<p><strong>ಕಲಬುರಗಿ</strong>: ‘ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೂ ಅವರನ್ನು ಕಾರ್ಮಿಕರೆಂದು ಪರಿಗಣಿಸಿ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆ ಖಾತ್ರಿ ಪಡಿಸಬೇಕು. ಜೊತೆಗೆ ಉಚಿತವಾಗಿ ಆರೋಗ್ಯ ಸುರಕ್ಷೆ ಒದಗಿಸಬೇಕು’ ಎಂಬ ಒಕ್ಕೊರಲ ಒತ್ತಾಯ ಆಶಾ ಕಾರ್ಯಕರ್ತೆಯರ ಕಲಬುರಗಿ ತಾಲ್ಲೂಕು ಪ್ರಥಮ ಸಮ್ಮೇಳನದಲ್ಲಿ ಭಾನುವಾರ ವ್ಯಕ್ತವಾಯಿತು.</p>.<p>ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಕ್ರಾಂತಿಕಾರಿ ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಪುಷ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.</p>.<p>ಈ ವೇಳೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕ ಎಸ್.ಎಂ.ಶರ್ಮಾ, ‘ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳ ಸರ್ಕಾರಗಳು ಬಂದರೂ, ಆಶಾ ಕಾರ್ಯಕರ್ತೆಯರ ಜೀವನ ಮಾತ್ರ ಸುಧಾರಣೆ ಕಂಡಿಲ್ಲ. ಕೋವಿಡ್ನಂಥ ಸಂಕಷ್ಟದಲ್ಲೂ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಹತ್ತಾರೂ ಯೋಜನೆಗಳಿಗೆ ಅವರನ್ನು ದುಡಿಸಿಕೊಳ್ಳುವ ಸರ್ಕಾರಗಳು, ಅವರಿಗೆ ಈತನಕ ಕನಿಷ್ಠ ವೇತನ ನೀಡುತ್ತಿಲ್ಲ. ಅವರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಿಲ್ಲ’ ಎಂದು ದೂರಿದರು.</p>.<p>‘ಆಶಾ ಕಾರ್ಯಕಾರ್ತೆಯರು ಆರಂಭದಲ್ಲಿ ₹500ಗೆ ದುಡಿಯುತ್ತಿದ್ದರು. ಆಗ ಸಂಘಟನೆ ಕಟ್ಟಿ ಹೋರಾಟ ನಡೆಸಿದ್ದರ ಫಲವಾಗಿ ಅವರಿಗೆ ಪ್ರತಿ ತಿಂಗಳೂ ₹5 ಸಾವಿರ ಸಿಗುವಂತಾಯಿತು. ಈಗಿನ ಸರ್ಕಾರಗಳು ಮನವಿ ಪತ್ರಗಳಿಗೆ ಸ್ಪಂದಿಸಲ್ಲ. ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಜೊತೆಗೆ ಸಂಘಟನೆಗೂ ಒತ್ತು ನೀಡಬೇಕು’ ಎಂದರು.</p>.<p>ಸಮಾವೇಶ ಅಧ್ಯಕ್ಷತೆ ವಹಿಸಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಚಾಲಕ ವಿ.ಜಿ.ದೇಸಾಯಿ, ಎಐಯುಟಿಯುಸಿ ಉಪಾಧ್ಯಕ್ಷ ರಾಘವೇಂದ್ರ ಎಂ.ಜಿ. ಹಾಗೂ ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗುಂಡಮ್ಮ ಮಡಿವಾಳ ಮಾತನಾಡಿದರು.</p>.<p>ಇದೇ ವೇಳೆ ಆಶಾ ಕಾರ್ಯಕರ್ತೆಯರ ಕಲಬುರಗಿ ತಾಲ್ಲೂಕು ಸಮಿತಿ ರಚಿಸಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷೆಯಾಗಿ ಶಿವಲಿಂಗಮ್ಮ ನಂದೂರ, ಉಪಾಧ್ಯಕ್ಷರಾಗಿ ತುಕ್ಕಮ್ಮ ಸೊಂತ, ಶಾಂತಾ ಹರಸೂರ, ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ಕಮಲಾಪುರ, ಸಹಕಾರ್ಯದರ್ಶಿಯಾಗಿ ಸಂಗೀತಾ ಸಾವಳಗಿ ಹಾಗೂ ಸಿದ್ಧಲಕ್ಷ್ಮಿ ಡೊಂಗರಗಾಂವ, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ 25 ಆಶಾ ಕಾರ್ಯಕರ್ತೆಯರನ್ನು ಆಯ್ಕೆ ಮಾಡಲಾಯಿತು.</p>.<p>ಸಮ್ಮೇಳನದ ಮುಖ್ಯ ಗೊತ್ತುವಳಿಯನ್ನು ವಿಜಯಲಕ್ಷ್ಮಿ ಮಂಡಿಸಿದರು. ಅದನ್ನು ಸಂಗೀತಾ ಸಾವಳಗಿ ಅನುಮೋದಿಸಿದರು. ನೆರೆದಿದ್ದ ಆಶಾ ಕಾರ್ಯಕರ್ತೆಯರು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ತುಕ್ಕಮ್ಮ ಸೊಂತ ಅವರು ಸಂಘಟನಾತ್ಮಕ ವರದಿ ಮಂಡಿಸಿದರು. ಅದನ್ನು ಶೋಭಾ ಫರತಾಬಾದ ಅನುಮೋದಿಸಿದರು.</p>.<p>ಸಮ್ಮೇಳನಕ್ಕೂ ಮುನ್ನ ನೂರಾರು ಆಶಾಕಾರ್ಯಕರ್ತೆಯರು ನಗರದ ಜಗತ್ ವೃತ್ತದಿಂದ ಅನ್ನಪೂರ್ಣ ಕ್ರಾಸ್ ಮೂಲಕ ಹಳೇ ಜಿಲ್ಲಾ ಪಂಚಾಯಿತಿ ಸಭಾಂಗಣದ ತನಕ ಮೆರವಣಿಗೆ ನಡೆಸಿದರು.</p>.<p>Highlights - null</p>.<p>Quote - ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮುಂಬರುವ ಸೆಪ್ಟೆಂಬರ್ 14–15ರಂದು ಕಲಬುರಗಿಯಲ್ಲಿ ಆಶಾ ಕಾರ್ಯಕರ್ತೆರಯರ ರಾಜ್ಯ ಸಮ್ಮೇಳನ ನಡೆಯಲಿದೆ ಎಸ್.ಎಂ.ಶರ್ಮಾ ಜಿಲ್ಲಾ ಕಾರ್ಯದರ್ಶಿ ಎಐಯುಟಿಯುಸಿ</p>.<p>Cut-off box - ‘ಆರೋಗ್ಯ ಇಲಾಖೆಯ ಬೆನ್ನೆಲುಬು’ ಜಿಲ್ಲಾ ಆರ್ಸಿಎಚ್ಒ ಶರಣಬಸಪ್ಪ ಕ್ಯಾತನಾಳ ಮಾತನಾಡಿ ‘ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬು. ನಿಮ್ಮ ಶ್ರಮದ ಫಲವಾಗಿ ವಿವಿಧ ಯೋಜನೆಗಳ ಜಾರಿಯಲ್ಲಿ ಜಿಲ್ಲೆಯ ಆರೋಗ್ಯ ಸೂಚ್ಯಂಕಗಳ ಮಟ್ಟ ಸುಧಾರಿಸಿವೆ. ನಿಮ್ಮ ಯಾವುದೇ ಸಮಸ್ಯೆಗಳಿಗೆ ಇಡೀ ಆರೋಗ್ಯ ಇಲಾಖೆ ಬೆಂಬಲವಾಗಿ ನಿಲ್ಲಲಿದೆ. ಜಗಳ–ಗಲಾಟೆ ಮಾಡುವುದು ಸಂಘಟನೆಯ ಉದ್ದೇಶವಲ್ಲ. ಯಾವುದೇ ಸಮಸ್ಯೆ ಪರಿಹರಿಸಿಕೊಳ್ಳುವುದು ಸಂಘಟನೆಯ ಉದ್ದೇಶವಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೂ ಅವರನ್ನು ಕಾರ್ಮಿಕರೆಂದು ಪರಿಗಣಿಸಿ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆ ಖಾತ್ರಿ ಪಡಿಸಬೇಕು. ಜೊತೆಗೆ ಉಚಿತವಾಗಿ ಆರೋಗ್ಯ ಸುರಕ್ಷೆ ಒದಗಿಸಬೇಕು’ ಎಂಬ ಒಕ್ಕೊರಲ ಒತ್ತಾಯ ಆಶಾ ಕಾರ್ಯಕರ್ತೆಯರ ಕಲಬುರಗಿ ತಾಲ್ಲೂಕು ಪ್ರಥಮ ಸಮ್ಮೇಳನದಲ್ಲಿ ಭಾನುವಾರ ವ್ಯಕ್ತವಾಯಿತು.</p>.<p>ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಕ್ರಾಂತಿಕಾರಿ ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಪುಷ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.</p>.<p>ಈ ವೇಳೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕ ಎಸ್.ಎಂ.ಶರ್ಮಾ, ‘ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳ ಸರ್ಕಾರಗಳು ಬಂದರೂ, ಆಶಾ ಕಾರ್ಯಕರ್ತೆಯರ ಜೀವನ ಮಾತ್ರ ಸುಧಾರಣೆ ಕಂಡಿಲ್ಲ. ಕೋವಿಡ್ನಂಥ ಸಂಕಷ್ಟದಲ್ಲೂ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಹತ್ತಾರೂ ಯೋಜನೆಗಳಿಗೆ ಅವರನ್ನು ದುಡಿಸಿಕೊಳ್ಳುವ ಸರ್ಕಾರಗಳು, ಅವರಿಗೆ ಈತನಕ ಕನಿಷ್ಠ ವೇತನ ನೀಡುತ್ತಿಲ್ಲ. ಅವರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಿಲ್ಲ’ ಎಂದು ದೂರಿದರು.</p>.<p>‘ಆಶಾ ಕಾರ್ಯಕಾರ್ತೆಯರು ಆರಂಭದಲ್ಲಿ ₹500ಗೆ ದುಡಿಯುತ್ತಿದ್ದರು. ಆಗ ಸಂಘಟನೆ ಕಟ್ಟಿ ಹೋರಾಟ ನಡೆಸಿದ್ದರ ಫಲವಾಗಿ ಅವರಿಗೆ ಪ್ರತಿ ತಿಂಗಳೂ ₹5 ಸಾವಿರ ಸಿಗುವಂತಾಯಿತು. ಈಗಿನ ಸರ್ಕಾರಗಳು ಮನವಿ ಪತ್ರಗಳಿಗೆ ಸ್ಪಂದಿಸಲ್ಲ. ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಜೊತೆಗೆ ಸಂಘಟನೆಗೂ ಒತ್ತು ನೀಡಬೇಕು’ ಎಂದರು.</p>.<p>ಸಮಾವೇಶ ಅಧ್ಯಕ್ಷತೆ ವಹಿಸಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಚಾಲಕ ವಿ.ಜಿ.ದೇಸಾಯಿ, ಎಐಯುಟಿಯುಸಿ ಉಪಾಧ್ಯಕ್ಷ ರಾಘವೇಂದ್ರ ಎಂ.ಜಿ. ಹಾಗೂ ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗುಂಡಮ್ಮ ಮಡಿವಾಳ ಮಾತನಾಡಿದರು.</p>.<p>ಇದೇ ವೇಳೆ ಆಶಾ ಕಾರ್ಯಕರ್ತೆಯರ ಕಲಬುರಗಿ ತಾಲ್ಲೂಕು ಸಮಿತಿ ರಚಿಸಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷೆಯಾಗಿ ಶಿವಲಿಂಗಮ್ಮ ನಂದೂರ, ಉಪಾಧ್ಯಕ್ಷರಾಗಿ ತುಕ್ಕಮ್ಮ ಸೊಂತ, ಶಾಂತಾ ಹರಸೂರ, ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ಕಮಲಾಪುರ, ಸಹಕಾರ್ಯದರ್ಶಿಯಾಗಿ ಸಂಗೀತಾ ಸಾವಳಗಿ ಹಾಗೂ ಸಿದ್ಧಲಕ್ಷ್ಮಿ ಡೊಂಗರಗಾಂವ, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ 25 ಆಶಾ ಕಾರ್ಯಕರ್ತೆಯರನ್ನು ಆಯ್ಕೆ ಮಾಡಲಾಯಿತು.</p>.<p>ಸಮ್ಮೇಳನದ ಮುಖ್ಯ ಗೊತ್ತುವಳಿಯನ್ನು ವಿಜಯಲಕ್ಷ್ಮಿ ಮಂಡಿಸಿದರು. ಅದನ್ನು ಸಂಗೀತಾ ಸಾವಳಗಿ ಅನುಮೋದಿಸಿದರು. ನೆರೆದಿದ್ದ ಆಶಾ ಕಾರ್ಯಕರ್ತೆಯರು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ತುಕ್ಕಮ್ಮ ಸೊಂತ ಅವರು ಸಂಘಟನಾತ್ಮಕ ವರದಿ ಮಂಡಿಸಿದರು. ಅದನ್ನು ಶೋಭಾ ಫರತಾಬಾದ ಅನುಮೋದಿಸಿದರು.</p>.<p>ಸಮ್ಮೇಳನಕ್ಕೂ ಮುನ್ನ ನೂರಾರು ಆಶಾಕಾರ್ಯಕರ್ತೆಯರು ನಗರದ ಜಗತ್ ವೃತ್ತದಿಂದ ಅನ್ನಪೂರ್ಣ ಕ್ರಾಸ್ ಮೂಲಕ ಹಳೇ ಜಿಲ್ಲಾ ಪಂಚಾಯಿತಿ ಸಭಾಂಗಣದ ತನಕ ಮೆರವಣಿಗೆ ನಡೆಸಿದರು.</p>.<p>Highlights - null</p>.<p>Quote - ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮುಂಬರುವ ಸೆಪ್ಟೆಂಬರ್ 14–15ರಂದು ಕಲಬುರಗಿಯಲ್ಲಿ ಆಶಾ ಕಾರ್ಯಕರ್ತೆರಯರ ರಾಜ್ಯ ಸಮ್ಮೇಳನ ನಡೆಯಲಿದೆ ಎಸ್.ಎಂ.ಶರ್ಮಾ ಜಿಲ್ಲಾ ಕಾರ್ಯದರ್ಶಿ ಎಐಯುಟಿಯುಸಿ</p>.<p>Cut-off box - ‘ಆರೋಗ್ಯ ಇಲಾಖೆಯ ಬೆನ್ನೆಲುಬು’ ಜಿಲ್ಲಾ ಆರ್ಸಿಎಚ್ಒ ಶರಣಬಸಪ್ಪ ಕ್ಯಾತನಾಳ ಮಾತನಾಡಿ ‘ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬು. ನಿಮ್ಮ ಶ್ರಮದ ಫಲವಾಗಿ ವಿವಿಧ ಯೋಜನೆಗಳ ಜಾರಿಯಲ್ಲಿ ಜಿಲ್ಲೆಯ ಆರೋಗ್ಯ ಸೂಚ್ಯಂಕಗಳ ಮಟ್ಟ ಸುಧಾರಿಸಿವೆ. ನಿಮ್ಮ ಯಾವುದೇ ಸಮಸ್ಯೆಗಳಿಗೆ ಇಡೀ ಆರೋಗ್ಯ ಇಲಾಖೆ ಬೆಂಬಲವಾಗಿ ನಿಲ್ಲಲಿದೆ. ಜಗಳ–ಗಲಾಟೆ ಮಾಡುವುದು ಸಂಘಟನೆಯ ಉದ್ದೇಶವಲ್ಲ. ಯಾವುದೇ ಸಮಸ್ಯೆ ಪರಿಹರಿಸಿಕೊಳ್ಳುವುದು ಸಂಘಟನೆಯ ಉದ್ದೇಶವಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>