<p><strong>ಚಿಂಚೋಳಿ</strong>: ಪ್ರಮುಖ ಸಾಂಬಾರು ಪದಾರ್ಥ ಅಜವಾನ ಕೃಷಿಯಲ್ಲಿ ತೊಡಗಿರುವ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ ಪ್ರಗತಿಪರ ರೈತ ವಿಜಯಕುಮಾರ ಪಾಟೀಲ, ನಿರಂತರ ಹಾಗೂ ಉತ್ತಮ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ವಿಜಯಕುಮಾರ ಅವರು, ಒಂದೂವರೆ ದಶಕದಿಂದ ಪ್ರತಿವರ್ಷ ಅಜವಾನ ಕೃಷಿ ಮಾಡುತ್ತಿದ್ದಾರೆ. ಕ್ವಿಂಟಲ್ಗೆ ಕನಿಷ್ಠ ₹ 8 ಸಾವಿರದಿಂದ ₹ 17ಸಾವಿರದವರೆಗೆ ಉತ್ಪನ್ನ ಮಾರಾಟವಾಗುತ್ತದೆ. ಅಜವಾನವು, ಸಾಂಬಾರು ಪದಾರ್ಥ ಹಾಗೂ ಬೆಳೆಯುವವರ ಸಂಖ್ಯೆ ಕಡಿಮೆ ಇರುವುದರಿಂದ ಬೆಲೆ ಕುಸಿತದ ಭೀತಿಯೂ ಇಲ್ಲ. ಹೀಗಾಗಿ ಅವರು ನಿರಂತರವಾಗಿ ಲಾಭದಾಯಕ ಕೃಷಿಕರಾಗಿದ್ದಾರೆ.</p>.<p>ಪ್ರಸಕ್ತ ವರ್ಷ ಮೂರುವರೆ ಎಕರೆಯಲ್ಲಿ ಅಜವಾನ ಬೇಸಾಯ ನಡೆಸುತ್ತಿದ್ದು, ಎಕರೆಗೆ ಕನಿಷ್ಠ ₹ 15 ಸಾವಿರಕ್ಕೂ ಅಧಿಕ ಖರ್ಚು ಬಂದಿದೆ. ಹೊಲವನ್ನು ಹದಗೊಳಿಸಿ ಬೀಜ ತಂದು ಚೆಲ್ಲಿ ಕಳೆ ನಿಯಂತ್ರಣ ಹಾಗೂ ರೋಗರುಜಿನಗಳಿಂದ ಬೆಳೆ ನಿರ್ವಹಣೆಯಲ್ಲಿ ತೊಡಗಿದ್ದಾರೆ.</p>.<p>ಸದ್ಯ ಹೂವಾಡುವ ಮತ್ತು ಕಾಳು ಕಟ್ಟುವ ಹಂತದಲ್ಲಿರುವ ಈ ಬೆಳೆ ಒಂದು ತಿಂಗಳ ನಂತರ ಕೊಯ್ಲಿಗೆ ಬರಲಿದೆ. ಪ್ರಸಕ್ತ ವರ್ಷ ಎಕರೆಗೆ 5 ಕ್ವಿಂಟಲ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ನೀರಾವರಿ ಸೌಲಭ್ಯವಿದ್ದರೆ ಎಕರೆಗೆ ಏಳು ಕ್ವಿಂಟಲ್ವರೆಗೆ ಇಳುವರಿ ಪಡೆಯಬಹುದು ಎಂಬುದು ಅವರ ಅನಿಸಿಕೆಯಾಗಿದೆ.</p>.<p>ಅಂದಾಜು 130ರಿಂದ 140 ದಿನಗಳ ಅವಧಿಯ ಅಜವಾನ ಬೀಜ ಭೂಮಿಗೆ ಹಾಕಲು ಆಗಸ್ಟ್-ಸೆಪ್ಟೆಂಬರ್ ಪ್ರಶಸ್ತ ಕಾಲವಾಗಿದ್ದು, ಇದಕ್ಕೆ ಮುಂಗಾರು ಮತ್ತು ಹಿಂಗಾರಿನ ಮಧ್ಯದ ಕಾಲದ ಹವಾಮಾನ ಪೂರಕವಾಗಿದೆ. ಈ ವರ್ಷ ಕ್ವಿಂಟಲ್ಗೆ ₹ 12ರಿಂದ ₹ 15ಸಾವಿರ ದರವಿದ್ದು ಕನಿಷ್ಠ 12 ಸಾವಿರ ದರದಲ್ಲಿ ಮಾರಾಟವಾಗುವ ವಿಶ್ವಾಸದಲ್ಲಿ ಬೆಳೆಗಾರರಿದ್ದಾರೆ.</p>.<p>ತೆಲಂಗಾಣದ ವಿಕಾರಾಬಾದ ಜಿಲ್ಲೆಯಲ್ಲಿ ಅಜವಾನ ಬೇಸಾಯ ಹೆಚ್ಚಾಗಿ ನಡೆಸುವುದು ವಾಡಿಕೆ. ಆದರೆ ಪ್ರಸಕ್ತ ವರ್ಷ ಅಲ್ಲಿ ಮೆಕ್ಕೆ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬೇಸಾಯ ನಡೆಸಿದ್ದರಿಂದ ಅಜವಾನ ಬೇಸಾಯ ಪ್ರದೇಶ ಕ್ಷೀಣಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಧಿಕ ದರ ದೊರೆಯುವ ಆಶಾವಾದ ಬೆಳೆಗಾರರದ್ದು.</p>.<p>ಅಜವಾನ ಮಾರಾಟಕ್ಕೆ ಮಾರುಕಟ್ಟೆಯೂ ವಿಕಾರಾಬಾದಲ್ಲಿಯೇ ಇದೆ. ಪ್ರಸಕ್ತ ವರ್ಷ ಹವಾಮಾನ ವೈಪರೀತ್ಯದಿಂದ ಬೆಳೆಯ ನಿರ್ವಹಣೆಗೆ ಅಧಿಕ ಖರ್ಚು ಬಂದಿದೆ. ಪ್ರತಿಕೂಲ ವಾತಾವರಣವೇ ಇದಕ್ಕೆ ಕಾರಣ ಎನ್ನುತ್ತಾರೆ ವಿಜಯಕುಮಾರ ಪಾಟೀಲ.</p>.<p>ನಾನು ನಮ್ಮ ಹೊಲದಲ್ಲಿ ಅಜವಾನ ಬೆಳೆಯಲು ಎರಡು ಬಾರಿ ಬೀಜ ಹಾಕಿದ್ದೇನೆ. ಮಳೆಯಿಂದ ಮೊಳಕೆ ಬರಲಿಲ್ಲ. ಮೂರನೇ ಬಾರಿಗೆ ಹಾಕಿದಾಗ ಮೊಳಕೆ ಬಂದಿದೆ ಎನ್ನುತ್ತಾರೆ ಕುಪೇಂದ್ರ ಬಡಿಗೇರ.</p>.<p>(ವಿಜಯಕುಮಾರ ಪಾಟೀಲ ಸಂಪರ್ಕ ಸಂಖ್ಯೆ: 9008312102).<br><br></p>.<p>ರಾಷ್ಟ್ರೀಯ ಹೆದ್ದಾರಿಯಲ್ಲಿ ಅಜವಾನ ಘಮಲು ವಿಕಾರಾಬಾದ ಜಿಲ್ಲೆಯಲ್ಲಿ ಕ್ಷೀಣಿಸಿದ ಬೇಸಾಯ ಬರಗಾಲದಲ್ಲೂ ಸಾಂಬಾರು ಪದಾರ್ಥ ಬೆಳೆದ ರೈತ</p>.<p><strong>ರೈತರು ವರ್ಷದಲ್ಲಿ ಬೇರೆ ಬೇರೆ ಬೆಳೆ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ದರವೂ ಸಿಗುತ್ತದೆ ಜತೆಗೆ ಜಮೀನಿನ ಫಲವತ್ತತೆಯೂ ವೃದ್ಧಿಸುತ್ತದೆ– ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕ ಚಿಂಚೋಳಿ</strong></p>.<p><strong>ಅಜವಾನ ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು ಪ್ರಗತಿಪರ ರೈತ ವಿಜಯಕುಮಾರ ಪಾಟೀಲರು 15 ವರ್ಷದಿಂದ ನಿರಂತರವಾಗಿ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ– ನೆಲ್ಲಿ ಮಲ್ಲಿಕಾರ್ಜುನ ಕೃಷಿಕ ನಾಗಾಈದಲಾಯಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಪ್ರಮುಖ ಸಾಂಬಾರು ಪದಾರ್ಥ ಅಜವಾನ ಕೃಷಿಯಲ್ಲಿ ತೊಡಗಿರುವ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ ಪ್ರಗತಿಪರ ರೈತ ವಿಜಯಕುಮಾರ ಪಾಟೀಲ, ನಿರಂತರ ಹಾಗೂ ಉತ್ತಮ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ವಿಜಯಕುಮಾರ ಅವರು, ಒಂದೂವರೆ ದಶಕದಿಂದ ಪ್ರತಿವರ್ಷ ಅಜವಾನ ಕೃಷಿ ಮಾಡುತ್ತಿದ್ದಾರೆ. ಕ್ವಿಂಟಲ್ಗೆ ಕನಿಷ್ಠ ₹ 8 ಸಾವಿರದಿಂದ ₹ 17ಸಾವಿರದವರೆಗೆ ಉತ್ಪನ್ನ ಮಾರಾಟವಾಗುತ್ತದೆ. ಅಜವಾನವು, ಸಾಂಬಾರು ಪದಾರ್ಥ ಹಾಗೂ ಬೆಳೆಯುವವರ ಸಂಖ್ಯೆ ಕಡಿಮೆ ಇರುವುದರಿಂದ ಬೆಲೆ ಕುಸಿತದ ಭೀತಿಯೂ ಇಲ್ಲ. ಹೀಗಾಗಿ ಅವರು ನಿರಂತರವಾಗಿ ಲಾಭದಾಯಕ ಕೃಷಿಕರಾಗಿದ್ದಾರೆ.</p>.<p>ಪ್ರಸಕ್ತ ವರ್ಷ ಮೂರುವರೆ ಎಕರೆಯಲ್ಲಿ ಅಜವಾನ ಬೇಸಾಯ ನಡೆಸುತ್ತಿದ್ದು, ಎಕರೆಗೆ ಕನಿಷ್ಠ ₹ 15 ಸಾವಿರಕ್ಕೂ ಅಧಿಕ ಖರ್ಚು ಬಂದಿದೆ. ಹೊಲವನ್ನು ಹದಗೊಳಿಸಿ ಬೀಜ ತಂದು ಚೆಲ್ಲಿ ಕಳೆ ನಿಯಂತ್ರಣ ಹಾಗೂ ರೋಗರುಜಿನಗಳಿಂದ ಬೆಳೆ ನಿರ್ವಹಣೆಯಲ್ಲಿ ತೊಡಗಿದ್ದಾರೆ.</p>.<p>ಸದ್ಯ ಹೂವಾಡುವ ಮತ್ತು ಕಾಳು ಕಟ್ಟುವ ಹಂತದಲ್ಲಿರುವ ಈ ಬೆಳೆ ಒಂದು ತಿಂಗಳ ನಂತರ ಕೊಯ್ಲಿಗೆ ಬರಲಿದೆ. ಪ್ರಸಕ್ತ ವರ್ಷ ಎಕರೆಗೆ 5 ಕ್ವಿಂಟಲ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ನೀರಾವರಿ ಸೌಲಭ್ಯವಿದ್ದರೆ ಎಕರೆಗೆ ಏಳು ಕ್ವಿಂಟಲ್ವರೆಗೆ ಇಳುವರಿ ಪಡೆಯಬಹುದು ಎಂಬುದು ಅವರ ಅನಿಸಿಕೆಯಾಗಿದೆ.</p>.<p>ಅಂದಾಜು 130ರಿಂದ 140 ದಿನಗಳ ಅವಧಿಯ ಅಜವಾನ ಬೀಜ ಭೂಮಿಗೆ ಹಾಕಲು ಆಗಸ್ಟ್-ಸೆಪ್ಟೆಂಬರ್ ಪ್ರಶಸ್ತ ಕಾಲವಾಗಿದ್ದು, ಇದಕ್ಕೆ ಮುಂಗಾರು ಮತ್ತು ಹಿಂಗಾರಿನ ಮಧ್ಯದ ಕಾಲದ ಹವಾಮಾನ ಪೂರಕವಾಗಿದೆ. ಈ ವರ್ಷ ಕ್ವಿಂಟಲ್ಗೆ ₹ 12ರಿಂದ ₹ 15ಸಾವಿರ ದರವಿದ್ದು ಕನಿಷ್ಠ 12 ಸಾವಿರ ದರದಲ್ಲಿ ಮಾರಾಟವಾಗುವ ವಿಶ್ವಾಸದಲ್ಲಿ ಬೆಳೆಗಾರರಿದ್ದಾರೆ.</p>.<p>ತೆಲಂಗಾಣದ ವಿಕಾರಾಬಾದ ಜಿಲ್ಲೆಯಲ್ಲಿ ಅಜವಾನ ಬೇಸಾಯ ಹೆಚ್ಚಾಗಿ ನಡೆಸುವುದು ವಾಡಿಕೆ. ಆದರೆ ಪ್ರಸಕ್ತ ವರ್ಷ ಅಲ್ಲಿ ಮೆಕ್ಕೆ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬೇಸಾಯ ನಡೆಸಿದ್ದರಿಂದ ಅಜವಾನ ಬೇಸಾಯ ಪ್ರದೇಶ ಕ್ಷೀಣಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಧಿಕ ದರ ದೊರೆಯುವ ಆಶಾವಾದ ಬೆಳೆಗಾರರದ್ದು.</p>.<p>ಅಜವಾನ ಮಾರಾಟಕ್ಕೆ ಮಾರುಕಟ್ಟೆಯೂ ವಿಕಾರಾಬಾದಲ್ಲಿಯೇ ಇದೆ. ಪ್ರಸಕ್ತ ವರ್ಷ ಹವಾಮಾನ ವೈಪರೀತ್ಯದಿಂದ ಬೆಳೆಯ ನಿರ್ವಹಣೆಗೆ ಅಧಿಕ ಖರ್ಚು ಬಂದಿದೆ. ಪ್ರತಿಕೂಲ ವಾತಾವರಣವೇ ಇದಕ್ಕೆ ಕಾರಣ ಎನ್ನುತ್ತಾರೆ ವಿಜಯಕುಮಾರ ಪಾಟೀಲ.</p>.<p>ನಾನು ನಮ್ಮ ಹೊಲದಲ್ಲಿ ಅಜವಾನ ಬೆಳೆಯಲು ಎರಡು ಬಾರಿ ಬೀಜ ಹಾಕಿದ್ದೇನೆ. ಮಳೆಯಿಂದ ಮೊಳಕೆ ಬರಲಿಲ್ಲ. ಮೂರನೇ ಬಾರಿಗೆ ಹಾಕಿದಾಗ ಮೊಳಕೆ ಬಂದಿದೆ ಎನ್ನುತ್ತಾರೆ ಕುಪೇಂದ್ರ ಬಡಿಗೇರ.</p>.<p>(ವಿಜಯಕುಮಾರ ಪಾಟೀಲ ಸಂಪರ್ಕ ಸಂಖ್ಯೆ: 9008312102).<br><br></p>.<p>ರಾಷ್ಟ್ರೀಯ ಹೆದ್ದಾರಿಯಲ್ಲಿ ಅಜವಾನ ಘಮಲು ವಿಕಾರಾಬಾದ ಜಿಲ್ಲೆಯಲ್ಲಿ ಕ್ಷೀಣಿಸಿದ ಬೇಸಾಯ ಬರಗಾಲದಲ್ಲೂ ಸಾಂಬಾರು ಪದಾರ್ಥ ಬೆಳೆದ ರೈತ</p>.<p><strong>ರೈತರು ವರ್ಷದಲ್ಲಿ ಬೇರೆ ಬೇರೆ ಬೆಳೆ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ದರವೂ ಸಿಗುತ್ತದೆ ಜತೆಗೆ ಜಮೀನಿನ ಫಲವತ್ತತೆಯೂ ವೃದ್ಧಿಸುತ್ತದೆ– ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕ ಚಿಂಚೋಳಿ</strong></p>.<p><strong>ಅಜವಾನ ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು ಪ್ರಗತಿಪರ ರೈತ ವಿಜಯಕುಮಾರ ಪಾಟೀಲರು 15 ವರ್ಷದಿಂದ ನಿರಂತರವಾಗಿ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ– ನೆಲ್ಲಿ ಮಲ್ಲಿಕಾರ್ಜುನ ಕೃಷಿಕ ನಾಗಾಈದಲಾಯಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>