<p><strong>ಬಂಗಾರಪೇಟೆ:</strong> ಪಟ್ಟಣದ ಪಲವತಿಮ್ಮನಹಳ್ಳಿಯ ವಾರ್ಡ್ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ವಾರ್ಡ್ನಲ್ಲಿನ ಚರಂಡಿಗಳು ಕಟ್ಟಿಕೊಂಡಿದ್ದು, ಸೊಳ್ಳೆಗಳ ಕಾಟದಿಂದ ಡೆಂಗಿ ಹರಡುವ ಆತಂಕ ಮೂಡಿದೆ.</p>.<p>ಪುರಸಭೆ ವ್ಯಾಪ್ತಿಯಲ್ಲಿ ಈ ವಾರ್ಡ್ ಇದ್ದರೂ ಮೂಲಸೌಕರ್ಯಗಳಿಲ್ಲ.</p>.<p>ವಾರ್ಡ್ನಲ್ಲಿನ ರಸ್ತೆಗಳ ಪಕ್ಕದಲ್ಲಿ ಕಸವನ್ನು ಸುರಿಯಲಾಗುತ್ತಿದೆ. ಇದರಿಂದ ಉಂಟಾಗಿರುವ ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಕಸ ವಿಲೇವಾರಿಗೆ ಪುರಸಭೆಯ ಸ್ವಚ್ಛತಾ ಸಿಬ್ಬಂದಿ ಮೀನಮೇಷ ಎಣಿಸುತ್ತಿದ್ದಾರೆ.</p>.<p>ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ನ ಉದ್ದೇಶ ಈಡೇರುತ್ತಿಲ್ಲ. ವಾರ್ಡ್ನಲ್ಲಿ ಕಸ ಸಂಗ್ರಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಹಸಿ ಹಾಗೂ ಒಣಕಸದ ವಿಂಗಡಣೆಯೂ ಆಗುತ್ತಿಲ್ಲ. ಇದರಿಂದಾಗಿ ವಾರ್ಡ್ನ ನಾಗರಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಮೂಡಿದೆ.</p>.<p>ಚರಂಡಿಗಳಲ್ಲಿ ಹುಲ್ಲು ಮತ್ತು ಗಿಡಗಳು ಬೆಳೆದಿರುವ ಕಾರಣ ಚರಂಡಿಯ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಿಲ್ಲ .ಇದರಲ್ಲಿ ಸೊಳ್ಳೆಗಳ ತವರೂರು ಆಗಿದೆ ಸಂಜೆಯಾದರೆ ಸೋಳ್ಳೇಗಳ ಕಾಟ ವಿಪರೀತ ವಾಗಿದೆ ಡೆಂಗಿ ಹರಡುವ ಆತಂಕ ಮನೆಯಾಗಿದೆ.</p>.<p>ಶೌಚಾಲಯ ಬಳಕೆಯು ಘನತೆಯ, ಶುಚಿತ್ವದ, ಸ್ವಸ್ಥತೆಯ, ಅಭಿವೃದ್ಧಿಯ ಸಂಕೇತ ಆದರೆ ಇಲ್ಲಿನ ಜನರಿಗೆ ವಿಧಿಯಿಲ್ಲದೆ ಬಯಲು ಶೌಚ ಅನಾರೋಗ್ಯರ ಮತ್ತು ಅನೈರ್ಮಲ್ಯಕ್ಕೆ ರಹದಾರಿ ಆದರು ಸಹ ಬಯಲು ಬಹಿರ್ದೇಸೆಯೇ ಆಸರೆಯಾಗಿದ್ದು. ಬಹುತೇಕ ಜನರು ರೈಲು ಅಳಿಗಳ ಪಕ್ಕದ ಬಯಲ್ಲೇ ದೇಹ ಬಾದೆಯನ್ನು ತಿರಿಸಿಕೋಳ್ಳುತ್ತಿದ್ದಾರೆ.</p>.<p>ಸಮುದಾಯದ ಶೌಚಾಲಯವನ್ನು ಸಹ ವಾರ್ಡಿನಲ್ಲಿ ನಿರ್ಮಾಣ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಿವಾಸಿಗಳು.</p>.<p>ಕಿರಿದಾದ ರಸ್ತೆಗಳಿಂದ ಕೂಡಿದ್ದು ಸಂಚರಿಸಲು ಸಹ ತುಂಬ ಕಷ್ಟಕರವಾದೆ,ಒಂದು ವಾಹನ ಬಂದರೆ ಮತ್ತೊಂದು ವಾಹನಕ್ಕೆ ದಾರಿ ಬಿಡಲು ಸಹ ದಾರಿ ಇಲ್ಲ.</p>.<p>ಚರಂಡಿಗಳನ್ನು ಸ್ವಚ್ಛತೆಗೂಳಿಸಿ ,ಕಸವನ್ನು ಸಂಗ್ರಹಿಸಲು ಸೂಕ್ತ ಕ್ರಮವಹಿಸಿ ,ಸೊಳ್ಳೆಗಳ ನಿಯಂತ್ರಿಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ವಾರ್ಡಿನಿ ನಿವಾಸಿಗಳು ಆಗ್ರಹಿಸಿದರು.</p>.<p>ಕೋಟ್ 1:ಪಲವತಿಮ್ಮನಹಳ್ಳಿಯ ವಾರ್ಡ್ ನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆಯನ್ನು ಮತ್ತು ವಾರ್ಡಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮುನಿಸ್ವಾಮಿ ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದರು.</p>.<p>ಕೋಟ್ 2 : ಸೊಳ್ಳೆಗಳಿಂದ ಡೆಂಗಿ ಕಾಯಲೆ ಹರಡುವ ಆತಂಕವಿದೆ ಆದ್ದರಿಂದ ಸೊಳ್ಳೆಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅರವಿಂದ ಪಲವತಿಮ್ಮನಹಳ್ಳಿಯ ತಿಳಿಸಿದರು.</p>.<p>ಕೋಟ್ 3: ಚರಂಡಿಗಳನ್ನು ಸ್ವಚ್ಛತೆಗೂಳಿಸಿ ನೈರ್ಮಲ್ಯವನ್ನು ಕಾಪಾಡಬೇಕು ಮತ್ತು ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡ ಬಯಲು ಶೌಚವನ್ನು ನಿಯಂತ್ರಿಸಬೇಕು ಚಿದಾನಂದ ಪಲವತಿಮ್ಮನಹಳ್ಳಿ</p>.<p>ಕೋಟ್ 4: ಚರಂಡಿಯಗಳನ್ನು ಸ್ವಚ್ಛತೆಗೂಳಿಸಲು ಮತ್ತು ಸೊಳ್ಳೆಗಳನ್ನು ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಗೋವಿಂದರಾಜು ಆರೋಗ್ಯ ಅಧಿಕಾರಿ ಪುರಸಭೆ ಬಂಗಾರಪೇಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ:</strong> ಪಟ್ಟಣದ ಪಲವತಿಮ್ಮನಹಳ್ಳಿಯ ವಾರ್ಡ್ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ವಾರ್ಡ್ನಲ್ಲಿನ ಚರಂಡಿಗಳು ಕಟ್ಟಿಕೊಂಡಿದ್ದು, ಸೊಳ್ಳೆಗಳ ಕಾಟದಿಂದ ಡೆಂಗಿ ಹರಡುವ ಆತಂಕ ಮೂಡಿದೆ.</p>.<p>ಪುರಸಭೆ ವ್ಯಾಪ್ತಿಯಲ್ಲಿ ಈ ವಾರ್ಡ್ ಇದ್ದರೂ ಮೂಲಸೌಕರ್ಯಗಳಿಲ್ಲ.</p>.<p>ವಾರ್ಡ್ನಲ್ಲಿನ ರಸ್ತೆಗಳ ಪಕ್ಕದಲ್ಲಿ ಕಸವನ್ನು ಸುರಿಯಲಾಗುತ್ತಿದೆ. ಇದರಿಂದ ಉಂಟಾಗಿರುವ ದುರ್ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಕಸ ವಿಲೇವಾರಿಗೆ ಪುರಸಭೆಯ ಸ್ವಚ್ಛತಾ ಸಿಬ್ಬಂದಿ ಮೀನಮೇಷ ಎಣಿಸುತ್ತಿದ್ದಾರೆ.</p>.<p>ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ನ ಉದ್ದೇಶ ಈಡೇರುತ್ತಿಲ್ಲ. ವಾರ್ಡ್ನಲ್ಲಿ ಕಸ ಸಂಗ್ರಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಹಸಿ ಹಾಗೂ ಒಣಕಸದ ವಿಂಗಡಣೆಯೂ ಆಗುತ್ತಿಲ್ಲ. ಇದರಿಂದಾಗಿ ವಾರ್ಡ್ನ ನಾಗರಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಮೂಡಿದೆ.</p>.<p>ಚರಂಡಿಗಳಲ್ಲಿ ಹುಲ್ಲು ಮತ್ತು ಗಿಡಗಳು ಬೆಳೆದಿರುವ ಕಾರಣ ಚರಂಡಿಯ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಿಲ್ಲ .ಇದರಲ್ಲಿ ಸೊಳ್ಳೆಗಳ ತವರೂರು ಆಗಿದೆ ಸಂಜೆಯಾದರೆ ಸೋಳ್ಳೇಗಳ ಕಾಟ ವಿಪರೀತ ವಾಗಿದೆ ಡೆಂಗಿ ಹರಡುವ ಆತಂಕ ಮನೆಯಾಗಿದೆ.</p>.<p>ಶೌಚಾಲಯ ಬಳಕೆಯು ಘನತೆಯ, ಶುಚಿತ್ವದ, ಸ್ವಸ್ಥತೆಯ, ಅಭಿವೃದ್ಧಿಯ ಸಂಕೇತ ಆದರೆ ಇಲ್ಲಿನ ಜನರಿಗೆ ವಿಧಿಯಿಲ್ಲದೆ ಬಯಲು ಶೌಚ ಅನಾರೋಗ್ಯರ ಮತ್ತು ಅನೈರ್ಮಲ್ಯಕ್ಕೆ ರಹದಾರಿ ಆದರು ಸಹ ಬಯಲು ಬಹಿರ್ದೇಸೆಯೇ ಆಸರೆಯಾಗಿದ್ದು. ಬಹುತೇಕ ಜನರು ರೈಲು ಅಳಿಗಳ ಪಕ್ಕದ ಬಯಲ್ಲೇ ದೇಹ ಬಾದೆಯನ್ನು ತಿರಿಸಿಕೋಳ್ಳುತ್ತಿದ್ದಾರೆ.</p>.<p>ಸಮುದಾಯದ ಶೌಚಾಲಯವನ್ನು ಸಹ ವಾರ್ಡಿನಲ್ಲಿ ನಿರ್ಮಾಣ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಿವಾಸಿಗಳು.</p>.<p>ಕಿರಿದಾದ ರಸ್ತೆಗಳಿಂದ ಕೂಡಿದ್ದು ಸಂಚರಿಸಲು ಸಹ ತುಂಬ ಕಷ್ಟಕರವಾದೆ,ಒಂದು ವಾಹನ ಬಂದರೆ ಮತ್ತೊಂದು ವಾಹನಕ್ಕೆ ದಾರಿ ಬಿಡಲು ಸಹ ದಾರಿ ಇಲ್ಲ.</p>.<p>ಚರಂಡಿಗಳನ್ನು ಸ್ವಚ್ಛತೆಗೂಳಿಸಿ ,ಕಸವನ್ನು ಸಂಗ್ರಹಿಸಲು ಸೂಕ್ತ ಕ್ರಮವಹಿಸಿ ,ಸೊಳ್ಳೆಗಳ ನಿಯಂತ್ರಿಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ವಾರ್ಡಿನಿ ನಿವಾಸಿಗಳು ಆಗ್ರಹಿಸಿದರು.</p>.<p>ಕೋಟ್ 1:ಪಲವತಿಮ್ಮನಹಳ್ಳಿಯ ವಾರ್ಡ್ ನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆಯನ್ನು ಮತ್ತು ವಾರ್ಡಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮುನಿಸ್ವಾಮಿ ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದರು.</p>.<p>ಕೋಟ್ 2 : ಸೊಳ್ಳೆಗಳಿಂದ ಡೆಂಗಿ ಕಾಯಲೆ ಹರಡುವ ಆತಂಕವಿದೆ ಆದ್ದರಿಂದ ಸೊಳ್ಳೆಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅರವಿಂದ ಪಲವತಿಮ್ಮನಹಳ್ಳಿಯ ತಿಳಿಸಿದರು.</p>.<p>ಕೋಟ್ 3: ಚರಂಡಿಗಳನ್ನು ಸ್ವಚ್ಛತೆಗೂಳಿಸಿ ನೈರ್ಮಲ್ಯವನ್ನು ಕಾಪಾಡಬೇಕು ಮತ್ತು ಸಮುದಾಯ ಶೌಚಾಲಯವನ್ನು ನಿರ್ಮಾಣ ಮಾಡ ಬಯಲು ಶೌಚವನ್ನು ನಿಯಂತ್ರಿಸಬೇಕು ಚಿದಾನಂದ ಪಲವತಿಮ್ಮನಹಳ್ಳಿ</p>.<p>ಕೋಟ್ 4: ಚರಂಡಿಯಗಳನ್ನು ಸ್ವಚ್ಛತೆಗೂಳಿಸಲು ಮತ್ತು ಸೊಳ್ಳೆಗಳನ್ನು ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಗೋವಿಂದರಾಜು ಆರೋಗ್ಯ ಅಧಿಕಾರಿ ಪುರಸಭೆ ಬಂಗಾರಪೇಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>