ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ವೃದ್ಧರಿಗೆ ಹೆಚ್ಚುತ್ತಿದೆಯೇ ಕಿರುಕುಳ?

ಸಹಾಯ ಕೋರಿ ಹಿರಿಯ ಜೀವಗಳಿಂದ ಜಿಲ್ಲೆಯ ಸಹಾಯವಾಣಿಗೆ ತಿಂಗಳಿಗೆ 300ಕ್ಕೂ ಹೆಚ್ಚು ದೂರು!
Published : 17 ಅಕ್ಟೋಬರ್ 2024, 6:12 IST
Last Updated : 17 ಅಕ್ಟೋಬರ್ 2024, 6:12 IST
ಫಾಲೋ ಮಾಡಿ
Comments
ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡು ಪೋಷಕರನ್ನು ಆಚೆ ಹಾಕುತ್ತಿರುವ ಸಂಬಂಧ ಸಹಾಯವಾಣಿಗೆ ಕರೆ ಬರುತ್ತಿವೆ. ಸಂಧಾನ ಅಥವಾ ಎಸಿ ನ್ಯಾಯಾಲಯ ಮೂಲಕ ಬಗೆಹರಿಸುತ್ತಿದ್ದೇವೆ
ಸಿ.ಎಚ್‌.ಹರೀಶ್‌ ಯೋಜನಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ
ಅಮ್ಮನನ್ನು ಪುತ್ರ ಸೊಸೆ ಹೊರಹಾಕಿದರು!
ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಾಕಿ ಸಲುಹಿದ ಪೋಷಕರನ್ನು ಹೊರೆ ಎಂದು ಭಾವಿಸಿ ಮಕ್ಕಳು ಮನೆಯಿಂದ ಹೊರಹಾಕುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿರುವುದು ಗೊತ್ತಾಗಿದೆ. ಆಸ್ತಿಗೆ ಸಹಿ ಹಾಕಿಸಿಕೊಂಡು ಹೊರಗೆ ನೂಕಿರುವ ಪ್ರಕರಣವೂ ಪತ್ತೆಯಾಗಿದೆ. ಕೋಲಾರ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದಲ್ಲಿ ವಿಧವೆ ವೃದ್ಧೆಯೊಬ್ಬರು ತನ್ನ ಪುತ್ರ ಹಾಗೂ ಸೊಸೆ ಜೊತೆ ತಮ್ಮ ಮನೆಯಲ್ಲಿ ವಾಸವಿದ್ದರು. ಆದರೆ ಯಾವುದೋ ಕಾರಣಕ್ಕೆ ಕುಟುಂಬದವರು ವೃದ್ಧೆಯನ್ನು ಮನೆಯಿಂದ ಹೊರಹಾಕಿದ್ದರು. ಮಾನಸಿಕವಾಗಿ ಕುಗ್ಗಿ ಹೋದ ಅವರು ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಹಿರಿಯ ಜೀವದ ಪರವಾಗಿ ಸಹಾಯವಾಣಿ ಸಂಸ್ಥೆಯು ಕೋಲಾರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿತು. ಪ್ರಕರಣ ಅವಲೋಕಿಸಿದ ಉಪವಿಭಾಗಾಧಿಕಾರಿಯು ವೃದ್ಧೆಗೆ ಮನೆ ಬಿಡಿಸಿ ಕೊಡುವಂತೆ ಆದೇಶ ಮಾಡಿದ್ದಾರೆ ಎಂದು ಸಹಾಯವಾಣಿ ಯೋಜನಾಧಿಕಾರಿ ಹರೀಶ್‌ ತಿಳಿಸಿದರು.
ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡು ಪೋಷಕರನ್ನು ಆಚೆ ಹಾಕುತ್ತಿರುವ ಸಂಬಂಧ ಸಹಾಯವಾಣಿಗೆ ಕರೆ ಬರುತ್ತಿವೆ. ಸಂಧಾನ ಅಥವಾ ಎಸಿ ನ್ಯಾಯಾಲಯ ಮೂಲಕ ಬಗೆಹರಿಸುತ್ತಿದ್ದೇವೆ
ಸಿ.ಎಚ್‌.ಹರೀಶ್‌, ಯೋಜನಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT