<p><strong>ಅಳವಂಡಿ</strong>: ಸಮೀಪದ ಬೆಟಗೇರಿ ಗ್ರಾಮದ ಎಸ್ಸಿ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಚರಂಡಿಗಳಿಂದ ದುರ್ನಾತ ಬೀರುತ್ತಿದೆ. ಹಾಗಾಗಿ ಸ್ವಚ್ಛತೆ ಕಾಪಾಡುವಂತೆ ಅಲ್ಲಿನ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಗ್ರಾಮ ಪಂಚಾಯಿತಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು.</p>.<p>‘ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಚರಂಡಿ ಇರುವುದರಿಂದ ಚರಂಡಿ ಸಂಪೂರ್ಣ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಚರಂಡಿಯ ದುರ್ನಾತಕ್ಕೆ ಅನೇಕ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ’ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆರೋಪಿಸಿದರು.</p>.<p>‘ಶಾಲಾ ಮೈದಾನವು ಚರಂಡಿಗಿಂತ ಕೆಳಮಟ್ಟದಲ್ಲಿ ಇರುವುದರಿಂದ ಮಳೆ ಬಂದರೆ ಮಳೆ ನೀರು ಸಂಪೂರ್ಣವಾಗಿ ಮೈದಾನ ಸೇರುತ್ತದೆ. ಇದರಿಂದ ಪರದಾಡುವುದು ಸಾಮಾನ್ಯವಾಗಿದೆ. ಹಲವಾರು ಬಾರಿ ಶಾಲಾ ಮೈದಾನ ಅಭಿವೃದ್ಧಿ ಪಡಿಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.</p>.<p>ಇತ್ತೀಚೆಗೆ ಡೆಂಗಿ ವ್ಯಾಪಕವಾಗಿ ಆವರಿಸಿದೆ. ಈ ಶಾಲೆಯ ಪಕ್ಕದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ರೋಗದ ಭೀತಿ ಹರಡಿದೆ’ ಎಂದುನಿವಾಸಿಗಳು ದೂರಿದರು.</p>.<p>ಪ್ರಮುಖರಾದ ಭರಮಪ್ಪ ಕಂಬಳಿ, ಶರಣಪ್ಪ, ದುರಗೇಶ, ನಾರಾಯಣಪ್ಪ, ಮಹೇಶ, ಕೋಟೇಶ, ಸಿದ್ದಣ್ಣ, ಸಿದ್ದು ಗುಡಿಮುಂದಿನ, ಸಿದ್ದಪ್ಪ, ಸಂಕಪ್ಪ, ಮಾರುತಿ, ಮೈಲ್ಲಪ್ಪ, ಗುಂಡಪ್ಪ, ಮರಿಯಪ್ಪ, ವಿದ್ಯಾರ್ಥಿಗಳು ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳವಂಡಿ</strong>: ಸಮೀಪದ ಬೆಟಗೇರಿ ಗ್ರಾಮದ ಎಸ್ಸಿ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಚರಂಡಿಗಳಿಂದ ದುರ್ನಾತ ಬೀರುತ್ತಿದೆ. ಹಾಗಾಗಿ ಸ್ವಚ್ಛತೆ ಕಾಪಾಡುವಂತೆ ಅಲ್ಲಿನ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಗ್ರಾಮ ಪಂಚಾಯಿತಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು.</p>.<p>‘ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಚರಂಡಿ ಇರುವುದರಿಂದ ಚರಂಡಿ ಸಂಪೂರ್ಣ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಚರಂಡಿಯ ದುರ್ನಾತಕ್ಕೆ ಅನೇಕ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ’ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆರೋಪಿಸಿದರು.</p>.<p>‘ಶಾಲಾ ಮೈದಾನವು ಚರಂಡಿಗಿಂತ ಕೆಳಮಟ್ಟದಲ್ಲಿ ಇರುವುದರಿಂದ ಮಳೆ ಬಂದರೆ ಮಳೆ ನೀರು ಸಂಪೂರ್ಣವಾಗಿ ಮೈದಾನ ಸೇರುತ್ತದೆ. ಇದರಿಂದ ಪರದಾಡುವುದು ಸಾಮಾನ್ಯವಾಗಿದೆ. ಹಲವಾರು ಬಾರಿ ಶಾಲಾ ಮೈದಾನ ಅಭಿವೃದ್ಧಿ ಪಡಿಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.</p>.<p>ಇತ್ತೀಚೆಗೆ ಡೆಂಗಿ ವ್ಯಾಪಕವಾಗಿ ಆವರಿಸಿದೆ. ಈ ಶಾಲೆಯ ಪಕ್ಕದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ರೋಗದ ಭೀತಿ ಹರಡಿದೆ’ ಎಂದುನಿವಾಸಿಗಳು ದೂರಿದರು.</p>.<p>ಪ್ರಮುಖರಾದ ಭರಮಪ್ಪ ಕಂಬಳಿ, ಶರಣಪ್ಪ, ದುರಗೇಶ, ನಾರಾಯಣಪ್ಪ, ಮಹೇಶ, ಕೋಟೇಶ, ಸಿದ್ದಣ್ಣ, ಸಿದ್ದು ಗುಡಿಮುಂದಿನ, ಸಿದ್ದಪ್ಪ, ಸಂಕಪ್ಪ, ಮಾರುತಿ, ಮೈಲ್ಲಪ್ಪ, ಗುಂಡಪ್ಪ, ಮರಿಯಪ್ಪ, ವಿದ್ಯಾರ್ಥಿಗಳು ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>