<p><strong>ಕಾಳಗಿ:</strong> ರಾಜ್ಯ ಹೆದ್ದಾರಿ 126ರ ತೆಂಗಳಿ–ತೊನಸನಹಳ್ಳಿ ಕ್ರಾಸ್ ನಡುವಿನ ರಸ್ತೆ ದುರಸ್ತಿಗೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದ ತೆಂಗಳಿ ಗ್ರಾಮಸ್ಥರು, ದುರಸ್ತಿಗಾಗಿ ಹಣ ಹೊಂದಿಸಲು ಭಿಕ್ಷಾಟನೆಯೂ ಮಾಡಿದರು.</p>.<p>ಬುಟ್ಟಿಗಳನ್ನು ಮುಂದಿಟ್ಟುಕೊಂಡು ರಸ್ತೆಯಲ್ಲಿ ಕುಳಿತ ಗ್ರಾಮಸ್ಥರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ತೆಂಗಳಿ–ತೊನಸನಹಳ್ಳಿ ನಡುವಿನ 6 ಕಿ.ಮೀ. ರಸ್ತೆ ಹದಗೆಟ್ಟು, ಗುಂಡಿಗಳಿಂದ ಆವೃತ್ತವಾಗಿದೆ. ಪ್ರಾಣ ಭೀತಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ರಸ್ತೆ ದುರಸ್ತಿಯ ಮನವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.</p>.<p>‘ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಸುತ್ತಲಿನ ಗ್ರಾಮಗಳ ರಸ್ತೆಗಳು ಹಾಳಾಗಿವೆ. ಜನರ ಗೋಳು ಸರ್ಕಾರಕ್ಕೆ ಅರ್ಥವಾದಂತಿಲ್ಲ. ರಸ್ತೆ ಸುಧಾರಣೆಗೆ ಅನುದಾನ ಇಲ್ಲದಂತೆ ಕಾಣುತ್ತಿದೆ. ನಾವೇ ಭಿಕ್ಷೆ ಬೇಡಿ, ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡುತ್ತೇವೆ. ಇದಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ತಹಶೀಲ್ದಾರ್ ಘಮಾವತಿ ರಾಠೋಡ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ದಶವಂತ ಗಾಜರೆ, ಸಲೀಂ ಅಕ್ತಾರ್, ಮಲ್ಲಿಕಾರ್ಜುನ ದಂಡಿನ ಅವರು ಅಹವಾಲು ಆಲಿಸಿ, ರಸ್ತೆ ದುರಸ್ತಿಯ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ರಾಜ್ಯ ಹೆದ್ದಾರಿ 126ರ ತೆಂಗಳಿ–ತೊನಸನಹಳ್ಳಿ ಕ್ರಾಸ್ ನಡುವಿನ ರಸ್ತೆ ದುರಸ್ತಿಗೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದ ತೆಂಗಳಿ ಗ್ರಾಮಸ್ಥರು, ದುರಸ್ತಿಗಾಗಿ ಹಣ ಹೊಂದಿಸಲು ಭಿಕ್ಷಾಟನೆಯೂ ಮಾಡಿದರು.</p>.<p>ಬುಟ್ಟಿಗಳನ್ನು ಮುಂದಿಟ್ಟುಕೊಂಡು ರಸ್ತೆಯಲ್ಲಿ ಕುಳಿತ ಗ್ರಾಮಸ್ಥರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ತೆಂಗಳಿ–ತೊನಸನಹಳ್ಳಿ ನಡುವಿನ 6 ಕಿ.ಮೀ. ರಸ್ತೆ ಹದಗೆಟ್ಟು, ಗುಂಡಿಗಳಿಂದ ಆವೃತ್ತವಾಗಿದೆ. ಪ್ರಾಣ ಭೀತಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ರಸ್ತೆ ದುರಸ್ತಿಯ ಮನವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.</p>.<p>‘ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಸುತ್ತಲಿನ ಗ್ರಾಮಗಳ ರಸ್ತೆಗಳು ಹಾಳಾಗಿವೆ. ಜನರ ಗೋಳು ಸರ್ಕಾರಕ್ಕೆ ಅರ್ಥವಾದಂತಿಲ್ಲ. ರಸ್ತೆ ಸುಧಾರಣೆಗೆ ಅನುದಾನ ಇಲ್ಲದಂತೆ ಕಾಣುತ್ತಿದೆ. ನಾವೇ ಭಿಕ್ಷೆ ಬೇಡಿ, ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡುತ್ತೇವೆ. ಇದಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ತಹಶೀಲ್ದಾರ್ ಘಮಾವತಿ ರಾಠೋಡ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ದಶವಂತ ಗಾಜರೆ, ಸಲೀಂ ಅಕ್ತಾರ್, ಮಲ್ಲಿಕಾರ್ಜುನ ದಂಡಿನ ಅವರು ಅಹವಾಲು ಆಲಿಸಿ, ರಸ್ತೆ ದುರಸ್ತಿಯ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>