<p><strong>ಚನ್ನರಾಯಪಟ್ಟಣ</strong>: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಮೇಲಿದ್ದ ನಿರೀಕ್ಷೆ, ವಿಶ್ವಾಸ ಹುಸಿಯಾಗತೊಡಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಎಚ್.ಎನ್.ಲೋಕೇಶ್ ದೂರಿದರು.</p>.<p>ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ಮಾಡುತ್ತಾರೆಂದು ನಂಬಿದ್ದೆವು. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಪ್ರೋತ್ಸಾಹವೂ ನೀಡುತ್ತಿಲ್ಲ. ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳಿಗೆ ಇದುವರೆಗೂ ಗುರುತಿನ ಪತ್ರ ನೀಡದೆ ತಾತ್ಸಾರ ಮನೋಭಾವ ತಾಳಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ತಾಲ್ಲೂಕು ಘಟಕಗಳ ಕಾರ್ಯಕ್ರಮಕ್ಕೆ ₹25ಸಾವಿರ ಅನುದಾನ ನೀಡಬೇಕು. ಆದರೆ ಮೂರು ವರ್ಷದಿಂದ ಅನುದಾನ ಬಿಡುಗಡೆ ಮಾಡಿಲ್ಲ. ಹಾವೇರಿಯಲ್ಲಿ ನಡೆದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿಶೇಷ ಆಹ್ವಾನಿತರಿಗೆ ದಿನಭತ್ಯೆ, ಸಾರಿಗೆ ಭತ್ಯೆ ನೀಡಲು ಸಾಧ್ಯವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 560 ಮಂದಿ ಆನ್ಲೈನ್ ಮೂಲಕ ಪರಿಷತ್ತಿಗೆ ಹಣ ಪಾವತಿಸಿ ಅಜೀವ ಸದಸ್ಯರಾಗಿದ್ದಾರೆ. ಇದುವರೆಗೆ ಕೇವಲ 150 ಮಂದಿಗೆ ಮಾತ್ರ ಗುರುತಿನ ಪತ್ರ ಬಂದಿದೆ. ಉಳಿದವರಿಗೆ ಬಂದಿಲ್ಲ. ಸಾಹಿತ್ಯಾಸಕ್ತರಿಗೆ ಉತ್ತರ ಹೇಳಲಾಗುತ್ತಿಲ್ಲ. ವಿಳಂಬಕ್ಕೆ ಕಾರಣ ಗೊತ್ತಾಗುತ್ತಿಲ್ಲ. ತಾಲ್ಲೂಕು, ಹೋಬಳಿ ಸಮ್ಮೇಳನಗಳಿಗೆ ಆಹ್ವಾನಿಸಿದರೂ ರಾಜ್ಯಾಧ್ಯಕ್ಷರು ಬರುತ್ತಿಲ್ಲ’ ಎಂದು ಕಿಡಿಕಾರಿದರು.</p>.<p>‘ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೇ ಗ್ರಾಮೀಣ ಮಟ್ಟದಲ್ಲಿ ನಡೆಯವ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿಯೂ ರಾಜ್ಯಾದ್ಯಕ್ಷರು ತೊಡಗಿಸಿಕೊಳ್ಳಬೇಕು’ ಎಂದು ಕಸಬಾ ಹೋಬಳಿ ಘಟಕದ ಅದ್ಯಕ್ಷ ಎಸ್.ಪಿ.ದಯಾನಂದ್ ಹೇಳಿದರು.</p>.<p>ಪರಿಷತ್ತು ಗೌರವಾದ್ಯಕ್ಷ ಕುಂಬಾರಹಳ್ಳಿ ರಮೇಶ್, ಕಾರ್ಯದರ್ಶಿ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಜಭಿವುಲ್ಲಾ ಬೇಗ್, ಸದಸ್ಯೆ ಯಶೋದ ಜೈನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ</strong>: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಮೇಲಿದ್ದ ನಿರೀಕ್ಷೆ, ವಿಶ್ವಾಸ ಹುಸಿಯಾಗತೊಡಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಎಚ್.ಎನ್.ಲೋಕೇಶ್ ದೂರಿದರು.</p>.<p>ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ಮಾಡುತ್ತಾರೆಂದು ನಂಬಿದ್ದೆವು. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಪ್ರೋತ್ಸಾಹವೂ ನೀಡುತ್ತಿಲ್ಲ. ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳಿಗೆ ಇದುವರೆಗೂ ಗುರುತಿನ ಪತ್ರ ನೀಡದೆ ತಾತ್ಸಾರ ಮನೋಭಾವ ತಾಳಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ತಾಲ್ಲೂಕು ಘಟಕಗಳ ಕಾರ್ಯಕ್ರಮಕ್ಕೆ ₹25ಸಾವಿರ ಅನುದಾನ ನೀಡಬೇಕು. ಆದರೆ ಮೂರು ವರ್ಷದಿಂದ ಅನುದಾನ ಬಿಡುಗಡೆ ಮಾಡಿಲ್ಲ. ಹಾವೇರಿಯಲ್ಲಿ ನಡೆದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿಶೇಷ ಆಹ್ವಾನಿತರಿಗೆ ದಿನಭತ್ಯೆ, ಸಾರಿಗೆ ಭತ್ಯೆ ನೀಡಲು ಸಾಧ್ಯವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 560 ಮಂದಿ ಆನ್ಲೈನ್ ಮೂಲಕ ಪರಿಷತ್ತಿಗೆ ಹಣ ಪಾವತಿಸಿ ಅಜೀವ ಸದಸ್ಯರಾಗಿದ್ದಾರೆ. ಇದುವರೆಗೆ ಕೇವಲ 150 ಮಂದಿಗೆ ಮಾತ್ರ ಗುರುತಿನ ಪತ್ರ ಬಂದಿದೆ. ಉಳಿದವರಿಗೆ ಬಂದಿಲ್ಲ. ಸಾಹಿತ್ಯಾಸಕ್ತರಿಗೆ ಉತ್ತರ ಹೇಳಲಾಗುತ್ತಿಲ್ಲ. ವಿಳಂಬಕ್ಕೆ ಕಾರಣ ಗೊತ್ತಾಗುತ್ತಿಲ್ಲ. ತಾಲ್ಲೂಕು, ಹೋಬಳಿ ಸಮ್ಮೇಳನಗಳಿಗೆ ಆಹ್ವಾನಿಸಿದರೂ ರಾಜ್ಯಾಧ್ಯಕ್ಷರು ಬರುತ್ತಿಲ್ಲ’ ಎಂದು ಕಿಡಿಕಾರಿದರು.</p>.<p>‘ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೇ ಗ್ರಾಮೀಣ ಮಟ್ಟದಲ್ಲಿ ನಡೆಯವ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿಯೂ ರಾಜ್ಯಾದ್ಯಕ್ಷರು ತೊಡಗಿಸಿಕೊಳ್ಳಬೇಕು’ ಎಂದು ಕಸಬಾ ಹೋಬಳಿ ಘಟಕದ ಅದ್ಯಕ್ಷ ಎಸ್.ಪಿ.ದಯಾನಂದ್ ಹೇಳಿದರು.</p>.<p>ಪರಿಷತ್ತು ಗೌರವಾದ್ಯಕ್ಷ ಕುಂಬಾರಹಳ್ಳಿ ರಮೇಶ್, ಕಾರ್ಯದರ್ಶಿ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಜಭಿವುಲ್ಲಾ ಬೇಗ್, ಸದಸ್ಯೆ ಯಶೋದ ಜೈನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>