<p><strong>ಆಳಂದ</strong>: ಪಟ್ಟಣ ಹೊರವಲಯದ ಸದ್ಗುರು ದಾಸ ಆಶ್ರಮದ ಹಿಂಭಾಗದಲ್ಲಿ ಶುಕ್ರವಾರ ರಾತ್ರಿ ನಡೆದ ಸಂತೋಷ ಕೂಟದ ವೇಳೆ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.</p>.<p>ಶಿವಕುಮಾರ ಸೂರ್ಯಕಾಂತ (21) ಕೊಲೆಯಾದ ಯುವಕ. ಆರೋಪಿ ಮಲ್ಲಿಕಾರ್ಜುನ ಕಾಂಬಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಳಂದ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p>ಜ್ಯೋತಿಬಾ ಫುಲೆ ನಗರದ ನಿವಾಸಿ ಶಿವಕುಮಾರ, ತನ್ನ ಸ್ನೇಹಿತ ಪೃಥ್ವಿರಾಜ ಜನ್ಮದಿನದ ಸಂತೋಷ ಕೂಟಕ್ಕೆ ತೆರಳುವುದಾಗಿ ಕುಟುಂಬಸ್ಥರಿಗೆ ಹೇಳಿ ಮನೆಯಿಂದ ಹೊರ ಹೋದರು. ರಾತ್ರಿ ದಾಸ ಆಶ್ರಮದ ಹಿಂಭಾಗದಲ್ಲಿ ಸಂತೋಷ ಕೂಟದ ವೇಳೆ ಹಳೆಯ ವೈಷಮ್ಯ ಹಾಗೂ ಮಗನ ಏಳಿಗೆಯನ್ನು ಸಹಿಸಲು ಆಗದೆ ಶಿವಕುಮಾರನನ್ನು ಮಲ್ಲಿಕಾರ್ಜುನ ಕಾಂಬಳೆ ಅವರು ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತನ ತಾಯಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ಪಟ್ಟಣ ಹೊರವಲಯದ ಸದ್ಗುರು ದಾಸ ಆಶ್ರಮದ ಹಿಂಭಾಗದಲ್ಲಿ ಶುಕ್ರವಾರ ರಾತ್ರಿ ನಡೆದ ಸಂತೋಷ ಕೂಟದ ವೇಳೆ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.</p>.<p>ಶಿವಕುಮಾರ ಸೂರ್ಯಕಾಂತ (21) ಕೊಲೆಯಾದ ಯುವಕ. ಆರೋಪಿ ಮಲ್ಲಿಕಾರ್ಜುನ ಕಾಂಬಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಳಂದ ಠಾಣೆಯ ಪೊಲೀಸರು ತಿಳಿಸಿದ್ದಾರೆ.</p>.<p>ಜ್ಯೋತಿಬಾ ಫುಲೆ ನಗರದ ನಿವಾಸಿ ಶಿವಕುಮಾರ, ತನ್ನ ಸ್ನೇಹಿತ ಪೃಥ್ವಿರಾಜ ಜನ್ಮದಿನದ ಸಂತೋಷ ಕೂಟಕ್ಕೆ ತೆರಳುವುದಾಗಿ ಕುಟುಂಬಸ್ಥರಿಗೆ ಹೇಳಿ ಮನೆಯಿಂದ ಹೊರ ಹೋದರು. ರಾತ್ರಿ ದಾಸ ಆಶ್ರಮದ ಹಿಂಭಾಗದಲ್ಲಿ ಸಂತೋಷ ಕೂಟದ ವೇಳೆ ಹಳೆಯ ವೈಷಮ್ಯ ಹಾಗೂ ಮಗನ ಏಳಿಗೆಯನ್ನು ಸಹಿಸಲು ಆಗದೆ ಶಿವಕುಮಾರನನ್ನು ಮಲ್ಲಿಕಾರ್ಜುನ ಕಾಂಬಳೆ ಅವರು ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತನ ತಾಯಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>