<p><strong>ಕಾರಟಗಿ: ಪ</strong>ಟ್ಟಣದ 11ನೇ ವಾರ್ಡ್ನಲ್ಲಿಯ ಗ್ರಾಮದೇವತೆ ದ್ವಾವಮ್ಮ ದೇವಿಯ ನೂತನ ದೇವಾಲಯದ ಕಾಯಕಲ್ಪಕ್ಕೆ ಮಂಗಳವಾರ ನಡೆದ ಸರ್ವ ಸಮಾಜಗಳ ಮುಖ್ಯಸ್ಥರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.</p>.<p>ದೇವಸ್ಥಾನದ ಟ್ರಸ್ಟ್ ರಚನೆಗೆ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಎಲ್ಲ ಸಮಾಜಗಳ ಮುಖಂಡರನ್ನು ಒಳಗೊಂಡ ಟ್ರಸ್ಟ್ ರಚಿಸಬೇಕು. ನಿರ್ಮಾಣ ಕಾರ್ಯಕ್ಕೆ ಶ್ರಾವಣ ಮಾಸದಲ್ಲಿ ಚಾಲನೆ ನೀಡಬೇಕು. ಪ್ರತಿ ರೈತರಿಂದ ಎಕರೆಗೆ 1 ಚೀಲ ಭತ್ತ ಸಂಗ್ರಹಿಸಬೇಕು. ಅರ್ಚಕರು ಸೇರಿದಂತೆ ಇತರ ವರ್ಗದವರಿಂದ ಹಣ ಸಂಗ್ರಹಿಸಲು, ಸರ್ಕಾರದಿಂದ ಬರುವ ಅನುದಾನವನ್ನೂ ಬಳಸಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.</p>.<p>ದೇವಾಲಯದ ಸುತ್ತಲೂ ಇರುವ ಗುಡಿಸಲು, ಶೆಡ್ಗಳನ್ನು ತೆರವುಗೊಳಿಸಲಾಗಿದ್ದು ದೇವಿಕ್ಯಾಂಪ್ ಬಳಿ ನಿವೇಶನ ಗುರುತಿಸಿದೆ. ಅರ್ಚಕರು ಅವರ ನೆರವಿಗೆ ಬರಬೇಕು. ದೇವಾಲಯದ ಮುಂಭಾಗದ ಕಟ್ಟಡಗಳ ಕೆಲ ಭಾಗವನ್ನೂ ತೆರವುಗೊಳಿಸಲು ಪುರಸಭೆ, ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಸಭೆಯಲ್ಲಿ ಒತ್ತಾಯಿಸಿ, ನಿರ್ಣಯ ಕೈಗೊಳ್ಳಲಾಯಿತು.</p>.<p>ದೇವಸ್ಥಾನದ ಅರ್ಚಕ ಕುಟುಂಬದ ವೀರಭದ್ರಪ್ಪ ಬಡಿಗೇರ ಮಾತನಾಡಿ, ‘ದೇವಸ್ಥಾನದ ಇನಾಮು ಭೂಮಿ ರೈಲು ಯೋಜನೆಗೆ ಹೋಗಿದೆ. ನಮಗೆ ಪರಿಹಾರ ಬಂದಿದ್ದು ನಿರ್ಣಯಕ್ಕೆ ಬದ್ಧರಾಗಿ ದೇವಾಲಯದ ನಿರ್ಮಾಣಕ್ಕೆ ಹಣ ನೀಡುತ್ತೇವೆ ಎಂದರು.</p>.<p>ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಿವರೆಡ್ಡಿ ನಾಯಕ ಮತ್ತು ಶಶಿಧರಗೌಡ ಪಾಟೀಲ್ ಪ್ರಮುಖರಾದ ನಾಗರಾಜ ಬಿಲ್ಗಾರ್, ಕೆ. ಸಿದ್ದನಗೌಡ, ಚನ್ನಬಸಪ್ಪ ಸುಂಕದ, ಬೂದಿ ಗಿರಿಯಪ್ಪ, ಜಿ. ಯಂಕನಗೌಡ, ಅಮರೇಶ್ ಕುಳಗಿ, ಶರಣಪ್ಪ ಪರಕಿ, ತಾಯಪ್ಪ ಕೋಟ್ಯಾಳ, ಅಯ್ಯಪ್ಪ ಉಪ್ಪಾರ, ಸಂಜೀವಪ್ಪ ಸಾಲೋಣಿ, ಪ್ರಹ್ಲಾದ ಜೋಷಿ, ಮರುಳಸಿದ್ದಯ್ಯಸ್ವಾಮಿ ಹಿರೇಮಠ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು ಮಾತನಾಡಿದರು.</p>.<p>ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ‘ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದು ಕೊನೆಯ ಸಭೆ. ಮುಂದೆ ದೇವಾಲಯದ ನಿರ್ಮಾಣಕ್ಕೆ ಕಾಯಕಲ್ಪ ದೊರಕಿಸುವುದೇ ನಮ್ಮೆಲ್ಲಾ ಸಮಾಜಗಳ ಉದ್ದೇಶವಾಗಿದೆ. ಹಾಲಿ, ಮಾಜಿ ಜನಪ್ರತಿನಿಧಿಗಳ ಸಲಹೆ ಪಡೆದು ಸರ್ವ ಸಮುದಾಯಗಳನ್ನೊಳಗೊಂಡ ಟ್ರಸ್ಟ್ ರಚಿಸಲಾಗುವುದು. ದ್ಯಾವಮ್ಮ ದೇವಸ್ಥಾನ, ಪುಷ್ಕರಣಿ ಜಾಗೆಯಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದ 31ಕ್ಕೂ ಹೆಚ್ಚು ಕುಟುಂಬಗಳಿಗೆ ದೇವಿಕ್ಯಾಂಪ್ನ ದೇವಿಗುಡ್ಡದಲ್ಲಿ ನಿವೇಶನ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಅವರಿಗೆ ಶೆಡ್ ಹಾಕಿಕೊಳ್ಳಲು ಬೇಕಾದ ಆರ್ಥಿಕ ಸಹಾಯವನ್ನು ಮಾನವೀಯತೆಯ ದೃಷ್ಠಿಯಿಂದ ನೀಡಲು ನಿರ್ಧರಿಸಲಾಗಿದೆ. ಮೂಲಸೌಕರ್ಯಗಳನ್ನು ತಕ್ಷಣ ಕಲ್ಪಿಸಲು ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗುವುದು. ಇನ್ನುಳಿದ ಕಟ್ಟಡಗಳ ತೆರವಿಗೆ ಕಟ್ಟಡದ ಮಾಲೀಕರ ಮನವೊಲಿಸಲಾಗುವುದು’ ಎಂದರು.</p>.<p>ವಿವಿಧ ಸಮಾಜಗಳ ಪ್ರಮುಖರಾದ ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ, ನಾಗರಾಜ್ ಅರಳಿ, ಶರಣಯ್ಯಸ್ವಾಮಿ ಸಾಹುಕಾರ, ಕಲ್ಲನಗೌಡ, ಖಾಜಾ ಹುಸೇನ್ ಮುಲ್ಲಾ, ಶರಣು ಸಾ. ನಗಾರಿ, ಶೇಷಗಿರಿ ಕಟ್ಟಿಮನಿ, ವೀರೇಶ್ ಪತ್ತಾರ, ಮಲ್ಲಪ್ಪ ಭಜಂತ್ರಿ, ಹನುಮಂತಸಿಂಗ್ ರಜಪೂತ, ಹನುಮೇಶ ವಡ್ಡರಹಟ್ಟಿ ವಿವಿಧ ಸಮಾಜಗಳ, ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ: ಪ</strong>ಟ್ಟಣದ 11ನೇ ವಾರ್ಡ್ನಲ್ಲಿಯ ಗ್ರಾಮದೇವತೆ ದ್ವಾವಮ್ಮ ದೇವಿಯ ನೂತನ ದೇವಾಲಯದ ಕಾಯಕಲ್ಪಕ್ಕೆ ಮಂಗಳವಾರ ನಡೆದ ಸರ್ವ ಸಮಾಜಗಳ ಮುಖ್ಯಸ್ಥರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.</p>.<p>ದೇವಸ್ಥಾನದ ಟ್ರಸ್ಟ್ ರಚನೆಗೆ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಮಾಜಿ ಶಾಸಕ ಬಸವರಾಜ ದಢೇಸೂಗೂರು ಅವರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಎಲ್ಲ ಸಮಾಜಗಳ ಮುಖಂಡರನ್ನು ಒಳಗೊಂಡ ಟ್ರಸ್ಟ್ ರಚಿಸಬೇಕು. ನಿರ್ಮಾಣ ಕಾರ್ಯಕ್ಕೆ ಶ್ರಾವಣ ಮಾಸದಲ್ಲಿ ಚಾಲನೆ ನೀಡಬೇಕು. ಪ್ರತಿ ರೈತರಿಂದ ಎಕರೆಗೆ 1 ಚೀಲ ಭತ್ತ ಸಂಗ್ರಹಿಸಬೇಕು. ಅರ್ಚಕರು ಸೇರಿದಂತೆ ಇತರ ವರ್ಗದವರಿಂದ ಹಣ ಸಂಗ್ರಹಿಸಲು, ಸರ್ಕಾರದಿಂದ ಬರುವ ಅನುದಾನವನ್ನೂ ಬಳಸಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.</p>.<p>ದೇವಾಲಯದ ಸುತ್ತಲೂ ಇರುವ ಗುಡಿಸಲು, ಶೆಡ್ಗಳನ್ನು ತೆರವುಗೊಳಿಸಲಾಗಿದ್ದು ದೇವಿಕ್ಯಾಂಪ್ ಬಳಿ ನಿವೇಶನ ಗುರುತಿಸಿದೆ. ಅರ್ಚಕರು ಅವರ ನೆರವಿಗೆ ಬರಬೇಕು. ದೇವಾಲಯದ ಮುಂಭಾಗದ ಕಟ್ಟಡಗಳ ಕೆಲ ಭಾಗವನ್ನೂ ತೆರವುಗೊಳಿಸಲು ಪುರಸಭೆ, ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಸಭೆಯಲ್ಲಿ ಒತ್ತಾಯಿಸಿ, ನಿರ್ಣಯ ಕೈಗೊಳ್ಳಲಾಯಿತು.</p>.<p>ದೇವಸ್ಥಾನದ ಅರ್ಚಕ ಕುಟುಂಬದ ವೀರಭದ್ರಪ್ಪ ಬಡಿಗೇರ ಮಾತನಾಡಿ, ‘ದೇವಸ್ಥಾನದ ಇನಾಮು ಭೂಮಿ ರೈಲು ಯೋಜನೆಗೆ ಹೋಗಿದೆ. ನಮಗೆ ಪರಿಹಾರ ಬಂದಿದ್ದು ನಿರ್ಣಯಕ್ಕೆ ಬದ್ಧರಾಗಿ ದೇವಾಲಯದ ನಿರ್ಮಾಣಕ್ಕೆ ಹಣ ನೀಡುತ್ತೇವೆ ಎಂದರು.</p>.<p>ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಿವರೆಡ್ಡಿ ನಾಯಕ ಮತ್ತು ಶಶಿಧರಗೌಡ ಪಾಟೀಲ್ ಪ್ರಮುಖರಾದ ನಾಗರಾಜ ಬಿಲ್ಗಾರ್, ಕೆ. ಸಿದ್ದನಗೌಡ, ಚನ್ನಬಸಪ್ಪ ಸುಂಕದ, ಬೂದಿ ಗಿರಿಯಪ್ಪ, ಜಿ. ಯಂಕನಗೌಡ, ಅಮರೇಶ್ ಕುಳಗಿ, ಶರಣಪ್ಪ ಪರಕಿ, ತಾಯಪ್ಪ ಕೋಟ್ಯಾಳ, ಅಯ್ಯಪ್ಪ ಉಪ್ಪಾರ, ಸಂಜೀವಪ್ಪ ಸಾಲೋಣಿ, ಪ್ರಹ್ಲಾದ ಜೋಷಿ, ಮರುಳಸಿದ್ದಯ್ಯಸ್ವಾಮಿ ಹಿರೇಮಠ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು ಮಾತನಾಡಿದರು.</p>.<p>ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ‘ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದು ಕೊನೆಯ ಸಭೆ. ಮುಂದೆ ದೇವಾಲಯದ ನಿರ್ಮಾಣಕ್ಕೆ ಕಾಯಕಲ್ಪ ದೊರಕಿಸುವುದೇ ನಮ್ಮೆಲ್ಲಾ ಸಮಾಜಗಳ ಉದ್ದೇಶವಾಗಿದೆ. ಹಾಲಿ, ಮಾಜಿ ಜನಪ್ರತಿನಿಧಿಗಳ ಸಲಹೆ ಪಡೆದು ಸರ್ವ ಸಮುದಾಯಗಳನ್ನೊಳಗೊಂಡ ಟ್ರಸ್ಟ್ ರಚಿಸಲಾಗುವುದು. ದ್ಯಾವಮ್ಮ ದೇವಸ್ಥಾನ, ಪುಷ್ಕರಣಿ ಜಾಗೆಯಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದ 31ಕ್ಕೂ ಹೆಚ್ಚು ಕುಟುಂಬಗಳಿಗೆ ದೇವಿಕ್ಯಾಂಪ್ನ ದೇವಿಗುಡ್ಡದಲ್ಲಿ ನಿವೇಶನ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಅವರಿಗೆ ಶೆಡ್ ಹಾಕಿಕೊಳ್ಳಲು ಬೇಕಾದ ಆರ್ಥಿಕ ಸಹಾಯವನ್ನು ಮಾನವೀಯತೆಯ ದೃಷ್ಠಿಯಿಂದ ನೀಡಲು ನಿರ್ಧರಿಸಲಾಗಿದೆ. ಮೂಲಸೌಕರ್ಯಗಳನ್ನು ತಕ್ಷಣ ಕಲ್ಪಿಸಲು ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗುವುದು. ಇನ್ನುಳಿದ ಕಟ್ಟಡಗಳ ತೆರವಿಗೆ ಕಟ್ಟಡದ ಮಾಲೀಕರ ಮನವೊಲಿಸಲಾಗುವುದು’ ಎಂದರು.</p>.<p>ವಿವಿಧ ಸಮಾಜಗಳ ಪ್ರಮುಖರಾದ ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ, ನಾಗರಾಜ್ ಅರಳಿ, ಶರಣಯ್ಯಸ್ವಾಮಿ ಸಾಹುಕಾರ, ಕಲ್ಲನಗೌಡ, ಖಾಜಾ ಹುಸೇನ್ ಮುಲ್ಲಾ, ಶರಣು ಸಾ. ನಗಾರಿ, ಶೇಷಗಿರಿ ಕಟ್ಟಿಮನಿ, ವೀರೇಶ್ ಪತ್ತಾರ, ಮಲ್ಲಪ್ಪ ಭಜಂತ್ರಿ, ಹನುಮಂತಸಿಂಗ್ ರಜಪೂತ, ಹನುಮೇಶ ವಡ್ಡರಹಟ್ಟಿ ವಿವಿಧ ಸಮಾಜಗಳ, ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>