<p><strong>ಕಲಬುರಗಿ</strong>: ನಗರ ಸೇರಿದಂತೆ ಜಿಲ್ಲೆಯ ವಿವಿಧ ವಿಠಲ–ರುಕ್ಮಿಣಿ ಮಂದಿರದಲ್ಲಿ ಬುಧವಾರ ಆಷಾಢ ಏಕಾದಶಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.</p>.<p>ನಗರದ ಸ್ಟೇಷನ್ ಬಜಾರ್ ಸಮೀಪದ ಶತಮಾನಗಳ ಇತಿಹಾಸ ಹೊಂದಿರುವ ವಿಠಲ ಮಂದಿರದಲ್ಲಿ ಬೆಳಿಗ್ಗೆ 4.30ಕ್ಕೆ ಕಾಕಡಾರತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ 6 ಗಂಟೆಗೆ ನಗರದ ಸೂಪರ್ ಮಾರುಕಟ್ಟೆಯ ಮಾಯಾ ಮಂದಿರದಿಂದ ವಿಠಲ ಮಂದಿರದವರಿಗೆ ಮಾರ್ವಾಡಿ ಸಮುದಾಯದಿಂದ ದಿಂಡಿಯಾತ್ರೆ ಕಾರ್ಯಕ್ರಮ ನಡೆಯಿತು.</p>.<p>ಪಂಚಾಮೃತ ಅಭಿಷೇಕ, ವಿಠಲನ ಅಲಂಕಾರ, ಮಹಾಮಂಗಳಾರತಿ ಜರುಗಿತು. ನಂತರ ಭಕ್ತರ ದರ್ಶನ ಆರಂಭವಾಯಿತು. ಬೆಳಿಗ್ಗೆ 7 ರಿಂದ ಆರಂಭವಾದ ದರ್ಶನಕ್ಕೆ ಸಂಜೆ 7 ರವರೆಗೆ ಸಾವಿರಾರು ಭಕ್ತರು ಬಂದು ಭಕ್ತಿ ಸಮರ್ಪಿಸಿದರು.</p>.<p>ಬೆಳಿಗ್ಗೆ 10 ಗಂಟೆಯಿಂದ ಶರಣಬಸವೇಶ್ವರ ಸಂಗೀತ ಬಳಗ, ವಿಠಲ ಮಂದಿರ ಮಹಿಳಾ ಭಜನಾ ಮಂಡಳಿ, ಲಕ್ಷ್ಮಿಕಾಂತ ಹೂಗಾರ ಮತ್ತು ಸಂಗೀತ ಬಳಗ, ಬಲವಂತ ಉದನೂರ ಭಜನಾ ಮಂಡಳಿ, ರಜಪೂತ ಮಾತಾ ಜಾಗರಣ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 7 ಗಂಟೆಗೆ ಚಂದ್ರಕಲಾ ಪ್ರಭಾಕರ ಉಪಾಧ್ಯಯ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.</p>.<p>ಈ ವೇಳೆ ದೇವಸ್ಥಾನದ ಉಪ ಸಮಿತಿ ಅಧ್ಯಕ್ಷ ನಾಗೇಂದ್ರ ಝಳಕಿ, ದತ್ತಾತ್ರೇಯ ಪಿ.ಪುಕಾಳೆ, ಧನಂಜಯ ಎಸ್.ಪುರಿ, ರತನ ಮಾನೆ, ದತ್ತಾತ್ರೇಯ ಜೇವರ್ಗಿ, ಹುಲಿಗೆಪ್ಪ ಕನಕಗಿರಿ, ಪ್ರವೀಣ ಪುಣೆ, ಆನಂದ ಚಿತ್ಕೋಟೆ, ಸದಾನಂದ ಪುರಿ, ರಾಜು ಗುಳೆ, ಗಂಗಾಧರ ಗುಳೆ, ಸಂತೋಷ ಇಂಗನಕರ್, ಸುರೇಶ ರೇವಣ್ಣ, ಆನಂದ ಬಾಪಟ್, ಗೋವಿಂದ ಸಿಂಗ್, ಮಯೂರ್ ಮಾನೆ, ಸಮಿತಿ ಪ್ರಮುಖರು ಭಾಗವಹಿಸಿದ್ದರು.</p>.<p>ನಗರದ ಬ್ರಹ್ಮಪುರ ಬಡಾವಣೆಯ ಉತ್ತರಾಧಿ ಮಠದ ವಿಠಲ್–ರುಕ್ಮಿಣಿ ಮಂದಿರ, ಶಹಾಬಜಾರನ ವಿಠಲ ಮಂದಿರ, ವೆಂಕಟರಮಣ ದೇವಾಲಯದಲ್ಲಿ ಸಹ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ವಿಠಲ–ರುಕ್ಮಿಣಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಜಲಾಭಿಷೇಕ, ಶೃಂಗಾರ ಆರತಿ, ನೈವೇದ್ಯ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಗಳು ಜರುಗಿದವು.</p>.<p>ಸ್ಟೇಷನ್ ಬಜಾರದ ವಿಠಲ ಮಂದಿರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.</p>.<p>ಆಷಾಢ ಏಕಾದಶಿ ಮಹತ್ವ ಹಿಂದೂ ಧಾರ್ಮಿಕ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ಏಕಾದಶಿ ಬರುತ್ತದೆ. ಹೀಗಾಗಿ ಇದನ್ನು ಆಷಾಢ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನವು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಲವು ಭಕ್ತರು ಇಡೀ ರಾತ್ರಿ ಪ್ರಾರ್ಥನೆ ಭಜನೆ ಮಾಡುತ್ತಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ನಗರ ಸೇರಿದಂತೆ ಜಿಲ್ಲೆಯ ವಿವಿಧ ವಿಠಲ–ರುಕ್ಮಿಣಿ ಮಂದಿರದಲ್ಲಿ ಬುಧವಾರ ಆಷಾಢ ಏಕಾದಶಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.</p>.<p>ನಗರದ ಸ್ಟೇಷನ್ ಬಜಾರ್ ಸಮೀಪದ ಶತಮಾನಗಳ ಇತಿಹಾಸ ಹೊಂದಿರುವ ವಿಠಲ ಮಂದಿರದಲ್ಲಿ ಬೆಳಿಗ್ಗೆ 4.30ಕ್ಕೆ ಕಾಕಡಾರತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ 6 ಗಂಟೆಗೆ ನಗರದ ಸೂಪರ್ ಮಾರುಕಟ್ಟೆಯ ಮಾಯಾ ಮಂದಿರದಿಂದ ವಿಠಲ ಮಂದಿರದವರಿಗೆ ಮಾರ್ವಾಡಿ ಸಮುದಾಯದಿಂದ ದಿಂಡಿಯಾತ್ರೆ ಕಾರ್ಯಕ್ರಮ ನಡೆಯಿತು.</p>.<p>ಪಂಚಾಮೃತ ಅಭಿಷೇಕ, ವಿಠಲನ ಅಲಂಕಾರ, ಮಹಾಮಂಗಳಾರತಿ ಜರುಗಿತು. ನಂತರ ಭಕ್ತರ ದರ್ಶನ ಆರಂಭವಾಯಿತು. ಬೆಳಿಗ್ಗೆ 7 ರಿಂದ ಆರಂಭವಾದ ದರ್ಶನಕ್ಕೆ ಸಂಜೆ 7 ರವರೆಗೆ ಸಾವಿರಾರು ಭಕ್ತರು ಬಂದು ಭಕ್ತಿ ಸಮರ್ಪಿಸಿದರು.</p>.<p>ಬೆಳಿಗ್ಗೆ 10 ಗಂಟೆಯಿಂದ ಶರಣಬಸವೇಶ್ವರ ಸಂಗೀತ ಬಳಗ, ವಿಠಲ ಮಂದಿರ ಮಹಿಳಾ ಭಜನಾ ಮಂಡಳಿ, ಲಕ್ಷ್ಮಿಕಾಂತ ಹೂಗಾರ ಮತ್ತು ಸಂಗೀತ ಬಳಗ, ಬಲವಂತ ಉದನೂರ ಭಜನಾ ಮಂಡಳಿ, ರಜಪೂತ ಮಾತಾ ಜಾಗರಣ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 7 ಗಂಟೆಗೆ ಚಂದ್ರಕಲಾ ಪ್ರಭಾಕರ ಉಪಾಧ್ಯಯ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.</p>.<p>ಈ ವೇಳೆ ದೇವಸ್ಥಾನದ ಉಪ ಸಮಿತಿ ಅಧ್ಯಕ್ಷ ನಾಗೇಂದ್ರ ಝಳಕಿ, ದತ್ತಾತ್ರೇಯ ಪಿ.ಪುಕಾಳೆ, ಧನಂಜಯ ಎಸ್.ಪುರಿ, ರತನ ಮಾನೆ, ದತ್ತಾತ್ರೇಯ ಜೇವರ್ಗಿ, ಹುಲಿಗೆಪ್ಪ ಕನಕಗಿರಿ, ಪ್ರವೀಣ ಪುಣೆ, ಆನಂದ ಚಿತ್ಕೋಟೆ, ಸದಾನಂದ ಪುರಿ, ರಾಜು ಗುಳೆ, ಗಂಗಾಧರ ಗುಳೆ, ಸಂತೋಷ ಇಂಗನಕರ್, ಸುರೇಶ ರೇವಣ್ಣ, ಆನಂದ ಬಾಪಟ್, ಗೋವಿಂದ ಸಿಂಗ್, ಮಯೂರ್ ಮಾನೆ, ಸಮಿತಿ ಪ್ರಮುಖರು ಭಾಗವಹಿಸಿದ್ದರು.</p>.<p>ನಗರದ ಬ್ರಹ್ಮಪುರ ಬಡಾವಣೆಯ ಉತ್ತರಾಧಿ ಮಠದ ವಿಠಲ್–ರುಕ್ಮಿಣಿ ಮಂದಿರ, ಶಹಾಬಜಾರನ ವಿಠಲ ಮಂದಿರ, ವೆಂಕಟರಮಣ ದೇವಾಲಯದಲ್ಲಿ ಸಹ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ವಿಠಲ–ರುಕ್ಮಿಣಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಜಲಾಭಿಷೇಕ, ಶೃಂಗಾರ ಆರತಿ, ನೈವೇದ್ಯ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಗಳು ಜರುಗಿದವು.</p>.<p>ಸ್ಟೇಷನ್ ಬಜಾರದ ವಿಠಲ ಮಂದಿರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.</p>.<p>ಆಷಾಢ ಏಕಾದಶಿ ಮಹತ್ವ ಹಿಂದೂ ಧಾರ್ಮಿಕ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ಏಕಾದಶಿ ಬರುತ್ತದೆ. ಹೀಗಾಗಿ ಇದನ್ನು ಆಷಾಢ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನವು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಲವು ಭಕ್ತರು ಇಡೀ ರಾತ್ರಿ ಪ್ರಾರ್ಥನೆ ಭಜನೆ ಮಾಡುತ್ತಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>