ಜೂನ್ ಮೊದಲ ವಾರದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿ ಭೂಮಿ ತೇವವಾಗಿದ್ದ ರಿಂದ ಹೊಲದಲ್ಲಿ ರಾಗಿ ಬಿತ್ತನೆ ಮಾಡಿದ್ದೆವು, ನಂತರ ಮಳೆ ಬರದೆ ಭೂಮಿಯ ತೇವವೆಲ್ಲ ಒಣಗಿ ಹೋಗಿ ರಾಗಿ ಮೊಳಕೆಗಳು ಒಣಗುತ್ತಿವೆ. ಈಗ ಮಳೆ ಬಂದರೆ ಬೆಳೆಗೆ ಜೀವ ಬಂದು ಬೆಳೆಯಲು ಅನುಕೂಲವಾಗುತ್ತದೆ.
-ಕಾಂತರಾಜು, ರೈತರು, ರಾಜಕಲ್ಲಳ್ಳಿ ಗ್ರಾಮ
ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆಗೆ ಅವಧಿ ಮುಗಿದಿದ್ದು, ರಾಗಿ ಬಿತ್ತನೆಗೆ ಆಗಸ್ಟ್ ಕೊನೆಯ ವಾರದವರೆಗೂ ಕಾಲಾವಕಾಶವಿದೆ. ಮುಂದೆ ಮಳೆ ಚುರುಕಾದರೆ ರೈತರು ರಾಗಿ ಬಿತ್ತನೆ ಮಾಡಬಹುದು.