2022ರ ಅಕ್ಟೋಬರ್ 5ರಂದು ದಸರಾ ಹಬ್ಬದ ಅಂಗವಾಗಿ ಲಕ್ಷ್ಮಿಪುತ್ರ ಜಮಜೇನವರ ಅವರು ಪತ್ನಿ ಸಮೇತ ತಮ್ಮ ಸಂಬಂಧಿಕರಾದ ವಸಂತ ನಗರದ ಅಣ್ಣಾರಾವ ಅವಧೆ ಅವರ ಮನೆಗೆ ಬನ್ನಿ ಕೊಡಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಅಪರಾಧಿಗಳು, ದುಡ್ಡಿನ ವಿಷಯವಾಗಿ ಜಗಳವಾಡಿದ್ದರು. ಬಳಿಕ ಎಳನೀರು ಕೊಚ್ಚುವ ಮಚ್ಚಿನಿಂದ ಲಕ್ಷ್ಮಿಪುತ್ರ ಅವರಿಗೆ ಹೊಡೆದು ಕೊಲೆ ಮಾಡಿದ್ದರು.