ಆರೋಪಿ, ತಾಯಲೂರು ಗ್ರಾಮದ ಬತ್ಯಪ್ಪ (25) ಎಂಬುವವರ ಕಾಲಿಗೆ ಗುಂಡು ತಾಗಿದ್ದು, ಆತನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ.
ಗಾಯಾಳು ಆರೋಪಿಯನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅರಣ್ಯ ಗಸ್ತು ಅಧಿಕಾರಿ ಅನಿಲ್ ಸಿದ್ಧರಾಮ ಪರೀಟ ಅವರು ಹಲ್ಲೆ ನಡೆಸಿದ ಕಳ್ಳರ ಮೇಲೆ ಆತ್ಮರಕ್ಷಣೆಗಾಗಿ ಹಾಗೂ ಕಳ್ಳತನ ತಡೆಯುವ ಸಲುವಾಗಿ ಗುಂಡು ಹಾರಿಸಿದ್ದಾರೆ.
ಪರಾರಿಯಾಗಿರುವ ಇನ್ನುಳಿದ ಆರೋಪಿಗಳಾದ ಸೀನಪ್ಪ (30), ರವಿ (25), ಸುರೇಶ್, ಸೀನಪ್ಪ (30) ಹಾಗೂ ಮಹೇಂದ್ರ (35) ಎಂಬುವರ ಪತ್ತೆಗೆ ಬಲೆ ಬೀಸಿದ್ದಾರೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.