ಕೊಪ್ಪಳ: ಹಲವು ದಿನಗಳ ಬಿಡುವಿನ ಬಳಿಕ ನಗರದಲ್ಲಿ ಸೋಮವಾರ ಉತ್ತಮ ಮಳೆ ಸುರಿದಿದೆ.
ಕಳೆದ ತಿಂಗಳು ಅಬ್ಬರದಲ್ಲಿ ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿಕೊಂಡಿದ್ದರು. ಬಳಿಕ ಜೋರಾಗಿ ಮಳೆ ಬಂದಿರಲಿಲ್ಲ. ಕೆಲ ದಿನ ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಯಷ್ಟೇ ಸುರಿದಿತ್ತು. ಇದರಿಂದಾಗಿ ತಿಂಗಳ ಹಿಂದೆ ನಾಟಿ ಮಾಡಿದ್ದ ಬೆಳೆ ಹಾಳಾಗುವ ಆತಂಕ ಉಂಟಾಗಿತ್ತು. ಆದ್ದರಿಂದ ರೈತರು ಮಳೆ ಎದುರು ನೋಡುತ್ತಿದ್ದರು.