<p><strong>ಕಲಬುರಗಿ</strong>: ‘ತನ್ನ ಮತ್ತು ತನ್ನ ಸಮಾಜದ ಸಂಕಷ್ಟಗಳನ್ನು ಅಕ್ಷರ ಸಂಸ್ಕೃತಿಯ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಲಕ್ಕೂರು ಆನಂದ ಅವರು ಸಂಕಷ್ಟಗಳ ಕಲ್ಲಿನ ಬುಡದಲ್ಲಿ ಬೆಳೆದ ಗರಿಕಿ ಹುಲ್ಲಿನಂತವರು. ಕಲ್ಲು ತೆಗೆಯುತ್ತಿದ್ದಂತೆ ಬಿಸಲಿಗೆ ಒಣಗಿದ ಗರಿಕಿ ಹುಲ್ಲಿನಂತೆ ಬಹು ಬೇಗನೇ ನಮ್ಮಿಂದ ದೂರಾದ ಪ್ರತಿಭಾನ್ವಿತ ಬರಹಗಾರ’ ಎಂದು ಗುಲಬರ್ಗಾ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಬಣ್ಣಿಸಿದರು.</p>.<p>ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಭಾನುವಾರ ಕನ್ನಡ ಅಧ್ಯಯನ ಸಂಸ್ಥೆ, ಎಸ್ಸಿ/ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಮತ್ತು ಕಲಬುರಗಿ ಸಮುದಾಯ ಆಯೋಜಿಸಿದ್ದ ಕವಿ ಲಕ್ಕೂರು ಆನಂದ ನೆನಪು ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆನಂದ ತಾನು ಬದುಕಿದಷ್ಟು ದಿನ ಒಳ್ಳೆಯದನ್ನು ಬರೆದ. ಅವರು ಬರೆದ ಸಾಹಿತ್ಯ ಮುಂದೊಂದು ದಿನ ಸಮಾಜಕ್ಕೆ ಉಪಯೋಗಕ್ಕೆ ಬರಲಿದೆ. ಅಕ್ಷರ, ಪ್ರಶಸ್ತಿಯೇ ಗೊತ್ತಿಲ್ಲದ ಸಮುದಾಯಕ್ಕೆ ಅಕ್ಷರವನ್ನೇ ನಂಬಿ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿ, ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನವಾಗಿ ತೋರಿಸಿದ್ದಾರೆ. ನಾವೆಲ್ಲ ಆನಂದ ಅವರ ಒಳ್ಳೆಯತವನ್ನು ನೆನಪಿಟ್ಟುಕೊಳ್ಳಬೇಕಿದೆ’ ಎಂದರು.</p>.<p>‘ಆನಂದ ಅವರು ಅಕಾಲಿಕವಾಗಿ ಸಾವನ್ನಪ್ಪಿದಾಗ ಕೇಂದ್ರೀಯ ವಿಶ್ವವಿದ್ಯಾಲಯ ಅನಾಗರಿಕವಾಗಿ ವರ್ತಿಸಿತ್ತು. ಕುಲಪತಿ, ಕುಲಸಚಿವರು ಶವ ನೋಡಲು ಬರಲಿಲ್ಲ. ಇದೆಲ್ಲ ಗೊತ್ತಿದ್ದರೂ ನಮ್ಮ ವಿದ್ಯಾರ್ಥಿಗಳು ಪ್ರಶ್ನೆ ಮಾಡದೆ ಮೌನವಾಗಿದ್ದಾರೆ. ಅಕ್ಷರ ಕಲಿಯುವುದು ಇನ್ನೊಬ್ಬರ ನೋವಿಗೆ ಮಿಡಿಯಲು, ಪರರ ರಕ್ಷಣೆಗಾಗಿ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ವಿ.ವಿ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿ. ‘ಆನಂದ ಅವರು ಸಮಾಜದ ಸಮಾನತೆಗಾಗಿ ತುಡಿತ, ಮಿಡಿತ ಇರಿಸಿಕೊಂಡಿದ್ದವರು. ಆನಂದ ಪ್ರಕೃತಿಯ ದಾಳಿಗೆ ಸಿಲುಕಿ ನಮ್ಮಿಂದ ದೂರಾಗಿ ಹೋಗಿರಬಹುದು. ಆದರೆ, ಅವರು ಹಚ್ಚಿದ ಸಾಹಿತ್ಯದ ಬೆಳಕು ಎಂದಿಗೂ ಪ್ರಜ್ವಲಿಸುತ್ತಾ ಇರಲಿದೆ’ ಎಂದರು.</p>.<p>ಕವಿ ಮಹಾದೇವ ಶಂಕನಪುರ ಮಾತನಾಡಿ, ‘ಆನಂದ ಅವರು ಉರಿದು ಹೋದ ಅತೃಪ್ತ ಏಕಾಂತ ದೀಪ. ಕಾವ್ಯಕ್ಕಾಗಿ ಬದುಕಿದ ಕವಿ, ಕಾವ್ಯವಾಗಿಯೇ ಅಸುನೀಗಿದರು. ಆನಂದನಲ್ಲಿ ಇದ್ದ ಹಸಿವು, ಅಭದ್ರತೆ, ಅಪಮಾನ, ಅತೃಪ್ತಿ ಮತ್ತು ಅಸಮಾನತೆಗಳು ಆತನ ಸಾಹಿತ್ಯ ಮತ್ತು ಕಾವ್ಯಕ್ಕೆ ಶಕ್ತಿಯಾಗಿದ್ದವು’ ಎಂದು ಅಭಿಪ್ರಾಯಪಟ್ಟರು.</p>.<p>ಸಿಯುಕೆ ಸಹ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಮಾತನಾಡಿ, ‘ಯಾವುದೇ ಕವಿ, ಸಾಹಿತಿಯ ಸಾವು ಸಾವಲ್ಲ. ಅದಕ್ಕಿಂತ ಮಿಗಿಲಾಗಿ ಅವರ ಅಂತರಾಳದಲ್ಲಿ ಉಳಿದು ಹೋಗಿರುವ, ಅಭಿವ್ಯಕ್ತಿಯಾಗಿ ಕಾಣದೆ ಇರುವ, ಅವರು ಪ್ರತಿನಿಧಿಸುವ ಊರು, ಕೇರಿ, ಲೋಕಾನುಭವ ಕಥನದ ಸಾವು. ಆನಂದ ಅವರು ತನ್ನ ಊರ ಕೇರಿಯ ಶೋಷಿತರ ಸಂಕಷ್ಟದ ಪಾರಂಪರಿಕ ಕಥನಗಳನ್ನು ಕಾವ್ಯವಾಗಿಸಿದವರು’ ಎಂದರು.</p>.<p>ಕಾರ್ಯಕ್ರಮದಲ್ಲಿ ಪ್ರೊ.ಆರ್.ಕೆ. ಹುಡಗಿ, ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ.ಸಾಗರ, ಮುಖಂಡರಾದ ಮರಿಯಪ್ಪ ಹಳ್ಳಿ, ಅರ್ಜುನ್ ಭದ್ರೆ, ದತ್ತಾತ್ರೇಯ ಇಕ್ಕಳಕಿ, ಆನಂದ ತಾಯಿ ಲಕ್ಕೂರು ಮುನಿಯಮ್ಮ, ತಮ್ಮ ಲಕ್ಕೂರು ನಾಗರಾಜ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ತನ್ನ ಮತ್ತು ತನ್ನ ಸಮಾಜದ ಸಂಕಷ್ಟಗಳನ್ನು ಅಕ್ಷರ ಸಂಸ್ಕೃತಿಯ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಲಕ್ಕೂರು ಆನಂದ ಅವರು ಸಂಕಷ್ಟಗಳ ಕಲ್ಲಿನ ಬುಡದಲ್ಲಿ ಬೆಳೆದ ಗರಿಕಿ ಹುಲ್ಲಿನಂತವರು. ಕಲ್ಲು ತೆಗೆಯುತ್ತಿದ್ದಂತೆ ಬಿಸಲಿಗೆ ಒಣಗಿದ ಗರಿಕಿ ಹುಲ್ಲಿನಂತೆ ಬಹು ಬೇಗನೇ ನಮ್ಮಿಂದ ದೂರಾದ ಪ್ರತಿಭಾನ್ವಿತ ಬರಹಗಾರ’ ಎಂದು ಗುಲಬರ್ಗಾ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಬಣ್ಣಿಸಿದರು.</p>.<p>ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಭಾನುವಾರ ಕನ್ನಡ ಅಧ್ಯಯನ ಸಂಸ್ಥೆ, ಎಸ್ಸಿ/ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಮತ್ತು ಕಲಬುರಗಿ ಸಮುದಾಯ ಆಯೋಜಿಸಿದ್ದ ಕವಿ ಲಕ್ಕೂರು ಆನಂದ ನೆನಪು ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆನಂದ ತಾನು ಬದುಕಿದಷ್ಟು ದಿನ ಒಳ್ಳೆಯದನ್ನು ಬರೆದ. ಅವರು ಬರೆದ ಸಾಹಿತ್ಯ ಮುಂದೊಂದು ದಿನ ಸಮಾಜಕ್ಕೆ ಉಪಯೋಗಕ್ಕೆ ಬರಲಿದೆ. ಅಕ್ಷರ, ಪ್ರಶಸ್ತಿಯೇ ಗೊತ್ತಿಲ್ಲದ ಸಮುದಾಯಕ್ಕೆ ಅಕ್ಷರವನ್ನೇ ನಂಬಿ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿ, ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನವಾಗಿ ತೋರಿಸಿದ್ದಾರೆ. ನಾವೆಲ್ಲ ಆನಂದ ಅವರ ಒಳ್ಳೆಯತವನ್ನು ನೆನಪಿಟ್ಟುಕೊಳ್ಳಬೇಕಿದೆ’ ಎಂದರು.</p>.<p>‘ಆನಂದ ಅವರು ಅಕಾಲಿಕವಾಗಿ ಸಾವನ್ನಪ್ಪಿದಾಗ ಕೇಂದ್ರೀಯ ವಿಶ್ವವಿದ್ಯಾಲಯ ಅನಾಗರಿಕವಾಗಿ ವರ್ತಿಸಿತ್ತು. ಕುಲಪತಿ, ಕುಲಸಚಿವರು ಶವ ನೋಡಲು ಬರಲಿಲ್ಲ. ಇದೆಲ್ಲ ಗೊತ್ತಿದ್ದರೂ ನಮ್ಮ ವಿದ್ಯಾರ್ಥಿಗಳು ಪ್ರಶ್ನೆ ಮಾಡದೆ ಮೌನವಾಗಿದ್ದಾರೆ. ಅಕ್ಷರ ಕಲಿಯುವುದು ಇನ್ನೊಬ್ಬರ ನೋವಿಗೆ ಮಿಡಿಯಲು, ಪರರ ರಕ್ಷಣೆಗಾಗಿ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ವಿ.ವಿ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿ. ‘ಆನಂದ ಅವರು ಸಮಾಜದ ಸಮಾನತೆಗಾಗಿ ತುಡಿತ, ಮಿಡಿತ ಇರಿಸಿಕೊಂಡಿದ್ದವರು. ಆನಂದ ಪ್ರಕೃತಿಯ ದಾಳಿಗೆ ಸಿಲುಕಿ ನಮ್ಮಿಂದ ದೂರಾಗಿ ಹೋಗಿರಬಹುದು. ಆದರೆ, ಅವರು ಹಚ್ಚಿದ ಸಾಹಿತ್ಯದ ಬೆಳಕು ಎಂದಿಗೂ ಪ್ರಜ್ವಲಿಸುತ್ತಾ ಇರಲಿದೆ’ ಎಂದರು.</p>.<p>ಕವಿ ಮಹಾದೇವ ಶಂಕನಪುರ ಮಾತನಾಡಿ, ‘ಆನಂದ ಅವರು ಉರಿದು ಹೋದ ಅತೃಪ್ತ ಏಕಾಂತ ದೀಪ. ಕಾವ್ಯಕ್ಕಾಗಿ ಬದುಕಿದ ಕವಿ, ಕಾವ್ಯವಾಗಿಯೇ ಅಸುನೀಗಿದರು. ಆನಂದನಲ್ಲಿ ಇದ್ದ ಹಸಿವು, ಅಭದ್ರತೆ, ಅಪಮಾನ, ಅತೃಪ್ತಿ ಮತ್ತು ಅಸಮಾನತೆಗಳು ಆತನ ಸಾಹಿತ್ಯ ಮತ್ತು ಕಾವ್ಯಕ್ಕೆ ಶಕ್ತಿಯಾಗಿದ್ದವು’ ಎಂದು ಅಭಿಪ್ರಾಯಪಟ್ಟರು.</p>.<p>ಸಿಯುಕೆ ಸಹ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಮಾತನಾಡಿ, ‘ಯಾವುದೇ ಕವಿ, ಸಾಹಿತಿಯ ಸಾವು ಸಾವಲ್ಲ. ಅದಕ್ಕಿಂತ ಮಿಗಿಲಾಗಿ ಅವರ ಅಂತರಾಳದಲ್ಲಿ ಉಳಿದು ಹೋಗಿರುವ, ಅಭಿವ್ಯಕ್ತಿಯಾಗಿ ಕಾಣದೆ ಇರುವ, ಅವರು ಪ್ರತಿನಿಧಿಸುವ ಊರು, ಕೇರಿ, ಲೋಕಾನುಭವ ಕಥನದ ಸಾವು. ಆನಂದ ಅವರು ತನ್ನ ಊರ ಕೇರಿಯ ಶೋಷಿತರ ಸಂಕಷ್ಟದ ಪಾರಂಪರಿಕ ಕಥನಗಳನ್ನು ಕಾವ್ಯವಾಗಿಸಿದವರು’ ಎಂದರು.</p>.<p>ಕಾರ್ಯಕ್ರಮದಲ್ಲಿ ಪ್ರೊ.ಆರ್.ಕೆ. ಹುಡಗಿ, ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ.ಸಾಗರ, ಮುಖಂಡರಾದ ಮರಿಯಪ್ಪ ಹಳ್ಳಿ, ಅರ್ಜುನ್ ಭದ್ರೆ, ದತ್ತಾತ್ರೇಯ ಇಕ್ಕಳಕಿ, ಆನಂದ ತಾಯಿ ಲಕ್ಕೂರು ಮುನಿಯಮ್ಮ, ತಮ್ಮ ಲಕ್ಕೂರು ನಾಗರಾಜ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>