<p><strong>ಕನಕಗಿರಿ</strong>: ಸಮೀಪದ ಕರಡಿಗುಡ್ಡದ ಹನುಮಪ್ಪ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.</p>.<p>ರಥೋತ್ಸವದ ನಿಮಿತ್ತ ಗುರುವಾರ ಕನಕದಾಸ ಪೂಜಾರ ಅವರ ಮನೆಯಿಂದ ಕರಡಿಗುಡ್ಡದವರೆಗೆ ಪಲ್ಲಕ್ಕಿ ಮೆರವಣಿಗೆ ನೆರವೇರಿತು. ರಾತ್ರಿ ಪೂಜೆ, ಕಾರ್ತಿಕೋತ್ಸವ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು.</p>.<p>ಶುಕ್ರವಾರ ಬೆಳಿಗ್ಗೆ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ನೈವೇದ್ಯ ಸೇರಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ, ಭಕ್ತಿಯಿಂದ ನಡೆದವು.<br> ಅನ್ನ ಸಂತರ್ಪಣೆ ಮಾಡಲಾಗಿತ್ತು. ಮುಂಗೈ ಆಟ ಸಹ ನಡೆಯಿತು. ಚಿಕ್ಕ ಮಾದಿನಾಳ ಗ್ರಾಮದ ಭಕ್ತರು ಕರಡಿ ಗುಡ್ಡದ ವರೆಗೆ ರಥೋತ್ಸವಕ್ಕೆ ತಾಳ, ಮೇಳ, ಡೊಳ್ಳು ಕುಣಿತದ ಮೂಲಕ ಕಳಸ ತಂದರು.</p>.<p>ಸಂಜೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರು ಉತ್ತುತ್ತಿ, ಬಾಳೇ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗದಗ, ಬಳ್ಳಾರಿ, ಕೊಪ್ಪಳ, ಕನಕಗಿರಿ, ಗಂಗಾವತಿ ಚಿಕ್ಕಮಾದಿನಾಳ, ನಾಗಲಾಪುರ, ಬಂಕಾಪುರ, ಹಿರೇ ಮಾದಿನಾಳ, ವಿಠಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.</p>.<p>ರಥೋತ್ಸವ ಮುಗಿದಾಗ ನವ ವಧು–ವರರು ಪರಸ್ಪರ ಕೈ ಹಿಡಿದುಕೊಂಡು ಸಾಮಗ್ರಿಗಳನ್ನು ಖರೀದಿಸಿದರು. ಗೆಳೆಯರು, ಸಮಾನ ಮನಸ್ಕರು ಮಂಡಾಳು, ಮಿರ್ಚಿ, ಸಿಹಿ ಖಾದ್ಯ ಖರೀದಿಸಿ ಗುಂಪಾಗಿ ಕುಳಿತು ಸವೆದರು.</p>.<p>ರಾತ್ರಿ ಪ್ರಾಣ ದೇವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕನಕಾಚಲಪತಿ ದೇವಸ್ಥಾನದಲ್ಲಿ ಮಂಗಳಾರುತಿ ಮಾಡಿಸಲಾಯಿತು. ಪೂಜಾರ ಮನೆವರೆಗೆ ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ</strong>: ಸಮೀಪದ ಕರಡಿಗುಡ್ಡದ ಹನುಮಪ್ಪ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.</p>.<p>ರಥೋತ್ಸವದ ನಿಮಿತ್ತ ಗುರುವಾರ ಕನಕದಾಸ ಪೂಜಾರ ಅವರ ಮನೆಯಿಂದ ಕರಡಿಗುಡ್ಡದವರೆಗೆ ಪಲ್ಲಕ್ಕಿ ಮೆರವಣಿಗೆ ನೆರವೇರಿತು. ರಾತ್ರಿ ಪೂಜೆ, ಕಾರ್ತಿಕೋತ್ಸವ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು.</p>.<p>ಶುಕ್ರವಾರ ಬೆಳಿಗ್ಗೆ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ನೈವೇದ್ಯ ಸೇರಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ, ಭಕ್ತಿಯಿಂದ ನಡೆದವು.<br> ಅನ್ನ ಸಂತರ್ಪಣೆ ಮಾಡಲಾಗಿತ್ತು. ಮುಂಗೈ ಆಟ ಸಹ ನಡೆಯಿತು. ಚಿಕ್ಕ ಮಾದಿನಾಳ ಗ್ರಾಮದ ಭಕ್ತರು ಕರಡಿ ಗುಡ್ಡದ ವರೆಗೆ ರಥೋತ್ಸವಕ್ಕೆ ತಾಳ, ಮೇಳ, ಡೊಳ್ಳು ಕುಣಿತದ ಮೂಲಕ ಕಳಸ ತಂದರು.</p>.<p>ಸಂಜೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರು ಉತ್ತುತ್ತಿ, ಬಾಳೇ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗದಗ, ಬಳ್ಳಾರಿ, ಕೊಪ್ಪಳ, ಕನಕಗಿರಿ, ಗಂಗಾವತಿ ಚಿಕ್ಕಮಾದಿನಾಳ, ನಾಗಲಾಪುರ, ಬಂಕಾಪುರ, ಹಿರೇ ಮಾದಿನಾಳ, ವಿಠಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.</p>.<p>ರಥೋತ್ಸವ ಮುಗಿದಾಗ ನವ ವಧು–ವರರು ಪರಸ್ಪರ ಕೈ ಹಿಡಿದುಕೊಂಡು ಸಾಮಗ್ರಿಗಳನ್ನು ಖರೀದಿಸಿದರು. ಗೆಳೆಯರು, ಸಮಾನ ಮನಸ್ಕರು ಮಂಡಾಳು, ಮಿರ್ಚಿ, ಸಿಹಿ ಖಾದ್ಯ ಖರೀದಿಸಿ ಗುಂಪಾಗಿ ಕುಳಿತು ಸವೆದರು.</p>.<p>ರಾತ್ರಿ ಪ್ರಾಣ ದೇವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕನಕಾಚಲಪತಿ ದೇವಸ್ಥಾನದಲ್ಲಿ ಮಂಗಳಾರುತಿ ಮಾಡಿಸಲಾಯಿತು. ಪೂಜಾರ ಮನೆವರೆಗೆ ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>