<p><strong>ಸಕಲೇಶಪುರ</strong>: ತಾಲ್ಲೂಕಿನಲ್ಲಿ ಬಿಡುವಿಲ್ಲದೇ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು, ಹಳ್ಳಕೊಳ್ಳಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಗುಡ್ಡ ಕುಸಿತ, ತಡೆಗೋಡೆಗಳ ಕುಸಿತ, ಸಂಚಾರ ಸ್ಥಗಿತ, ವಿದ್ಯುತ್ ಕಡಿತದಂತಹ ಹತ್ತಾರು ಸಮಸ್ಯೆಗಳಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ.</p>.<p>ಪಶ್ಚಿಮಘಟ್ಟದ ಮಲೆನಾಡಿನ ಈ ತಾಲ್ಲೂಕಿನಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ. ಇದರಿಂದ ಈ ಭಾಗದ ಜನರ ಜೀವನಾಧಾರ ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆ ಹಾನಿ, ಆರ್ಥಿಕ ನಷ್ಟ ಅನುಭವಿಸಿಕೊಂಡೇ ಬರುತ್ತಿದ್ದಾರೆ. ಪರ್ಯಾಯವಾಗಿ ಹಸಿರು ಹೊದ್ದ ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ಝರಿ ಜಲಪಾತದ ನಿಸರ್ಗದ ನಯನ ಮನೋಹರ ದೃಶ್ಯಗಳು ಪರಿಸರ ಪ್ರವಾಸಿಗರನ್ನು ಆಕರ್ಷಿಸಿವೆ.</p>.<p>ಪ್ರಕೃತಿ ಪರಿಸರವನ್ನು ಅವಲಂಬಿಸಿಕೊಂಡು ಪ್ರವಾಸೋದ್ಯಮ ಇಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ, ತಾಲ್ಲೂಕಿನ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಆಗುತ್ತಿದೆ. 50ಕ್ಕೂ ಹೆಚ್ಚು ರೆಸಾರ್ಟ್ಗಳು, 300ಕ್ಕೂ ಹೆಚ್ಚು ಹೋಂ ಸ್ಟೇಗಳು, ರಸ್ತೆ ಬದಿಗಳಲ್ಲಿ ಟೀ ಅಂಗಡಿ, ಮಲೆನಾಡಿನ ಅಕ್ಕಿ ರೊಟ್ಟಿ ಹೋಟೆಲ್ಗಳು, ಲಾಡ್ಜ್ಗಳು, ಸಾಂಬಾರ್ ಪದಾರ್ಥಗಳ ವ್ಯಾಪಾರ, ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಈ ವ್ಯವಹಾರದಿಂದ ಸಾವಿರಾರು ಕುಟುಂಬಗಳು ಬದುಕು ಕಂಡುಕೊಂಡಿವೆ.</p>.<p>ಜುಲೈ ಮೊದಲ ವಾರದಿಂದ ಮಲೆನಾಡಿನಾದ್ಯಂತ ಒಂದು ದಿನವೂ ಬಿಡುವು ನೀಡದಂತೆ ಬೀಸುತ್ತಿರುವ ಬಿರುಗಾಳಿ, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ತಾಲ್ಲೂಕಿನಲ್ಲಿಯೇ ಸುಮಾರು 50 ಕಿ.ಮೀ. ಹಾದು ಹೋಗಿದ್ದು, ಈ ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿತ, ತಡೆಗೋಡೆಗಳ ಕುಸಿತದಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 60ರಷ್ಟು ಕಡಿಮೆಯಾಗಿದೆ ಎಂದು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಹೇಳುತ್ತಾರೆ.</p>.<p>ತಾಲ್ಲೂಕಿನಲ್ಲಿ ಇರುವ ಪ್ರವಾಸಿ ತಾಣಗಳೆಂದರೆ, ಗುಡ್ಡಬೆಟ್ಟಗಳು, ಝರಿ, ಜಲಪಾತಗಳು. ಭಾರಿ ಗಾಳಿ– ಮಳೆ ಇರುವುದರಿಂದ ಬೆಟ್ಟ ಹತ್ತುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಝರಿಗಳಲ್ಲಿ ನೀರಿನ ಹರಿವು ಹೆಚ್ಚು ಇರುವುದರಿಂದ ಅಪಾಯಕಾರಿ. ಮಗಜಹಳ್ಳಿ, ಅಬ್ಬಿ ಜಲಪಾತಗಳಿಗೆ ಹೋಗುವ ಮಾರ್ಗ ಕೂಡ ಸುರಕ್ಷಿತವಾಗಿಲ್ಲ. ಹೀಗಾಗಿ ಅಲ್ಲಿಗೆ ಹೋಗಲು ನಿರ್ಬಂಧ ವಿಧಿಸಲಾಗಿದೆ.</p>.<p><strong>ತಿಂಗಳಿಂದ ಪ್ರವಾಸಿಗರೇ ಇಲ್ಲ </strong></p><p>‘ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ರೆಸಾರ್ಟ್ಗಳಿವೆ. ಪ್ರತಿಯೊಂದು ರೆಸಾರ್ಟ್ನಲ್ಲಿಯೂ ಅಡುಗೆಯವರು ಸೇರಿದಂತೆ ಕನಿಷ್ಠ 20ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಒಂದು ತಿಂಗಳು ವ್ಯವಹಾರವೇ ನಡೆಯದಿದ್ದರೆ ರೆಸಾರ್ಟ್ ನಡೆಸುವ ನಮಗೂ ಆರ್ಥಿಕ ಹೊರೆ ಬೀಳುತ್ತದೆ’ ಎಂದು ರೆಸಾರ್ಟ್ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಸ್ತಾರೆ ಲೋಕೇಶ್ ಹೇಳಿದರು. </p><p>‘ಮಲೆನಾಡಿನ ನಮ್ಮ ಜಮೀನುಗಳಲ್ಲಿ ಹೋಂ ಸ್ಟೇ ರೆಸಾರ್ಟ್ ಮಾಡಿಕೊಂಡಿರುತ್ತೇವೆ. ಅಲ್ಲಿಗೆ ಸರಿಯಾದ ರಸ್ತೆಗಳಿಲ್ಲ. ಬೇಸಿಗೆಯಲ್ಲಿ ಹೇಗೋ ವಾಹನಗಳು ಓಡಾಡುತ್ತವೆ. ಈ ವರ್ಷದ ಮಳೆಯಲ್ಲಂತೂ ನಡೆದುಕೊಂಡು ಹೋಗಿ ಬರುವುದೇ ಒಂದು ಸಾಹಸ. ಈ ಎಲ್ಲ ಕಾರಣಗಳಿಂದಾಗಿ ಒಂದು ತಿಂಗಳಿಂದ ಕೆಲವು ರೆಸಾರ್ಟ್ಗಳಿಗೆ ಒಬ್ಬ ಪ್ರವಾಸಿಗ ಸಹ ಬಂದಿಲ್ಲ’ ಎಂದು ತಿಳಿಸಿದರು.</p><p> ‘ಹಿಂದೆ ಎಷ್ಟೇ ಮಳೆ ಇದ್ದರೂ ಭಯ ಇರಲಿಲ್ಲ. ಇದೀಗ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಮರಗಳನ್ನು ಕಡಿದಿರುವುದರಿಂದ ರಸ್ತೆಗಳ ಮೇಲೆ ಗುಡ್ಡವೇ ಕುಸಿಯುತ್ತಿದೆ. ಸಂಚಾರ ಬಂದ್ ಆಗಿ ಜನ ಭಯ ಪಡುವಂತಾಗಿದೆ. ತಾಲ್ಲೂಕಿಗೆ ಬರಲು ಪ್ರವಾಸಿಗರೂ ಯೋಚನೆ ಮಾಡುತ್ತಾರೆ’ ಎಂದರು.</p>.<div><blockquote>ಹೋಂ ಸ್ಟೇಗೆ ಬುಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಮಳೆ ಕಡಿಮೆ ಆಗುವವರೆಗೆ ಬರಬೇಡಿ ಎಂದು ನಾವೇ ಹೇಳುತ್ತಿದ್ದೇವೆ. ಆದಾಯ ಕಡಿಮೆ ಆಗಬಹುದು. ಆದರೆ ಪ್ರವಾಸಿಗರ ಸುರಕ್ಷತೆಯೂ ಮುಖ್ಯ. </blockquote><span class="attribution">ಕೆ.ಎಸ್. ಕುಮಾರಸ್ವಾಮಿ, ಹೋಂ ಸ್ಟೇ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ</span></div>.<div><blockquote>ತಿಂಗಳಿಂದ ಪ್ರವಾಸಿಗರು ಬರುತ್ತಿಲ್ಲ. ಕಾರುಗಳಿಗೆ ಬಾಡಿಗೆಯೂ ಇಲ್ಲ. 2 ವರ್ಷಗಳಲ್ಲಿ ಒಂದು ದಿನವೂ ಬಾಡಿಗೆ ಇಲ್ಲದೇ ಕಾರುಗಳು ನಿಂತಿರಲಿಲ್ಲ. ನಮಗೆ ಅಪಾರ ನಷ್ಟ ಉಂಟಾಗಿದೆ.</blockquote><span class="attribution"> ರಮೇಶ್, ಕಾರು ಮಾಲೀಕರ–ಚಾಲಕರ ಸಂಘದ ಮಾಜಿ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ</strong>: ತಾಲ್ಲೂಕಿನಲ್ಲಿ ಬಿಡುವಿಲ್ಲದೇ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು, ಹಳ್ಳಕೊಳ್ಳಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಗುಡ್ಡ ಕುಸಿತ, ತಡೆಗೋಡೆಗಳ ಕುಸಿತ, ಸಂಚಾರ ಸ್ಥಗಿತ, ವಿದ್ಯುತ್ ಕಡಿತದಂತಹ ಹತ್ತಾರು ಸಮಸ್ಯೆಗಳಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ.</p>.<p>ಪಶ್ಚಿಮಘಟ್ಟದ ಮಲೆನಾಡಿನ ಈ ತಾಲ್ಲೂಕಿನಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ. ಇದರಿಂದ ಈ ಭಾಗದ ಜನರ ಜೀವನಾಧಾರ ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆ ಹಾನಿ, ಆರ್ಥಿಕ ನಷ್ಟ ಅನುಭವಿಸಿಕೊಂಡೇ ಬರುತ್ತಿದ್ದಾರೆ. ಪರ್ಯಾಯವಾಗಿ ಹಸಿರು ಹೊದ್ದ ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ಝರಿ ಜಲಪಾತದ ನಿಸರ್ಗದ ನಯನ ಮನೋಹರ ದೃಶ್ಯಗಳು ಪರಿಸರ ಪ್ರವಾಸಿಗರನ್ನು ಆಕರ್ಷಿಸಿವೆ.</p>.<p>ಪ್ರಕೃತಿ ಪರಿಸರವನ್ನು ಅವಲಂಬಿಸಿಕೊಂಡು ಪ್ರವಾಸೋದ್ಯಮ ಇಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ, ತಾಲ್ಲೂಕಿನ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಆಗುತ್ತಿದೆ. 50ಕ್ಕೂ ಹೆಚ್ಚು ರೆಸಾರ್ಟ್ಗಳು, 300ಕ್ಕೂ ಹೆಚ್ಚು ಹೋಂ ಸ್ಟೇಗಳು, ರಸ್ತೆ ಬದಿಗಳಲ್ಲಿ ಟೀ ಅಂಗಡಿ, ಮಲೆನಾಡಿನ ಅಕ್ಕಿ ರೊಟ್ಟಿ ಹೋಟೆಲ್ಗಳು, ಲಾಡ್ಜ್ಗಳು, ಸಾಂಬಾರ್ ಪದಾರ್ಥಗಳ ವ್ಯಾಪಾರ, ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಈ ವ್ಯವಹಾರದಿಂದ ಸಾವಿರಾರು ಕುಟುಂಬಗಳು ಬದುಕು ಕಂಡುಕೊಂಡಿವೆ.</p>.<p>ಜುಲೈ ಮೊದಲ ವಾರದಿಂದ ಮಲೆನಾಡಿನಾದ್ಯಂತ ಒಂದು ದಿನವೂ ಬಿಡುವು ನೀಡದಂತೆ ಬೀಸುತ್ತಿರುವ ಬಿರುಗಾಳಿ, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.</p>.<p>ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ತಾಲ್ಲೂಕಿನಲ್ಲಿಯೇ ಸುಮಾರು 50 ಕಿ.ಮೀ. ಹಾದು ಹೋಗಿದ್ದು, ಈ ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿತ, ತಡೆಗೋಡೆಗಳ ಕುಸಿತದಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 60ರಷ್ಟು ಕಡಿಮೆಯಾಗಿದೆ ಎಂದು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಹೇಳುತ್ತಾರೆ.</p>.<p>ತಾಲ್ಲೂಕಿನಲ್ಲಿ ಇರುವ ಪ್ರವಾಸಿ ತಾಣಗಳೆಂದರೆ, ಗುಡ್ಡಬೆಟ್ಟಗಳು, ಝರಿ, ಜಲಪಾತಗಳು. ಭಾರಿ ಗಾಳಿ– ಮಳೆ ಇರುವುದರಿಂದ ಬೆಟ್ಟ ಹತ್ತುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಝರಿಗಳಲ್ಲಿ ನೀರಿನ ಹರಿವು ಹೆಚ್ಚು ಇರುವುದರಿಂದ ಅಪಾಯಕಾರಿ. ಮಗಜಹಳ್ಳಿ, ಅಬ್ಬಿ ಜಲಪಾತಗಳಿಗೆ ಹೋಗುವ ಮಾರ್ಗ ಕೂಡ ಸುರಕ್ಷಿತವಾಗಿಲ್ಲ. ಹೀಗಾಗಿ ಅಲ್ಲಿಗೆ ಹೋಗಲು ನಿರ್ಬಂಧ ವಿಧಿಸಲಾಗಿದೆ.</p>.<p><strong>ತಿಂಗಳಿಂದ ಪ್ರವಾಸಿಗರೇ ಇಲ್ಲ </strong></p><p>‘ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ರೆಸಾರ್ಟ್ಗಳಿವೆ. ಪ್ರತಿಯೊಂದು ರೆಸಾರ್ಟ್ನಲ್ಲಿಯೂ ಅಡುಗೆಯವರು ಸೇರಿದಂತೆ ಕನಿಷ್ಠ 20ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಒಂದು ತಿಂಗಳು ವ್ಯವಹಾರವೇ ನಡೆಯದಿದ್ದರೆ ರೆಸಾರ್ಟ್ ನಡೆಸುವ ನಮಗೂ ಆರ್ಥಿಕ ಹೊರೆ ಬೀಳುತ್ತದೆ’ ಎಂದು ರೆಸಾರ್ಟ್ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಸ್ತಾರೆ ಲೋಕೇಶ್ ಹೇಳಿದರು. </p><p>‘ಮಲೆನಾಡಿನ ನಮ್ಮ ಜಮೀನುಗಳಲ್ಲಿ ಹೋಂ ಸ್ಟೇ ರೆಸಾರ್ಟ್ ಮಾಡಿಕೊಂಡಿರುತ್ತೇವೆ. ಅಲ್ಲಿಗೆ ಸರಿಯಾದ ರಸ್ತೆಗಳಿಲ್ಲ. ಬೇಸಿಗೆಯಲ್ಲಿ ಹೇಗೋ ವಾಹನಗಳು ಓಡಾಡುತ್ತವೆ. ಈ ವರ್ಷದ ಮಳೆಯಲ್ಲಂತೂ ನಡೆದುಕೊಂಡು ಹೋಗಿ ಬರುವುದೇ ಒಂದು ಸಾಹಸ. ಈ ಎಲ್ಲ ಕಾರಣಗಳಿಂದಾಗಿ ಒಂದು ತಿಂಗಳಿಂದ ಕೆಲವು ರೆಸಾರ್ಟ್ಗಳಿಗೆ ಒಬ್ಬ ಪ್ರವಾಸಿಗ ಸಹ ಬಂದಿಲ್ಲ’ ಎಂದು ತಿಳಿಸಿದರು.</p><p> ‘ಹಿಂದೆ ಎಷ್ಟೇ ಮಳೆ ಇದ್ದರೂ ಭಯ ಇರಲಿಲ್ಲ. ಇದೀಗ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಮರಗಳನ್ನು ಕಡಿದಿರುವುದರಿಂದ ರಸ್ತೆಗಳ ಮೇಲೆ ಗುಡ್ಡವೇ ಕುಸಿಯುತ್ತಿದೆ. ಸಂಚಾರ ಬಂದ್ ಆಗಿ ಜನ ಭಯ ಪಡುವಂತಾಗಿದೆ. ತಾಲ್ಲೂಕಿಗೆ ಬರಲು ಪ್ರವಾಸಿಗರೂ ಯೋಚನೆ ಮಾಡುತ್ತಾರೆ’ ಎಂದರು.</p>.<div><blockquote>ಹೋಂ ಸ್ಟೇಗೆ ಬುಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಮಳೆ ಕಡಿಮೆ ಆಗುವವರೆಗೆ ಬರಬೇಡಿ ಎಂದು ನಾವೇ ಹೇಳುತ್ತಿದ್ದೇವೆ. ಆದಾಯ ಕಡಿಮೆ ಆಗಬಹುದು. ಆದರೆ ಪ್ರವಾಸಿಗರ ಸುರಕ್ಷತೆಯೂ ಮುಖ್ಯ. </blockquote><span class="attribution">ಕೆ.ಎಸ್. ಕುಮಾರಸ್ವಾಮಿ, ಹೋಂ ಸ್ಟೇ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ</span></div>.<div><blockquote>ತಿಂಗಳಿಂದ ಪ್ರವಾಸಿಗರು ಬರುತ್ತಿಲ್ಲ. ಕಾರುಗಳಿಗೆ ಬಾಡಿಗೆಯೂ ಇಲ್ಲ. 2 ವರ್ಷಗಳಲ್ಲಿ ಒಂದು ದಿನವೂ ಬಾಡಿಗೆ ಇಲ್ಲದೇ ಕಾರುಗಳು ನಿಂತಿರಲಿಲ್ಲ. ನಮಗೆ ಅಪಾರ ನಷ್ಟ ಉಂಟಾಗಿದೆ.</blockquote><span class="attribution"> ರಮೇಶ್, ಕಾರು ಮಾಲೀಕರ–ಚಾಲಕರ ಸಂಘದ ಮಾಜಿ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>