<p><strong>ಗಂಗಾವತಿ:</strong> ತುಂಗಭದ್ರಾ ಜಲಾಶಯಕ್ಕೆ ಕಳೆದ ಒಂದು ವಾರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಗುರುವಾರ ಸಂಜೆ 28 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಹೆಚ್ಚುವರಿ ನೀರು ಹರಿಸಿದ ಪರಿಣಾಮ ವಿರುಪಾಪುರಗಡ್ಡೆ, ನವವೃಂದಾವನಗಡ್ಡೆ ಸಂಚಾರ ಸಂಪರ್ಕ ಕಡಿತವಾಗಿದೆ.</p>.<p>ತುಂಗಭದ್ರಾ ಜಲಾಶಯಕ್ಕೆ ಸದ್ಯ 97,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ 1633 ಅಡಿಗಳ ಪೈಕಿ 1632 ಅಡಿ ನೀರು ಭರ್ತಿಯಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಪ್ರಮಾಣ ಹೆಚ್ಚಳವಿದ್ದು, ಡ್ಯಾಂಗೆ ಅಪಾಯ ಆಗಬಾರದೆಂದು ನಿರ್ಧರಿಸಿ ನದಿಗೆ ನೀರು ಹರಿಸಲಾಗಿದೆ.</p>.<p>ಈಗಾಗಲೇ 83,649 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ನದಿಗೆ ಬಿಟ್ಟಿದ್ದು, ಸಾಣಾಪುರದ ಬಳಿ ವಾಟರ್ ಫಾಲ್ಸ್, ಋಷಿಮುಖ ಪರ್ವತ, ಚಿಂತಾಮಣಿ ಸೇರಿ ನವವೃಂದಾವನಗಡ್ಡೆ ಸಂಚಾರ ಸಂಪರ್ಕ ಕಡಿತವಾಗಿದೆ. ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯಲ್ಲಿರುವ 64 ಸಾಲಿನಮಂಟಪ ಅರ್ಧದಷ್ಟು ನೀರಿನಲ್ಲಿ ಮುಳುಗಿದೆ.</p>.<p>ತಾಲ್ಲೂಕು ಆಡಳಿತ, ಸಾಣಾಪುರ, ಆನೆಗೊಂದಿ, ಸಂಗಾಪುರ ಅಧಿಕಾರಿಗಳು ನದಿಪಾತ್ರಕ್ಕೆ ಸಾರ್ವಜನಿಕರು ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನದಿಪಾತ್ರದ ಬಳಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.</p>.<p>ನದಿಪಾತ್ರದಲ್ಲಿ ಯುವಕ ಹುಚ್ಚಾಟ: ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ. ಯಾರೂ ನದಿಪಾತ್ರಕ್ಕೆ ತೆರಳಬಾರದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ, ತಾಲ್ಲೂಕು ಆಡಳಿತ, ಗ್ರಾ.ಪಂ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿ, ಡಂಗೂರ ಸಾರಿಸಿ ತಿಳಿಸಿದ್ದರು. ಆದರೆ, ಯುವಕರು ಯಾವುದನ್ನೂ ಲೆಕ್ಕಿಸದೇ ಸಾಣಾಪುರ ಗ್ರಾಮದ ವಾಟರ್ ಫಾಲ್ಸ್, ವೈಟ್ ಸ್ಯಾಂಡ್ ರೆಸಾರ್ಟ್ ಸಮೀಪದ ಉಸುಕಿನಗಡ್ಡೆ ಬಳಿ, ವಿರುಪಾಪುರಗಡ್ಡೆಗೆ ತೆರಳುವ ರಸ್ತೆ ಮಾರ್ಗದಲ್ಲಿ, ಚಿಂತಾಮಣಿ, ನವವೃಂದಾವನಗಡ್ಡೆಗೆ ತೆರಳುವ ಕೋಟೆಯ ಬಳಿ ಯುವಕರು ಸೆಲ್ಫಿಗಾಗಿ ಹುಚ್ಚಾಟ ಮೆರೆದರೆ, ಮಧ್ಯವಯಸ್ಸಿನವರು ಮೀನು ಹಿಡಿಯುವ ಸಾಹಸ ಮಾಡುತ್ತಿದ್ದಾರೆ.</p>.<p>ನದಿಪಾತ್ರದ ಅಲ್ಲಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದರೂ ಅಧಿಕಾರಿಗಳ ಕಣ್ಣುತಪ್ಪಿಸಿ ಯುವಕರು ನೀರಿನ ಬಳಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.</p>.<p>ಸದ್ಯ ಗಂಗಾವತಿ-ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ಇದ್ದು, ನೀರಿನ ಪ್ರಮಾಣ ಹೆಚ್ಚಳವಾದರೆ, ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಗಂಗಾವತಿ ಸಾರಿಗೆ ಇಲಾಖೆ ವ್ಯವಸ್ಥಾಪಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ತುಂಗಭದ್ರಾ ಜಲಾಶಯಕ್ಕೆ ಕಳೆದ ಒಂದು ವಾರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಗುರುವಾರ ಸಂಜೆ 28 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಹೆಚ್ಚುವರಿ ನೀರು ಹರಿಸಿದ ಪರಿಣಾಮ ವಿರುಪಾಪುರಗಡ್ಡೆ, ನವವೃಂದಾವನಗಡ್ಡೆ ಸಂಚಾರ ಸಂಪರ್ಕ ಕಡಿತವಾಗಿದೆ.</p>.<p>ತುಂಗಭದ್ರಾ ಜಲಾಶಯಕ್ಕೆ ಸದ್ಯ 97,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ 1633 ಅಡಿಗಳ ಪೈಕಿ 1632 ಅಡಿ ನೀರು ಭರ್ತಿಯಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಪ್ರಮಾಣ ಹೆಚ್ಚಳವಿದ್ದು, ಡ್ಯಾಂಗೆ ಅಪಾಯ ಆಗಬಾರದೆಂದು ನಿರ್ಧರಿಸಿ ನದಿಗೆ ನೀರು ಹರಿಸಲಾಗಿದೆ.</p>.<p>ಈಗಾಗಲೇ 83,649 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ನದಿಗೆ ಬಿಟ್ಟಿದ್ದು, ಸಾಣಾಪುರದ ಬಳಿ ವಾಟರ್ ಫಾಲ್ಸ್, ಋಷಿಮುಖ ಪರ್ವತ, ಚಿಂತಾಮಣಿ ಸೇರಿ ನವವೃಂದಾವನಗಡ್ಡೆ ಸಂಚಾರ ಸಂಪರ್ಕ ಕಡಿತವಾಗಿದೆ. ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯಲ್ಲಿರುವ 64 ಸಾಲಿನಮಂಟಪ ಅರ್ಧದಷ್ಟು ನೀರಿನಲ್ಲಿ ಮುಳುಗಿದೆ.</p>.<p>ತಾಲ್ಲೂಕು ಆಡಳಿತ, ಸಾಣಾಪುರ, ಆನೆಗೊಂದಿ, ಸಂಗಾಪುರ ಅಧಿಕಾರಿಗಳು ನದಿಪಾತ್ರಕ್ಕೆ ಸಾರ್ವಜನಿಕರು ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನದಿಪಾತ್ರದ ಬಳಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.</p>.<p>ನದಿಪಾತ್ರದಲ್ಲಿ ಯುವಕ ಹುಚ್ಚಾಟ: ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ. ಯಾರೂ ನದಿಪಾತ್ರಕ್ಕೆ ತೆರಳಬಾರದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ, ತಾಲ್ಲೂಕು ಆಡಳಿತ, ಗ್ರಾ.ಪಂ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿ, ಡಂಗೂರ ಸಾರಿಸಿ ತಿಳಿಸಿದ್ದರು. ಆದರೆ, ಯುವಕರು ಯಾವುದನ್ನೂ ಲೆಕ್ಕಿಸದೇ ಸಾಣಾಪುರ ಗ್ರಾಮದ ವಾಟರ್ ಫಾಲ್ಸ್, ವೈಟ್ ಸ್ಯಾಂಡ್ ರೆಸಾರ್ಟ್ ಸಮೀಪದ ಉಸುಕಿನಗಡ್ಡೆ ಬಳಿ, ವಿರುಪಾಪುರಗಡ್ಡೆಗೆ ತೆರಳುವ ರಸ್ತೆ ಮಾರ್ಗದಲ್ಲಿ, ಚಿಂತಾಮಣಿ, ನವವೃಂದಾವನಗಡ್ಡೆಗೆ ತೆರಳುವ ಕೋಟೆಯ ಬಳಿ ಯುವಕರು ಸೆಲ್ಫಿಗಾಗಿ ಹುಚ್ಚಾಟ ಮೆರೆದರೆ, ಮಧ್ಯವಯಸ್ಸಿನವರು ಮೀನು ಹಿಡಿಯುವ ಸಾಹಸ ಮಾಡುತ್ತಿದ್ದಾರೆ.</p>.<p>ನದಿಪಾತ್ರದ ಅಲ್ಲಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದರೂ ಅಧಿಕಾರಿಗಳ ಕಣ್ಣುತಪ್ಪಿಸಿ ಯುವಕರು ನೀರಿನ ಬಳಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.</p>.<p>ಸದ್ಯ ಗಂಗಾವತಿ-ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ಇದ್ದು, ನೀರಿನ ಪ್ರಮಾಣ ಹೆಚ್ಚಳವಾದರೆ, ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಗಂಗಾವತಿ ಸಾರಿಗೆ ಇಲಾಖೆ ವ್ಯವಸ್ಥಾಪಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>