ನೊಂದ ರೈತರ ಕುಟುಂಬಗಳು ಹೈಕೋರ್ಟ್ ಮೊರೆಹೋಗಿದ್ದು, 2018ರಲ್ಲಿ ನ್ಯಾಯಾಲಯವು ಅಕ್ರಮ– ಸಕ್ರಮ ಸಮಿತಿ ಶಿಗ್ಗಾವಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಉಪತಹಶೀಲ್ದಾರ್ ದುಂಡಶಿ ಇವರಿಗೆ ನಿರ್ದೇಶನ ನೀಡಿ ಈ ಜಮೀನನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು 3 ವರ್ಷಗಳ ಹಿಂದೆ ಸೂಚಿಸಿದೆ. ಆದರೆ, ನ್ಯಾಯಾಲಯದ ನಿರ್ದೇಶನಕ್ಕೂ ಬೆಲೆ ಇಲ್ಲದಂತಾಗಿದೆ ಎಂದು ಸಮಸ್ಯೆ ತೋಡಿಕೊಂಡರು.