ನಿರ್ಬಂಧಿಸುವುದು ಅನಿವಾರ್ಯವಾಗುತ್ತಿದೆ.</p>.<div><blockquote>ಶಿರಾಡಿ ಘಾಟ್ನ ಸಕಲೇಶಪುರ–ಮಾರನಹಳ್ಳಿ ಮಧ್ಯೆ ಮಾತ್ರ ಭೂಕುಸಿದ ಉಂಟಾಗುತ್ತಿದೆ. ಸಮಸ್ಯೆ ಸರಿಪಡಿಸಲು ಸೂಚಿಸಲಾಗಿದೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲು ಬಿಡುವುದಿಲ್ಲ</blockquote><span class="attribution">- ಸಿಮೆಂಟ್ ಮಂಜುನಾಥ ಶಾಸಕ</span></div>.<p>‘ವಿಶೇಷ ಕಾಳಜಿ ಅಗತ್ಯ’ ‘ಸಕಲೇಶಪುರ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುವುದರಿಂದ ವಿಶೇಷ ಕಾಳಜಿಯಿಂದ ಅಭಿವೃದ್ಧಿ ಕಾರ್ಯ ನಡೆಸಬೇಕು. ಗುಣಮಟ್ಟ ಕಾಪಾಡಬೇಕು. ಆದರೆ ಅಧಿಕಾರಿಗಳು ರಾಜಕಾರಣಿಗಳು ಎಂಜಿನಿಯರ್ಗಳಿಗೆ ಇದು ತಿಳಿಯದೆ ಕಾಮಗಾರಿಗಳು ನೀರಿನಲ್ಲಿ ತೊಳೆದು ಹೋಗುತ್ತಿರುವುದು ವಿಪರ್ಯಾಸ’ ಎಂದು ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಆರ್. ಮಂಜುನಾಥ್ ವಿಷಾದಿಸುತ್ತಾರೆ. ‘ಇದು ಎಲ್ಲರಿಗೂ ಕಾಣಿಸುವ ಸತ್ಯ. ಯಾರಿಗೂ ಬೇಕಾಗಿಲ್ಲ ಅಷ್ಟೇ. ಸರ್ಕಾರದ ಹಣ ನಮ್ಮದೇ. ಇಷ್ಟೊಂದು ಕಳಪೆ ಇಷ್ಟೊಂದು ನಿರ್ಲಕ್ಷ್ಯದ ಕಾಮಗಾರಿ ಕರ್ನಾಟಕದಲ್ಲಿ ಎಲ್ಲಿಯೂ ನಡೆದಿಲ್ಲ. ಇದು ನಾಚಿಕೆಗೇಡಿನ ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>