<p><strong>ಕುಷ್ಟಗಿ:</strong> ಕಚೇರಿಗೆ ಸಿಬ್ಬಂದಿ ಹಾಜರಾತಿಯ ಮೇಲೆ ನಿಗಾ ಇರಿಸುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲಿಯ ಪುರಸಭೆಯಲ್ಲಿ ಮಾಯವಾಗಿದ್ದು, ಕೆಲ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾಟಾಚಾರಕ್ಕೆ ಕಚೇರಿಗೆ ಬಂದು ನಂತರ ನಾಪತ್ತೆ ಆಗುತ್ತಿರುವುದು ಕಂಡು ಬಂದಿದೆ.</p>.<p>ಬೆಳಿಗ್ಗೆ ಕಚೇರಿಗೆ ಬರುವ ಕೆಲವರು ಹಾಜರಾತಿ ಕಡತಕ್ಕೆ ಸಹಿ ಹಾಕಿ, ಕಚೇರಿ ಕೆಲಸದ ನೆಪದಲ್ಲಿ ಕಾಲ್ಕಿತ್ತುವುದು ಸಾಮಾನ್ಯವಾಗಿದೆ. ಮುಖ್ಯಾಧಿಕಾರಿ ಸಹಿತ ಕೆಲ ಅಧಿಕಾರಿಗಳೂ ಕಚೇರಿಯಲ್ಲಿರುವುದೇ ಅಪರೂಪ. ಮೇಲಧಿಕಾರಿಗಳ ಭೇಟಿಗೆ, ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಕೇಂದ್ರಕ್ಕೆ ಹೋಗಿದ್ದಾರೆ ಅಥವಾ ವಾರ್ಡುಗಳಿಗೆ ಭೇಟಿ ನೀಡಲು ತೆರಳಿದ್ದಾರೆ ಎಂಬ ಸಬೂಬುಗಳು ಸಾಮಾನ್ಯ. ಹಾಗಾಗಿ ಯಾರು ಯಾವ ಹೊತ್ತಿಗೆ ಕಚೇರಿಗೆ ಬರುತ್ತಾರೆ. ಹೋಗುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅಧಿಕಾರಿಗಳೇ ಇಲ್ಲವೆಂದ ಮೇಲೆ ಸಿಬ್ಬಂದಿ ಕಳ್ಳಾಟಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ ಎಂದು ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಗೊಣಗುತ್ತಿದ್ದಾರೆ.</p>.<p>ರೀಡರ್ ನಿಷ್ಕ್ರಿಯ: ಸಿಬ್ಬಂದಿ ಹಾಜರಾತಿಯನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಕಚೇರಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ಪುರಸಭೆಯಲ್ಲಿ ಗೋಡೆಗೆ ನೇತುಹಾಕಿರುವ ಬಯೋಮೆಟ್ರಿಕ್ ವ್ಯವಸ್ಥೆಯ ರೀಡರ್ ಸಾಧನ ನಿಷ್ಕ್ರಿಯಯಗೊಂಡು ಹಲವು ತಿಂಗಳುಗಳೇ ಕಳೆದಿವೆ. ಕೆಟ್ಟು ಎಷ್ಟು ದಿನ ಆಗಿದೆ ಎಂದು ಕೇಳಿದರೆ ಕೆಲ ಸಿಬ್ಬಂದಿ ವರ್ಷವೇ ಆಗಿದೆ ಎನ್ನುತ್ತಾರೆ. ಇನ್ನೂ ಕೆಲವರು ನಾಲ್ಕು ತಿಂಗಳು ಎಂದರೆ, ಮುಖ್ಯಾಧಿಕಾರಿ ಧರಣೇಂದ್ರಕುಮಾರ 15 ದಿನ ಆಗಿದೆ ಎಂದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿದರು.</p>.<p>ಕಚೇರಿಗೆ ಬಾರದವರು, ನೆಪಕ್ಕೆ ರಜೆ ಚೀಟಿ ಇಟ್ಟು ಹೋಗುವವರು ನಂತರ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಾರೆ. ಇದಕ್ಕೆ ಮುಖ್ಯಾಧಿಕಾರಿಯೂ ಹೊರತಾಗಿಲ್ಲ ಎಂಬ ಆರೋಪಗಳು ಕೇಳಿಬಂದವು.</p>.<p>ಪುರಸಭೆಯಲ್ಲಿ ಸದ್ಯ ಆಡಳಿತ ಮಂಡಳಿ ಅಧ್ಯಕ್ಷರು ಇಲ್ಲದ ಕಾರಣ ಉಪ ವಿಭಾಗಾಧಿಕಾರಿಯೇ ಇದರ ಆಡಳಿತಾಧಿಕಾರಿಯಾಗಿದ್ದಾರೆ. ಆದರೆ ಅಧಿಕಾರ ವಹಿಸಿಕೊಂಡ ನಂತರ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಇಲ್ಲಿಗೆ ಭೇಟಿ ನೀಡಿದ್ದೇ ಅಪರೂಪ ಎನ್ನಲಾಗಿದೆ. ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಮಾಲಗಿತ್ತಿ ಅವರು ಕರೆ ಸ್ವೀಕರಿಸಲಿಲ್ಲ.</p>.<div><blockquote>ನಿಷ್ಕ್ರಿಯಯಗೊಂಡಿರುವ ಬಯೋಮೆಟ್ರಿಕ್ ಸಾಧನ ದುರಸ್ತಿಗೊಳಿಸಿ ಅದರಲ್ಲೇ ಹಾಜರಾತಿ ಕಡ್ಡಾಯಗೊಳಿಸಲು ಕ್ರಮಕೈಗೊಳ್ಳುತ್ತೇವೆ</blockquote><span class="attribution"> ಡಿ.ಎನ್. ಧರಣೇಂದ್ರಕುಮಾರ ಪುರಸಭೆ ಮುಖ್ಯಾಧಿಕಾರಿ</span></div>.<p><strong>ಬಯೋಮೆಟ್ರಿಕ್ ಜಿಲ್ಲೆಯಲ್ಲೇ ಇಲ್ಲ!</strong> </p><p>ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಯಂತ್ರ ನಿಷ್ಕ್ರಿಯಯಗೊಂಡಿರುವುದು ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯವಿರುವ ಸಮಯದಲ್ಲಿ ಬಂದು ಹೋಗುತ್ತಿದ್ದಾರೆ. ಹೀಗಾಗಿ ಕೆಲಸ ಕಚೇರಿಗೆ ಅಲೆದಲೆದು ಸಾಕಾಗಿದೆ ಎಂಬ ಸಾರ್ವಜನಿಕರ ಆರೋಪ ಕುರಿತು ‘ಪ್ರಜಾವಾಣಿ’ಯು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರನ್ನು ಕೇಳಿದರೆ ‘ನಮ್ಮ ಕಚೇರಿಯಲ್ಲಷ್ಟೇ ಅಲ್ಲ ಜಿಲ್ಲೆಯ ಯಾವ ಸ್ಥಳೀಯ ಸಂಸ್ಥೆಯಲ್ಲೂ ಬಯೋಮೆಟ್ರಿಕ್ ವ್ಯವಸ್ಥೆಯೇ ಇಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ಕಚೇರಿಗೆ ಸಿಬ್ಬಂದಿ ಹಾಜರಾತಿಯ ಮೇಲೆ ನಿಗಾ ಇರಿಸುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲಿಯ ಪುರಸಭೆಯಲ್ಲಿ ಮಾಯವಾಗಿದ್ದು, ಕೆಲ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾಟಾಚಾರಕ್ಕೆ ಕಚೇರಿಗೆ ಬಂದು ನಂತರ ನಾಪತ್ತೆ ಆಗುತ್ತಿರುವುದು ಕಂಡು ಬಂದಿದೆ.</p>.<p>ಬೆಳಿಗ್ಗೆ ಕಚೇರಿಗೆ ಬರುವ ಕೆಲವರು ಹಾಜರಾತಿ ಕಡತಕ್ಕೆ ಸಹಿ ಹಾಕಿ, ಕಚೇರಿ ಕೆಲಸದ ನೆಪದಲ್ಲಿ ಕಾಲ್ಕಿತ್ತುವುದು ಸಾಮಾನ್ಯವಾಗಿದೆ. ಮುಖ್ಯಾಧಿಕಾರಿ ಸಹಿತ ಕೆಲ ಅಧಿಕಾರಿಗಳೂ ಕಚೇರಿಯಲ್ಲಿರುವುದೇ ಅಪರೂಪ. ಮೇಲಧಿಕಾರಿಗಳ ಭೇಟಿಗೆ, ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಕೇಂದ್ರಕ್ಕೆ ಹೋಗಿದ್ದಾರೆ ಅಥವಾ ವಾರ್ಡುಗಳಿಗೆ ಭೇಟಿ ನೀಡಲು ತೆರಳಿದ್ದಾರೆ ಎಂಬ ಸಬೂಬುಗಳು ಸಾಮಾನ್ಯ. ಹಾಗಾಗಿ ಯಾರು ಯಾವ ಹೊತ್ತಿಗೆ ಕಚೇರಿಗೆ ಬರುತ್ತಾರೆ. ಹೋಗುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅಧಿಕಾರಿಗಳೇ ಇಲ್ಲವೆಂದ ಮೇಲೆ ಸಿಬ್ಬಂದಿ ಕಳ್ಳಾಟಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ ಎಂದು ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಗೊಣಗುತ್ತಿದ್ದಾರೆ.</p>.<p>ರೀಡರ್ ನಿಷ್ಕ್ರಿಯ: ಸಿಬ್ಬಂದಿ ಹಾಜರಾತಿಯನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಕಚೇರಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ಪುರಸಭೆಯಲ್ಲಿ ಗೋಡೆಗೆ ನೇತುಹಾಕಿರುವ ಬಯೋಮೆಟ್ರಿಕ್ ವ್ಯವಸ್ಥೆಯ ರೀಡರ್ ಸಾಧನ ನಿಷ್ಕ್ರಿಯಯಗೊಂಡು ಹಲವು ತಿಂಗಳುಗಳೇ ಕಳೆದಿವೆ. ಕೆಟ್ಟು ಎಷ್ಟು ದಿನ ಆಗಿದೆ ಎಂದು ಕೇಳಿದರೆ ಕೆಲ ಸಿಬ್ಬಂದಿ ವರ್ಷವೇ ಆಗಿದೆ ಎನ್ನುತ್ತಾರೆ. ಇನ್ನೂ ಕೆಲವರು ನಾಲ್ಕು ತಿಂಗಳು ಎಂದರೆ, ಮುಖ್ಯಾಧಿಕಾರಿ ಧರಣೇಂದ್ರಕುಮಾರ 15 ದಿನ ಆಗಿದೆ ಎಂದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿದರು.</p>.<p>ಕಚೇರಿಗೆ ಬಾರದವರು, ನೆಪಕ್ಕೆ ರಜೆ ಚೀಟಿ ಇಟ್ಟು ಹೋಗುವವರು ನಂತರ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಾರೆ. ಇದಕ್ಕೆ ಮುಖ್ಯಾಧಿಕಾರಿಯೂ ಹೊರತಾಗಿಲ್ಲ ಎಂಬ ಆರೋಪಗಳು ಕೇಳಿಬಂದವು.</p>.<p>ಪುರಸಭೆಯಲ್ಲಿ ಸದ್ಯ ಆಡಳಿತ ಮಂಡಳಿ ಅಧ್ಯಕ್ಷರು ಇಲ್ಲದ ಕಾರಣ ಉಪ ವಿಭಾಗಾಧಿಕಾರಿಯೇ ಇದರ ಆಡಳಿತಾಧಿಕಾರಿಯಾಗಿದ್ದಾರೆ. ಆದರೆ ಅಧಿಕಾರ ವಹಿಸಿಕೊಂಡ ನಂತರ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಇಲ್ಲಿಗೆ ಭೇಟಿ ನೀಡಿದ್ದೇ ಅಪರೂಪ ಎನ್ನಲಾಗಿದೆ. ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಮಾಲಗಿತ್ತಿ ಅವರು ಕರೆ ಸ್ವೀಕರಿಸಲಿಲ್ಲ.</p>.<div><blockquote>ನಿಷ್ಕ್ರಿಯಯಗೊಂಡಿರುವ ಬಯೋಮೆಟ್ರಿಕ್ ಸಾಧನ ದುರಸ್ತಿಗೊಳಿಸಿ ಅದರಲ್ಲೇ ಹಾಜರಾತಿ ಕಡ್ಡಾಯಗೊಳಿಸಲು ಕ್ರಮಕೈಗೊಳ್ಳುತ್ತೇವೆ</blockquote><span class="attribution"> ಡಿ.ಎನ್. ಧರಣೇಂದ್ರಕುಮಾರ ಪುರಸಭೆ ಮುಖ್ಯಾಧಿಕಾರಿ</span></div>.<p><strong>ಬಯೋಮೆಟ್ರಿಕ್ ಜಿಲ್ಲೆಯಲ್ಲೇ ಇಲ್ಲ!</strong> </p><p>ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಯಂತ್ರ ನಿಷ್ಕ್ರಿಯಯಗೊಂಡಿರುವುದು ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯವಿರುವ ಸಮಯದಲ್ಲಿ ಬಂದು ಹೋಗುತ್ತಿದ್ದಾರೆ. ಹೀಗಾಗಿ ಕೆಲಸ ಕಚೇರಿಗೆ ಅಲೆದಲೆದು ಸಾಕಾಗಿದೆ ಎಂಬ ಸಾರ್ವಜನಿಕರ ಆರೋಪ ಕುರಿತು ‘ಪ್ರಜಾವಾಣಿ’ಯು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರನ್ನು ಕೇಳಿದರೆ ‘ನಮ್ಮ ಕಚೇರಿಯಲ್ಲಷ್ಟೇ ಅಲ್ಲ ಜಿಲ್ಲೆಯ ಯಾವ ಸ್ಥಳೀಯ ಸಂಸ್ಥೆಯಲ್ಲೂ ಬಯೋಮೆಟ್ರಿಕ್ ವ್ಯವಸ್ಥೆಯೇ ಇಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>