<p><strong>ಕೊಪ್ಪಳ:</strong> ಅರಣ್ಯ ಇಲಾಖೆ ಅಧಿಕಾರಿಗಳು ನಗರದಲ್ಲಿ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಜಿಂಕೆ ಮಾಂಸ ಹಾಗೂ ಚರ್ಮದ ಮಾರಾಟಗಾರನನ್ನು ಬಂಧಿಸಿದ್ದಾರೆ. </p><p>ನಗರದ ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್ನಿಂದ ಭಾಗ್ಯನಗರಕ್ಕೆ ಹೋಗುವ ರಸ್ತೆಯ ಸಾಮಿಲ್ ಹತ್ತಿರ ವಾಹನದಲ್ಲಿ ಜಿಂಕೆ ಮಾಂಸ ಮತ್ತು ಚರ್ಮ ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಗ್ಯಾನಪ್ಪ ಎಂಬಾತನನ್ನು ಬಂಧಿಸಲಾಗಿದೆ. ಈತ ₹250ರಿಂದ ₹300ಗೆ ಕೆ.ಜಿ.ಯಂತೆ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಯಿಂದ ಎಂಟೂವರೆ ಕೆ.ಜಿ. ಜಿಂಕೆ ಮಾಂಸ ಮತ್ತು ಐದು ಜಿಂಕೆ ಚರ್ಮ ವಶಕ್ಕೆ ಪಡೆದುಕೊಳ್ಳಲಾಗಿದೆ.</p><p>ಮುನಿರಾಬಾದ್ ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡರ್, ಕೊಪ್ಪಳ ಪ್ರಭಾರ ಉಪವಲಯ ಅರಣ್ಯಾಧಿಕಾರಿ ರಾಜೇಸಾಬ ರಾಟಿ, ಸಿಬ್ಬಂದಿ ವೀರಪ್ಪ, ಉಪವಲಯ ಅರಣ್ಯಾಧಿಕಾರಿ ಮಹಾಂತಯ್ಯ, ನಾಗರಾಜಗೌಡ, ದೊಡ್ಡೇಶ, ಯಲಬುರ್ಗಾ ಶಾಖೆಯ ಶರೀಫ್ ಕೋತ್ವಾಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.</p><p><strong>ಹಂದಿ ಮಾಂಸದ ಬೆನ್ನು ಹತ್ತಿ:</strong> ಹಲವು ತಿಂಗಳುಗಳಿಂದ ನಗರದಲ್ಲಿ ಜಿಂಕೆ ಚರ್ಮ ಹಾಗೂ ಮಾಂಸದ ಮಾರಾಟ ಜಾಲದ ಬಗ್ಗೆ ಅಧಿಕಾರಿಗಳಿಗೆ ಸುಳಿವು ಲಭಿಸಿತ್ತು. ಅದರ ಬೆನ್ನು ಹತ್ತಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಈಗ ಹಂದಿ ಮಾಂಸ ಮಾರಾಟದ ಶಂಕೆಯ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಜಿಂಕೆಯ ಮಾಂಸ ಮತ್ತು ಚರ್ಮ ಪತ್ತೆಯಾಗಿದೆ.</p><p>‘ಮಾರಾಟದ ಬಗ್ಗೆ ಎರಡ್ಮೂರು ತಿಂಗಳುಗಳ ಹಿಂದೆಯೇ ಮಾಹಿತಿಯಿತ್ತು. ಆರೋಪಿ ಬಾಯಿಬಿಟ್ಟ ಮಾಹಿತಿ ಪ್ರಕಾರ ಏಳೆಂಟು ತಿಂಗಳುಗಳಿಂದ ಈ ಕೆಲಸದಲ್ಲಿ ತೊಡಗಿದ್ದೇನೆಂದು ತಿಳಿಸಿದ್ದಾನೆ. ಮೂರು ವರ್ಷಗಳ ಹಿಂದೆ ಕುಕನೂರು ಹಾಗೂ ಯಲಬುರ್ಗಾ ಭಾಗದಲ್ಲಿ ಜಿಂಕೆ ಮಾಂಸ ಹಾಗೂ ಚರ್ಮ ಮಾರಾಟದ ಪ್ರಕರಣ ನಡೆದಿದ್ದವು. ಜಿಂಕೆ ಚರ್ಮ ಖರೀದಿ ಮಾಡಿದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಅರಣ್ಯ ಇಲಾಖೆ ಅಧಿಕಾರಿಗಳು ನಗರದಲ್ಲಿ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಜಿಂಕೆ ಮಾಂಸ ಹಾಗೂ ಚರ್ಮದ ಮಾರಾಟಗಾರನನ್ನು ಬಂಧಿಸಿದ್ದಾರೆ. </p><p>ನಗರದ ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್ನಿಂದ ಭಾಗ್ಯನಗರಕ್ಕೆ ಹೋಗುವ ರಸ್ತೆಯ ಸಾಮಿಲ್ ಹತ್ತಿರ ವಾಹನದಲ್ಲಿ ಜಿಂಕೆ ಮಾಂಸ ಮತ್ತು ಚರ್ಮ ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಗ್ಯಾನಪ್ಪ ಎಂಬಾತನನ್ನು ಬಂಧಿಸಲಾಗಿದೆ. ಈತ ₹250ರಿಂದ ₹300ಗೆ ಕೆ.ಜಿ.ಯಂತೆ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಯಿಂದ ಎಂಟೂವರೆ ಕೆ.ಜಿ. ಜಿಂಕೆ ಮಾಂಸ ಮತ್ತು ಐದು ಜಿಂಕೆ ಚರ್ಮ ವಶಕ್ಕೆ ಪಡೆದುಕೊಳ್ಳಲಾಗಿದೆ.</p><p>ಮುನಿರಾಬಾದ್ ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡರ್, ಕೊಪ್ಪಳ ಪ್ರಭಾರ ಉಪವಲಯ ಅರಣ್ಯಾಧಿಕಾರಿ ರಾಜೇಸಾಬ ರಾಟಿ, ಸಿಬ್ಬಂದಿ ವೀರಪ್ಪ, ಉಪವಲಯ ಅರಣ್ಯಾಧಿಕಾರಿ ಮಹಾಂತಯ್ಯ, ನಾಗರಾಜಗೌಡ, ದೊಡ್ಡೇಶ, ಯಲಬುರ್ಗಾ ಶಾಖೆಯ ಶರೀಫ್ ಕೋತ್ವಾಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.</p><p><strong>ಹಂದಿ ಮಾಂಸದ ಬೆನ್ನು ಹತ್ತಿ:</strong> ಹಲವು ತಿಂಗಳುಗಳಿಂದ ನಗರದಲ್ಲಿ ಜಿಂಕೆ ಚರ್ಮ ಹಾಗೂ ಮಾಂಸದ ಮಾರಾಟ ಜಾಲದ ಬಗ್ಗೆ ಅಧಿಕಾರಿಗಳಿಗೆ ಸುಳಿವು ಲಭಿಸಿತ್ತು. ಅದರ ಬೆನ್ನು ಹತ್ತಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಈಗ ಹಂದಿ ಮಾಂಸ ಮಾರಾಟದ ಶಂಕೆಯ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಜಿಂಕೆಯ ಮಾಂಸ ಮತ್ತು ಚರ್ಮ ಪತ್ತೆಯಾಗಿದೆ.</p><p>‘ಮಾರಾಟದ ಬಗ್ಗೆ ಎರಡ್ಮೂರು ತಿಂಗಳುಗಳ ಹಿಂದೆಯೇ ಮಾಹಿತಿಯಿತ್ತು. ಆರೋಪಿ ಬಾಯಿಬಿಟ್ಟ ಮಾಹಿತಿ ಪ್ರಕಾರ ಏಳೆಂಟು ತಿಂಗಳುಗಳಿಂದ ಈ ಕೆಲಸದಲ್ಲಿ ತೊಡಗಿದ್ದೇನೆಂದು ತಿಳಿಸಿದ್ದಾನೆ. ಮೂರು ವರ್ಷಗಳ ಹಿಂದೆ ಕುಕನೂರು ಹಾಗೂ ಯಲಬುರ್ಗಾ ಭಾಗದಲ್ಲಿ ಜಿಂಕೆ ಮಾಂಸ ಹಾಗೂ ಚರ್ಮ ಮಾರಾಟದ ಪ್ರಕರಣ ನಡೆದಿದ್ದವು. ಜಿಂಕೆ ಚರ್ಮ ಖರೀದಿ ಮಾಡಿದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>