<p><strong>ವಾಡಿ</strong>: ಯಾಗಾಪುರ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಬಂದೂಕುಗಳ ಪರವಾನಿಗೆ ನವೀಕರಣ ತಕ್ಷಣಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಬಂಧೂಕುಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಸೂಚಿಸಿದರು.</p>.<p>ಜಿಲ್ಲೆಯ ಕಟ್ಟ ಕಡೆಯ ಗುಡ್ಡಗಾಡಿನ ಗ್ರಾಮ ಯಾಗಾಪುರದಲ್ಲಿ ವಾಡಿ ಠಾಣೆ ವತಿಯಿಂದ ಶನಿವಾರ ಆಯೋಜಿಸಿದ್ದ ಶಾಂತಿ ಸಭೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಲೈಸನ್ಸ್ ಹೊಂದಿರುವವರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದರೆ ನವೀಕರಣ ಮಾಡಲಾಗುತ್ತದೆ. ನವೀಕರಣ ಪತ್ರ ತೋರಿಸಿ ಠಾಣೆಯಲ್ಲಿನ ಬಂದೂಕುಗಳನ್ನು ವಾರಸುದಾರರು ತೆಗೆದುಕೊಂಡು ಹೋಗಬೇಕು’ ಎಂದರು.</p>.<p>‘ಮೊದಲು ಠಾಣೆಮಟ್ಟದಲ್ಲಿ ಶಾಂತಿ ಸಭೆ ನಡೆಸಲಾಗುತ್ತಿತ್ತು ಈಗ ಪ್ರತಿ ಗ್ರಾಮಕ್ಕೂ ತೆರಳಿ ಸಾರ್ವಜನಿಕರ ಮಧ್ಯೆ ಕಾರ್ಯಕ್ರಮ ಮಾಡಿ ಸಾರ್ವಜನಿಕರ ಸಮಸ್ಯೆಗೆ ಕಿವಿಗೊಡಲಾಗುತ್ತಿದೆ’ ಎಂದರು.</p>.<p>ಚಿತ್ತಾಪುರ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ ಮಾತನಾಡಿ, ಯಾಗಾಪುರ ದಟ್ಟ ಅರಣ್ಯದಿಂದ ಕೂಡಿದ್ದು ಸಾರ್ವಜನಿಕರು ಒಂಟಿಯಾಗಿ ತಿರುಗಾಡಬಾರದು. ಚಿರತೆ ಇರುವುದರ ಬಗ್ಗೆ ಮಾಹಿತಿ ಇದ್ದು ಜನರು ಆತಂಕಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.</p>.<p>‘ಈಚೆಗೆ ಸೈಬರ್ ಕ್ರೈಮ್ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಸಾರ್ವಜನಿಕರು ಘಟನೆ ನಡೆದ ತಕ್ಷಣವೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಅನುಮಾನಾಸ್ಪದ ವ್ಯಕ್ತಿಗಳು ಕರೆ ಮಾಡಿ ಒಟಿಪಿ ಕೇಳಿದರೆ ಹೇಳಬೇಡಿ. ಹಣ ಕಡಿತವಾದರೆ ಕರೆ ಮಾಡಿ ಅಕೌಂಟ್ ನಂಬರ್ ತಕ್ಷಣ ಬ್ಲಾಕ್ ಮಾಡಬಹುದಾಗಿದೆ’ ಎಂದು ಸಿಪಿಐ ಚಂದ್ರಶೇಖರ ತಿಗಡಿ ಹೇಳಿದರು.</p>.<p>ವಾಡಿ ಪಿಎಸ್ಐ ತಿರುಮಲೇಶ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಗ್ರಾಪಂ ಅಧ್ಯಕ್ಷೆ ಶಾಂತಿಬಾಯಿ ಡೋಂಗ್ರು ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿಡಿಒ ಬಸವರಾಜ ಪೂಜಾರಿ, ಮಲ್ಲನಗೌಡ, ವಿಜಯಕುಮಾರ ನಾಯಕ, ಧನರಾಜ್, ಲಕ್ಷ್ಮಣ ರಾಠೋಡ. ಕುಮಾರ ಚವ್ಹಾಣ, ಹಣಮಂತ ಪೂಜಾರಿ, ಪುರ್ಯಾ ನಾಯಕ, ಶಿವಪ್ಪ ಬಾಚವಾರ ಹಾಗೂ ಇನ್ನಿತರರು ಇದ್ದರು.</p>.<p>ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಸಾಬಣ್ಣ ಕೊಟ್ರಕಿ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ</strong>: ಯಾಗಾಪುರ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಬಂದೂಕುಗಳ ಪರವಾನಿಗೆ ನವೀಕರಣ ತಕ್ಷಣಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಬಂಧೂಕುಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಸೂಚಿಸಿದರು.</p>.<p>ಜಿಲ್ಲೆಯ ಕಟ್ಟ ಕಡೆಯ ಗುಡ್ಡಗಾಡಿನ ಗ್ರಾಮ ಯಾಗಾಪುರದಲ್ಲಿ ವಾಡಿ ಠಾಣೆ ವತಿಯಿಂದ ಶನಿವಾರ ಆಯೋಜಿಸಿದ್ದ ಶಾಂತಿ ಸಭೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಲೈಸನ್ಸ್ ಹೊಂದಿರುವವರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದರೆ ನವೀಕರಣ ಮಾಡಲಾಗುತ್ತದೆ. ನವೀಕರಣ ಪತ್ರ ತೋರಿಸಿ ಠಾಣೆಯಲ್ಲಿನ ಬಂದೂಕುಗಳನ್ನು ವಾರಸುದಾರರು ತೆಗೆದುಕೊಂಡು ಹೋಗಬೇಕು’ ಎಂದರು.</p>.<p>‘ಮೊದಲು ಠಾಣೆಮಟ್ಟದಲ್ಲಿ ಶಾಂತಿ ಸಭೆ ನಡೆಸಲಾಗುತ್ತಿತ್ತು ಈಗ ಪ್ರತಿ ಗ್ರಾಮಕ್ಕೂ ತೆರಳಿ ಸಾರ್ವಜನಿಕರ ಮಧ್ಯೆ ಕಾರ್ಯಕ್ರಮ ಮಾಡಿ ಸಾರ್ವಜನಿಕರ ಸಮಸ್ಯೆಗೆ ಕಿವಿಗೊಡಲಾಗುತ್ತಿದೆ’ ಎಂದರು.</p>.<p>ಚಿತ್ತಾಪುರ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ ಮಾತನಾಡಿ, ಯಾಗಾಪುರ ದಟ್ಟ ಅರಣ್ಯದಿಂದ ಕೂಡಿದ್ದು ಸಾರ್ವಜನಿಕರು ಒಂಟಿಯಾಗಿ ತಿರುಗಾಡಬಾರದು. ಚಿರತೆ ಇರುವುದರ ಬಗ್ಗೆ ಮಾಹಿತಿ ಇದ್ದು ಜನರು ಆತಂಕಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.</p>.<p>‘ಈಚೆಗೆ ಸೈಬರ್ ಕ್ರೈಮ್ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಸಾರ್ವಜನಿಕರು ಘಟನೆ ನಡೆದ ತಕ್ಷಣವೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಅನುಮಾನಾಸ್ಪದ ವ್ಯಕ್ತಿಗಳು ಕರೆ ಮಾಡಿ ಒಟಿಪಿ ಕೇಳಿದರೆ ಹೇಳಬೇಡಿ. ಹಣ ಕಡಿತವಾದರೆ ಕರೆ ಮಾಡಿ ಅಕೌಂಟ್ ನಂಬರ್ ತಕ್ಷಣ ಬ್ಲಾಕ್ ಮಾಡಬಹುದಾಗಿದೆ’ ಎಂದು ಸಿಪಿಐ ಚಂದ್ರಶೇಖರ ತಿಗಡಿ ಹೇಳಿದರು.</p>.<p>ವಾಡಿ ಪಿಎಸ್ಐ ತಿರುಮಲೇಶ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಗ್ರಾಪಂ ಅಧ್ಯಕ್ಷೆ ಶಾಂತಿಬಾಯಿ ಡೋಂಗ್ರು ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿಡಿಒ ಬಸವರಾಜ ಪೂಜಾರಿ, ಮಲ್ಲನಗೌಡ, ವಿಜಯಕುಮಾರ ನಾಯಕ, ಧನರಾಜ್, ಲಕ್ಷ್ಮಣ ರಾಠೋಡ. ಕುಮಾರ ಚವ್ಹಾಣ, ಹಣಮಂತ ಪೂಜಾರಿ, ಪುರ್ಯಾ ನಾಯಕ, ಶಿವಪ್ಪ ಬಾಚವಾರ ಹಾಗೂ ಇನ್ನಿತರರು ಇದ್ದರು.</p>.<p>ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಸಾಬಣ್ಣ ಕೊಟ್ರಕಿ ನಿರೂಪಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>