ಟಿಕೆಟ್ ಕೈತಪ್ಪಿಸಿಕೊಂಡಿದ್ದವರು ಆಕಾಂಕ್ಷಿ!
2023ರ ವಿಧಾನಸಭೆ ಚುನಾವಣೆಯಲ್ಲಿ ಕಡೆಯ ಕ್ಷಣದಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿಸಿಕೊಂಡಿದ್ದ ಡಾ.ಬಿ.ಸಿ.ಮುದ್ದು ಗಂಗಾಧರ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ಟಿ.ಚನ್ನಯ್ಯರ ಮೊಮ್ಮಗ. ‘23 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದು ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಮುಳುಬಾಗಿಲು ಕ್ಷೇತ್ರದ ‘ಬಿ’ ಫಾರಂ ನನಗೇ ಸಿಕ್ಕಿತ್ತು. ಕೊನೆ ಗಳಿಗೆಯಲ್ಲಿ ಹೈಕಮಾಂಡ್ ಹಾಗೂ ಡಿ.ಕೆ.ಶಿವಕುಮಾರ್ ಮನವಿ ಮೇರೆಗೆ ಹಿಂದೆ ಸರಿದೆ. ಲೋಕಸಭೆ ಟಿಕೆಟ್ನ ಭರವಸೆ ನೀಡಿದ್ದಾರೆ’ ಎಂದು ಮುದ್ದು ಗಂಗಾಧರ್ ತಿಳಿಸಿದರು.