<p><strong>ವಾಡಿ</strong>: ರಾಷ್ಟ್ರೀಯ ಹೆದ್ದಾರಿ ಭಾಗವಾದ ಬಲರಾಮ ಚೌಕ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ₹ 150 ಕೋಟಿ ಅನುದಾನ ಮಂಜೂರಾಗಿದೆ.</p>.<p>ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು ರಾಜ್ಯ ಸರ್ಕಾರದ ಮನವಿ ಮೇರೆಗೆ ರಸ್ತೆ ಬಾಕಿ ಕಾಮಗಾರಿ ಮತ್ತು ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಿದ್ದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.</p>.<p>ಕಲಬುರಗಿಯಿಂದ ರಾಯಚೂರುವರೆಗೆ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದರೂ ಬಲರಾಮ ಚೌಕ್ ಹತ್ತಿರ 2 ಕಿಮೀ ಉದ್ದದ ಮೇಲ್ಸೇತುವೆ ಕೆಲಸ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತು ಜನರ ಸಂಕಷ್ಟ ಹೆಚ್ಚಿಸಿತ್ತು. ಹಲಕರ್ಟಿ ಕಡೆಗೆ 1 ಕಿಮೀ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಬಲರಾಮ ಚೌಕ್ನಿಂದ ರೈಲ್ವೆ ಸೇತುವೆ ಹಾಗೂ ಇನ್ನುಳಿದ 1 ಕಿಮೀ ಕೆಲಸ ಬಾಕಿ ಇದೆ. ಕಲಬುರಗಿಯಿಂದ ಬೆಂಗಳೂರಿಗೆ ಸರಳ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಗುತ್ತಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ನಿರ್ಮಾಣದಿಂದ ಕಲಬುರಗಿ– ಬೆಂಗಳೂರು ಅಂತರ ಗಣನೀಯವಾಗಿ ಕಡಿಮೆಗೊಳ್ಳಲಿದೆ ಎನ್ನುವ ಕಾರಣಕ್ಕಾಗಿ ಈ ರಸ್ತೆ ಮಹತ್ವ ಪಡೆದುಕೊಂಡಿದೆ. ₹ 75 ಕೋಟಿ ವೆಚ್ಚದಲ್ಲಿ 2019ರಲ್ಲಿ ರಸ್ತೆ ಕಾಮಗಾರಿ ಜೊತೆಗೆ ಮೇಲ್ಸೇತುವೆ ಕಾಮಗಾರಿ ಸಹ ಆರಂಭಿಸಲಾಯಿತು. ಎರಡು ಕಡೆ ಸರ್ವಿಸ್ ರಸ್ತೆ ಮಾಡಲಾಗಿದೆ. </p>.<p>3 ವರ್ಷದಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ನಿತ್ಯ ಓಡಾಡುವ ಪ್ರಯಾಣಿಕರು ಹಿಡಿಶಾಪ ಹಾಕುವಂತಾಗಿತ್ತು. ಹೆದ್ದಾರಿಗೆ ಅಡ್ಡವಾಗಿರುವ ರೈಲ್ವೆ ಹಳಿಗಳಿಂದ ಪ್ರತಿ ಅರ್ಧ ಗಂಟೆಗೊಂಮ್ಮೆ ಗೇಟ್ ಹಾಕಲಾಗುತ್ತಿದ್ದು ವಾಹನ ಸವಾರರ ಗೋಳಾಟಕ್ಕೆ ಕಾರಣವಾಗಿದೆ. ಒಮ್ಮೆ ಗೇಟ್ ಹಾಕಿದರೆ ಎರಡು ಕಡೆ ನೂರಾರು ವಾಹನಗಳು ನಿಂತು ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಅರ್ಧ ಗಂಟೆಗೂ ಅಧಿಕ ಸಮಯ ಇಲ್ಲಿ ವ್ಯಯವಾಗುತ್ತಿದ್ದು, ರೈಲ್ವೆ ಗೇಟ್ ಅಳವಡಿಕೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈಗ ಕಾಮಗಾರಿಗೆ ಹಣ ಮಂಜೂರು ಆಗಿದ್ದು ಬೇಗ ಆರಂಭಿಸಿ ಶೀಘ್ರ ಮುಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p> <strong>ಬಲರಾಮ ಚೌಕ್ನಲ್ಲಿ ಸ್ಥಗಿತಗೊಂಡಿದ್ದ ಮೇಲ್ಸೇತುವೆ ಕಾಮಗಾರಿಗೆ ₹150 ಕೋಟಿ ಅನುದಾನ ಮಂಜೂರಾಗಿದ್ದು ಖುಷಿ ವಿಚಾರವಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಿ ಮುಗಿಸಬೇಕು.</strong></p><p><strong>- ಶಂಕರ ಸಾಹುಕಾರ ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ</strong> </p>.<p><strong>ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಹಾಗೂ ಕಾಮಗಾರಿ ನಿಗದಿತ ಸಮಯದಲ್ಲಿ ಆರಂಭಗೊಂಡರೆ 2026ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ</strong></p><p><strong>- ಮಹ್ಮದ್ ಇಬ್ರಾಹಿಂ ಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ</strong>: ರಾಷ್ಟ್ರೀಯ ಹೆದ್ದಾರಿ ಭಾಗವಾದ ಬಲರಾಮ ಚೌಕ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ₹ 150 ಕೋಟಿ ಅನುದಾನ ಮಂಜೂರಾಗಿದೆ.</p>.<p>ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು ರಾಜ್ಯ ಸರ್ಕಾರದ ಮನವಿ ಮೇರೆಗೆ ರಸ್ತೆ ಬಾಕಿ ಕಾಮಗಾರಿ ಮತ್ತು ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಿದ್ದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.</p>.<p>ಕಲಬುರಗಿಯಿಂದ ರಾಯಚೂರುವರೆಗೆ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದರೂ ಬಲರಾಮ ಚೌಕ್ ಹತ್ತಿರ 2 ಕಿಮೀ ಉದ್ದದ ಮೇಲ್ಸೇತುವೆ ಕೆಲಸ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತು ಜನರ ಸಂಕಷ್ಟ ಹೆಚ್ಚಿಸಿತ್ತು. ಹಲಕರ್ಟಿ ಕಡೆಗೆ 1 ಕಿಮೀ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಬಲರಾಮ ಚೌಕ್ನಿಂದ ರೈಲ್ವೆ ಸೇತುವೆ ಹಾಗೂ ಇನ್ನುಳಿದ 1 ಕಿಮೀ ಕೆಲಸ ಬಾಕಿ ಇದೆ. ಕಲಬುರಗಿಯಿಂದ ಬೆಂಗಳೂರಿಗೆ ಸರಳ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಗುತ್ತಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ನಿರ್ಮಾಣದಿಂದ ಕಲಬುರಗಿ– ಬೆಂಗಳೂರು ಅಂತರ ಗಣನೀಯವಾಗಿ ಕಡಿಮೆಗೊಳ್ಳಲಿದೆ ಎನ್ನುವ ಕಾರಣಕ್ಕಾಗಿ ಈ ರಸ್ತೆ ಮಹತ್ವ ಪಡೆದುಕೊಂಡಿದೆ. ₹ 75 ಕೋಟಿ ವೆಚ್ಚದಲ್ಲಿ 2019ರಲ್ಲಿ ರಸ್ತೆ ಕಾಮಗಾರಿ ಜೊತೆಗೆ ಮೇಲ್ಸೇತುವೆ ಕಾಮಗಾರಿ ಸಹ ಆರಂಭಿಸಲಾಯಿತು. ಎರಡು ಕಡೆ ಸರ್ವಿಸ್ ರಸ್ತೆ ಮಾಡಲಾಗಿದೆ. </p>.<p>3 ವರ್ಷದಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ನಿತ್ಯ ಓಡಾಡುವ ಪ್ರಯಾಣಿಕರು ಹಿಡಿಶಾಪ ಹಾಕುವಂತಾಗಿತ್ತು. ಹೆದ್ದಾರಿಗೆ ಅಡ್ಡವಾಗಿರುವ ರೈಲ್ವೆ ಹಳಿಗಳಿಂದ ಪ್ರತಿ ಅರ್ಧ ಗಂಟೆಗೊಂಮ್ಮೆ ಗೇಟ್ ಹಾಕಲಾಗುತ್ತಿದ್ದು ವಾಹನ ಸವಾರರ ಗೋಳಾಟಕ್ಕೆ ಕಾರಣವಾಗಿದೆ. ಒಮ್ಮೆ ಗೇಟ್ ಹಾಕಿದರೆ ಎರಡು ಕಡೆ ನೂರಾರು ವಾಹನಗಳು ನಿಂತು ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಅರ್ಧ ಗಂಟೆಗೂ ಅಧಿಕ ಸಮಯ ಇಲ್ಲಿ ವ್ಯಯವಾಗುತ್ತಿದ್ದು, ರೈಲ್ವೆ ಗೇಟ್ ಅಳವಡಿಕೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈಗ ಕಾಮಗಾರಿಗೆ ಹಣ ಮಂಜೂರು ಆಗಿದ್ದು ಬೇಗ ಆರಂಭಿಸಿ ಶೀಘ್ರ ಮುಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p> <strong>ಬಲರಾಮ ಚೌಕ್ನಲ್ಲಿ ಸ್ಥಗಿತಗೊಂಡಿದ್ದ ಮೇಲ್ಸೇತುವೆ ಕಾಮಗಾರಿಗೆ ₹150 ಕೋಟಿ ಅನುದಾನ ಮಂಜೂರಾಗಿದ್ದು ಖುಷಿ ವಿಚಾರವಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಿ ಮುಗಿಸಬೇಕು.</strong></p><p><strong>- ಶಂಕರ ಸಾಹುಕಾರ ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ</strong> </p>.<p><strong>ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಹಾಗೂ ಕಾಮಗಾರಿ ನಿಗದಿತ ಸಮಯದಲ್ಲಿ ಆರಂಭಗೊಂಡರೆ 2026ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ</strong></p><p><strong>- ಮಹ್ಮದ್ ಇಬ್ರಾಹಿಂ ಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>