ಘಟನೆಯ ವಿವರ: 2023ರ ಮಾರ್ಚ್ 26ರ ನಸುಕಿನ 12.18ಕ್ಕೆ ಯಲ್ಲಪ್ಪನು ಬಾಲಕಿಗೆ ಫೋನ್ ಮಾಡಿ ಕರೆಸಿಕೊಂಡು, ‘ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನ್ನ ಬಿಟ್ಟು ಇರಲ್ಲ. ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎಂದು ಪುಸಲಾಯಿಸಿದ್ದ. ಬಾಲಕಿ ಒಪ್ಪಿರಲಿಲ್ಲ. ಆದರೆ, ಯಲ್ಲಪ್ಪನ ತಂದೆ ದೇವಪ್ಪ, ‘ಏನಾದರೂ ಸಮಸ್ಯೆ ಬಂದರೆ ನಾನು ನೋಡಿಕೊಳ್ಳುತ್ತೇನೆ’ ಎಂದು ಬಲವಂತದಿಂದ ಅವರಿಬ್ಬರನ್ನೂ ಆಟೊದಲ್ಲಿ ಕಲಬುರಗಿ ರೈಲು ನಿಲ್ದಾಣದ ತನಕ ಕರೆತಂದು ಸೊಲ್ಲಾಪುರದತ್ತ ಹೋಗುವ ರೈಲು ಹತ್ತಿಸಿದ್ದ. ಬಳಿಕ ಯಲ್ಲಪ್ಪನು ಬಾಲಕಿಯನ್ನು ಪುಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದ.