<p><strong>ಗಂಗಾವತಿ</strong>: ತುಂಗಭದ್ರಾ ಜಲಾಶಯಕ್ಕೆ ಒಂದು ವಾರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಬುಧವಾರ ಸಂಜೆ ಹತ್ತು ಕ್ರಸ್ಟರ್ ಗೇಟ್ಗಳ ಮೂಲಕ ತುಂಗಾಭದ್ರ ಜಲಾಶಯದಿಂದ ನದಿಗೆ ಹೆಚ್ಚುವರಿಯಾಗಿ ಇಪ್ಪತ್ತೈದು ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದೆ.</p>.<p>2-3 ದಿನಗಳ ಹಿಂದೆ 3 ಕ್ರಸ್ಟರ್ ಗೇಟ್ಗಳ ಮೂಲಕ 11 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಬಿಟ್ಟು, ನದಿಪಾತ್ರದ ಜನರಿಗೆ, ಮೀನುಗಾರರಿಗೆ, ಹರಿಗೋಲು ಸವಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ತುಂಗಾಭದ್ರ ಜಲಾಶಯಕ್ಕೆ ಒಳಹರಿವು ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ನದಿಗೆ ಕಡಿಮೆ ಪ್ರಮಾಣದ ನೀರು ಹರಿಬಿಡಲಾಗಿತ್ತು.</p>.<p>ಇದೀಗ ಜಲಾಶಯದಲ್ಲಿ 96 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿ, ಒಳಹರಿವು ಹೆಚ್ಚಿರುವ ಕಾರಣ ನದಿಗೆ ನೀರು ಹರಿಸಲಾಗಿದೆ. ನೀರು ಹರಿಸುವ ಕುರಿತು ಮಧ್ಯಾಹ್ನವೇ ತಿಳಿಸಲಾಗಿದೆ.</p>.<p>ಹಾಗಾಗಿ ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ, ಗೂಗಿಬಂಡಿ, ದೇವಘಾಟ್, ಲಕ್ಷ್ಮೀಪುರ, ನಾಗನಳ್ಳಿ, ಚಿಕ್ಕಂಜಂಕಲ್, ಅಯೋಧ್ಯೆ, ಮುಸ್ಟೂರು, ಢಣಾಪುರ, ಹೆಬ್ಬಾಳ ಭಾಗಕ್ಕೆ ನೀರು ನುಗ್ಗುವ ಸಂಭವ ಇದ್ದು, ಯುವಕರು ಸೆಲ್ಫಿಗಾಗಿ ಹಾಗೂ ರೈತರು ನದಿಪಾತ್ರದ ಜಮೀನುಗಳ ಬಳಿಗೆ ತೆರಳಬಾರದು ಎಂದು ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ತುಂಗಭದ್ರಾ ಜಲಾಶಯಕ್ಕೆ ಒಂದು ವಾರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಬುಧವಾರ ಸಂಜೆ ಹತ್ತು ಕ್ರಸ್ಟರ್ ಗೇಟ್ಗಳ ಮೂಲಕ ತುಂಗಾಭದ್ರ ಜಲಾಶಯದಿಂದ ನದಿಗೆ ಹೆಚ್ಚುವರಿಯಾಗಿ ಇಪ್ಪತ್ತೈದು ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದೆ.</p>.<p>2-3 ದಿನಗಳ ಹಿಂದೆ 3 ಕ್ರಸ್ಟರ್ ಗೇಟ್ಗಳ ಮೂಲಕ 11 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಬಿಟ್ಟು, ನದಿಪಾತ್ರದ ಜನರಿಗೆ, ಮೀನುಗಾರರಿಗೆ, ಹರಿಗೋಲು ಸವಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ತುಂಗಾಭದ್ರ ಜಲಾಶಯಕ್ಕೆ ಒಳಹರಿವು ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ನದಿಗೆ ಕಡಿಮೆ ಪ್ರಮಾಣದ ನೀರು ಹರಿಬಿಡಲಾಗಿತ್ತು.</p>.<p>ಇದೀಗ ಜಲಾಶಯದಲ್ಲಿ 96 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿ, ಒಳಹರಿವು ಹೆಚ್ಚಿರುವ ಕಾರಣ ನದಿಗೆ ನೀರು ಹರಿಸಲಾಗಿದೆ. ನೀರು ಹರಿಸುವ ಕುರಿತು ಮಧ್ಯಾಹ್ನವೇ ತಿಳಿಸಲಾಗಿದೆ.</p>.<p>ಹಾಗಾಗಿ ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ, ಗೂಗಿಬಂಡಿ, ದೇವಘಾಟ್, ಲಕ್ಷ್ಮೀಪುರ, ನಾಗನಳ್ಳಿ, ಚಿಕ್ಕಂಜಂಕಲ್, ಅಯೋಧ್ಯೆ, ಮುಸ್ಟೂರು, ಢಣಾಪುರ, ಹೆಬ್ಬಾಳ ಭಾಗಕ್ಕೆ ನೀರು ನುಗ್ಗುವ ಸಂಭವ ಇದ್ದು, ಯುವಕರು ಸೆಲ್ಫಿಗಾಗಿ ಹಾಗೂ ರೈತರು ನದಿಪಾತ್ರದ ಜಮೀನುಗಳ ಬಳಿಗೆ ತೆರಳಬಾರದು ಎಂದು ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>