ಇದಕ್ಕೆ ಕೊಪ್ಪಳ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಹಾಗೂ ಬೆಂಗಳೂರು ನಗರದ ಆಂಬುಲೆನ್ಸ್ ಸಿಬ್ಬಂದಿ ಸಹಕಾರ ನೀಡಿ ಮಗು ಇದ್ದ ವಾಹನಕ್ಕೆ ಬೆಂಗಾವಲಾಗಿ ತೆರಳಿದ್ದಾರೆ. ಮಗುವನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯಾ ಜಿಲ್ಲೆಯಿಂದ ಹೊರಟ ಆಂಬುಲೆನ್ಸ್ ಸಿಬ್ಬಂದಿ ಜಿಲ್ಲೆ ವ್ಯಾಪ್ತಿ ಮುಗಿಯುವ ತನಕ ಬೆಂಗಾವಲಾಗಿ ಕೆಲಸ ಮಾಡಿದ್ದಾರೆ.